ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಸವಣ್ಣ ಮಾಡಿದಷ್ಟು ಕೆಲಸ ನಾನು ಮಾಡಿಲ್ಲ: ಅಣ್ಣಾ ಹಜಾರೆ
ಭ್ರಷ್ಟಾಚಾರ ವಿರೋಧಿ ಹೋರಾಟವನ್ನು 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಪ್ರಧಾನ ಮಂತ್ರಿಯಾಗಿದ್ದಾಗ ಮಾಡಿದ್ದರು ಎಂದು ನೆನಪಿಸಿದ ಶ್ರೀಗಳು ಬಸವ ನಾಡಾದ ಕೂಡಲಸಂಗಮ ಹಾಗೂ ಬಸವನ ಬಾಗೇವಾಡಿಗೆ ಬರಲು ಅಣ್ಣಾ ಹಜಾರೆಯವರನ್ನು ಆಮಂತ್ರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾ ಹಜಾರೆ, ಇನ್ನು ಕೆಲವೇ ದಿನಗಳಲ್ಲಿ ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮಕ್ಕೆ ಬರುವುದಾಗಿ ತಿಳಿದರು.
ಬಸವಣ್ಣ ಮಾಡಿದಷ್ಟು ಕೆಲಸ ನಾನು ಮಾಡಿಲ್ಲ. ಆದರೆ ಸ್ವಲ್ಪ ಕೆಲಸ ಮಾಡಿದ್ದೇನೆಂಬ ತೃಪ್ತಿ ಇದೆ ಎಂದು ಅಣ್ಣಾ ಹೇಳಿದರು. ಬಸವ ಸೈನ್ಯದ ಸಂಸ್ಥಾಪಕ ಶಂಕರಗೌಡ ಬಿರಾದಾರ, ಮಹಾರಾಷ್ಟ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಮ ನಾಯಕ, ಶ್ರೀಕಾಂತ ಕೊಟ್ರಶೆಟ್ಟಿ ಮುಂತಾದವರು ಇದ್ದರು.
Comments
English summary
Social activist Anna Hazare was honoured in Anna's native village Ralegan Siddhi near Pune by Kudalasangama Lingayath Panchama Sali math in Bagalkot district.
Story first published: Monday, September 5, 2011, 15:29 [IST]