ಮಿಯಾಮಿಯಲ್ಲಿ ನಂದಿ ಕನ್ನಡ ಕೂಟದ ಸುಗ್ಗಿ ಸಂಭ್ರಮ
ಪ್ರತಿ ವರ್ಷದಂತೆ ನಂದಿ ಕನ್ನಡ ಕೂಟ ಆಫ್ ಸೌತ್ ಫ್ಲೋರಿಡಾ ಜನವರಿ 20ನೇ ತಾರೀಖಿನಂದು ಮಿಯಾಮಿಯ ಟ್ರೀ ಟಾಪ್ ಪಾರ್ಕ್ನಲ್ಲಿ ಸುಗ್ಗಿಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸುಮಾರು 200 ಸದಸ್ಯರು ಅತ್ಯಂತ ಸಂತೋಷದಿಂದ ಕುಟುಂಬ ಸಮೇತರಾಗಿ ಪರಸ್ಪರ ಎಳ್ಳು ಬೆಲ್ಲ ಹಂಚಿ, ಬಗೆ ಬಗೆಯಾದ ಆಟಗಳನ್ನು ಆಡಿ, ನಕ್ಕು ನಲಿದು, ಸದಸ್ಯರೇ ತಯಾರಿಸಿದ ಪುಷ್ಕಳ ಭೋಜನವನ್ನು ಸವಿದರು.
ಕಾರ್ಯಕ್ರಮ ಕುಟುಂಬಗಳ ಸದಸ್ಯರ ಪರಿಚಯದೊಂದಿಗೆ ಆರಂಭವಾಗಿತು. ನೃತ್ಯ, ಕನ್ನಡ ಹಾಡುಗಳ ಗಾಯನ, ಅಂತ್ಯಾಕ್ಷರಿ ಮತ್ತು ಮುತ್ತಿತರ ಆಟಗಳನ್ನು ಒಳಗೊಂಡು ಕನ್ನಡಿಗರನ್ನು ಮನರಂಜಿಸಿತು.

ಸಂಘದ ಮಹಿಳಾ ಸದಸ್ಯರೇ ತಾವೇ ಖುದ್ದಾಗಿ ಅತ್ಯಂತ ಪ್ರೀತಿಯಿಂದ ತಯಾರಿಸಿದ ಮದ್ದೂರು ವಡೆ, ಉತ್ತರ ಕರ್ನಾಟಕದ ಎಣ್ಣಿಗಾಯಿ, ಸಿಹಿ/ಖಾರ ಹುಗ್ಗಿ, ಜೋಳದ ಬುಟ್ಟಾ, ಖಾರ ಮಂಡಕ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ನಂದಿ ಕನ್ನಡಕೂಟದ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ಕನ್ನಡ ಸಂಘವು ವರ್ಷದಿಂದ ವರ್ಷಕ್ಕೆ ವೃದ್ಧಿ ಗೊಳ್ಳುತ್ತಲಿದ್ದು, ಸರ್ವ ಸಂಘದ ಸದಸ್ಯರಿಂದ ಅನೂಚಾನವಾಗಿ ಸಂಕ್ರಾಂತಿ ಕಾರ್ಯಕ್ರಮವು ಮತ್ತೆ ಮತ್ತೆ ವಿನೂತನವಾಗಿ ಪ್ರತಿ ವರ್ಷವೂ ಎಲ್ಲರ ಸಹಕಾರದಿಂದ ನಡೆಯುತ್ತಿದೆ ಎಂದು ಹರ್ಷಚಿತ್ತರಾಗಿ ತಿಳಿಸಿದರು.

ಉಪಾಧ್ಯಕ್ಷರಾದ ನಾಗರಾಜ ನಾಗತಿಹಳ್ಳಿ, ಖಜಾಂಚಿಯಾದ ಅರ್ಚನಾ ತುಳಸಿ, ಮಿಯಾಮಿ ಡೆಯ್ಡ್ ಪ್ರಾಂತ್ಯದ ಸಂಚಾಲಕರಾದ ಪ್ರೀತಿ ರವೀಂದ್ರ, ವೆಸ್ಟ್ ಪಾಮ್ ಬೀಚಿನ ಸಂಚಾಲಕರಾದ ರವೀಂದ್ರ ಶ್ರೀನಿವಾಸ ಮತ್ತು ಬೋವರ್ಡ್ ಪ್ರಾಂತ್ಯದ ಸಂಚಾಲಕರಾದ ದರ್ಶನ ಜೋಡಟ್ಟಿಯವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿಯಾದ ಶಾಲಿನಿ ಉಮೇಶ್ ತುಂಬು ಹೃದಯದ ವಂದನಾರ್ಪಣೆ ಸಲ್ಲಿಸಿದರು. ಈ ಎಲ್ಲ ಕಾರ್ಯಕ್ರಮಗಳ ನೆನಪನ್ನು ಕಾರ್ತಿಕ್ ಮಾಧವನ್ ತಮ್ಮ ಛಾಯಾ ಚಿತ್ರಗಳಲ್ಲಿ ಸೆರೆಹಿಡಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications