ನಾವಿಕ ಸಮ್ಮೇಳನ ಉದ್ಘಾಟನೆಗೆ ಬಿಎಸ್ ವೈ

ಮೂರು ದಿನಗಳ ಸಮ್ಮೇಳನದಲ್ಲಿ ಕನಿಷ್ಠ ಮೂರು ಸಾವಿರ ಅಮೆರಿಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ವಿಶ್ವ ಕನ್ನಡಿಗರ ಈ ಜಾಗತಿಕ ಸಂಭ್ರಮಕ್ಕೆ ಮೂರು ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಕವಿ, ಕಲಾವಿದ, ಸಾಹಿತಿ, ನಾಟಕಕಾರರು, ಚಿತ್ರ ತಾರೆಯರು, ಹಾಡುಗಾರರು ಸೇರಿದಂತೆ ಒಟ್ಟಾರೆ 200 ಪ್ರತಿನಿಧಿಗಳು ಕರ್ನಾಟಕದಿಂದ ಸಮ್ಮೇಳನದ ತಾಣ ದಕ್ಷಿಣ ಕ್ಯಾಲಿಫೋರ್ನಿಯಾಗೆ ಆಗಮಿಸಲಿದ್ದಾರೆಂದು ಅವರು ಹೇಳಿದರು.
ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ಎಂಡಿ ಪಲ್ಲವಿ, ಪಂಡಿತ್ ಪ್ರಕಾಶ್ ಸೊಂಟಕ್ಕೆ, ಪ್ರವೀಣ್ ಗೋಡ್ಖಿಂಡಿ, ಇಂದುಶ್ರೀ ಅವರುಗಳಿಂದ ಸಾಂಸ್ಕೃತಿಕ ಮನೋಲ್ಲಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ವ್ಯವಸ್ಥೆಯಾಗಿರುವ ಚಿತ್ರೋತ್ಸವ ಮತ್ತು ನಾಟಕೋತ್ಸವಕ್ಕೆ ಟಿ.ಎಸ್. ನಾಗಾಭರಣ ಮತ್ತು ಅವರ 40 ಮಂದಿ ಕಲಾವಿದರ ತಂಡ ಅಮೆರಿಕಾಗೆ ಬರಲಿದೆ ಎಂದು ಅಯ್ಯಂಗಾರ್ ತಿಳಿಸಿದರು.
ಇದಲ್ಲದೆ ಸ್ಥಳೀಯ ಕಲಾವಿದರಿಂದ ರಂಗ ನಾವಿಕ, ನಾವಿಕ ವಿಶ್ವ ಕನ್ನಡ ಸುಂದರಿ, ಸ್ವರ ನಾವಿಕ ಮುಂತಾದ ಸಾಂಸ್ಕೃತಿಕ , ಸ್ಪರ್ಧಾತ್ಮಕ ಕಾರ್ಯಕ್ರಮಗಳು ಸಜ್ಜಾಗಿವೆ. ಉತ್ತರ ಕ್ಯಾಲಿಫೋರ್ನಿಯಾದ ಪ್ರಸಿದ್ಧ ತಂಡ 'ರಾಗ'ದಿಂದ ಸಂಗೀತ ರಸಮಂಜರಿ ಕಾರ್ಯಕ್ರಮವಿರುತ್ತದೆ. 'ಕಾವ್ಯಧಾರೆ' ಎಂಬ ಕವಿತೆಗೆ ಮೀಸಲಾದ ಕಾರ್ಯಕ್ರಮ ಸಾಹಿತ್ಯ ವಿಭಾಗದ ವಿಶೇಷ ಆಕರ್ಷಣೆಯಾಗಿರುತ್ತದೆ. ಕರ್ನಾಟಕದ ಮೂವರು ಕವಿಗಳು ಹಾಗೂ ಅಮೆರಿಕಾದ ಮೂವರು ಕವಿಗಳು ನಡೆಸಿಕೊಡುವ 45 ನಿಮಿಷಗಳ ಟೆಲಿ ಕಾನ್ಫರೆನ್ಸ್ ಲೈವ್ ಕಾರ್ಯಕ್ರಮ ಇದಾಗಿರುತ್ತದೆ.
ಯುಆರ್ ಅನಂತಮೂರ್ತಿ, ಚಂದ್ರಶೇಖರ ಕಂಬಾರ ಮತ್ತು ವೈಜಿ ಸಿದ್ದರಾಮಯ್ಯ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದು ಅಮೆರಿಕಾ ಕವಿಗಳ ಹೆಸರುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದೆಂದು ಸಮ್ಮೇಳನ ಅಧ್ಯಕ್ಷರು ಹೇಳಿದರು. ಕರ್ನಾಟಕಕ್ಕೆ ವಿದೇಶೀ ಬಂಡವಾಳ ಆಕರ್ಷಿಸುವ ಮತ್ತು ಉದ್ಯಮ ಕ್ಷೇತ್ರಗಳನ್ನು ಗುರುತಿಸುವ ವಾಣಿಜ್ಯ ಮೇಳವೂ ವ್ಯವಸ್ಥೆಯಾಗಿದ್ದು ಇದರ ರೂಪು ರೇಷೆಯನ್ನು ಎನ್ಆರ್ಐ ಸೆಲ್ ನ ಮುಖ್ಯಸ್ಥ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಅನಾವರಣಗೊಳಿಸಲಿದ್ದಾರೆ.
ಸಮ್ಮಳನಕ್ಕೆ ಕರ್ನಾಟಕ ರಾಜ್ಯ ಸರಕಾರದಿಂದ ಪ್ರೋತ್ಸಾಹ ರೂಪದಲ್ಲಿ ನೆರವು ಹರಿದು ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಯ್ಯಂಗಾರ್, ಸಮ್ಮೇಳನ ಸಮಿತಿ ತನ್ನ ಬಿನ್ನಹವನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದೆ. ಹಣಕಾಸಿನ ನೆರವು ಬಿಡುಗಡೆ ಮಾಡುವುದು ಅಥವಾ ಬಿಡುಗಡೆ ಮಾಡದಿರುವುದು ಮಾನ್ಯ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.
ಲಾಸ್ ಏಂಜಲಿಸ್ ನ ಪ್ರಸಿದ್ಧ ಪಸಡೋನ ಸಮ್ಮೇಳನ ಸಭಾಂಗಣದಲ್ಲಿ ಜರುಗುವ ಕನ್ನಡ ಸಮಾವೇಶದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿರುತ್ತವೆ. ಸೀರೆ, ಆಭರಣ, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಮತ್ತು ಹಳೆಯ ವಿದ್ಯಾರ್ಥಿ ಸಮ್ಮಿಳನಗಳನ್ನೂ ಮುತುವರ್ಜಿಯಿಂದ ವ್ಯವಸ್ಥೆಗೊಳಿಸಲಾಗಿದೆ ಎಂದು ಶ್ರೀ ಅಯ್ಯಂಗಾರ್ ನುಡಿದರು.
ನಾವಿಕದಲ್ಲಿ ಮೆರವಣಿಗೆ ಊಟ ಪ್ರವಾಸ »
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications