ಮಾರ್ಚ್ನಲ್ಲಿ ಬೆಂಗಳೂರಿನಿಂದ ಈ ದೇಶಗಳಿಗೆ ಪ್ರಯಾಣ ಬೆಳೆಸುವವರಿಗೆ ಗುಡ್ ನ್ಯೂಸ್
ಭಾರತದಿಂದ ವಿದೇಶಗಳಿಗೆ ಪ್ರಯಾಣ ಮಾಡಬೇಕೆಂದರೆ ತುಂಬಾ ಹಣ ಖರ್ಚಾಗಲಿದೆ. ಆದರೆ, ಇದೀಗ ಮಾರ್ಚ್ನಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಈ ದೇಶಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ದರ ಹಾಗೂ ಯಾವ್ಯಾವ ದೇಶಗಳಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಮಾರ್ಚ್ನಲ್ಲಿ ಶಾಲೆಗಳಿಗೆ ರಜೆ ಬರುವ ಕಾರಣ ತುಂಬಾ ಪೋಷಕರು ಬೆಂಗಳೂರಿನಿಂದ ಹೊರ ದೇಶದಗಳಿಗೆ ಪ್ರಯಾಣ ಮಾಡಲು ಯೋಜನೆ ರೂಪಿಸಿಕೊಂಡಿರುತ್ತಾರೆ. ಹಾಗಾದರೆ ಈ ವೇಳೆ ರಜೆ ಆನಂದಿಸಲು ಕಡಿಮೆ ಖರ್ಚಿನಲ್ಲಿ ಬೆಂಗಳೂರಿನಿಂದ ವಿದೇಶಗಳಿಗೆ ಪ್ರಯಾಣ ಮಾಡಲು ಬಯಸುವವರಿಗೆ ಗುಡ್ ನ್ಯೂಸ್ವೊಂದನ್ನು ನೀಡಲಾಗಿದೆ.

ಮಾರ್ಚ್ ಅಂದರೆ ಮುಂದಿನ ತಿಂಗಳಿನಲ್ಲಿ ಬೆಂಗಳೂರಿನಿಂದ ಮಲೇಷ್ಯಾ, ಸಿಂಗಾಪುರ, ಒಮಾನ್ಗೆ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಈ ತಿಂಗಳಿನಲ್ಲಿ ಮಳೆ, ಚಳಿ ಇಲ್ಲದ ಕಾರಣ ಪ್ರವಾಸ ಮಾಡಲು ಸೂಕ್ತವಾಗಿದೆ. ಆದ್ದರಿಂದ ಈ ತಿಂಗಳಿನಲ್ಲೇ ಹೆಚ್ಚು ಮಂದಿ ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ.
ಮಲೇಷ್ಯಾ ಪ್ರವಾಸ: ನೀವು ಬೆಂಗಳೂರಿಗೆ ಹತ್ತಿರದಲ್ಲಿ ಇದ್ದರೆ, ಹೊರ ದೇಶಕ್ಕೆ ಕೈಗೊಳ್ಳುವ ಪ್ಲಾನ್ನಲ್ಲಿದ್ದರೆ, ಮಲೇಷ್ಯಾವು ದೇಶ ಉತ್ತಮ ಆಯ್ಕಾ ಆಗಲಿದೆ. ಈ ದೇಶ ಪ್ರವಾಸಕ್ಕೆ ಹೇಳಿ ಮಾಡಿಸಿದ್ದಾಗಿದೆ. ಲಂಕಾವಿಯ UNESCO-ಪಟ್ಟಿಯಲ್ಲಿರುವ ಕಿಲಿಮ್ ಜಿಯೋಫಾರೆಸ್ಟ್ ಪಾರ್ಕ್, ಕ್ಯಾಸ್ಕೇಡಿಂಗ್ ತೆಲಗಾ ತುಜುಹ್ ಜಲಪಾತ ಹೀಗೆ ಹಲವು ಅತ್ಯದ್ಭುತ ತಾಣಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಮುಂದಿನ ತಿಂಗಳಿನಲ್ಲಿ ಪ್ರವಾಸ ಆರಂಭವಾಗಲಿದೆ.
ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು?: ಪೂರ್ವ ಕರಾವಳಿಯಲ್ಲಿ, ಸ್ಫಟಿಕ-ಸ್ಪಷ್ಟ ನೀರನ್ನು ಹೊಂದಿರುವ ರೆಡಾಂಗ್ ದ್ವೀಪವನ್ನು ನೋಡಬಹುದಾಗಿ. ಬಿಳಿ ಮರಳಿನ ತೀರಗಳು, ಟ್ರೆಕ್ಕಿಂಗ್ ಮತ್ತು ಸ್ನಾರ್ಕೆಲಿಂಗ್ಗಳನ್ನು ಆನಂದಿಸಬಹುದು. ಸಾಂಸ್ಕೃತಿಕ ನಿಲುಗಡೆಗಾಗಿ ವಸಾಹತುಶಾಹಿ ಯುಗದ ಹೆಗ್ಗುರುತಾಗಿರುವ ಮಲಕ್ಕಾದ ಮರೂನ್-ಹ್ಯೂಡ್ ಡಚ್ ಸ್ಕ್ವೇರ್ಗೂ ಭೇಟಿ ನೀಡಬಹುದು.
ಅಲ್ಲದೆ, ಕೌಲಾಲಂಪುರ್ನ ಜಲನ್ ಅಲೋರ್ ರಾತ್ರಿ ಮಾರುಕಟ್ಟೆಯು ಆಹಾರ ಪ್ರಿಯರಿಗೆ ಸ್ವರ್ಗ ಎಂದು ಹೇಳಿದರೆ ತಪ್ಪಾಗಲಾರದು. ಮಲೇಷ್ಯಾದ ಮತ್ತೊಂದು ವಿಶೇಷತೆಯೇ ಸ್ಟ್ರಾಬೆರಿ ಫಾರ್ಮ್. ಈ ಸೀಸನ್ನಲ್ಲಿ ಈ ತೋಟಗಳಿಗೆ ಹೋಗಿ ನೀವೇ ಸ್ಟ್ರಾಬೆರಿ ಕಿತ್ತುಕೊಂಡು ಬರಬಹುದಾಗಿದೆ. ಬೆಂಗಳೂರು-ಕೌಲಾಲಂಪುರ್ ಪ್ರಯಾಣ ಮಾಡಲು ಫ್ಲೈಟ್ ದರ ಕೇವಲ 6,673 ಆಗಲಿದೆ. ಅದರಲ್ಲೂ ಭಾರತೀಯರಿಗೆ ಇಲ್ಲಿಗೆ ವೀಸಾ ಮುಕ್ತ ಪ್ರವೇಶವಿದೆ.
ಸಿಂಗಾಪುರ ಪ್ರವಾಸ: ಬೆಂಗಳೂರು ಅಥವಾ ನವದೆಹಲಿಯವರಿಗೆ ಸಿಂಗಾಪುರ್ ಸಹ ಒಂದು ಬಜೆಟ್ ಫ್ರೆಂಡ್ಲಿ ದೇಶವಾಗಿದೆ. ಬಿಸಿಲು ಮತ್ತು ಕನಿಷ್ಠ ಮಳೆಯೊಂದಿಗೆ ಸಿಂಗಾಪುರವನ್ನು ಅನ್ವೇಷಿಸಲು ಮಾರ್ಚ್ ಉತ್ತಮ ಸಮಯ. ಯುನೆಸ್ಕೋ-ಪಟ್ಟಿಮಾಡಿದ ಸಸ್ಯಶಾಸ್ತ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ ಸಿಂಗಾಪುರ್ ಟ್ರಿಪ್ ಅನ್ನು ನೀವು ಶುರು ಮಾಡಬಹುದು. ಇದು ಸಸ್ಯವರ್ಗದ ಶ್ರೀಮಂತ ವೈವಿಧ್ಯತೆಯ ನೆಲೆಯಾಗಿದೆ. ಇಲ್ಲಿ ಫ್ಯೂಚರಿಸ್ಟಿಕ್ ಹಸಿರುಮನೆ ಸೆಟ್ಟಿಂಗ್, ಗಾರ್ಡನ್ಸ್ ಬೈ ದಿ ಬೇ ಅನ್ನು ಮಿಸ್ ಮಾಡದೇ ವೀಕ್ಷಣೆ ಮಾಡಬಹುದಾಗಿದೆ.
ಸಿಂಗಾಪುರದ ಫ್ಲೈಯರ್ನಿಂದ ಬೇರೆ ಬೇರೆ ನಗರಗಳನ್ನು ವೀಕ್ಷಿಸಬಹುದು. ಇಲ್ಲಿ ನೀವು ನೈಟ್ ಸಫಾರಿಗೆ ಕೂಡ ಹೋಗಬಹುದು. ಕಲಾ ಉತ್ಸಾಹಿಗಳಿಗೆ ವಿಶಿಷ್ಟವಾದ ಆಗ್ನೇಯ ಏಷ್ಯಾದ ಸಮಕಾಲೀನ ಕೃತಿಗಳನ್ನು ಪ್ರದರ್ಶಿಸುವ ರಾಷ್ಟ್ರೀಯ ಗ್ಯಾಲರಿ ಇಷ್ಟ ಆಗುತ್ತದೆ. ಮಕ್ಕಳಿಗಂತೂ ಸಿಂಗಾಪುರ್ ದೇಶ ಪ್ರವಾಸಕ್ಕೆ ಹೇಳಿ ಮಾಡಿಸಿದ್ದಾಗಿದೆ. ಶಾಪಿಂಗ್ ಪ್ರಿಯರು ಮರೀನಾ ಕೊಲ್ಲಿಯಲ್ಲಿ ಐಷಾರಾಮಿ ಶಾಪಿಂಗ್ ವಿಹಾರಗಳನ್ನು ಮಾಡಬಹುದಾಗಿದೆ.
ಇಂಡಿಗೋ ವಿಮಾನದಲ್ಲಿ ನವದೆಹಲಿ-ಸಿಂಗಾಪುರ್ ಹೋಗಲು 9,220 ರೂಪಾಯಿ ವೆಚ್ಚ ತಗುಲುತ್ತದೆ. ಅದರಲ್ಲೂ ಭಾರತೀಯರಿಗೆ ಇ-ವೀಸಾ ಕೂಡ ಲಭ್ಯವಿದೆ.
ಒಮಾನ್ ಪ್ರವಾಸ: ಒಮಾನ್ ಬೆಂಗಳೂರಿನಿಂದ ಮಾತ್ರವಲ್ಲದೆ ದೆಹಲಿ ಮತ್ತು ಮುಂಬೈನಿಂದ ವಿಮಾನಯಾನ ಮಾಡಲು ಅತ್ಯಂತ ಕೈಗೆಟುಕುವ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಭೇಟಿ ನೀಡಲು ಮಾರ್ಚ್ ಸೂಕ್ತ ಸಮಯ. ಇತಿಹಾಸ, ಸಂಸ್ಕೃತಿ ಮತ್ತು ಹೊರಾಂಗಣ ಸಾಹಸಗಳ ಅನುಭವವನ್ನು ಇಲ್ಲಿ ಪಡೆಯಬಹುದಾಗಿದೆ.
ಇತಿಹಾಸ ಮತ್ತು ವಾಸ್ತುಶಿಲ್ಪದ ಉತ್ಸಾಹಿಗಳು 17ನೇ ಶತಮಾನದ ನಿಜ್ವಾ ಕೋಟೆ, ಅಲ್ ಜಹಾರ್ ಪರ್ವತ ಶ್ರೇಣಿಯ ಮೇಲಿರುವ ಭವ್ಯವಾದ ಮುತ್ರಾಹ್ ಕೋಟೆ ಮತ್ತು ಓಲ್ಡ್ ಮಸ್ಕತ್ನಲ್ಲಿರುವ ಅಲ್-ಮಿರಾನಿ ಕೋಟೆಯಂತಹ ಸಾಂಪ್ರದಾಯಿಕ ಹೆಗ್ಗುರುತುಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಸ್ಥಳೀಯ ಪಾಕಪದ್ಧತಿ, ಸಾಂಪ್ರದಾಯಿಕ ಔದ್ ಸುಗಂಧ ದ್ರವ್ಯ ಎಲ್ಲವೂ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಓಮನ್ ಏರ್ನಲ್ಲಿ ಬೆಂಗಳೂರು-ಮಸ್ಕಟ್ಗೆ ಪ್ರಯಾಣ ದರ 9,608 ರೂಪಾಯಿ ತಗಲುತ್ತದೆ. ಭಾರತೀಯರಿಗೆ ಇ-ವೀಸಾ ಸೌಲಭ್ಯ ಲಭ್ಯವಿದೆ.












Click it and Unblock the Notifications