ಹಡಗಲಿ-ಬೆಂಗಳೂರು; ನಾನ್ ಎಸಿ ಸ್ಲೀಪರ್ ಬಸ್, ವೇಳಾಪಟ್ಟಿ
ಬೆಂಗಳೂರು, ಫೆಬ್ರವರಿ 18; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ)ಯ ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗ ಹಡಗಲಿ-ಬೆಂಗಳೂರು ನಡುವೆ ನೂತನ ಬಸ್ ಸೇವೆ ಆರಂಭಿಸಿದೆ. ಹವಾನಿಯಂತ್ರಣ ರಹಿತ ಬಸ್ ಸೇವೆ ಇದಾಗಿದ್ದು, ಜನರು ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆಯ ವಿಭಾಗೀಯ ನಿಯಂತ್ರಾಣಾಧಿಕಾರಿಗಳು ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಜನಪ್ರತಿನಿಧಿಗಳು ಹಾಗೂ ಪ್ರಯಾಣಿಕರ ಬೇಡಿಕೆ ಮೇರೆಗೆ ಪ್ರತಿಷ್ಠಿತ ವಾಹನಗಳ ಸೇವೆ ಒದಗಿಸುವ ಉದ್ದೇಶದಿಂದ ಹಡಗಲಿ-ಬೆಂಗಳೂರು ಬಸ್ ಸೇವೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ವೇಳಾಪಟ್ಟಿ; ಹಡಗಲಿ-ಬೆಂಗಳೂರು ನಡುವಿನ ನಾನ್ ಎಸಿ ಬಸ್ ವಯಾ ಹರಪನಹಳ್ಳಿ, ಹರಿಹರ, ದಾವಣಗೆರೆ ಮಾರ್ಗದಲ್ಲಿ ಫೆಬ್ರವರಿ 16 ರಿಂದ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಪ್ರಕಟಣೆ ಹೇಳಿದೆ.
ಈ ಬಸ್ ಹಡಗಲಿಯಿಂದ ರಾತ್ರಿ 9.30ಕ್ಕೆ ಹೊರಟು, 10.30ಕ್ಕೆ ಹರಪನಹಳ್ಳಿಗೆ, 11.30ಕ್ಕೆ ಹರಿಹರ ತಲುಪಲಿದೆ. 11.59ಕ್ಕೆ ದಾವಣಗೆರೆಯಿಂದ ನಿರ್ಗಮಿಸಿ ಬೆಳಗ್ಗೆ 5.30ಕ್ಕೆ ಬೆಂಗಳೂರು ನಗರ ತಲುಪಲಿದೆ.
ಬೆಂಗಳೂರಿನಿಂದ ರಾತ್ರಿ 10.45ಕ್ಕೆ ನಿರ್ಗಮಿಸುವ ಬಸ್, ದಾವಣಗೆರೆಗೆ ಬೆಳಗ್ಗೆ 4.15ಕ್ಕೆ, ಹರಿಹರಕ್ಕೆ 4.50ಕ್ಕೆ, ಹರಪನಹಳ್ಳಿಗೆ 5.25ಕ್ಕೆ ಹಾಗೂ ಹಡಗಲಿಗೆ 6 ಗಂಟೆಗೆ ಬಂದು ತಲುಪಲಿದೆ.
ಸಂಡೂರು-ಹೈದರಾಬಾದ್ ಎಸಿ ಬಸ್; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ)ಯ ಬಳ್ಳಾರಿ ವಿಭಾಗದ ಸಂಡೂರು ಘಟಕ ಸಂಡೂರು-ಹೈದರಾಬಾದ್ (ದೋಣಿಮಲೈ, ವಿದ್ಯಾನಗರ, ಬಳ್ಳಾರಿ, ಆಲೂರು, ಕರ್ನೂಲ್ ಮಾರ್ಗ) ಪ್ರತಿಷ್ಠಿತ ಎಸಿ ಸ್ಲೀಪರ್ ನೂತನ ಬಸ್ ಸಂಚಾರ ಆರಂಭಸಿದೆ.
ಈ ಬಸ್ ಸಂಡೂರಿನಿಂದ ರಾತ್ರಿ 7ಕ್ಕೆ ಹೊರಟು, ಬಳ್ಳಾರಿಗೆ ರಾತ್ರಿ 10ಕ್ಕೆ ಆಗಮಿಸಿ (ವಯಾ ಆಲೂರು, ಕರ್ನೂಲ್ ಮಾರ್ಗ) ಹೈದರಾಬಾದ್ಗೆ ಬೆಳಗ್ಗೆ 6.10ಕ್ಕೆ ತಲುಪಲಿದೆ. ಪ್ರಯಾಣ ದರವು ಸಂಡೂರಿನಿಂದ ರೂ. 1,290 ಹಾಗೂ ಬಳ್ಳಾರಿಯಿಂದ ರೂ.1,120 ಇರಲಿದೆ.
ಹೈದರಾಬಾದ್ನಿಂದ ರಾತ್ರಿ 9.46ಕ್ಕೆ ಹೊರಡುವ ಬಸ್ ಬಳ್ಳಾರಿಗೆ 6.15ಕ್ಕೆ (ಪ್ರಯಾಣ ದರ ರೂ. 1,120) ಹಾಗೂ ಸಂಡೂರಿಗೆ ಬೆಳಗ್ಗೆ 8ಕ್ಕೆ (ಪ್ರಯಾಣ ದರ ರೂ.1,290) ಆಗಮಿಸಲಿದೆ.
ಪ್ರಯಾಣಿಕರು ಮುಂಗಡ ಆಸನಗಳನ್ನು ಬುಕ್ ಮಾಡಲು www.ksrtc.in ವೆಬ್ಸೈಟ್ಗೆ ಲಾಗ್ ಇನ್ ಆಗಬೇಕು. ನೂತನ ಬಸ್ ಸೇವೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಸಂಡೂರು-ಬೆಂಗಳೂರು ಬಸ್; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಬಳ್ಳಾರಿ ವಿಭಾಗದ ಸಂಡೂರು ಘಟಕ ಸಂಡೂರು-ಬೆಂಗಳೂರು (ವಯಾ ದೋಣಿಮಲೈ, ವಿದ್ಯಾನಗರ, ತೋರಣಗಲ್ಲು, ಕುಡುತಿನಿ, ಬಳ್ಳಾರಿ, ಚಳ್ಳಕೆರೆ) ಎಸಿ ಸ್ಲೀಪರ್ ನೂತನ ಬಸ್ ಸಂಚಾರ ಆರಂಭಿಸಿದೆ.
ಈ ಬಸ್ ಸಂಡೂರಿನಿಂದ ರಾತ್ರಿ 9.30ಕ್ಕೆ ಹೊರಟು, ದೋಣಿಮಲೈಗೆ ರಾತ್ರಿ 10.15ಕ್ಕೆ, ವಿದ್ಯಾನಗರ (ಜೆಎಸ್ಡಬ್ಲ್ಯೂ)ಕ್ಕೆ ರಾತ್ರಿ 10.35ಕ್ಕೆ, ಬಳ್ಳಾರಿಗೆ ರಾತ್ರಿ 11.30ಕ್ಕೆ ಆಗಮಿಸಲಿದೆ. ಬೆಂಗಳೂರಿಗೆ ಬೆಳಗ್ಗೆ 6 ಗಂಟೆಗೆ ತಲುಪಲಿದೆ.
ಬಸ್ನಲ್ಲಿ ಸಂಡೂರಿನಿಂದ ರೂ. 1,000, ದೋಣಿಮಲೈನಿಂದ ರೂ. 960, ವಿದ್ಯಾನಗರದಿಂದ ರೂ. 920 ಹಾಗೂ ಬಳ್ಳಾರಿಯಿಂದ ರೂ.830 ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.
ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಡುವ ಬಸ್, ಬಳ್ಳಾರಿಗೆ ಬೆಳಗ್ಗೆ 5.45ಕ್ಕೆ ಆಗಮಿಸಲಿದೆ. ವಿದ್ಯಾನಗರಕ್ಕೆ ಬೆಳಗ್ಗೆ 6.30ಕ್ಕೆ, ದೋಣಿಮಲೈಗೆ ಬೆಳಗ್ಗೆ 7 ಗಂಟೆಗೆ ಹಾಗೂ ಸಂಡೂರಿಗೆ ಬೆಳಗ್ಗೆ 7.30ಕ್ಕೆ ಆಗಮಿಸಲಿದೆ.
ಮುಂಗಡ ಆಸನಗಳನ್ನು ಕಾಯ್ದಿರಿಸಲು www.ksrtc.in ವೆಬ್ಸೈಟ್ಗೆ ಭೇಟಿ ನೀಡಿಬಹುದು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು












Click it and Unblock the Notifications