ಸಿಂಗಪುರ ವಿಶ್ವಕನ್ನಡ ಸಮ್ಮೇಳನಕ್ಕೆ ಎರಡೇ ವಾರ

ಚೀನಿಯರು, ಮಲೇಶಿಯದವರು, ತದನಂತರದಲ್ಲಿ ಭಾರತೀಯರೇ ಹೆಚ್ಚಾಗಿ ನೆಲೆಸಿರುವ ಸ್ವಚ್ಛ, ಸುಂದರ ಸಿಂಗಪುರದಲ್ಲಿ ಜರುಗುವ ಎರಡು ದಿವಸಗಳ ಕನ್ನಡ ಕಲರವದಲ್ಲಿ ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ, ಒಲವೆತ್ತಿ ತೋರುವ ದೀಪಾ.. ಇದೇ ಮುಂತಾದ ಕನ್ನಡ ಸಿರಿನುಡಿಯ ನಾದ ಝೇಕಾಂರಗಳು ಸಮ್ಮೇಳನದ ತಾಣ ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಿಂದ ಮಾರ್ದನಿಸಲಿವೆ. ಹಾಡು ಹಸೆ, ಭಾಷಣ ಉಪನ್ಯಾಸ, ಸಿನಿಮಾ ಗೀತೆ ನೃತ್ಯಗಳ ಜತೆಜತೆಗೆ ತಿಳಿವು ಮತ್ತು ನಲಿವನ್ನು ಹದವಾಗಿ ಬೆರೆಸುವ ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಜಾಗ ಇದೆ.
ಸಿಂಗಪುರ ಕನ್ನಡ ಸಂಘಕ್ಕೆ ಇದೀಗ 14ರ ಪ್ರಾಯ. ಇಲ್ಲಿಗೆ ವಲಸೆಬಂದ ಭಾರತೀಯ ಸಂಜಾತ ಪ್ರಜೆಗಳ ಪೈಕಿ ತಮಿಳರದ್ದೇ ಸಿಂಹಪಾಲು. ಈ ದೇಶದಲ್ಲಿ ಕನ್ನಡ ಜನರ ಇರುವಿನ ಅರಿವು ಇತ್ತಿತ್ತಲಾಗಿ ಹೆಚ್ಚಾಗುತ್ತಿದೆ. ಕನ್ನಡ ಕುಟುಂಬಗಳ ನಡುವಿನ ಒಡನಾಟ ದಿನೇದಿನೇ ವೃದ್ಧಿಸುತ್ತಿದೆ. ಸಿಂಗಪುರಕ್ಕೆ ವರ್ಕ್ ವೀಸಾ ಅಥವಾ ಸ್ಟೂಡೆಂಟ್ ವೀಸಾದ ಮೇಲೆ ತೆರಳುವ ಕನ್ನಡಿಗರು ಕಡಿಮೆ. ಅಕಾಡೆಮಿಕ್ ಜ್ಞಾನ ಮತ್ತು ತಾಂತ್ರಿಕ ಹಾಗೂ ವಾಣಿಜ್ಯ ಕೌಶಲ್ಯ ಬಲದ ವೀಸಾ ಆಧಾರದ ಮೇಲೆ ಸಿಂಗಪುರಕ್ಕೆ ಹಾರುವ ಕನ್ನಡಿಗರೇ ಹೆಚ್ಚು. ಒಟ್ಟಾರೆ, ರೆಡಿಮೇಡ್ ಬಿಳಿ ಕಾಲರು ಅಂಗಿ, ತಿಳಿನೀಲಿ ಚೂಡಿದಾರ್, ಗಿಣಿ ಹಸಿರು ರೇಷ್ಮೆ ಸೀರೆ ಮತ್ತು ಕನಕಾಂಬರದ ವಾಯ್ಲ್ ಸೀರೆ ಧರಿಸಿ ಸಿಂಗಪುರದ ಮುಖ್ಯವಾಹಿನಿಯಲ್ಲಿ ಬೆರೆಯುವ ಕನ್ನಡಿಗ ಕನ್ನಡತಿಯರೇ ಇಲ್ಲಿ ಹೆಚ್ಚಾಗಿ ಕಂಡುಬರುವರು. ಇವರನ್ನೆಲ್ಲ ಒಂದು ದಾರಕ್ಕೆ ಪೋಣಿಸಿ ಮಲ್ಲಿಗೆ ಹಾರ ಕಟ್ಟುವ ಮೂಲಕ ಭಾಷೆ ಮತ್ತು ಸಾಂಸ್ಕೃತಿಕ ಉತ್ಸಾಹಗಳನ್ನು ಕನ್ನಡ ಸಂಘ ಮಾಡುತ್ತದೆಂದು ಆಶಿಸಬೇಕು.
ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಿರುವ ಸಿಂಗಪುರ ಕನ್ನಡ ಸಂಘದ ವೆಬ್ ಸೈಟಿನಲ್ಲಿ ತಮ್ಮ ಬಗ್ಗೆ ತಾವೇ ಹೇಳಿಕೊಂಡ ಮಾತುಗಳನ್ನು ನೀವು ಓದಬೇಕು: ಅದು ಹೀಗಿದೆ:
ಸಂಘದ ಮೂಲಭೂತ ಉದ್ದೇಶಗಳು:
* ಜಗತ್ತಿನ ವಿವಿದೆಡೆಯಲ್ಲಿರುವ ಕನ್ನಡಿಗರೊಡನೆ ಸಾಂಸ್ಕೃತಿಕ ಸಂಬಂಧವನ್ನು ಕಲ್ಪಿಸುವುದು.
* ಸಿಂಗಪುರದ ಕನ್ನಡ ಸಮುದಾಯ ಹಾಗೂ ಇಲ್ಲಿನ ಇತರ ಸಮುದಾಯದ ಜೊತೆ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸುವುದು.
ಎರಡು ದಿವಸಗಳ ಕನ್ನಡ ಉತ್ಸವದಲ್ಲಿ ಬಗೆಬಗೆಯ ಕಾರ್ಯಕ್ರಮಗಳು ಇರ್ತವೆ. ಮುಖ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಶೋಭೆ ಬೀರುವುದಕ್ಕೆ ಸ್ಥಳೀಯ ಪ್ರತಿಭೆಗಳು ತುದಿಗಾಲಲ್ಲಿ ನಿಂತಿವೆ. ಜತೆಗೆ, ಕರ್ನಾಟಕದಿಂದ ಆಗಮಿಸುತ್ತಿರುವ ಕವಿ, ಗಾಯಕ, ಕಲಾವಿದ, ಹಾಸ್ಯ ಕಲಾವಿದ, ಸಿನಿಮಾ ತಾರೆ, ಮಂತ್ರಿ ಮಹೋದಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಕ್ತಾರರ ಬೃಹತ್ ಸೈನ್ಯವೇ ಇದೆ. ಇದರ ಪೂರ್ಣ ವಿವರಗಳು ಮತ್ತು ಸಮ್ಮೇಳನದ ಸಿದ್ಧತೆಗಳ ಬಗ್ಗೆ ಕ್ಷಣಕ್ಷಣದ ವರದಿಗಳಿಗೆ, ದಟ್ಸ್ ಕನ್ನಡಕ್ಕೆ ಲಾಗ್ ಇನ್ ಆಗುತ್ತಿರಿ. ನಮಸ್ತೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications