ವಿಷ್ಣುವಿನ ಅವತಾರಗಳ ವಿಷಯವೇ ಪ್ರಶ್ನಾರ್ಹ
ಭಗವದ್ಭಕ್ತಿ ಬೇಕು. ಆದರೆ ಅವತಾರಗಳ ಮೂಲಕ್ಕೆ ಹೋಗಬಾರದು. ತುಂಬ ಕೆದಕಿದರೆ ಭಕ್ತರ ಭಕ್ತಿಗೇ ಏಟು ಹಾಕಿದ ಹಾಗೆ.
ನಮಸ್ಕಾರ,
ನಾನು ರವೀಂದ್ರ ವಿಶ್ವನಾಥ ಅವರ ಬುದ್ಧನ ಮೇಲಿನ ಲೇಖನವನ್ನೋದಿದೆ. ಮೊದಲಿಗೆ ಈ ಅವತಾರ ಎನ್ನುವ ವಿಷಯವೇ ಚರ್ಚಾಸ್ಪದ. ವಿಷ್ಣುವಿನ ಹತ್ತೇ ಅವತಾರಗಳೇಕೆ ? ಅದಕ್ಕಿಂತಲೂ ಹೆಚ್ಚಿಲ್ಲವೇ ? ಇವೆ. ಭಾಗವತವನ್ನು ನೋಡಿದ್ದಾದರೆ - ಅಲ್ಲಿ ಪೃಥು, ಕಪಿಲ, ದತ್ತಾತ್ರೇಯ, ಋಷಭದೇವ, ಸ್ವಯಂ ವ್ಯಾಸರೇ ಮೊದಲಾದ ಹಲವರು ಭಗವಂತನಾದ ನಾರಾಯಣನ ಅವತಾರಗಳು. ಆದ್ದರಿಂದ ಹತ್ತಕ್ಕೆ ಈ ಸಂಖ್ಯೆಯನ್ನು ಸೀಮಿತವಾಗಿರಿಸುವುದು ಅಷ್ಟು ಸರಿಯಲ್ಲ. ಹತ್ತು ಮುಖ್ಯ ಅವತಾರಗಳು ಎಂದು ಕರೆದರೆ ಒಪ್ಪಬಹುದೋ ಏನೋ.
ಈಗ ಬುದ್ಧನ ವಿಷಯಕ್ಕೆ ಬಂದಿರಿ. ಗೀತಗೋವಿಂದಖ್ಯಾತಿಯ ಕವಿ ಜಯದೇವ ತನ್ನ ದಶಾವತಾರಸ್ತೋತ್ರದಲ್ಲಿ -
ನಿಂದಸಿ ಯಜ್ಞ-ವಿಧೇರಹಹ ಶ್ರುತಿ-ಜಾತಮ್
ಸದಯ-ಹೃದಯ ದರ್ಶಿತ-ಪಶು-ಘಾತಮ್
ಕೇಶವ ಧೃತ-ಬುದ್ಧ-ಶರೀರ ಜಯ ಜಗದೀಶ ಹರೇ ।।
ಈತನು ಕ್ರಿ. ಶ ಹನ್ನೆರಡನೆಯ ಶತಮಾನದಲ್ಲಿದನೆಂದು ಇತಿಹಾಸಜ್ಞರ ನಂಬಿಕೆ. ಆಗಲೇ ಬುದ್ಧನ ಅವತಾರವನ್ನು ಭಗವಂತನದ್ದಾಗಿ ಸ್ವೀಕರಿಸಿಯಾಗಿತ್ತು. ಮೇಲಿನ ಶ್ಲೋಕದ ಸುಮಾರಾದ ಅರ್ಥ = 'ಕೇಶವ! ಬುದ್ಧನ ಶರೀರವನ್ನು ಧರಿಸಿದವನೇ ! ದಯೆಯುಳ್ಳ ಹೃದಯದವನೇ ! ವೇದಗಳಲ್ಲಿ ಹುಟ್ಟಿದರೂ ಪ್ರಾಣಿಹಿಂಸಾತ್ಮಕವಾದಂಥ ಯಜ್ಞವಿಧಿಗಳನ್ನು ನೀನು ನಿಂದಿಸುತ್ತೀಯೆ! ಜಗದೀಶ ಹರೇ ನಿನಗೆ ಜಯವು !'
ಇಲ್ಲಿ ಬುದ್ಧನ ಅವತಾರದ ಉದ್ದೇಶ ಸ್ಪಷ್ಟವಾಗಿಯೇ ಮೂಡಿಬಂದಿದೆ. ರವೀಂದ್ರರು ಹೇಳಿದ ಹಾಗೆ = ನಾಸ್ತಿಕರನ್ನು ತನ್ನತ್ತ ಸೆಳೆದು ಮರುಳು ಮಾಡಲೋಸುಗವೇ ಈ ಅವತಾರವಾದದ್ದು. ಮೋಹಿನಿಯ ಅವತಾರದ ಹಾಗೆ. ಒಂದು ರೀತಿಯ ್ಞಛಿಜಚಠಿಜಿಡಛಿ ಅವತಾರವೆಂದರೆ ತಪ್ಪಲ್ಲ.
ಈಗ ರವೀಂದ್ರರ ಮಾತು ಅವತಾರದ ಉದ್ದೇಶವನ್ನು ಬುದ್ಧ ಈಡೇರಿಸಲಿಲ್ಲ. ಆದ್ದರಿಂದ ಬುದ್ಧನನ್ನು ಅವತಾರವಾಗಿ ಪರಿಗಣಿಸಲಾಗುವುದಿಲ್ಲ ಎಂದು. ಆದರೆ ಮೋಹಿನಿಯನ್ನು ಅವತಾರವೆಂದು ಪರಿಗಣಿಸಿದರೆ ಬುದ್ಧನನ್ನೂ ಅವತಾರವೆಂದು ಪರಿಗಣಿಸಬಹುದಲ್ಲ ?
ಒಂದು ಸಣ್ಣ ವಿಷಯ - ನೀವು ವಾಲ್ಮೀಕಿ ರಾಮಾಯಣದ ಬಾಲಕಾಂಡ ನೋಡಿದ್ದೇ ಆದರೆ - ಭಗವಂತನ ಸ್ವಂತ ಅಂಶಗಳಿಂದ ಹುಟ್ಟಿದವರು ರಾಮ-ಲಕ್ಷ್ಮಣ-ಭರತ-ಶತ್ರುಘ್ನರು. ಲಕ್ಷ್ಮಣನು ಆದಿಶೇಷನ ಅವತಾರವೆಂಬ ವಿಷಯದ ಪ್ರಸ್ತಾಪ ವಾಲ್ಮೀಕಿ ರಾಮಾಯಣದಲ್ಲಂತೂ ಬರುವುದಿಲ್ಲ. ಬೇರೆ ರಾಮಾಯಣಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಭಕ್ತರಾದ ರಾಮಾನುಜರ ಅನುಯಾಯಿಗಳಾದ ವಿಶಿಷ್ಟಾದ್ವೈತಿಗಳು ಈ ಕೆಲಸವನ್ನು ಮಾಡಿರುತ್ತಾರೆ.
ಆ ವಿಷಯ ಇರಲಿ. ಈಗ ಹಲಾಯುಧನೆಂಬ ಭಗವಂತನ ಹೊಸ ಅವತಾರವನ್ನು ರವೀಂದ್ರರು ಬೆಳಕಿಗೆ ತಂದಿರುತ್ತಾರೆ. ಇದು ಬಲರಾಮನಲ್ಲದೇ ಬೇರೆ ಯಾರೋ ಎನ್ನುವ ವಿಷಯ ಎಲ್ಲಿಯೂ ಕಾಣುವುದಿಲ್ಲ. ''ಹಲಾಯುಧ'' ಎಂಬ ಬೇರೆಯ ಅವತಾರ ಕೇವಲ ರವೀಂದ್ರರ ಕಲ್ಪನೆಯ ಸೃಷ್ಟಿ. ಹೌದು ಪುರಾಣಗಳಿಂದ ಅವನ ಹೆಸರನ್ನು ಕಿತ್ತು ಹಾಕಿ ಬುದ್ಧನ ಅಥವಾ ಬಲರಾಮನ ಹೆಸರನ್ನು ಸೇರಿಸಿರಬಹುದು ಎಂಬ ವಾದ ಸರಿಯಾಗಿ ಕಂಡರೂ - ಅಷ್ಟೂ ಪುರಾಣಗಳಲ್ಲಿ ಲವಲೇಶವಿಲ್ಲದೇ ಒಂದು ಇಡಿಯ ಅವತಾರವನ್ನೇ ತೆಗೆಯುವುದು ಕಷ್ಟವೆಂದು ತೋರುವುದಿಲ್ಲವೇ?
ಉತ್ಕಾೃಂತಿಯ ವಿಷಯ ಪ್ರಶ್ನಾರ್ಹ ಎಂದು ರವೀಂದ್ರರೇ ಒಪ್ಪಿರುತ್ತಾರೆ.
ಅವತಾರಗಳ ವಿಷಯವೇ ಪ್ರಶ್ನಾರ್ಹ. ವೇದಗಳೆಲ್ಲಿಯೂ ಅವತಾರದ ವಿಷಯ ಹೆಚ್ಚಾಗಿ ಬಂದಿರುವುದನ್ನು ನಾ ಕಾಣೆ. ಪುರಾಣಗಳು ಮಾನವಮತಿನಿರ್ಮಿತಗಳೆಂದು ಸರ್ವವೇದ್ಯ. ಆದ್ದರಿಂದ ಅಲ್ಲಿ ಏನಾದರೂ ಸೇರುವ ಸಂಭವವಿದೆ. ಏಕೆ, ಮಹಮ್ಮದ ಪೈಗಂಬರರೇ ನಿಮ್ಮ ಕಲ್ಕಿ ಎಂದು ಹೇಳುವ ಕೆಲವು ಮುಸ್ಲಿಂ ಬಂಧುಗಳಿಲ್ಲವೇ? ಏಕೆಂದರೆ ಇಬ್ಬರೂ ಖಡ್ಗ ಧರಿಸಿ ಅಶ್ವಾರೂಢರಾಗಿ ಯುದ್ಧಮಾಡಿದವರು. ಆದ್ದರಿಂದ ಇಬ್ಬರೂ ಒಂದೇ ಎಂದು ಅವರ ವಾದ. ಅದಕ್ಕೇನು ಹೇಳುತ್ತೀರಿ?
ಬುದ್ಧನ ಜನಪ್ರಿಯತೆಯನ್ನು ನೋಡಿ ಗುಪ್ತರ ಕಾಲದಲ್ಲಿ ಅವನನ್ನೂ ನಮ್ಮವನನ್ನಾಗಿ ಮಾಡಿ - ಜೊತೆಗೆ ಬೌದ್ಧರ ಮತ ನಾಸ್ತಿಕರದೆಂದು ಜರಿಯಲು - ಅವನನ್ನು ಅವತಾರ ಮಾಡಿಕೊಂಡೆವು. ಸತ್ಯ ಸಾಯಿಬಾಬಾ ಅವರ ಅನುಯಾಯಿಗಳ ಸಂಖ್ಯೆ ವರ್ಧಿಸಿದರೆ - ಅವರನ್ನೇ ಕುದುರೆಯ ಮೇಲೆ ಕೂಡಿಸಿ ಕತ್ತಿ ಕೊಟ್ಟು - ಅವತಾರವೆಂದು ಮಾಡಿಯಾರು! ಈಗಾಗಲೇ ಕಲ್ಕಿ ಭಗವನ್ ನಮ್ಮೊಂದಿಗಿಲ್ಲವೇ? (ಕಲ್ಕಿ ಮತದವರು). ಆ ಮತದವರಿಗೆ ನಿಮ್ಮ ದೇವರು ಕಲ್ಕಿಯಲ್ಲ ಎಂದು ಹೇಳಿ ನೋಡೋಣ !
ಭಗವದ್ಭಕ್ತಿ ಬೇಕು. ಆದರೆ ಅವತಾರಗಳ ಮೂಲಕ್ಕೆ ಹೋಗಬಾರದು. ತುಂಬ ಕೆದಕಿದರೆ ಭಕ್ತರ ಭಕ್ತಿಗೇ ಏಟು ಹಾಕಿದ ಹಾಗೆ. ಭಕ್ತಿ ಒಂದು ಮನಸ್ಸಿನ ಭಾವ. ಒಂದು ವಸ್ತುವಿನ ಬಗ್ಗೆ ಇರುವ ನಿರತಿಶಯವಾದ ಪ್ರೀತಿ. ಆ ವಸ್ತುವನ್ನೇ ಅಲ್ಲಗೆಳೆದರೆ ಭಕ್ತರಿಗಾಗುವ ಹಾನಿ ಅಪಾರ. ಭಗವಂತನೇ ಗೀತೆಯಲ್ಲಿ ಹೇಳಿಲ್ಲವೇ? ''ಯೇ ಯಥಾ ಮಾಂ ಪ್ರಪದ್ಯಂತಿ ತಾಂಸ್ತಥೈವ ಭಜಾಮ್ಯಹಮ್'' ಎಂದು? ಯಾವ ಅವತಾರ ನಮಗೆ ಪ್ರೀತಿಯಾದರೂ ಅದರ ಮೂಲಕ ಭಗವಂತನೇ ಆರಾಧಿಸಲ್ಪಡುತ್ತಾನೆ.
ರವೀಂದ್ರರ ಕೊನೆಯ ಪ್ರಶ್ನೆ ''ಬುದ್ಧನು ಹಿಂದೂ ದೇವತೆ ವಿಷ್ಣುವಿನ ಅವತಾರ ಹೌದೋ ಅಲ್ಲವೋ?''. ಇದಕ್ಕೆ ಒಬ್ಬ ಹಿಂದುವಾದ ನನ್ನ ಉತ್ತರ - ''ಆಗಿದ್ದರೆ ಅಡ್ಡಿಯಿಲ್ಲ. ಇಲ್ಲದಿದ್ದರೆ ಅಂಥ ತೊಂದರೆಯೇನೂ ಇಲ್ಲ'' ಎಂದು. ನೀವೇನನ್ನುತ್ತೀರಿ?
-
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications