ಮಿಯಾಮಿಯಲ್ಲಿ ನಂದಿ ಕನ್ನಡ ಕೂಟದ ಸುಗ್ಗಿ ಸಂಭ್ರಮ
ಪ್ರತಿ ವರ್ಷದಂತೆ ನಂದಿ ಕನ್ನಡ ಕೂಟ ಆಫ್ ಸೌತ್ ಫ್ಲೋರಿಡಾ ಜನವರಿ 20ನೇ ತಾರೀಖಿನಂದು ಮಿಯಾಮಿಯ ಟ್ರೀ ಟಾಪ್ ಪಾರ್ಕ್ನಲ್ಲಿ ಸುಗ್ಗಿಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸುಮಾರು 200 ಸದಸ್ಯರು ಅತ್ಯಂತ ಸಂತೋಷದಿಂದ ಕುಟುಂಬ ಸಮೇತರಾಗಿ ಪರಸ್ಪರ ಎಳ್ಳು ಬೆಲ್ಲ ಹಂಚಿ, ಬಗೆ ಬಗೆಯಾದ ಆಟಗಳನ್ನು ಆಡಿ, ನಕ್ಕು ನಲಿದು, ಸದಸ್ಯರೇ ತಯಾರಿಸಿದ ಪುಷ್ಕಳ ಭೋಜನವನ್ನು ಸವಿದರು.
ಕಾರ್ಯಕ್ರಮ ಕುಟುಂಬಗಳ ಸದಸ್ಯರ ಪರಿಚಯದೊಂದಿಗೆ ಆರಂಭವಾಗಿತು. ನೃತ್ಯ, ಕನ್ನಡ ಹಾಡುಗಳ ಗಾಯನ, ಅಂತ್ಯಾಕ್ಷರಿ ಮತ್ತು ಮುತ್ತಿತರ ಆಟಗಳನ್ನು ಒಳಗೊಂಡು ಕನ್ನಡಿಗರನ್ನು ಮನರಂಜಿಸಿತು.

ಸಂಘದ ಮಹಿಳಾ ಸದಸ್ಯರೇ ತಾವೇ ಖುದ್ದಾಗಿ ಅತ್ಯಂತ ಪ್ರೀತಿಯಿಂದ ತಯಾರಿಸಿದ ಮದ್ದೂರು ವಡೆ, ಉತ್ತರ ಕರ್ನಾಟಕದ ಎಣ್ಣಿಗಾಯಿ, ಸಿಹಿ/ಖಾರ ಹುಗ್ಗಿ, ಜೋಳದ ಬುಟ್ಟಾ, ಖಾರ ಮಂಡಕ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ನಂದಿ ಕನ್ನಡಕೂಟದ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ಕನ್ನಡ ಸಂಘವು ವರ್ಷದಿಂದ ವರ್ಷಕ್ಕೆ ವೃದ್ಧಿ ಗೊಳ್ಳುತ್ತಲಿದ್ದು, ಸರ್ವ ಸಂಘದ ಸದಸ್ಯರಿಂದ ಅನೂಚಾನವಾಗಿ ಸಂಕ್ರಾಂತಿ ಕಾರ್ಯಕ್ರಮವು ಮತ್ತೆ ಮತ್ತೆ ವಿನೂತನವಾಗಿ ಪ್ರತಿ ವರ್ಷವೂ ಎಲ್ಲರ ಸಹಕಾರದಿಂದ ನಡೆಯುತ್ತಿದೆ ಎಂದು ಹರ್ಷಚಿತ್ತರಾಗಿ ತಿಳಿಸಿದರು.

ಉಪಾಧ್ಯಕ್ಷರಾದ ನಾಗರಾಜ ನಾಗತಿಹಳ್ಳಿ, ಖಜಾಂಚಿಯಾದ ಅರ್ಚನಾ ತುಳಸಿ, ಮಿಯಾಮಿ ಡೆಯ್ಡ್ ಪ್ರಾಂತ್ಯದ ಸಂಚಾಲಕರಾದ ಪ್ರೀತಿ ರವೀಂದ್ರ, ವೆಸ್ಟ್ ಪಾಮ್ ಬೀಚಿನ ಸಂಚಾಲಕರಾದ ರವೀಂದ್ರ ಶ್ರೀನಿವಾಸ ಮತ್ತು ಬೋವರ್ಡ್ ಪ್ರಾಂತ್ಯದ ಸಂಚಾಲಕರಾದ ದರ್ಶನ ಜೋಡಟ್ಟಿಯವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿಯಾದ ಶಾಲಿನಿ ಉಮೇಶ್ ತುಂಬು ಹೃದಯದ ವಂದನಾರ್ಪಣೆ ಸಲ್ಲಿಸಿದರು. ಈ ಎಲ್ಲ ಕಾರ್ಯಕ್ರಮಗಳ ನೆನಪನ್ನು ಕಾರ್ತಿಕ್ ಮಾಧವನ್ ತಮ್ಮ ಛಾಯಾ ಚಿತ್ರಗಳಲ್ಲಿ ಸೆರೆಹಿಡಿದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications