ಕಚಗುಳಿ ಇಡುವ ಆರತಿ ಘಟಿಕಾರ್ ಹನಿಗವನಗಳು
ದುಬೈನಲ್ಲಿ ನೆಲೆಸಿರುವ ಕನ್ನಡತಿ ಆರತಿ ಘಟಿಕಾರ್ ಅವರು ರಚಿಸಿರುವ ಕಚಗುಳಿ ಇಡುವಂಥ, ನವಿರು ಹಾಸ್ಯದಿಂದ ತುಂಬಿರುವಂಥ ಹನಿಗವನಗಳ ಗುಚ್ಛ ಇಲ್ಲಿದೆ. ಮುಂದಿನ ವಾರ ಇನ್ನಷ್ಟು ಹನಿಗವನಗಳು ಪ್ರಕಟವಾಗಲಿವೆ. ಹನಿಗವನಗಳು ಇಷ್ಟವಾದರೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಹಾಕಿರಿ.
ಆರತಿ ಘಟಿಕಾರ್, ದುಬೈ
ಸಮಾನ ಪ್ರೀತಿ
ಕೃಷ್ಣನಿಗೆ ಇದ್ದರೂ
ಹದಿನಾರು ಸಾವಿರ
ಪತ್ನಿಯರು..
ಸಂಭಾಳಿಸಿದನು
ಅವರಲ್ಲಿ ಕಿಂಚಿತ್ತು
ಬಾರದಂತೆ
ಮತ್ಸರ..
ಮಾಡಿಸಿ ಕೊಟ್ಟಿರಬಹುದು
ಅವ ಒಬ್ಬೊಬ್ಬರಿಗೂ
ಒಂದೇ ತರದ
ಅವಲಕ್ಕಿ ಸರ!

ತರಲೆ ಮಗ
ಹುಟ್ಟು ಹಬ್ಬಕೆ
ಅಪ್ಪ ಆಶೀರ್ವದಿಸಿದರು
ಮಗನನು
ದೇವರು ಸದಾ ಕೊಡಲಿ
ನಿನಗೆ ಒಳ್ಳೆ ಸಂಸ್ಕಾರ(ರ್)
ಅದೆಲ್ಲಾ ಆಮೇಲಿರಲಿ
ಮಗ ಹೇಳಿದ..
ಮೊದಲು ಕೊಡಿಸು
ಈ sonಗೆ ಒಳ್ಳೆ ಕಾರ್!
ಬದಲಾವಣೆ
ತನ್ನ ಕುಡಿತದ ಚಟವನ್ನೆಲ್ಲಾ
ಬಿಟ್ಟು ಆಕೆಯನ್ನು
ವರಿಸಿದ
ಮದುವೆಯಾದ ಬಳಿಕ
ಕುಡಿಯದಿದ್ದರೂ ಅಕೆಯೆದಿರು
ತಡವರಿಸಿದ!
ಅವಳು
ಇರುತ್ತಿದ್ದರು
ಗಂಡುಗಳನ್ನು ಮೋಹಕವಾಗಿ
ಬಲೆಗೆ ಬೀಳಿಸಿ
ಬಲಿ ತೆಗೆದುಕೊಳ್ಳುವ
ವಿಷ ಕನ್ಯೆಯರು ...
ಆದರೀಕೆ ಗಂಡನನ್ನು
ಮೋಹಕವಾಗಿ
ಸದಾ ಕಾ(ಪೀ)ಡಿಸಿ
ಬೇಡಿಕೆಯಿಡುವ
Wish-ಕನ್ಯೆ !
ಅಭ್ಯಾಸ
ಲಾಫ್ಟರ್ ಕ್ಲಬ್ಬಿನ್ನಲ್ಲಿ
ಹೇಳಿಕೊಟ್ಟಂತೆ
ಇಂದು ಮುಂಜಾನೆ
ಬಾಯ್ತೆರೆದು ಜೋರಾಗಿ ನಕ್ಕೆ
ಅಷ್ಟಕ್ಕೇ ಹಿಡಿಯಿತು ನನ್ನ ಪಕ್ಕೆ!
ಹೃದಯದ ಮಾತು
ಎಷ್ಟೊಂದು ಗೋಡೆಗಳಿವೆ
ನಮ್ಮ ಮಧ್ಯೆ
ವರ್ಷಗಳಿಂದ ಸುಮ್ಮನೆ ನಿಂತಿವೆ
ತಮಗಿರುವ ಚಟವನ್ನೆ ಮರೆತು
ಒಮ್ಮೆಯಾದರೂ ಇವು
ಕದ್ದಾಲಿಸಬಾರದೆ...
ಹೇಳಬೇಕೆಂದ್ದಿದ್ದರೂ
ಗಂಟಲ್ಲಲ್ಲೆ ಉಳಿದ
ನಮ್ಮ.ಹೃದಯದ ಮಾತು..
ನಿಜಕ್ಕೂ
ಅನ್ನ ಬಡಸಿದಾಗಲ್ಲೆಲ್ಲಾ
ತಿನ್ನಲು ತಕರಾರು
ಮಾಡುವ ಹುಡುಗರು
ನಿಜಕ್ಕೂ
warಆನ್ನದ ಹುಡುಗರು!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications