ಪತ್ರ : ಮನನೊಂದ ಮಾಧ್ವನ ಮನದಾಳದ ಮಾತುಗಳು
ಮಾಧ್ವ ಬಂಧುಗಳೇ,
ನವವೃಂದಾವನಗಡ್ಡೆಯಲ್ಲಿ ನಿನ್ನೆ ಇವತ್ತು (ಡಿಸೆಂಬರ್ 8, 9) ನಡೆದ ಘಟನೆಗಳನ್ನು ನೀವೆಲ್ಲ ಟಿ.ವಿ.ಯಲ್ಲಿ ವಾಟ್ಸಪ್ ಮೊದಲಾದವುಗಳಲ್ಲಿ ನೋಡಿರುತ್ತೀರಿ. ಅಲ್ಲಿ ನಡೆದ ಘಟನೆಗಳ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿ, ಅದುವೇ ಸತ್ಯ ಎನ್ನುವ ಹಾಗೆ ಬಿಂಬಿಸುವ ಕಲೆ ಕೆಲವರಿಗೆ ಕರಗತವಾಗಿದೆ.
ನಾನು ಎರಡು ದಿನದಿಂದ ನವವೃಂದಾವನ ಗಡ್ಡೆಯಲ್ಲಿಯೇ ಇದ್ದೇನೆ. ಇಲ್ಲಿರುವ ವಸ್ತುಸ್ಥಿತಿ ಪ್ರಾಮಾಣಿಕವಾಗಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಈ ನವವೃಂದಾವನ ಗಡ್ಡೆ ಉತ್ತರಾದಿಮಠಕ್ಕೆ ಸೇರಿದ್ದು ಎಂದು ಕೆಲವು ತಿಂಗಳು ಹಿಂದೆ ಧಾರವಾಡದ ಕೋರ್ಟನಲ್ಲಿ ತೀರ್ಪು ಹೊರಬಂದಿತ್ತು. ಇದನ್ನು ರಾಯರಮಠದವರೂ ಒಪ್ಪುತ್ತಾರೆ. ಹೀಗಿರುವಾಗ ಉತ್ತರಾದಿಮಠದ ಅಧೀನದಲ್ಲಿ ಇರುವ ಗಡ್ಡೆಗೆ ಸಾವಿರಾರು ಜನರನ್ನು ಯಾವ ಪೂರ್ವ ಅನುಮತಿ ತೆಗೆದುಕೊಳ್ಳದೇ ಕರೆದುಕೊಂಡು ಬರುವುದು ಅನ್ಯಾಯವಲ್ಲವೇ? [ಕೊಪ್ಪಳ : ನವ ಬೃಂದಾವನ ಗಡ್ಡೆ ಪೂಜೆ ವಿವಾದಕ್ಕೆ ತೆರೆ?]

ಮನೆ ನಿಮ್ಮದು, ಅದರಲ್ಲಿ ಇರುವದು ನನ್ನದು ಎಂದು ನಾನು ಹೇಳಿದರೆ ನೀವು ಯಾರಾದರೂ ಒಪ್ಪುತ್ತೀರಾ? ಅಥವಾ ಹಾಗೆ ನಾನು ಹೇಳುವದು ಸುಸಂಸ್ಕೃತ ಸಮಾಜದ ಸಭ್ಯವ್ಯಕ್ತಿಯ ಲಕ್ಷಣವೆಂದು ಒಪ್ಪುತ್ತೀರಾ? ನೀವೇ ಹೇಳಿ.
ಅಲ್ಲಿರುವ ಪೊಲೀಸರಿಗೂ ಪ್ರಲೋಭನೆ ಒಡ್ಡಿ, ಭಯಪಡಿಸಿ, ಇನ್ನೊಬ್ಬರ ಭೂಮಿಯಲ್ಲಿ ಬಂದು ಗದ್ದಲ ಹಾಕುವ ಈ ಜನ ಭಕ್ತಿಯಿಂದ ಬಂದವರೆಂದು ಅಲ್ಲಿದ್ದ ಯಾರಿಗೂ ಅನಿಸಲಿಲ್ಲ. ಉತ್ತರಾದಿಮಠದ ಕಡೆಯಿಂದ ಆರಾಧನೆಗೆ ಪಂಡಿತರು ಸಾಧಕಗ್ರಹಸ್ಥರು ಬಂದಿದ್ದರು. ಆದರೆ ರಾಘವೇಂದ್ರ ಮಠದ ಕಡೆಯಿಂದ ಬಂದ ಎಷ್ಟೋ ಜನರಿಗೆ ಪದ್ಮನಾಭತೀರ್ಥರ ಹೆಸರೂ ಗೊತ್ತಿಲ್ಲ. ಕೇವಲ ಜನಬಲ ತೋರಿಸಿ ಹೆದರಿಸುವ ಕುಕೃತ್ಯಕ್ಕಾಗಿ ಜನರನ್ನು ಕರೆತಂದಂತಿತ್ತು.
ಉತ್ತರಾದಿ ಮಠದವರನ್ನು ಹೊರಹೊಗುವಂತೆ ಮಾಡಿ ಆರಾಧನೆ ಮಾಡಿದ್ದೇವೆಂದು ಮೀಡಿಯಾದವರಿಗೆ ತೋರಿಸಬಹುದು. ಆದರೆ ದೇವರಿಗೆ ಶ್ರೀರಾಘವೇಂದ್ರತೀರ್ಥರಿಗೆ ಏನು ಉತ್ತರ ಕೊಡುತ್ತಾರೆ? ಇವರಲ್ಲಿ ಅನೇಕರು ನರಹರಿತೀರ್ಥರ ವೃಂದಾವನಕ್ಕೆ ಮಾಡಿದ ಅಪಚಾರ ಮಾಧ್ವ ಸಾಧಕ ಭಕ್ತರು ಇನ್ನೂ ಮರೆತಿಲ್ಲ. [ಮಡಿ ಎಂದರೇನು? ಮಡಿಯ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ?]

ನವವೃಂದಾವನಗಡ್ಡೆಯಲ್ಲಿ ಮಾಡಬೇಕಾದ ಪ್ರತಿ ಅಭಿವೃದ್ಧಿಯ ಕಾರ್ಯಕ್ಕೆ ಹಂಪಿ ಪ್ರಾಧಿಕಾರ ಮೊದಲಾದ ಹೆಸರಿನಿಂದ ಅಡ್ಡಿಮಾಡುವ ಈ ಜನ ನಿಜವಾಗಿಯೂ ಪದ್ಮನಾಭತೀರ್ಥರ ಶಿಷ್ಯರೇ? ನವವೃಂದಾವನವನ್ನು ನವಗ್ರಹವೆಂದು ಹೇಳಿ ಇತಿಹಾಸಕ್ಕೆ ಅಪಚಾರಮಾಡುವ ಈ ಕುತ್ಸಿತ ಜನರ ಅನ್ಯಾಯಕ್ಕೆ ಕೊನೆ ಎಂದು?
ಕೆಲವು ಜನ ಎರಡೂ ಮಠದವರು ಹಂಚಿಕೊಂಡು ಆರಾಧನೆ ಮಾಡಿ ಎಂದು ಬುದ್ಧಿಜೀವಿಗಳೆಂದು ಸಲಹೆ ಕೊಡುತ್ತಾರೆ. ಆ ಸಲಹೆ ಕೊಡುವ ವ್ಯಕ್ತಿಯ ಜೊತೆಗೆ ಅವನ ಆಸ್ತಿ ನನ್ನದು ಎಂದು ಜಗಳ ತೆಗೆಯುತ್ತಾನೆ. ಆಗ ನೀವು ಬಂದು ಇಬ್ಬರಲ್ಲಿ ಜಗಳ ಬೇಡ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಿ ಎಂದು ಹೇಳಿದರೆ ನವವೃಂದಾವನ ವಿಷಯದಲ್ಲಿ ಸಲಹೆ ಕೊಡುವವನು ನಿಮ್ಮ ಸಲಹೆಯನ್ನು ಒಪ್ಪುತ್ತಾನಾ? ತಮ್ಮದನ್ನು ಕಳೆದುಕೊಳ್ಳುವ ದುಃಖ ಪುಕ್ಕಟೆಯಾಗಿ ಸಲಹೆ ಕೊಡುವವನಿಗೆ ಯಾವ ಕಾಲಕ್ಕೂ ಬರುವದಿಲ್ಲ. [ಬ್ರಾಹ್ಮಣರೆಂಬ ರೋಮನ್ ಕ್ಯಾಥೋಲಿಕ್ಕರು!]
ಉತ್ತರಾದಿಮಠದ ಸೊತ್ತಿನಲ್ಲಿ ಬಲಾತ್ಕಾರವಾಗಿ ಬಂದು ಉತ್ತರಾದಿಮಠದವರೇ ಹೊರಗೆ ಹೊಗುವಂತೆ ಮಾಡಿ ಆರಾಧನೆ ಮಾಡಿದೆವು ಎಂದು ಅಹಂಕಾರದಿಂದ ಬೀಗುವ ಈ ಜನರನ್ನು ದೇವರು ಗುರುಗಳು ಯಾವ ಕಾಲದಲ್ಲೂ ಕ್ಷಮಿಸುವದಿಲ್ಲ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ಮತ್ತು ಅವರನ್ನು ಬೆಂಬಲಿಸಿದ ಪೊಲೀಸರೇ ಮೊದಲಾದ ಯಾರನ್ನೂ ನ್ಯಾಯನಿಷ್ಠನಾದ ದೇಶಭಕ್ತ ಕ್ಷಮಿಸುವದಿಲ್ಲ. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]
ಮನನೊಂದ ಮಾಧ್ವ
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications