ಗದಗದ ಕಿಟಕಿಯಿಂದ ವಾರೆನೋಟ
* ಕನ್ನಡ ನಾಡುನುಡಿ, ನೆಲಜಲಗಳ ಸಂರಕ್ಷಣೆಯ ಉದ್ದೇಶ ಹೊಂದಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದವರು ಸಚಿವ ಶ್ರೀರಾಮುಲು. ಇವರು ಮೂಲತಃ ಆಂಧ್ರದವರು. ಕನ್ನಡ ಭಾಷೆಯನ್ನು ಸರಿಯಾಗಿ ಅರಿಯದವರು. ನೆಲ ಬಗಿದು, ಮಾರಿ ಕೋಟಿಗಟ್ಟಲೆ ಹಣ ಮಾಡಿಕೊಂಡವರು. ಜಲಪ್ರಳಯದ ಸಂತ್ರಸ್ತರೆಡೆಗೆ ಸೂಕ್ತ ಗಮನ ಹರಿಸದವರು. ಇವರು ಕನ್ನಡ ನಾಡುನುಡಿ, ನೆಲಜಲಗಳ ಸಂರಕ್ಷಣೆಯ ಸಮ್ಮೇಳನ ಉದ್ಘಾಟಿಸಿದರು!
* ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿ ಬರಲಿಲ್ಲ. ಮಾತುಮಾತಿಗೆ "ನಾನು ಈ ರಾಜ್ಯದ ಮುಖ್ಯಮಂತ್ರಿ" ಎಂದು ಬಡಬಡಿಸುತ್ತಿರುವ ಇವರು ಸಮ್ಮೇಳನದ ಉದ್ಘಾಟನೆಯ ದಿನ ಮಾತ್ರ ಮುಖ್ಯಮಂತ್ರಿಯ ಕರ್ತವ್ಯ ಪಾಲಿಸದೆ ಪಕ್ಷದ ಕಾರ್ಯಕರ್ತ ಆಗಿ ಇಂದೋರಿಗೆ ಹೋಗಿದ್ದರು. ಆದ್ಯತೆ ಗೊತ್ತಾಯಿತಲ್ಲ!
* ಸಮ್ಮೇಳನದ ಸಂಘಟಕರಿಗೆ ಗದಗದವರೇ ಆದ ಪಂಡಿತ ಭೀಮಸೇನ ಜೋಶಿ ಹಾಗೂ ಗರುಡ ಸದಾಶಿವರಾಯರ ನೆನಪಾಗಲಿಲ್ಲ. ಏಕೆಂದರೆ ಸಂಘಟಕರ ಸಾಹಿತ್ಯ ಸಂಸ್ಕೃತಿ ಜ್ಞಾನ ಮತ್ತು ಕರ್ತವ್ಯನಿಷ್ಠೆ ಅಷ್ಟಕ್ಕಷ್ಟೆ. ಉಳಿದ ಗಣ್ಯರೆಲ್ಲರ ನೆನಪಾಗಿದ್ದೇ ದೊಡ್ಡದು!
* ಶಾಲೆಗಳಲ್ಲಿ ಮಕ್ಕಳಿಗೆ ಕೈಯೆತ್ತಿ ನಿಲ್ಲುವ ಶಿಕ್ಷೆ ಕೊಡುತ್ತಾರೆ. ಸಮ್ಮೇಳನಾಧ್ಯಕ್ಷೆಯ ಮೆರವಣಿಗೆಯಾದ್ಯಂತ ಹತ್ತು ವರ್ಷ ವಯಸ್ಸಿನ ಬಾಲಕ ಬಾಲಕಿಯರು ಪಾಳಿಮೇಲೆ ಎರಡೂ ಕೈಯಿಂದ ಛತ್ರಿ ಎತ್ತಿಹಿಡಿದು ನಿಂತು ಅಧ್ಯಕ್ಷೆಯ ಮುಖಕ್ಕೆ ಬಿಸಿಲು ಬೀಳದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದರು!
* ಕೃಷ್ಣದೇವರಾಯನ ವೈಭವ ಸಾರಲು ಎಪ್ಪತ್ತೈದು ಕೋಟಿ ರೂಪಾಯಿ. ಕನ್ನಡಾಂಬೆಗೆ ಕಸುವು ನೀಡಲು ಒಂದೇ ಕೋಟಿ ರೂಪಾಯಿ! ಕನ್ನಡಾಂಬೆ ಕೃಶಳಾಗದೆ ಇನ್ನೇನಾದಾಳು?
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications