ಗಾಯಕ ರಾಜೇಶ್ ಕೃಷ್ಣನ್ ಅವರೆದಿರು ಹಾಡುವ ಯೋಗ
ಕನ್ನಡ ಚಿತ್ರರಂಗದಲ್ಲಿ 25 ವಸಂತಗಳನ್ನು ಕಳೆದಿರುವ ಮಧುರ ಕಂಠದ ಗಾಯಕ, ಸ್ಫುರದ್ರುಪಿ ನಟ ರಾಜೇಶ್ ಕೃಷ್ಣನ್ ಅವರನ್ನು ಭೇಟಿಯಾಗಲು, ಅವರೆದಿರುವ ಹಾಡಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಲು ಸುವರ್ಣ ಅವಕಾಶವೊಂದು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ ಸಂಘಟನೆಯ ಕನ್ನಡಿಗರಿಗೆ ದೊರೆಯಲಿದೆ.
ಹೌದು, ಫೆಬ್ರವರಿ 28ರಂದು ಭಾನುವಾರ ಫುಟ್ ಹಿಲ್ ಕಾಲೇಜಿನ ಸ್ಮಿತ್ವಿಕ್ ಥಿಯೇಟರಲ್ಲಿ ನಡೆಯಲಿರುವ 'ಸ್ನೇಹ ಸುಗ್ಗಿ' ಕಾರ್ಯಕ್ರಮಕ್ಕೆ, ಅಮೆರಿಕಾ ಅಮೆರಿಕಾ ಚಿತ್ರದಲ್ಲಿ 'ನೂರು ಜನ್ಮಕು ನೂರಾರು ಜನ್ಮಕೂ' ಹಾಡು ಹಾಡಿ ಅಮೆರಿಕನ್ನಡಿಗರನ್ನು ಸೆಳೆದಿದ್ದ ರಾಜೇಶ್ ಕೃಷ್ಣನ್ ಅವರು ಬರಲಿದ್ದಾರೆ.
ಪ್ರತಿಭಾವಂತ ಹಾಡುಗಾರ ಅಥವಾ ಹಾಡುಗಾರ್ತಿಯರು ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದರೆ, ರಾಜೇಶ್ ಕೃಷ್ಣನ್ ಅವರೆದಿರುವ ಹಾಡುವ ಆಸೆ ಇಟ್ಟುಕೊಂಡಿದ್ದರೆ ಕೂಡಲೆ ತ್ವರೆ ಮಾಡಬೇಕು. 'ಸಪ್ತಸ್ವರ' ಸಂಗೀತ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ಹಾಡುಗಾರರಿಗೆ ಸಿಗಲಿದೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೆ. [ಬಹಿರಂಗಗೊಂಡ ರಾಜೇಶ್ ಕೃಷ್ಣನ್ ಕೆಲವು ಸತ್ಯಗಳು]

ನಿಮ್ಮ ಧ್ವನಿ ಸುರಳಿಯನ್ನು (ಆಡಿಯೋ) ಅಥವಾ ಆಡಿಯೋ ಜೊತೆ ವಿಡಿಯೋ ನಮಗೆ ಕಳಿಸಿ. ಆಡಿಯೋ ಅಥವಾ ವಿಡಿಯೋ 1 ನಿಮಿಷ ಇರತಕ್ಕದ್ದು. ಕನ್ನಡ ಚಿತ್ರ ಹಿನ್ನೆಲೆ ಗಾಯಕರಾದ "ಶಷಾಂಕ್ ಶೇಷಗಿರಿ" ಅವರ ತೀರ್ಪಿನ ಪ್ರಕಾರ ಕೊನೆಯ ಕೆಲವು ಸ್ಪರ್ಧಿಗಳು ರಾಜೇಶ್ ಕೃಷ್ಣನ್ ಅವರೆದುರು ಹಾಡುವರು. ಇವರಲ್ಲಿ ವಿಜೇತರನ್ನು ಸ್ವತಃ ರಾಜೇಶ್ ಕೃಷ್ಣನ್ ಆಯ್ಕೆ ಮಾಡಲಿದ್ದಾರೆ.
ಎಲ್ಲ ವಯಸ್ಸಿನ ಹಾಡುಗಾರರಿಗೆ ಅವಕಾಶ ಸಿಗಲಿದೆ. 8-12(ಸಬ್-ಜ್ಯೂನಿಯರ್), 13-15(ಜ್ಯೂನಿಯರ್) ಮತ್ತು 15 ವಯಸ್ಸಿಗಿಂತ ಮೇಲ್ಪಟ್ಟ ಹಾಡುಗಾರರು ಭಾಹವಹಿಸಬಹುದು. ಇದರೊಂದಿಗೆ 'ಸಪ್ತಸ್ವರ'ದ ಸಂಜೆ ರುಚಿಯಾದ ಊಟ ಹಾಗು ರಾಜೇಶ್ ಕೃಷ್ಣನ್ ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಳ್ಳುವ ಸುಯೋಗ.
ಇನ್ನೇಕೆ ತಡ, ಪ್ರವೇಶ ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 23, 2016. ಈ ಕಾರ್ಯಕ್ರಮಕ್ಕೆ ಕೆಕೆಎನ್ ಸಿ ಸದಸ್ಯರಿಗೆ ಪ್ರವೇಶ ಉಚಿತವಾಗಿರುತ್ತದೆ. ಇದರ ಜೊತೆಗೆ ತೊಗಲು ಬೊಂಬೆಯಾಟ, ಜಾನಪದ ನೃತ್ಯ, ಕೊರವಂಜಿ ನೃತ್ಯ, ಪಂಚತಂತ್ರ ನಾಟಕ, ದಂಡ ಪಿಂಡಗಳು ನಾಟಕ, ಭಾವ ಧಾರೆ ಮುಂತಾದ ಕಾರ್ಯಕ್ರಮಗಳೂ ಆಯೋಜಿತವಾಗಿವೆ. ನೋಂದಣಿಗಾಗಿ ಇಲ್ಲಿ ಕ್ಲಿಕ್ಕಿಸಿ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications