ಓದುಗರ ಪತ್ರ: ಸಂಸದ ರಾಜೀವ್ ಚಂದ್ರಶೇಖರ್ ಗೆ ಓದುಗನ ಅಭಿನಂದನೆ
ರೆರಾ ನಿಯಮಗಳ ಲೋಪಗಳ ಬಗ್ಗೆ ರಾಜೀವ್ ಚಂದ್ರಶೇಖರ್ ಪತ್ರ. ಈ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಅಜಿತ್ ನಾಯಕ್.
ಬೆಂಗಳೂರು, ಆಗಸ್ಟ್ 11: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ನಿಯಮಾವಳಿಗಳಲ್ಲಿರುವ (ರೆರಾ) ಲೋಪ ದೋಷಗಳ ಬಗ್ಗೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಎಂ. ಕೃಷ್ಣಪ್ಪ ಅವರಿಗೆ ಗುರುವಾರ ಪತ್ರ ಬರೆದು ಮನವರಿಕೆ ಮಾಡಲೆತ್ನಿಸಿದ್ದರು. ಆ ಸುದ್ದಿಯು ಒನ್ ಇಂಡಿಯಾದಲ್ಲಿ ಪ್ರಕಟವಾಗಿತ್ತು.
ಈ ಸುದ್ದಿಗೆ ಅಜಿತ್ ನಾಯಕ್ ಎಂಬ ಓದುಗರೊಬ್ಬರು ಪ್ರತಿಕ್ರಿಯೆ ನೀಡಿದ್ದು, ರಾಜೀವ್ ಚಂದ್ರಶೇಖರ್ ಅವರ ನಡೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ರೆರಾ ಕಾಯ್ದೆಯನ್ನು ಅಭ್ಯಸಿಸಲೆಂದೇ ನೇಮಿಸಲಾಗಿದ್ದ ಸಮಿತಿಯಲ್ಲಿ ತಾವೂ (ರಾಜೀವ್ ಚಂದ್ರಶೇಖರ್) ಸದಸ್ಯರಾಗಿ ಸರ್ಕಾರಕ್ಕೆ ಉತ್ತಮ ಸಲಹೆಗಳನ್ನು ಕೊಟ್ಟಿದ್ದನ್ನು ಸ್ಮರಿಸಿದ್ದಾರೆ ಅವರು. ಅವರು ನೀಡಿರುವ ಪ್ರತಿಕ್ರಿಯೆಯ ಯಥಾವತ್ ಸ್ವರೂಪ ಇಲ್ಲಿದೆ.

ಮಾನ್ಯ ರಾಜ್ಯಸಭಾ ಸದಸ್ಯರಾದ ಶ್ರೀ ರಾಜೀವ್ ಚಂದ್ರಶೇಖರ್ ಇವರಿಗೆ ಧನ್ಯವಾದಗಳು. ಮನೆ / ಫ್ಲಾಟು/ ಅಪಾರ್ಟ್ಮೆಂಟು ಖರೀದಿಸುತ್ತಿರುವವರ ಹಿತರಕ್ಷಣೆ ಮಾಡಲು ತಾವು ನಿರಂತರವಾಗಿ ಗ್ರಾಹಕರ ಸರಿಯಾದ ಹಕ್ಕುಗಳಿಗಾಗಿ ತಮ್ಮ ಪ್ರಯತ್ನವನ್ನು ಮಾಡುತ್ತ ಬಂದಿರುವಿರಿ.
ರಾಜ್ಯಸಭೆಯು ರೇರಾ ಕಾಯಿದೆಯನ್ನು ಅಂಗೀಕರಿಸುವ ಪೂರ್ವದಲ್ಲಿ ರೇರಾ ಮಸೂದೆಯನ್ನು ಅಭ್ಯಯಿಸಲು ನಿರ್ಮಿಸಿದ ಸಿಲೆಕ್ಟ್ ಕಮ್ಮಿಟಿಯ ಸದಸ್ಯರಾಗಿದ್ದ ತಾವು ಗ್ರಾಹಕರಿಗೆ ಅನುಕೂಲಕರವಾದ ಕಾಯಿದೆ ತರುವಲ್ಲಿ ಆ ಕಮ್ಮಿಟಿಗೆ ಯೋಗ್ಯಸಲಹೆಗಳನ್ನು ಕೊಟ್ಟು ನಿರ್ವಹಿಸಿದ ಪಾತ್ರವು ಗಮನಾರ್ಹವಾಗಿದ್ದು, ತದ್ನಂತರವೂ ತಾವು ಕಾಯಿದೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ಸರ್ಕಾರವನ್ನು ಮೇಲಿಂದ ಮೇಲೆ ಎಚ್ಚರಿಸುತ್ತಾ ಬಂದಿರುವಿರಿ.
ತಮ್ಮಂತೆಯೇ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷರಾಗುವ ಈಹಿಂದೆ 10 ವರ್ಷಗಳಷ್ಟು ದೀರ್ಘಕಾಲ ಅಮೆರಿಕೆಯಲ್ಲಿ ಸಾಫ್ಟವೇರ ಎಂಜೀನೀರ್ ಆಗಿ ಕೆಲಸಮಾಡಿ ಈಗ ಸಾಜಿಕ ಕಾರ್ಯಕರ್ತನಾಗಿ ಸೇವೆಸಲ್ಲಿಸುತ್ತಿರುವ ಶ್ರೀ ರವಿ ಕೃಷ್ಣ ರೆಡ್ಡಿ ಅವರೂ ಕೂಡ ಈ ಕಾಯಿದೆಯ ಮೇಲೆ ನಿಯಮಗಳನ್ನು ಮಾಡಲು ಸೇರಿದ ಮಂತ್ರಿಮಂಡಲದ ಸಭೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವ ಕೆಬಿನೆಟ್ ದರ್ಜೆಯ ಮಂತ್ರಿಗಳು ನೈತಿಕವಾಗಿ ಪಾಲುಗೊಳ್ಳಬಾರದಿತ್ತೆಂದು ಒಂದು ಮನವಿಯನ್ನು ರಾಜ್ಯಪಾಲರಿಗೆ ಕೊಟ್ಟಿರುವರು.
ಸುಮಾರು 325 ರಷ್ಟು ಚುನಾಯಿತ ಎಂಎಲ್ಏ, ಎಂಎಲ್ಸಿ ಮತ್ತು ಎಂಪಿ ಗಳು ಕರ್ನಾಟಕದಲ್ಲಿ ಇದ್ದರೂ ಈವರೆಗೆ ತಮ್ಮನ್ನು ಬಿಟ್ಟು ಯಾವೊಬ್ಬನೂ ಸ್ವಯಂಪ್ರೇರಿತರಾಗಿ ಈ ರೇರಾ ಕಾಯಿದೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವುದೇ ರೀತಿಯ ಒತ್ತಡ ಮತ್ತು ಪ್ರತಿಕ್ರಿಯೆಯನ್ನು ಕರ್ನಾಟಕ ಸರ್ಕಾರದ ಮೇಲೆ ಮಾಡದಿರುವುದು ಈ ಎಲ್ಲ ರಾಜಕಾರಣಿಗಳು ಒಂದಿಲ್ಲೊಂದು ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿರಬೇಕೆಂದು ಭಾವನೆಯಾಗುವದು.
ಕಾಯಿದೆಯನ್ನು ತಿಳಿದುಕೊಂಡು ಸರ್ಕಾರವು ಅಸಂವಿಧಾನಿಕ ರೀತಿಯಲ್ಲಿ ಈ ಕಾಯಿದೆಯನ್ನು ಅನುಷ್ಠಾನಮಾಡುತ್ತಿರುವ ದನ್ನು ಅರಿಯುವ ಬುದ್ಧಿಶಕ್ತಿ ಅವರಿಗಿಲ್ಲ ಎಂದು ಅನಿಸುವದು. ಈ ಕಾಯಿದೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು ತಾವು ಮಾಡುತ್ತಿರುವ ಪ್ರಯತ್ನಕ್ಕೆ ಒಬ್ಬ ಕಾರ್ಯಕರ್ತನಾಗಿ ನಾನು ಚಿರಋಣಿಯಾಗಿರುವೆ.
- ಅಜಿತ್ ನಾಯಕ್
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Bengaluru Rent: ಬೆಂಗಳೂರು ಬಾಡಿಗೆ, ಅಡ್ವಾನ್ಸ್ ದುಬಾರಿ: ದೆಹಲಿ, ಮುಂಬೈನಲ್ಲಿ ಇಷ್ಟಿಲ್ಲ, ನಾರ್ಥಿ ಯುವತಿ ವೈರಲ್ ವಿಡಿಯೋ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್











Click it and Unblock the Notifications