ವಶಿಷ್ಠ ಕ್ರೆಡಿಟ್ ಸಹಕಾರಿ ಬ್ಯಾಂಕಿನ ಸಮರ್ಥವಿಲ್ಲದ ವರ್ತನೆ
ಪ್ರತಿ ದಿನ ಕಷ್ಟಪಟ್ಟು ಬೆವರು ಹರಿಸಿ ಮನೆ ಸಂಸಾರ ಮಕ್ಕಳಿಗೋಸ್ಕರ ಸಂಪಾದಿಸಿ ಕೈಯಲ್ಲಿದ್ದರೆ ಹಣ ಖರ್ಚು ಆಗುತ್ತದೆ ಎಂದು ಮುಂದಿನ ಕಷ್ಟ ಸುಖ ದಲ್ಲಿ ಉಪಯೋಗ ಆಗಲಿ ಎನ್ನುವ ಕಾರಣಕ್ಕೆ ಸಹಕಾರಿ ಬ್ಯಾಂಕುಗಳನ್ನು ನಂಬಿ ಅದರಲ್ಲಿ ಜೀವನಪೂರ್ತಿ ದುಡಿದ ಲಕ್ಷ ಲಕ್ಷ ಹಣವನ್ನು ಠೇವಣಿ ಮಾಡಿಟ್ಟ ಎಷ್ಟೋ ಜನರು ಇಂದು ಬೀದಿ ಬದಿ ನಿಲ್ಲುವ ಹಾಗಾಗಿದೆ.
ಮಧ್ಯಮ ವರ್ಗದ ಜನರು, ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆದ ಹಿರಿಯ ನಾಗರೀಕರು, ಮತ್ತು ದಿನ ಕೂಲಿ ಮಾಡೋ ಜನರು ತಮಗಾಗಿ ತಮ್ಮ ಸಂಸಾರಕ್ಕಾಗಿ ಹೂಡಿಟ್ಟ ಹಣವನ್ನು ಇಂದು ಬ್ಯಾಂಕ್ ಅಧಿಕಾರಿಗಳು ತಮ್ಮ ದುರಾಸೆಗೆ ಸ್ವ ಉಪಯೋಗಕ್ಕೆ ಬಳಸಿಕೊಂಡು ಜನರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ.
ಬೆಂಗಳೂರಿನ ಹನುಮಂತನಗರದಲ್ಲಿರುವ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಶಿಷ್ಠ ಕ್ರೆಡಿಟ್ ಸಹಕಾರಿ ಪತ್ತಿನ ಸೌಹಾರ್ದ ಸಂಘದ ನಿರ್ದೇಶಕರಾದ ವೆಂಕಟ ನಾರಾಯಣ ಮತ್ತು ಅವರ ಮಗ ಕೃಷ್ಣಪ್ರಸಾದ್ ಸುಮಾರು 450 ಕೋಟಿ ಹಣವನ್ನು ಜನರಿಗೆ ನೀಡದೆ ವಂಚಿಸಿದ್ದಾರೆ. ಕಳೆದ ಡಿಸೆಂಬರ್ನಿಂದ ಮೆಚ್ಯೂರಿಟಿ ಮತ್ತು ಬಡ್ಡಿ ಹಣವನ್ನು ನೀಡದೆ ಕಳ್ಳಾಟವಾಡುತ್ತಿದದ್ದಾರೆ. ಇವರು ಕಾರಣ ಕೇಳಿದರೆ ಕೊರೊನಾ ಸಮಯವಾದ್ದರಿಂದ ಸಾಲ ಪಡೆದವರು ಹಣ ಮರುಪಾವತಿ ಮಾಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದರು.ಇದರಿಂದ ಆತಂಕಕ್ಕೊಳಗಾಗಿದ್ದ ಜನರು ಹನುಮಂತನಗರದ ಆರಕ್ಷಕ ಠಾಣೆಯಲ್ಲಿ FIR ದಾಖಲಿಸಿದರು.

ದೂರು ದಾಖಲಿಸಿದ ನಂತರ ತಲೆ ಮರೆಸಿಕೊಂಡಿರುವ ವಸಿಷ್ಠ ಕ್ರೆಡಿಟ್ ಸಂಸ್ಥೆಯ ವೆಂಕಟನಾರಾಯಣ ಮತ್ತು ಕೃಷ್ಣಪ್ರಸಾದ್ ಅವರಿಗೋಸ್ಕರ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯು ಇದೇ ರೀತಿ ಶ್ರೀ ಗುರುರಾಘವೇಂದ್ರ ಸಹಕಾರಿ ಪತ್ತಿನ ಸೌಹಾರ್ದ ಸಂಘ ಬ್ಯಾಂಕ್ ನ್ನು ಕೂಡ NPA (non performing assets)ಆಧಾರದಿಂದ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿತ್ತು.
2700 ಕೋಟಿ ಹಣ ಠೇವಣಿ, ಷೇರು ಮಾಡಿದ್ದ ಗ್ರಾಹಕರು ಆತಂಕಕ್ಕೊಳಗಾಗಿದ್ದರು. ರಾಘವೇಂದ್ರ ಬ್ಯಾಂಕಿನ ನಿರ್ದೇಶಕರಾದ ಡಾ. ರಾಮಕೃಷ್ಣ ಮಯ್ಯ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಖಜಾಂಜಿಯಾಗಿದ್ದವರು ಇವರ ಮೇಲಿನ ನಂಬಿಕೆಗಾಗಿ ಸಾವಿರಾರು ಜನ ಹಣ ಹೂಡಿಕೆ ಮಾಡಿದ್ದರು.
ಆದರೆ ಕೋಟಿ ಕೋಟಿ ಕಮಿಷನ್ ಆಸೆಗಾಗಿ ಸೂಕ್ತ ದಾಖಲೆಗಳಿಲ್ಲದ ಸಾಲಗಾರರಿಗೆ ಸಾಲ ನೀಡಿ ಅದನ್ನು ಮರುಪಾವತಿ ಮಾಡಿಸಿಕೊಳ್ಳಲಾಗದೆ ಠೇವಣಿ, ಷೇರುದಾರರಿಗೆ ಮೋಸ ಮಾಡಿದರು. ಅಧಿಕ ಬಡ್ಡಿ ಆಸೆ ತೋರಿಸಿ ಕೋಟ್ಯಂತರ ಹಣವನ್ನು ಠೇವಣಿ ಮಾಡಿಸಿಕೊಂದಿದ್ದರು. ಅತೀ ಹೆಚ್ಚು ನಿವೃತ್ತಿ ಪಡೆದ 60 ವರ್ಷ ಮೇಲ್ಪಟ್ಟ ಗ್ರಾಹಕರು ತಮ್ಮ ಇಡೀ ಜೀವನಾಂಶ ಹಣವನ್ನು ಠೇವಣಿ ಮಾಡಿ ಕಂಗಾಲಾಗಿದ್ದರು.
ಹಾಗೂ ಗುರು ಸಾರ್ವಭೌಮ ಸಹಕಾರಿ ಬ್ಯಾಂಕ್ ಸಹ ಸಾವಿರಾರು ಕೋಟಿ ಹಣ ಹಗರಣಗೊಂಡಿದ್ದು ಈ ಪ್ರಕರಣದಲ್ಲಿಯು ಕೂಡ ಒಂದು ರೂಪಾಯಿಯು ಗ್ರಾಹಕರಿಗೆ ಮರುಪಾವತಿಸದೆ ಜನರಿಗೆ
ಮೋಸ ಮಾಡಿದೆ.
ವಶಿಷ್ಠ ಬ್ಯಾಂಕಿನ ನಾರಾಯಣರವರು ತಮ್ಮ ದುರಾಸೆಗಾಗಿ ಸಾರ್ವಜನಿಕರ ಹಣವನ್ನು ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್, ಚಲನಚಿತ್ರ ರಂಗ ಇನ್ನಿತರ ಕ್ಷೇತ್ರಗಳಲ್ಲಿ ತಮಗೆ ಲಾಭ ಮಾಡಿಸಿಕೊಳ್ಳುವುದಕ್ಕೆ ದುರುಪಯೋಗಪಡಿಸಿಕೊಂಡಿದ್ದಾರೆ.
ಪಕ್ಷಪಾತದಿಂದ ತಮಗೆ ಬೇಕಾದ ಕೆಲವು ಗ್ರಾಹಕರಿಗೆ ಸೂಕ್ತ ದಾಖಲೆಗಳಿಲ್ಲದೆ ಸಾಲ ಕೊಟ್ಟಿದ್ದಾರೆ ಮತ್ತು ಈ ಅಕ್ರಮಗಳ ಹಿಂದೆ ಅವರಿಗೆ ರಾಜಕಾರಣಿಗಳ ಬೆಂಬಲವಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications