Get Updates
Get notified of breaking news, exclusive insights, and must-see stories!

ಜೈಪುರ ಸಾಹಿತ್ಯ ಹಬ್ಬ: 9ನೇ ದಿನ ಶಶಿ ತರೂರ್‌ ಸಾಹಿತ್ಯಗೋಷ್ಠಿ

ತಿರುವನಂತಪುರಂನ ಸಂಸದ ಡಾ. ಶಶಿ ತರೂರ್ ಜೈಪುರ ಸಾಹಿತ್ಯೋತ್ಸವದ 15 ನೇ ಆವೃತ್ತಿಯ ಒಂಬತ್ತನೇ ದಿನದಂದು ಐತಿಹಾಸಿಕ ಅಭೂತಪೂರ್ವ ಯುಗದಲ್ಲಿ ರಾಜಕೀಯ ಸಂಘಟನೆ ಮತ್ತು ಗುಪ್ತಚರ ಕುರಿತು ಮೋಹಿತ್ ಸತ್ಯಾನಂದ್ ಜೊತೆ ಚರ್ಚೆ ನಡೆಸಲಿದ್ದಾರೆ.

ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಅಧ್ಯಕ್ಷರಾಗಿರುವ ತರೂರ್, ಪೆಗಾಸಸ್ ಸಾಫ್ಟ್‌ವೇರ್ ಮೂಲಕ ಪತ್ರಕರ್ತರು ಮತ್ತು ರಾಜಕೀಯ ನಾಯಕರ ಅಕ್ರಮ ಕಣ್ಗಾವಲು ಆರೋಪದ ವಿಚಾರದಲ್ಲಿ ಚರ್ಚಿಸುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದಾರೆ. ನಿವೃತ್ತ ನ್ಯಾಯಾಧೀಶ ಮದನ್ ಬಿ ಲೋಕೂರ್ ಅವರು ಕಾನೂನು ಮತ್ತು ನ್ಯಾಯ ವ್ಯವಸ್ಥೆಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಮಾನವ ಹಕ್ಕುಗಳು, ರಾಜಕೀಯ, ಮತ್ತು ವೈಯಕ್ತಿಕ ತನಿಖಾ ಪತ್ರಕರ್ತೆ ಸ್ವಾತಿ ಚತುರ್ವೇದಿ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ ಸಂಘಟನೆಯಲ್ಲಿ ಚರ್ಚ್‌ಗೆ ಇಳಿದಿದ್ದರು. ಅವರು ಕೂಡಾ ಈ ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ.

9 ನೇ ದಿನದ ಇತರ ಆಕರ್ಷಣೆಗಳು

ಚಲನಚಿತ್ರ ವಿಮರ್ಶಕಿ ಅನುಪಮಾ ಚೋಪ್ರಾ ಅವರು ಶುನಾಲಿ ಖುಲ್ಲರ್ ಶ್ರಾಫ್ ಅವರೊಂದಿಗೆ ತಮ್ಮ ಕೆಲಸದ ಬಗ್ಗೆ, ಅವರ ಸುದೀರ್ಘ ವೃತ್ತಿಜೀವನವನ್ನು ರೂಪಿಸಿದ ಮತ್ತು ವೈಯಕ್ತಿಕವಾಗಿ ಉತ್ತೇಜಿಸಿದ ಚಲನಚಿತ್ರಗಳು ಬಗ್ಗೆ ಚರ್ಚೆ ನಡೆಸಲಿದ್ದಾರೆ.

Dr. Shashi Tharoor to Headline Jaipur Literature Festival

ಟೈಗರ್ಸ್ ಇನ್ ರೆಡ್ ವೆದರ್: ಎ ಕ್ವೆಸ್ಟ್ ಫಾರ್ ದಿ ಲಾಸ್ಟ್ ವೈಲ್ಡ್ ಟೈಗರ್ಸ್ - ಹುಲಿಗಳ ಸಂರಕ್ಷಣೆಯಲ್ಲಿ ನೈಸರ್ಗಿಕ ಇತಿಹಾಸ ಮತ್ತು ಪ್ರವಾಸ ಬರವಣಿಗೆಯ ಮೂಲಕ ಖ್ಯಾತಿ ಪಡೆದ, ಪ್ರಶಸ್ತಿ ವಿಜೇತ ಬ್ರಿಟಿಷ್ ಕವಿ, ಕಾದಂಬರಿಕಾರ ಮತ್ತು ಲೇಖಕ ರೂತ್ ಪಡೆಲ್ ಅವರು ಕೂಡಾ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ. ಜೀವನ, ಸಾಹಿತ್ಯ ಮತ್ತು ಚಿಕಿತ್ಸೆಯಲ್ಲಿ ತಾಯಿ ಭೂಮಿ ಎಂಬ ವಿಚಾರದಲ್ಲಿ ವಂದನಾ ಸಿಂಗ್-ಲಾಲ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇತ್ತೀಚಿಗೆ ವೈಲ್ಡ್ ಅಂಡ್ ವಿಲ್‌ಫುಲ್ ಪ್ರಶಸ್ತಿ ಪುಸ್ತಕ ಬರೆದ ವಿಜೇತೆ ವನ್ಯಜೀವಿ ಸಂರಕ್ಷಣಾಧಿಕಾರಿ ನೇಹಾ ಸಿನ್ಹಾ ಅವರು ಕೂಡಾ ಈ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.

ರಾಗವು ಸೃಷ್ಟಿ, ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯದ ಅಮರತ್ವವನ್ನು ಭರವಸೆ ನೀಡುತ್ತದೆ. ರಾಗಗಳ ಪುರಾತನ ಮತ್ತು ಸಾಟಿಯಿಲ್ಲದ ವ್ಯವಸ್ಥೆಯು ಸುಧಾರಿತ ಪ್ರತಿಭೆಯನ್ನು ಸೂಚಿಸುವ ಸುಮಧುರ ಚೌಕಟ್ಟುಗಳನ್ನು ಒದಗಿಸುತ್ತದೆ. ವ್ಯಾಪ್ತಿ, ಸಂಕೀರ್ಣತೆಗಳು, ಭಾವನೆ, ಅಭಿವ್ಯಕ್ತಿ ಮತ್ತು ರೂಪಾಂತರವನ್ನು ಪೋಷಿಸುತ್ತದೆ. ಭಾರತೀಯ ಶಾಸ್ತ್ರೀಯ, ಸಮಕಾಲೀನ ಮತ್ತು ಇತರೆ ಸಂಗೀತದ ಬಗ್ಗೆ ವಿಧ್ವಾಂಸರು ಜೊತೆಯಾಗಿ ಚರ್ಚೆ ನಡೆಸಲಿದ್ದಾರೆ. ಪಿಟೀಲು ವಾದಕ, ಸಂಯೋಜಕ ಮತ್ತು ಶಿಕ್ಷಣತಜ್ಞ ಅಂಬಿ ಸುಬ್ರಮಣ್ಯಂ, ಮೆಚ್ಚುಗೆ ಪಡೆದ ಸಂಗೀತ ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ ಶೇಖರ್ ರಾವ್ಜಿಯಾನಿ, ವಿಶಾಲ್-ಶೇಖರ್, ಸಂಗೀತಗಾರ, ಸಂಯೋಜಕ ಮತ್ತು ಲೇಖಕ ಅಯಾನ್ ಅಲಿ ಬಂಗಾಶ್,‌ ಬರಹಗಾರ ಮತ್ತು ಮೇಲ್ವಿಚಾರಕ ಸಾಧನಾ ರಾವ್ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Dr. Shashi Tharoor to Headline Jaipur Literature Festival

ಹಿಂದಿ ಭಾಷೆಯು ಹೊಸ ಆಯಾಮವನ್ನು ಪಡೆದುಕೊಂಡಿದೆ. ಯೂಟ್ಯೂಬ್, ಪಾಡ್‌ಕಾಸ್ಟ್ ಚಾನೆಲ್‌ಗಳು ಮತ್ತು ಇನ್‌ಸ್ಟಾಗ್ರಾಮ್‌ನಂತಹ ಹೊಸ ಡಿಜಿಟಲ್ ಮಾಧ್ಯಮಗಳ ಮೂಲಕ ಹಿಂದಿ ಭಾಷೆಯಲ್ಲಿ ವ್ಯವಹರಿಸಿ ಹಣ ಸಂಪಾದನೆ ಮಾಡುವವರು ಹಲವಾರು ಮಂದಿ ಇದ್ದಾರೆ. ಹಿಂದಿ ಭಾಷೆಯನ್ನು ಹಿಂದಿನ ಕಠಿಣ ಭಾಷೆಯಾಗಿ ಪರಿಗಣಿಸಲ್ಪಟ್ಟಿದೆ. ಈ ಬದಲಾವಣೆಯ ಹಿಂದಿನ ಕಥೆ ಏನು? ಪ್ರಮುಖ ವ್ಯಕ್ತಿಗಳು ಯಾರು? ಮುಂದಿರುವ ದಾರಿ ಯಾವುದು? ಎಂಬ ಬಗ್ಗೆ ಲೇಖಕರಾದ ನಿಶಾಂತ್ ಜೈನ್ ಮತ್ತು ದಿವ್ಯಾ ಪ್ರಕಾಶ್ ದುಬೆ ಅವರು ಪ್ರಕಾಶಕರು ಮತ್ತು ಸಂಪಾದಕಿ ಅದಿತಿ ಮಹೇಶ್ವರಿ-ಗೋಯಲ್ ಅವರೊಂದಿಗೆ ಸಂಭಾಷಣೆ ನಡೆಸಲಿದ್ದಾರೆ.

Dr. Shashi Tharoor to Headline Jaipur Literature Festival

ಎಂಟನೇ ದಿನದ ರೌಂಡ್‌ ಅಪ್‌

ಎಂಟನೇ ದಿನದ ಅಧಿವೇಶನದಲ್ಲಿ ಬರಹಗಾರ ಅನಿರುದ್ಧ ಕಣಿಸೆಟ್ಟಿ ಅವರು ತಮ್ಮ ಪುಸ್ತಕ ಲಾರ್ಡ್ಸ್ ಆಫ್ ದಿ ಡೆಕ್ಕನ್: ಸದರ್ನ್ ಇಂಡಿಯಾ ಫ್ರಂ ದಿ ಚಾಲುಕ್ಯಸ್ ಟು ದಿ ಚೋಳಸ್ ಬಗ್ಗೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಬರಹಗಾರ ಮತ್ತು ಇತಿಹಾಸಕಾರ ಮನು ಎಸ್. ಪಿಳ್ಳೈ ಅವರೊಂದಿಗೆ ಚರ್ಚಿಸಿದರು. ಮಧ್ಯಕಾಲೀನ ದಕ್ಷಿಣ ಭಾರತದ ಬಗ್ಗೆ ಅವರ ಚಿಂತನಶೀಲ ಮತ್ತು ಅಪಾರ ಅಧ್ಯಯನ, ಸಮಕಾಲೀನ ರಾಜಕೀಯ ಮತ್ತು ಸಂಸ್ಕೃತಿಯ ಮೇಲೆ ಅದರ ಪ್ರಭಾವದ ಬಗ್ಗೆ ಈ ಪುಸ್ತಕವು ಮಾತನಾಡುತ್ತದೆ. "ಈ ಪುಸ್ತಕವು ಚೈತನ್ಯದಾಯಕವಾಗಿದೆ. ಮಧ್ಯಕಾಲೀನ ಅವಧಿಯ ಮಹತ್ವ ವಿವರಣೆಯನ್ನು ಹೊಂದಿದೆ," ಎಂದು ಅನಿರುದ್ಧ್ ಅವರ ಪುಸ್ತಕದ ಬಗ್ಗೆ ಮನು ಎಸ್ ಪಿಳ್ಳೈ ಹೇಳಿದರು.

ನೋಂದಣಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಜೈಪುರ ಸಾಹಿತ್ಯೋತ್ಸವದ ವೆಬ್‌ಸೈಟ್‌ಗೆ ಭೇಟಿ ನೀಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+