ಪತ್ರ : ಮನನೊಂದ ಮಾಧ್ವನ ಮನದಾಳದ ಮಾತುಗಳು
ಮಾಧ್ವ ಬಂಧುಗಳೇ,
ನವವೃಂದಾವನಗಡ್ಡೆಯಲ್ಲಿ ನಿನ್ನೆ ಇವತ್ತು (ಡಿಸೆಂಬರ್ 8, 9) ನಡೆದ ಘಟನೆಗಳನ್ನು ನೀವೆಲ್ಲ ಟಿ.ವಿ.ಯಲ್ಲಿ ವಾಟ್ಸಪ್ ಮೊದಲಾದವುಗಳಲ್ಲಿ ನೋಡಿರುತ್ತೀರಿ. ಅಲ್ಲಿ ನಡೆದ ಘಟನೆಗಳ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿ, ಅದುವೇ ಸತ್ಯ ಎನ್ನುವ ಹಾಗೆ ಬಿಂಬಿಸುವ ಕಲೆ ಕೆಲವರಿಗೆ ಕರಗತವಾಗಿದೆ.
ನಾನು ಎರಡು ದಿನದಿಂದ ನವವೃಂದಾವನ ಗಡ್ಡೆಯಲ್ಲಿಯೇ ಇದ್ದೇನೆ. ಇಲ್ಲಿರುವ ವಸ್ತುಸ್ಥಿತಿ ಪ್ರಾಮಾಣಿಕವಾಗಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಈ ನವವೃಂದಾವನ ಗಡ್ಡೆ ಉತ್ತರಾದಿಮಠಕ್ಕೆ ಸೇರಿದ್ದು ಎಂದು ಕೆಲವು ತಿಂಗಳು ಹಿಂದೆ ಧಾರವಾಡದ ಕೋರ್ಟನಲ್ಲಿ ತೀರ್ಪು ಹೊರಬಂದಿತ್ತು. ಇದನ್ನು ರಾಯರಮಠದವರೂ ಒಪ್ಪುತ್ತಾರೆ. ಹೀಗಿರುವಾಗ ಉತ್ತರಾದಿಮಠದ ಅಧೀನದಲ್ಲಿ ಇರುವ ಗಡ್ಡೆಗೆ ಸಾವಿರಾರು ಜನರನ್ನು ಯಾವ ಪೂರ್ವ ಅನುಮತಿ ತೆಗೆದುಕೊಳ್ಳದೇ ಕರೆದುಕೊಂಡು ಬರುವುದು ಅನ್ಯಾಯವಲ್ಲವೇ? [ಕೊಪ್ಪಳ : ನವ ಬೃಂದಾವನ ಗಡ್ಡೆ ಪೂಜೆ ವಿವಾದಕ್ಕೆ ತೆರೆ?]

ಮನೆ ನಿಮ್ಮದು, ಅದರಲ್ಲಿ ಇರುವದು ನನ್ನದು ಎಂದು ನಾನು ಹೇಳಿದರೆ ನೀವು ಯಾರಾದರೂ ಒಪ್ಪುತ್ತೀರಾ? ಅಥವಾ ಹಾಗೆ ನಾನು ಹೇಳುವದು ಸುಸಂಸ್ಕೃತ ಸಮಾಜದ ಸಭ್ಯವ್ಯಕ್ತಿಯ ಲಕ್ಷಣವೆಂದು ಒಪ್ಪುತ್ತೀರಾ? ನೀವೇ ಹೇಳಿ.
ಅಲ್ಲಿರುವ ಪೊಲೀಸರಿಗೂ ಪ್ರಲೋಭನೆ ಒಡ್ಡಿ, ಭಯಪಡಿಸಿ, ಇನ್ನೊಬ್ಬರ ಭೂಮಿಯಲ್ಲಿ ಬಂದು ಗದ್ದಲ ಹಾಕುವ ಈ ಜನ ಭಕ್ತಿಯಿಂದ ಬಂದವರೆಂದು ಅಲ್ಲಿದ್ದ ಯಾರಿಗೂ ಅನಿಸಲಿಲ್ಲ. ಉತ್ತರಾದಿಮಠದ ಕಡೆಯಿಂದ ಆರಾಧನೆಗೆ ಪಂಡಿತರು ಸಾಧಕಗ್ರಹಸ್ಥರು ಬಂದಿದ್ದರು. ಆದರೆ ರಾಘವೇಂದ್ರ ಮಠದ ಕಡೆಯಿಂದ ಬಂದ ಎಷ್ಟೋ ಜನರಿಗೆ ಪದ್ಮನಾಭತೀರ್ಥರ ಹೆಸರೂ ಗೊತ್ತಿಲ್ಲ. ಕೇವಲ ಜನಬಲ ತೋರಿಸಿ ಹೆದರಿಸುವ ಕುಕೃತ್ಯಕ್ಕಾಗಿ ಜನರನ್ನು ಕರೆತಂದಂತಿತ್ತು.
ಉತ್ತರಾದಿ ಮಠದವರನ್ನು ಹೊರಹೊಗುವಂತೆ ಮಾಡಿ ಆರಾಧನೆ ಮಾಡಿದ್ದೇವೆಂದು ಮೀಡಿಯಾದವರಿಗೆ ತೋರಿಸಬಹುದು. ಆದರೆ ದೇವರಿಗೆ ಶ್ರೀರಾಘವೇಂದ್ರತೀರ್ಥರಿಗೆ ಏನು ಉತ್ತರ ಕೊಡುತ್ತಾರೆ? ಇವರಲ್ಲಿ ಅನೇಕರು ನರಹರಿತೀರ್ಥರ ವೃಂದಾವನಕ್ಕೆ ಮಾಡಿದ ಅಪಚಾರ ಮಾಧ್ವ ಸಾಧಕ ಭಕ್ತರು ಇನ್ನೂ ಮರೆತಿಲ್ಲ. [ಮಡಿ ಎಂದರೇನು? ಮಡಿಯ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ?]

ನವವೃಂದಾವನಗಡ್ಡೆಯಲ್ಲಿ ಮಾಡಬೇಕಾದ ಪ್ರತಿ ಅಭಿವೃದ್ಧಿಯ ಕಾರ್ಯಕ್ಕೆ ಹಂಪಿ ಪ್ರಾಧಿಕಾರ ಮೊದಲಾದ ಹೆಸರಿನಿಂದ ಅಡ್ಡಿಮಾಡುವ ಈ ಜನ ನಿಜವಾಗಿಯೂ ಪದ್ಮನಾಭತೀರ್ಥರ ಶಿಷ್ಯರೇ? ನವವೃಂದಾವನವನ್ನು ನವಗ್ರಹವೆಂದು ಹೇಳಿ ಇತಿಹಾಸಕ್ಕೆ ಅಪಚಾರಮಾಡುವ ಈ ಕುತ್ಸಿತ ಜನರ ಅನ್ಯಾಯಕ್ಕೆ ಕೊನೆ ಎಂದು?
ಕೆಲವು ಜನ ಎರಡೂ ಮಠದವರು ಹಂಚಿಕೊಂಡು ಆರಾಧನೆ ಮಾಡಿ ಎಂದು ಬುದ್ಧಿಜೀವಿಗಳೆಂದು ಸಲಹೆ ಕೊಡುತ್ತಾರೆ. ಆ ಸಲಹೆ ಕೊಡುವ ವ್ಯಕ್ತಿಯ ಜೊತೆಗೆ ಅವನ ಆಸ್ತಿ ನನ್ನದು ಎಂದು ಜಗಳ ತೆಗೆಯುತ್ತಾನೆ. ಆಗ ನೀವು ಬಂದು ಇಬ್ಬರಲ್ಲಿ ಜಗಳ ಬೇಡ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಿ ಎಂದು ಹೇಳಿದರೆ ನವವೃಂದಾವನ ವಿಷಯದಲ್ಲಿ ಸಲಹೆ ಕೊಡುವವನು ನಿಮ್ಮ ಸಲಹೆಯನ್ನು ಒಪ್ಪುತ್ತಾನಾ? ತಮ್ಮದನ್ನು ಕಳೆದುಕೊಳ್ಳುವ ದುಃಖ ಪುಕ್ಕಟೆಯಾಗಿ ಸಲಹೆ ಕೊಡುವವನಿಗೆ ಯಾವ ಕಾಲಕ್ಕೂ ಬರುವದಿಲ್ಲ. [ಬ್ರಾಹ್ಮಣರೆಂಬ ರೋಮನ್ ಕ್ಯಾಥೋಲಿಕ್ಕರು!]
ಉತ್ತರಾದಿಮಠದ ಸೊತ್ತಿನಲ್ಲಿ ಬಲಾತ್ಕಾರವಾಗಿ ಬಂದು ಉತ್ತರಾದಿಮಠದವರೇ ಹೊರಗೆ ಹೊಗುವಂತೆ ಮಾಡಿ ಆರಾಧನೆ ಮಾಡಿದೆವು ಎಂದು ಅಹಂಕಾರದಿಂದ ಬೀಗುವ ಈ ಜನರನ್ನು ದೇವರು ಗುರುಗಳು ಯಾವ ಕಾಲದಲ್ಲೂ ಕ್ಷಮಿಸುವದಿಲ್ಲ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ಮತ್ತು ಅವರನ್ನು ಬೆಂಬಲಿಸಿದ ಪೊಲೀಸರೇ ಮೊದಲಾದ ಯಾರನ್ನೂ ನ್ಯಾಯನಿಷ್ಠನಾದ ದೇಶಭಕ್ತ ಕ್ಷಮಿಸುವದಿಲ್ಲ. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]
ಮನನೊಂದ ಮಾಧ್ವ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications