ಯಡಿಯೂರಪ್ಪ ಟಾರ್ಗೆಟ್ ಸಂತೋಷ್ ಹೆಗ್ಡೆ ಅಲ್ವಂತೆ

* ಕೃಷ್ಣ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಏನು ಹೇಳಿಲ್ಲ ಅಂದರು. ಕೊನೆಗೆ ಬೇರೆಯವರ ಬಗ್ಗೆ ದೂರುವುದನ್ನು ನಿಲ್ಲಿಸಿದ್ದೇನೆ ಎಂದರು. ದೂರಿದರೆ ಯಾರೂ ನಂಬುವುದಿಲ್ಲ. ಅಗತ್ಯ ದಾಖಲೆ ಒದಗಿಸಿದರೆ ಮಾತ್ರ ನಂಬಬಹುದು ಅಲ್ಲವೇ?.
ಹಳೆ ಮುಖ್ಯಮಂತ್ರಿಗಳು ಡಿನೋಟಿಫಿಕೇಷನ್ ಬಗ್ಗೆ ತೆಗೆದರೆ ಸಾವಿರಾರು ಎಕರೆ ಭೂಮಿಯ ಅಕ್ರಮ ಹೊರಬರುತ್ತೆ. ಆ ಕೆಲಸ ಯಾರಾದರೂ ಮಾಡಲಿ ನಾನು ಮಾಡೋಲ್ಲ. ಎಂದು ಸುಮ್ಮನಾದರು.
* ಇತರರ ಬಗ್ಗೆ ಏನು ಹೇಳಲಾರೆ ನಾನು ಸಚ್ಚಾರಿತ್ರ್ಯವಂತ ಎಂದು ನಿರೂಪಿಸಲು ವಕೀಲರುಗಳು ರಚಿಸಿರುವ ಪುಸ್ತಕ ಇದೆ ಅದನ್ನು ಎಲ್ಲಾ ಬುದ್ಧಿಜೀವಿಗಳಿಗೂ, ಮಾಧ್ಯಮದವರಿಗೂ ನೀಡುತ್ತೇನೆ ಆಮೇಲೆ ನನ್ನ ತಪ್ಪು ನಿರ್ಧಾರವಾಗಲಿ ಎಂದರು.
[ಸುವರ್ಣ ವಾಹಿನಿ ಸಂದರ್ಶನದ ವಿಡಿಯೋ ನೋಡಿ: ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6]
ಜೈಲಿಗೆ ಕಳಿಸಿದ್ದು ಯಾರು?: ಲೋಕಾಯುಕ್ತರು ರಾಜೀನಾಮೆಗೆ ಸೂಚಿಸಬಹುದು ಅಷ್ಟೇ. ಪ್ರೇರಣಾ ಟ್ರಸ್ಟ್ 10 ಕೋಟಿ ರು ಕೊಟ್ಟಿರೋದು ಸತ್ಯ. ಅದರಲ್ಲಿ ಅಕ್ರಮ ಇಲ್ಲ. ಊಹೆಯ ಆಧಾರದ ಮೇಲೆ ವರದಿ ರಚಿಸಿ ನನ್ನ ಹೆಸರು ಸೇರಿಸಿದ್ದಾರೆ ಎಂದರು. ಆದರೆ, ಪಕ್ಷಕ್ಕೆ ಮುಜುಗರವಾಗ ಬಾರದು ಎಂದು ನಾನು ರಾಜೀನಾಮೆ ನೀಡಿದೆ.
ಸಾಮಾನ್ಯ ವ್ಯಕ್ತಿಗೆ ನೋಟಿಸ್ ನೀಡಿ ಏಕೆ ಹೀಗೆ ಆಗಿದೆ ಎಂದು ಕೇಳುತ್ತಾರೆ. ಆದರೆ ನನ್ನ ವಿಷಯದಲ್ಲಿ ಅವರು(ಸಂತೋಷ್ ಹೆಗ್ಡೆ) ಅಧಿಕಾರದಿಂದ ಕೆಳಗಿಳಿಯಲು ಎರಡು ದಿನ ಮುಂಚಿತವಾಗಿ ರಾಜ್ಯಪಾಲರ ಅನುಮತಿ ಪಡೆದುಕೊಂಡಿದ್ದು ಏಕೆ? ಎಂದು ಪ್ರಶ್ನಿಸಿದರು.
ಜಿಂದಾಲ್ ಕಂಪನಿ ಗಣಿಗಾರಿಕೆ ಮಾಡ್ತಾ ಇಲ್ಲ, ಎಕ್ಸ್ ಪೋರ್ಟ್ ಮಾಡ್ತಾ ಇಲ್ಲ. ಆದರೂ ನನ್ನ ಹೆಸರು ಪ್ರಸ್ತಾಪಿಸಿದ್ದು ಏಕೆ ಎಂದು ಮತ್ತೊಮ್ಮೆ ಪ್ರಶ್ನಿಸಿದರು. ಆದರೆ, ಜೈಲಿಗೆ ಸೇರಿದ್ದು ಸಿರಾಜಿನ್ ಬಾಷಾ ಅವರ ಖಾಸಗಿ ದೂರಿನ ಮೇಲೆ ಎಂಬುದನ್ನು ಒಪ್ಪಿಕೊಂಡ ಯಡಿಯೂರಪ್ಪ, ಗಣಿ ವರದಿ ಕೂಡಾ ಜೈಲಿಗೆ ಕಳಿಸಲು ಸ್ಫೂರ್ತಿ ಆಗಿದೆ ಎಂದರು.
ವರದಿಯ ಬಗ್ಗೆ ನಾನು ಲೋಪ ಹುಡುಕ್ತಾ ಇಲ್ಲ. ನನ್ನ ಹೆಸರು ತಂದಿದ್ದು ಏಕೆ. ಕುಟುಂಬದವರು ನಾನು ಬೇರ್ಪಟ್ಟು 12 ವರ್ಷ ಆಯ್ತು. ಟೆಲಿಫೋನ್ ಟ್ಯಾಪಿಂಗ್ ಆರೋಪ ಮಾಡುವ ಹೆಗ್ಡೆ ಅದರ ಬಗ್ಗೆ ತನಿಖೆ ನಡೆಸಲು ಯಾಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು. ಸಂದರ್ಶನ ತುಂಬಾ ಹೆಗ್ಡೆ ಅವರನ್ನು ಹೊಗಳುತ್ತಲೆ ಅವರು ಕೈಗೊಂಡ ಕ್ರಮವನ್ನು ಪ್ರಶ್ನಿಸಿದ ಯಡಿಯೂರಪ್ಪ ಅಸಲಿಗೆ ಜೈಲಿಗೆ ಹೋಗಿದ್ದು ಖಾಸಗಿ ದೂರಿನ ಮೇಲೆ ಎಂಬುದನ್ನು ಮರೆಸಿಬಿಟ್ಟರು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications