ಉತ್ತರ ಅಮೆರಿಕಾಗೆ ಆಲ್ ದಿ ಬೆಸ್ಟ್!

ಮರಾಠಿ ರಂಗಭೂಮಿಯ ಮಟ್ಟಿಗೆ ಇದೊಂದು ದಾಖಲೆಯ ಮತ್ತು ಹೊಸ ಚೈತನ್ಯವನ್ನು ತುಂಬಿದ ಖ್ಯಾತ ನಾಟಕ. ಯುವ ನಾಟಕಕಾರ ದೇವೇಂದ್ರ ಪೇಮರ ಮೊದಲ ಪೂರ್ಣ ಪ್ರಮಾಣದ ನಾಟಕವಿದು. ಭಾರತದ ಹತ್ತಾರು ಭಾಷೆಗೆ ಅನುವಾದಗೊಂಡು ಸಾವಿರಾರು ಪ್ರದರ್ಶನವನ್ನು ಕಂಡ ಅಪರೂಪದ ನಾಟಕ. ಕನ್ನಡಕ್ಕೆ ಇದನ್ನು ಅನುವಾದಿಸಿದವರು ನ್ಯಾಯವಾದಿ ಪ್ರಹ್ಲಾದ ಸರದೇಶಪಾಂಡೆ.
ಮೂವರು ಅಂಗವಿಕಲ ಯುವಕರು ಒಂದೇ ಹುಡುಗಿಯನ್ನು ಪ್ರೀತಿಸಿ, ತಮ್ಮ ಪ್ರೀತಿಯನ್ನು ಅವಳಲ್ಲಿ ತೋಡಿ ಕೊಳ್ಳುವ ಕಥೆಯಿದು. ಆ ಮೂವರು ತಾವು ಎಲ್ಲರಂತೆ ಸಾಮಾನ್ಯರು ಎಂಬುದನ್ನು ಸ್ಪಷ್ಟಪಡಿಸುವದರೊಂದಿಗೆ We dont want sympathy ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಅಂಗ ವೈಕಲ್ಯತೆಯನ್ನು ಲೇವಡಿ ಮಾಡದೆ ತಿಳಿಯಾದ ಹಾಸ್ಯದೊಂದಿಗೆ ಅರಳುತ್ತದೆ. ಸಮಾಜದ ಎಲ್ಲಾ ವರ್ಗದ ಎಲ್ಲಾ ವಯಸ್ಸಿನ ಜನರನ್ನು ರಂಜಿಸಿ ಜನಪ್ರಿಯವಾಗಿರುವ ಈ ನಾಟಕವನ್ನು ಒಮ್ಮೆಯಾದರೂ ನೀವು ನೋಡಲೇಬೇಕು.
ಮೇಲಿನ ಎಲ್ಲಾ ವಿಶೇಷತೆಗಳನ್ನು ಹೊಂದಿರುವ ನಾಟಕ ಆಲ್ ದಿ ಬೆಸ್ಟ್! ಈ ವರ್ಷ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಯುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಗುರು ಸಂಸ್ಥೆಯ ಈ ನಾಟಕದಲ್ಲಿ ಹಲವಾರು ವರ್ಷಗಳಿಂದ ಅಭಿನಯಿಸುತ್ತಾ ಬಂದಿದ್ದಾರೆ ಕಲಾವಿದರಾದ ಮಾಲತಿ ಸರದೇಶಪಾಂಡೆ, ಗುರುರಾಜ ಛಪ್ಪರದ, ಮತ್ತು ಧರ್ಮಣ್ಣ ಕಡೂರು ಎಚ್.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಅಕ್ಕ ಸಮ್ಮೇಳನದ ಕಲಾವಿದರ ಪಟ್ಟಿಯಲ್ಲಿ ಇವರ ಹೆಸರನ್ನು ಪ್ರಕಟಿಸಿದೆ. ಈ ಕಲಾವಿದರಿಗೆ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಜೊತೆಗೆ ಇದರ ಮೂಲ ರೂವಾರಿ, ನಾಟಕದ ನಿರ್ದೇಶಕ ಹಾಗೂ ನಟರಾದ ಯಶವಂತ ಸರದೇಶಪಾಂಡೆ ಅವರನ್ನು ಅಕ್ಕ ಕೂಟದವರೇ ಕರೆಸಿಕೊಂಡಿರುವುದು ಇನ್ನೊಂದು ವಿಶೇಷ. ಇಂತಹ ಆಲ್ ದಿ ಬೆಸ್ಟ್! ನಾಟಕ ಅಮೆರಿಕಾದ ಕನ್ನಡಿಗರನ್ನು ಮತ್ತು ಅಮೆರಿಕನ್ನರನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಸರದೇಶಪಾಂಡೆಯವರ ಇನ್ನೊಂದು ಸ್ವಾರಸ್ಯಮಯ ಏಕವ್ಯಕ್ತಿ ಪ್ರಯೋಗ ರಾಶಿಚಕ್ರ. ಸುಮಾರು ಎರಡು ತಾಸು ನಲವತ್ತೈದು ನಿಮಿಷಗಳ ಕಾಲ ಎಡಬಿಡದೆ ರಂಜಿಸುವ ಈ ಹಾಸ್ಯಧಾರೆ ನಯಾಗರಾ ಜಲಧಾರೆಯಷ್ಟೇ ಫೇಮಸ್ಸಾಗಿದೆ. ಆಯೋಜಕರು ಸಮಯಾವಕಾಶ ಕಲ್ಪಿಸಿದಲ್ಲಿ ನಿತ್ಯ ನೂತನ 'ರಾಶಿ ಚಕ್ರ'ವನ್ನು ಪ್ರಯೋಗ ಮಾಡುವ ಆಶಾಭಾವನೆಯನ್ನು ಯಶವಂತ ಸರದೇಶಪಾಂಡೆಯವರು ಇಟ್ಟುಕೊಂಡಿದ್ದಾರೆ. ಯಶವಂತರ ಇ ಮೇಲ್ ವಿಳಾಸ : [email protected]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications