ಸಿಂಗಪುರ ವಿಶ್ವಕನ್ನಡ ಸಮ್ಮೇಳನಕ್ಕೆ ಎರಡೇ ವಾರ

ಚೀನಿಯರು, ಮಲೇಶಿಯದವರು, ತದನಂತರದಲ್ಲಿ ಭಾರತೀಯರೇ ಹೆಚ್ಚಾಗಿ ನೆಲೆಸಿರುವ ಸ್ವಚ್ಛ, ಸುಂದರ ಸಿಂಗಪುರದಲ್ಲಿ ಜರುಗುವ ಎರಡು ದಿವಸಗಳ ಕನ್ನಡ ಕಲರವದಲ್ಲಿ ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ, ಒಲವೆತ್ತಿ ತೋರುವ ದೀಪಾ.. ಇದೇ ಮುಂತಾದ ಕನ್ನಡ ಸಿರಿನುಡಿಯ ನಾದ ಝೇಕಾಂರಗಳು ಸಮ್ಮೇಳನದ ತಾಣ ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಿಂದ ಮಾರ್ದನಿಸಲಿವೆ. ಹಾಡು ಹಸೆ, ಭಾಷಣ ಉಪನ್ಯಾಸ, ಸಿನಿಮಾ ಗೀತೆ ನೃತ್ಯಗಳ ಜತೆಜತೆಗೆ ತಿಳಿವು ಮತ್ತು ನಲಿವನ್ನು ಹದವಾಗಿ ಬೆರೆಸುವ ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಜಾಗ ಇದೆ.
ಸಿಂಗಪುರ ಕನ್ನಡ ಸಂಘಕ್ಕೆ ಇದೀಗ 14ರ ಪ್ರಾಯ. ಇಲ್ಲಿಗೆ ವಲಸೆಬಂದ ಭಾರತೀಯ ಸಂಜಾತ ಪ್ರಜೆಗಳ ಪೈಕಿ ತಮಿಳರದ್ದೇ ಸಿಂಹಪಾಲು. ಈ ದೇಶದಲ್ಲಿ ಕನ್ನಡ ಜನರ ಇರುವಿನ ಅರಿವು ಇತ್ತಿತ್ತಲಾಗಿ ಹೆಚ್ಚಾಗುತ್ತಿದೆ. ಕನ್ನಡ ಕುಟುಂಬಗಳ ನಡುವಿನ ಒಡನಾಟ ದಿನೇದಿನೇ ವೃದ್ಧಿಸುತ್ತಿದೆ. ಸಿಂಗಪುರಕ್ಕೆ ವರ್ಕ್ ವೀಸಾ ಅಥವಾ ಸ್ಟೂಡೆಂಟ್ ವೀಸಾದ ಮೇಲೆ ತೆರಳುವ ಕನ್ನಡಿಗರು ಕಡಿಮೆ. ಅಕಾಡೆಮಿಕ್ ಜ್ಞಾನ ಮತ್ತು ತಾಂತ್ರಿಕ ಹಾಗೂ ವಾಣಿಜ್ಯ ಕೌಶಲ್ಯ ಬಲದ ವೀಸಾ ಆಧಾರದ ಮೇಲೆ ಸಿಂಗಪುರಕ್ಕೆ ಹಾರುವ ಕನ್ನಡಿಗರೇ ಹೆಚ್ಚು. ಒಟ್ಟಾರೆ, ರೆಡಿಮೇಡ್ ಬಿಳಿ ಕಾಲರು ಅಂಗಿ, ತಿಳಿನೀಲಿ ಚೂಡಿದಾರ್, ಗಿಣಿ ಹಸಿರು ರೇಷ್ಮೆ ಸೀರೆ ಮತ್ತು ಕನಕಾಂಬರದ ವಾಯ್ಲ್ ಸೀರೆ ಧರಿಸಿ ಸಿಂಗಪುರದ ಮುಖ್ಯವಾಹಿನಿಯಲ್ಲಿ ಬೆರೆಯುವ ಕನ್ನಡಿಗ ಕನ್ನಡತಿಯರೇ ಇಲ್ಲಿ ಹೆಚ್ಚಾಗಿ ಕಂಡುಬರುವರು. ಇವರನ್ನೆಲ್ಲ ಒಂದು ದಾರಕ್ಕೆ ಪೋಣಿಸಿ ಮಲ್ಲಿಗೆ ಹಾರ ಕಟ್ಟುವ ಮೂಲಕ ಭಾಷೆ ಮತ್ತು ಸಾಂಸ್ಕೃತಿಕ ಉತ್ಸಾಹಗಳನ್ನು ಕನ್ನಡ ಸಂಘ ಮಾಡುತ್ತದೆಂದು ಆಶಿಸಬೇಕು.
ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಿರುವ ಸಿಂಗಪುರ ಕನ್ನಡ ಸಂಘದ ವೆಬ್ ಸೈಟಿನಲ್ಲಿ ತಮ್ಮ ಬಗ್ಗೆ ತಾವೇ ಹೇಳಿಕೊಂಡ ಮಾತುಗಳನ್ನು ನೀವು ಓದಬೇಕು: ಅದು ಹೀಗಿದೆ:
ಸಂಘದ ಮೂಲಭೂತ ಉದ್ದೇಶಗಳು:
* ಜಗತ್ತಿನ ವಿವಿದೆಡೆಯಲ್ಲಿರುವ ಕನ್ನಡಿಗರೊಡನೆ ಸಾಂಸ್ಕೃತಿಕ ಸಂಬಂಧವನ್ನು ಕಲ್ಪಿಸುವುದು.
* ಸಿಂಗಪುರದ ಕನ್ನಡ ಸಮುದಾಯ ಹಾಗೂ ಇಲ್ಲಿನ ಇತರ ಸಮುದಾಯದ ಜೊತೆ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸುವುದು.
ಎರಡು ದಿವಸಗಳ ಕನ್ನಡ ಉತ್ಸವದಲ್ಲಿ ಬಗೆಬಗೆಯ ಕಾರ್ಯಕ್ರಮಗಳು ಇರ್ತವೆ. ಮುಖ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಶೋಭೆ ಬೀರುವುದಕ್ಕೆ ಸ್ಥಳೀಯ ಪ್ರತಿಭೆಗಳು ತುದಿಗಾಲಲ್ಲಿ ನಿಂತಿವೆ. ಜತೆಗೆ, ಕರ್ನಾಟಕದಿಂದ ಆಗಮಿಸುತ್ತಿರುವ ಕವಿ, ಗಾಯಕ, ಕಲಾವಿದ, ಹಾಸ್ಯ ಕಲಾವಿದ, ಸಿನಿಮಾ ತಾರೆ, ಮಂತ್ರಿ ಮಹೋದಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಕ್ತಾರರ ಬೃಹತ್ ಸೈನ್ಯವೇ ಇದೆ. ಇದರ ಪೂರ್ಣ ವಿವರಗಳು ಮತ್ತು ಸಮ್ಮೇಳನದ ಸಿದ್ಧತೆಗಳ ಬಗ್ಗೆ ಕ್ಷಣಕ್ಷಣದ ವರದಿಗಳಿಗೆ, ದಟ್ಸ್ ಕನ್ನಡಕ್ಕೆ ಲಾಗ್ ಇನ್ ಆಗುತ್ತಿರಿ. ನಮಸ್ತೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications