Ayodhya Tour Package: ಅಯೋಧ್ಯೆ – ಕಾಶಿ – ಗಯಾ – ಪ್ರಯಾಗ್ರಾಜ್ ಯಾತ್ರೆ: IRCTC ಕಡಿಮೆ ಬೆಲೆಯ ವಿಮಾನ ಪ್ಯಾಕೇಜ್ ವಿವರ
Ayodhya Tour Package: ಭಾರತದ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಅಯೋಧ್ಯೆ ಸಹ ಒಂದಾಗಿದೆ. ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ಪುರಾತನ ಮತ್ತು ಪವಿತ್ರ ನಗರವಾಗಿದ್ದು, ಭಗವಾನ್ ಶ್ರೀರಾಮನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಯೋಧ್ಯೆ ಹಿಂದೂಗಳ ಪವಿತ್ರ ಸ್ಥಳವಾಗಿದೆ. ಹಿಂದೂಗಳ ಏಳು ಪ್ರಮುಖ ತೀರ್ಥಯಾತ್ರಾ ಸ್ಥಳಗಳಲ್ಲಿ (ಸಪ್ತಪುರಿ) ಒಂದಾಗಿದ್ದು. ಇತ್ತೀಚೆಗೆ ನಿರ್ಮಿಸಲಾಗಿರುವ ಭವ್ಯ ರಾಮಮಂದಿರವು ಲಕ್ಷಾಂತರ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಭಾರತದ ಹಲವರಿಗೆ ಈ ಧಾರ್ಮಿಕ ಪ್ರವಾಸಿ ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವ ಆಸೆ ಇರುತ್ತದೆ.
ಇನ್ನು ರಾಮಾಯಣದ ಪ್ರಕಾರ, ಇದು ಕೋಸಲ ರಾಜ್ಯದ ರಾಜಧಾನಿಯಾಗಿತ್ತು. ರಾಮಮಂದಿರದ ಉದ್ಘಾಟನೆಯ ನಂತರ ಅಯೋಧ್ಯೆಯು ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಇನ್ನು ಅಯೋಧ್ಯೆಯೊಂದಿಗೆ ಗಯಾ, ಕಾಶಿ ಮತ್ತು ಪ್ರಯಾಗ್ರಾಜ್ ಸಹ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ. IRCTCಯ ಮೂಲಕ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಹೇಗೆ, ಈ ಪ್ರವಾಸಿ ತಾಣಗಳ ವಿಶೇಷವೇನು, ಈ ಪ್ರವಾಸಿ ತಾಣಗಳ ವೀಕ್ಷಣೆಗೆ ಆಗುವ ವೆಚ್ಚ ವಿವರ ಹಾಗೂ ಪ್ಯಾಕೇಜ್ನ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಅಯೋಧ್ಯೆ
ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರವಾಗಿದೆ. ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ಪುರಾತನ ಮತ್ತು ಪವಿತ್ರ ನಗರವಾಗಿದ್ದು, ಭಗವಾನ್ ಶ್ರೀರಾಮನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಯೋಧ್ಯೆ ಹಿಂದೂಗಳ ಪವಿತ್ರ ಸ್ಥಳವಾಗಿದೆ. ಹಿಂದೂಗಳ ಏಳು ಪ್ರಮುಖ ತೀರ್ಥಯಾತ್ರಾ ಸ್ಥಳಗಳಲ್ಲಿ (ಸಪ್ತಪುರಿ) ಒಂದಾಗಿದೆ. ಸರಾಯು ನದಿಯ ಪೂರ್ವ ದಂಡೆಯಲ್ಲಿರುವ ಅಯೋಧ್ಯೆಯು ಗತಕಾಲದ ವೈಭವವನ್ನು ನೆನಪಿಸುತ್ತದೆ. ಪ್ರಸಿದ್ಧ ಮಹಾಕಾವ್ಯಗಳಾದ ರಾಮಾಯಣ ಮತ್ತು ಶ್ರೀ ರಾಮಚರಿತಮಾನಸಗಳು ಅಯೋಧ್ಯೆಯ ವೈಭವವನ್ನು ಉಲ್ಲೇಖಿಸಿವೆ.
ಸಾರಯು ನದಿಯ ಪೂರ್ವ ತೀರದಲ್ಲಿ ಇರುವ ಅಯೋಧ್ಯಾ ಪ್ರಾಚೀನ ಇತಿಹಾಸದ ವೈಭವದ ನಗರವಾಗಿದೆ. ರಾಮಾಯಣ ಮತ್ತು ಶ್ರೀರಾಮಚರಿತಮಾನಸ್ ಕಾವ್ಯಗಳಲ್ಲಿ ಇದರ ಮಹತ್ವವನ್ನು ವಿವರಿಸಲಾಗಿದೆ. ಇಕ್ಷ್ವಾಕು, ಪೃಥು, ಮಂಧಾತ, ಹರಿಶ್ಚಂದ್ರ, ಸಾಗರ, ಭಗೀರಥ, ರಘು, ದಿಲೀಪ, ದಶರಥ ಮತ್ತು ಶ್ರೀರಾಮರು ಕೋಶಲ ದೇಶದ ರಾಜಧಾನಿಯಾದ ಆಯೋಧ್ಯೆಯನ್ನು ಆಡಳಿತ ನಡೆಸಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇವರ ಆಡಳಿತ ಕಾಲದಲ್ಲಿ ರಾಜ್ಯವು ತನ್ನ ಉನ್ನತ ಮಟ್ಟ ತಲುಪಿ "ರಾಮರಾಜ್ಯ"ದ ಆದರ್ಶವಾಗಿತ್ತು ಎನ್ನುವ ಉಲ್ಲೇಖವೂ ಇದೆ.
ಗಯಾ
ಗಯಾ ಪ್ರದೇಶವು ಭಾರತದ ಬಿಹಾರ ರಾಜ್ಯದ ಫಲ್ಗು ನದಿಯ ದಡದಲ್ಲಿರುವ ಒಂದು ಪ್ರಮುಖ ಐತಿಹಾಸಿಕ ಮತ್ತು ಪವಿತ್ರ ಯಾತ್ರಾಸ್ಥಳವಾಗಿದೆ. ಹಿಂದೂಗಳಿಗೆ ಪಿತೃ ತರ್ಪಣ (ಪಿಂಡ ದಾನ) ಮತ್ತು ಬೌದ್ಧರಿಗೆ ಜ್ಞಾನೋದಯದ ಸ್ಥಳವಾಗಿ (ಬೋಧಗಯಾ) ಪ್ರಸಿದ್ಧಿ ಗಳಿಸಿದೆ. ಅಲ್ಲದೆ ಇಲ್ಲಿನ ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯ (UNESCO ತಾಣ) ಪ್ರಮುಖ ಆಕರ್ಷಣೆಗಳಾಗಿವೆ. ಗಯಾದಿಂದ ಕೇವಲ 10 ರಿಂದ 12 ಕಿ.ಮೀ ದೂರದಲ್ಲಿರುವ ಬೋಧಗಯಾದಲ್ಲಿ ಗೌತಮ ಬುದ್ಧನು ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದನು ಎನ್ನುವ ನಂಬಿಕೆ ಇದೆ.
ಕಾಶಿ (ವಾರಣಾಸಿ)
ಕಾಶಿ / ವಾರಣಾಸಿ ಪ್ರದೇಶವು ಉತ್ತರ ಪ್ರದೇಶದ ಗಂಗಾ ನದಿಯ ದಡದಲ್ಲಿರುವ ಅತ್ಯಂತ ಪವಿತ್ರ ಹಿಂದೂ ಯಾತ್ರಾ ಸ್ಥಳವಾಗಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯ, ಗಂಗಾ ಆರತಿ ಹಾಗೂ ಸಾಂಪ್ರದಾಯಿಕ ಘಾಟ್ಗಳಿಗೆ ಪ್ರಸಿದ್ಧವಾಗಿದೆ. ಇದನ್ನು ಭಾರತದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ರಾಜಧಾನಿ ಎಂದೂ ಪರಿಗಣಿಸಲಾಗುತ್ತದೆ.
ಪ್ರಯಾಗ್ರಾಜ್
ಉತ್ತರ ಪ್ರದೇಶದ ಮತ್ತೊಂದು ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಪ್ರಯಾಗ್ರಾಜ್ ಒಂದಾಗಿದೆ. ಹಿಂದಿನ ಅಲಹಾಬಾದ್ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳ ಅಥವಾ ತ್ರಿವೇಣಿ ಸಂಗಮ ಎಂದು ಪ್ರಸಿದ್ಧಿ ಗಳಿಸಿದೆ. ಅಲ್ಲದೆ ಹಿಂದೂ ಧರ್ಮದ ಅತ್ಯಂತ ಪವಿತ್ರ ತೀರ್ಥಯಾತ್ರಾ ಕೇಂದ್ರಗಳಲ್ಲಿಯೂ ಒಂದಾಗಿದೆ. ಈಚೆಗೆ ವಿಶ್ವದ ಅತ್ಯಂತ ದೊಡ್ಡ ಮಹಾಕುಂಭ ಮೇಳವು ಇಲ್ಲಿ ನಡೆದಿತ್ತು.

ಅಯೋಧ್ಯೆಯೆ - ಗಯಾ, ವಾರಣಾಸಿ ಮತ್ತು ಪ್ರಯಾಗ್ರಾಜ್ ಪ್ರವಾಸ ವಿವರ
ಅಯೋಧ್ಯೆಯೆ - ಗಯಾ, ವಾರಣಾಸಿ ಮತ್ತು ಪ್ರಯಾಗ್ರಾಜ್ ಪ್ರವಾಸಕ್ಕೆ ಸಂಬಂಧಿಸಿದಂತೆ IRCTCಯು ವಿಶೇಷ ಪ್ಯಾಕೇಜ್ ವ್ಯವಸ್ಥೆ ಮಾಡಿದೆ. 4 ರಾತ್ರಿಗಳು / 5 ಹಗಲುಗಳು ಪ್ರವಾಸ ಪ್ಯಾಕೇಜ್ ಇದಾಗಿದೆ. ಗಯಾ, ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಪ್ರವಾಸದಲ್ಲಿ ಹಲವು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಬಹುದಾಗಿದೆ.
ಅಯೋಧ್ಯೆಯೆ - ಗಯಾ, ವಾರಣಾಸಿ ಮತ್ತು ಪ್ರಯಾಗ್ರಾಜ್ ಪ್ಯಾಕೇಜ್ ವಿವರ
ಪ್ಯಾಕೇಜ್ ಹೆಸರು: HOLY AYODHYA WITH GAYA, KASHI & PRAYAGRAJ EX BENGALURU (SBA32B) / ಬೆಂಗಳೂರಿನಿಂದ ಪವಿತ್ರ ಅಯೋಧ್ಯೆ ಯಾತ್ರೆ - ಗಯಾ, ವಾರಣಾಸಿ ಮತ್ತು ಪ್ರಯಾಗ್ರಾಜ್.
ಪ್ರವಾಸಿ ತಾಣಗಳ ವಿವರ: ಗಯಾ, ವಾರಣಾಸಿ (ಕಾಶಿ), ಪ್ರಯಾಗ್ರಾಜ್ ಮತ್ತು ಅಯೋಧ್ಯೆ
ಸಾರಿಗೆ ವ್ಯವಸ್ಥೆ: ವಿಮಾನ
ವಿಮಾನ ನಿಲ್ದಾಣ/ನಿರ್ಗಮನ ಸಮಯ: ಬೆಂಗಳೂರು 05.10 ಗಂಟೆಗೆ
ಪ್ರವಾಸ ವಿವರ: 5 ರಾತ್ರಿ ಹಾಗು 6 ದಿನಗಳ ಪ್ರವಾಸ

Ayodhya Tour Package: ಪ್ಯಾಕೇಜ್ ಟಿಕೆಟ್ ಬೆಲೆ ವಿವರ
ಪ್ರವಾಸದ ಪ್ಯಾಕೇಜ್ನ ವೆಚ್ಚವು ನೀವು ಆಯ್ಕೆ ಮಾಡುವ ವಸತಿ ಉಳಿಯುವ ಆಯ್ಕೆಯ ಮೇಲೆ ಅವಲಂಬಿತವಾಗಿದೆ. ಪ್ರತಿ ವ್ಯಕ್ತಿಗೆ INR 42,600 ರೂ. ನಿಗದಿಯಾಗಿದೆ. ಇಬ್ಬರು ಒಟ್ಟಿಗೆ ಬುಕ್ ಮಾಡಿದರೆ ವ್ಯಕ್ತಿಗೆ 33,950 ರೂಪಾಯಿಗಳು. ಮೂವರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ 31,900 ರೂ. 5 ರಿಂದ 11 ವರ್ಷದ ಮಕ್ಕಳಿಗೆ (ಹಾಸಿಗೆ ಸಹಿತ) 29,600 ರೂಪಾಯಿಗಳು. 5 ರಿಂದ 11 ವರ್ಷದ ಮಕ್ಕಳಿಗೆ (ಹಾಸಿಗೆ ರಹಿತ) 29,600 ರೂಪಾಯಿ ಆಗಲಿದೆ. 2 ರಿಂದ 4 ವರ್ಷದ ಮಕ್ಕಳಿಗೆ ಹಾಸಿಗೆ ರಹಿತ ವ್ಯವಸ್ಥೆಯಾಗಿದ್ದರೆ, 18,450 ರೂಪಾಯಿ ಆಗುತ್ತದೆ.
Ayodhya Tour Package: ಪ್ರವಾಸ ವೇಳಾಪಟ್ಟಿ
Day 01: ಬೆಂಗಳೂರು - ಲಖನೌ - ಅಯೋಧ್ಯೆ
ಸೂಚನೆ: ವಿಮಾನ ಹೊರಡುವ ಸಮಯಕ್ಕಿಂತ ಕನಿಷ್ಠ 2 ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಹಾಜರಾಗಬೇಕು.
• ಬೆಳಿಗ್ಗೆ 10:15 - ಬೆಂಗಳೂರಿನಿಂದ ಪ್ರಯಾಣ
• ಮಧ್ಯಾಹ್ನ 1:10 - ಲಖನೌಗೆ ಆಗಮನ
• ನಂತರ ಅಯೋಧ್ಯೆಗೆ ಪ್ರಯಾಣ, ಹೋಟೆಲ್ ಚೆಕ್-ಇನ್
• ರಾತ್ರಿ ಊಟ ಮತ್ತು ವಾಸ
(ಆಹಾರ: ಡಿನ್ನರ್)
Day 02: ಅಯೋಧ್ಯೆ - ಪ್ರಯಾಗರಾಜ್ - ವಾರಾಣಸಿ
• ಬೆಳಿಗ್ಗೆ ರಾಮಲಲ್ಲಾ ದೇವಸ್ಥಾನ ಮತ್ತು ಹನುಮಾನ್ ಘಾಟ್ ಭೇಟಿ
• ಉಪಾಹಾರ ನಂತರ ಪ್ರಯಾಗರಾಜ್ಗೆ ಪ್ರಯಾಣ
• ತ್ರಿವೇಣಿ ಸಂಗಮ ಮತ್ತು ಪಾತಾಳಪುರಿ ದೇವಸ್ಥಾನ ಭೇಟಿ
• ನಂತರ ವಾರಾಣಸಿ ಪ್ರಯಾಣ, ಹೋಟೆಲ್ ಚೆಕ್-ಇನ್
• ರಾತ್ರಿ ಊಟ ಮತ್ತು ವಾಸ
(ಆಹಾರ: ಬ್ರೇಕ್ಫಾಸ್ಟ್ & ಡಿನ್ನರ್)
Day 03: ವಾರಾಣಸಿ
• ಕಾಶಿ ವಿಶ್ವನಾಥ, ವಿಶ್ವಲಕ್ಷ್ಮಿ ಮತ್ತು ಅನ್ನಪೂರ್ಣ ದೇವಸ್ಥಾನ ಭೇಟಿ
• ಸಂಜೆ ಗಂಗಾ ಆರತಿ ವೀಕ್ಷಣೆ
• ರಾತ್ರಿ ಊಟ ಮತ್ತು ವಾಸ
(ಆಹಾರ: ಬ್ರೇಕ್ಫಾಸ್ಟ್ & ಡಿನ್ನರ್)
Day 04: ವಾರಣಾಸಿ - ಬೋಧಗಯಾ
• ಉಪಾಹಾರದ ನಂತರ ಹೋಟೆಲ್ ಚೆಕ್-ಔಟ್
• ಬೋಧಗಯಾಕ್ಕೆ ಪ್ರಯಾಣ
• ಮಹಾಬೋಧಿ ದೇವಸ್ಥಾನ ಭೇಟಿ
• ಹೋಟೆಲ್ ಚೆಕ್-ಇನ್, ರಾತ್ರಿ ಊಟ ಮತ್ತು ವಾಸ
(ಆಹಾರ: ಬ್ರೇಕ್ಫಾಸ್ಟ್ & ಡಿನ್ನರ್)
Day 05: ಬೋಧಗಯಾ - ಪಾಟ್ನಾ - ಬೆಂಗಳೂರು
• ವಿಷ್ಣುಪಾದ ದೇವಸ್ಥಾನ ಭೇಟಿ
• ಹೋಟೆಲ್ ಚೆಕ್-ಔಟ್
• ಸಂಜೆ 7:00 - ಪಾಟ್ನಾ ವಿಮಾನ ನಿಲ್ದಾಣಕ್ಕೆ ಪ್ರಯಾಣ
• ರಾತ್ರಿ 11:25 - ವಿಮಾನ ಪ್ರಯಾಣ
• ಬೆಳಿಗ್ಗೆ 2:00 - ಬೆಂಗಳೂರಿಗೆ ಆಗಮನ
• ಪ್ರವಾಸ ಮುಕ್ತಾಯ
(ಆಹಾರ: ಬ್ರೇಕ್ಫಾಸ್ಟ್)
ಸಂಪರ್ಕ ವಿವರಗಳು
ಪ್ರಾದೇಶಿಕ ಕಚೇರಿ (ಬೆಂಗಳೂರು)
ನಂ. 82, ಎಸ್ಎಂಆರ್ ಆರ್ಕೇಡ್, ಡಾ. ರಾಜ್ ಕುಮಾರ್ ರಸ್ತೆ,
ರಾಜಾಜಿನಗರ, ಬೆಂಗಳೂರು - 560010
ದೂರವಾಣಿ: 080-22960014
ಮೊಬೈಲ್: 8595931290 / 9003140699
ಇ-ಮೇಲ್: [email protected]
ವೆಬ್ಸೈಟ್: www.irctctourism.com
ಪ್ರವಾಸಿ ಮಾಹಿತಿ ಮತ್ತು ಸಹಾಯ ಕೇಂದ್ರ (ಬೆಂಗಳೂರು)
ಕಾನ್ಕೋರ್ಸ್ ಹಾಲ್, ಬೆಂಗಳೂರು ಸಿಟಿ ರೈಲು ನಿಲ್ದಾಣ
ದೂರವಾಣಿ: 080-22960013, 8595931292
ಇ-ಮೇಲ್: [email protected]
ಪ್ರವಾಸಿ ಮಾಹಿತಿ ಮತ್ತು ಸಹಾಯ ಕೇಂದ್ರ (ಮೈಸೂರು)
ಮುಖ್ಯ ಪ್ರವೇಶದ್ವಾರ ಹತ್ತಿರ, ಬುಕ್ಕಿಂಗ್ ಕಚೇರಿ,
ಮೈಸೂರು ರೈಲು ನಿಲ್ದಾಣ
ದೂರವಾಣಿ: 0821-2426001, 8595931294
ಇ-ಮೇಲ್: [email protected]
ಪ್ರವಾಸಿ ಮಾಹಿತಿ ಮತ್ತು ಸಹಾಯ ಕೇಂದ್ರ (ಹುಬ್ಬಳ್ಳಿ)
ಹುಬ್ಬಳ್ಳಿ ರೈಲು ನಿಲ್ದಾಣ
ಸಂಪರ್ಕ: 8595931293 / 291
ಇ-ಮೇಲ್: [email protected]












Click it and Unblock the Notifications