ನಾವಿಕದಲ್ಲಿ ಮೆರವಣಿಗೆ ಊಟ ಪ್ರವಾಸ

ಮೆರವಣಿಗೆಯ ಮಂಚೂಣಿಯಲ್ಲಿ ಮಂಗಳ ಕಾರ್ಯ ಮೊಳಗಿಸುವ ನಾಗಸ್ವರ ವಾದ್ಯ ಇರುತ್ತದೆ. ಕಲಾವಿದರು ರಾಮದಾಸ್. ಮೈಸೂರು ದಸರಾ ಮೆರವಣಿಗೆಯನ್ನು ಸಾಂಕೇತಿಕವಾಗಿ ನೆನಪಿಸುವ ಸಲುವಾಗಿ ಒಂದು ಮರಿ ಆನೆಯನ್ನು ಮೆರವಣಿಗೆಗೆ ತರಲಾಗುತ್ತಿದೆ. ಮರಿಯಾನೆಯ ಉಪಸ್ಥಿತಿ ಅಮೆರಿಕಾದ ಕನ್ನಡ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗುವುದು ನಿಶ್ಚಿತ.
ಸಮಾವೇಶದಲ್ಲಿ ಕನ್ನಡ ನಾಲಗೆ ರುಚಿ ಗ್ರಂಥಿಗಳನ್ನು ಕೆಣಕುವ ಆಹಾರ ವಿಶೇಷಗಳಿರುತ್ತವೆ. ರಾಗಿ ಮುದ್ದೆ ಅವರೆಕಾಳು ಸಾರು, ಜೋಳದ ರೊಟ್ಟಿ ಕಾಯಿಪಲ್ಲೆ, ಬಿಸಿಬೇಳೆ ಅನ್ನ, ಇಡ್ಲಿ ವಡೆ, ಉಸಳಿಗಳು, ಹೋಳಿಗೆ, ಗಸಗಸೆ, ಮೈಸೂರು ಪಾಕ ಮುಂತಾದ ಭಕ್ಷಭೋಜ್ಯಗಳು ಪ್ರತಿನಿಧಿಗಳನ್ನು ಸಂತುಷ್ಟಗೊಳಿಸುವ ನೀರೀಕ್ಷೆಯಿದೆ.
ಪ್ರತಿನಿಧಿಗಳಿಗೆ ಲಾಸ್ ಏಂಜಲಿಸ್ ಮುತ್ತಮುತ್ತ ಇರುವ ಪ್ರವಾಸಿ ತಾಣಗಳನ್ನು ಪರಿಚಯಿಸುವ ಹೊರ ಸಂಚಾರ ಕಾರ್ಯಕ್ರಮ ಇದೆ. ನಾವಿಕದ ವಿಶೇಷ ಸುವಿಹಾರಿ ಬಸ್ಸುಗಳಲ್ಲಿ ಪ್ರತಿನಿಧಿಗಳು ಸ್ಯಾನ್ ಹೋಸೆ, ಸಾಕ್ರಮೆಂಟೊ, ಸ್ಯಾನ್ ಡಿಯಾಗೋ ಮತ್ತು ಫೀನಿಕ್ಸ್ ರಾಜ್ಯಗಳನ್ನು ನೋಡಬಹುದಾಗಿದೆ.
ಇಷ್ಟೆಲ್ಲ ಆಕರ್ಷಣೆಗಳ ಉದ್ದೇಶ ಬರೀ ತಿಂದು, ಕುಡಿದು, ಹಾಡಿ, ಮೋಜು ಮಸ್ತಿ ಮಾಡುವುದು ಮಾತ್ರವಲ್ಲ. ಬರಲಿರುವ ವರ್ಷಗಳಲ್ಲಿ ನಾವಿಕ ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ಬೆಳೆಯಬೇಕಾಗಿದೆ. ನಾವಿಕ ಹಮ್ಮಿಕೊಂಡಿರುವ ಜ್ಞಾನ ವಿನಿಮಯ, ಆರೋಗ್ಯ ವಿನಿಮಯ, ಶಿಕ್ಷಣ ವಿನಿಮಯ ಮತ್ತು ಕರ್ನಾಟಕದ ಹಿಂದುಳಿದ ಹಳ್ಳಿಗಳನ್ನು ದತ್ತು ಪಡೆಯುವ ಯೋಜನೆಗಳು ಸಫಲವಾಗುವ ಹಾದಿಯಲ್ಲಿ ಈ ಉತ್ಸವ ಕನ್ನಡ ಜನ ಮತ್ತು ಕನ್ನಡನಾಡಿನ ಶುಭೋದಯಗಳಿಗೆ ಕಹಳೆಯಾಗಬೇಕು ಎಂದು ಹೇಳಿ ಶ್ರೀ ಅಯ್ಯಂಗಾರ್ ಲ್ಯಾಪ್ ಟಾಪ್ ಆಫ್ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ನಾವಿಕದ ನಿಯೋಜಿತ ಅಧ್ಯಕ್ಷ ಫ್ಲಾರಿಡಾದ ಕೇಶವ ಬಾಬು ಮತ್ತು ನಾವಿಕದ ಭಾರತೀಯ ಸಂಯೋಜನಾಧಿಕಾರಿ ಎಂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications