ಮಡೆಸ್ನಾನದ ರಗಳೆ: ಬ್ರಾಹ್ಮಣರ ವಿರುದ್ಧ ಪಿತೂರಿ
ಮಡೆಸ್ನಾನದ ವಿಚಾರದಲ್ಲಿ ಬ್ರಾಹ್ಮಣರು Vs ಬ್ರಾಹ್ಮಣೇತರರೆಂದು ಎರಡು ವರ್ಗಗಳ ನಡುವೆ ತಂದಿಟ್ಟು ಮಜಾ ನೋಡುವವರಿಗೆ ಪುಕ್ಸಟ್ಟೆ ಪ್ರಚಾರ ಬೇಕೇ ವಿನಹ ಕ್ಷೇತ್ರದಲ್ಲಿ ನಡೆಯುವ ಈ ಸೇವೆಯ ವಿಶಿಷ್ಟತೆ ಏನೆಂದು ತಿಳಿಯುವ ಆಸಕ್ತಿಯಿಲ್ಲ. ಇಷ್ಟು ವರ್ಷ ಸುಮ್ಮನಿದ್ದ ವಿಚಾರವಾದಿಗಳಿಗೆ ಕಳೆದ ವರ್ಷದಿಂದ ಇದ್ದಕ್ಕಿದ್ದಂತೆ ಈ ಸೇವೆಯ ಬಗ್ಗೆ ಜ್ಞಾನೋದಯವಾಗಿ, ಗುಲ್ಲೆಬ್ಬಿಸುತ್ತಿರುವುದು ಏತಕ್ಕೆ? ವಿಷಯ ತಿಳಿದಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಏತಕ್ಕೆ?
ಕೆಲದಿನಗಳ ಹಿಂದೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ಗಮನಿಸಿ. ತುರುವೇಕೆರೆ ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಕೂಡಾ ಈ ಪದ್ದತಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇಲ್ಲಿ ಬ್ರಾಹ್ಮಣೇತರರು ಊಟ ಮಾಡಿದ ಎಲೆಯ ಮೇಲೆ ಬ್ರಾಹ್ಮಣರು ಉರುಳು ಸೇವೆ ನಡೆಸುತ್ತಾರೆ. ಸೇವಾಧರ್ಮದಿಂದ ಮನುಷ್ಯ ನಿಯತ್ತಿನಿಂದ ನಡೆಸುವ ಸೇವೆಗೆ ಜಾತಿ ಬಣ್ಣ ಏಕೆ? ಈ ವಿಚಾರದಲ್ಲಿ ಮೂಲಭೂತವಾದಿಗಳ ನಿಲುವೇನು? ದೇವರಿದ್ದಾನೆ ಎಂದು ನಂಬುವುದಾದರೆ, ದೇವರಿಲ್ಲ ಎನ್ನುವುದನ್ನೂ ನಂಬಬೇಕಾಗುತ್ತದೆ.
ಮಡೆಸ್ನಾನದ ವಿಚಾರದಲ್ಲಿ ಪೇಜಾವರ ಶ್ರೀಗಳ ಹೇಳಿಕೆ ನ್ಯಾಯಸಮ್ಮತವಾಗಿದೆ. ದಲಿತರ ಕೇರಿಗೆ ಹೋಗಿ ಶ್ರೀಗಳು ಮತಾಂತರ ಮತ್ತು ಅಸ್ಪ್ರಶ್ಯತೆಯ ಬಗ್ಗೆ ಮಾತನಾಡುವುದಕ್ಕೂ ಭಕ್ತರ ಮಡೆಸ್ನಾನದಂತಹ ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ಶ್ರೀಗಳ ಹೇಳಿಕೆಯ ನಡುವೆ ತುಲನೆ ಮಾಡುವುದು ನ್ಯಾಯಸಮ್ಮತವಲ್ಲ.
ಹೀಗೆ ವೃಥಾ ತುಲನೆ ಮಾಡುವುದು, ಹೋಲಿಕೆ ಮಾಡಿ ಅಸಂಬದ್ಧ ಸೃಷ್ಟಿಸುವುದು ಬ್ರಾಹ್ಮಣ ಸಮುದಾಯದ ವಿರುದ್ಧ ನಡೆಯುತ್ತಿರುವ ಪಿತೂರಿಗಳಲ್ಲಿ ಒಂದು. ಮುಂದೆ ಓದಿ...