ಗಾಯಕ ರಾಜೇಶ್ ಕೃಷ್ಣನ್ ಅವರೆದಿರು ಹಾಡುವ ಯೋಗ
ಕನ್ನಡ ಚಿತ್ರರಂಗದಲ್ಲಿ 25 ವಸಂತಗಳನ್ನು ಕಳೆದಿರುವ ಮಧುರ ಕಂಠದ ಗಾಯಕ, ಸ್ಫುರದ್ರುಪಿ ನಟ ರಾಜೇಶ್ ಕೃಷ್ಣನ್ ಅವರನ್ನು ಭೇಟಿಯಾಗಲು, ಅವರೆದಿರುವ ಹಾಡಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಲು ಸುವರ್ಣ ಅವಕಾಶವೊಂದು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ ಸಂಘಟನೆಯ ಕನ್ನಡಿಗರಿಗೆ ದೊರೆಯಲಿದೆ.
ಹೌದು, ಫೆಬ್ರವರಿ 28ರಂದು ಭಾನುವಾರ ಫುಟ್ ಹಿಲ್ ಕಾಲೇಜಿನ ಸ್ಮಿತ್ವಿಕ್ ಥಿಯೇಟರಲ್ಲಿ ನಡೆಯಲಿರುವ 'ಸ್ನೇಹ ಸುಗ್ಗಿ' ಕಾರ್ಯಕ್ರಮಕ್ಕೆ, ಅಮೆರಿಕಾ ಅಮೆರಿಕಾ ಚಿತ್ರದಲ್ಲಿ 'ನೂರು ಜನ್ಮಕು ನೂರಾರು ಜನ್ಮಕೂ' ಹಾಡು ಹಾಡಿ ಅಮೆರಿಕನ್ನಡಿಗರನ್ನು ಸೆಳೆದಿದ್ದ ರಾಜೇಶ್ ಕೃಷ್ಣನ್ ಅವರು ಬರಲಿದ್ದಾರೆ.
ಪ್ರತಿಭಾವಂತ ಹಾಡುಗಾರ ಅಥವಾ ಹಾಡುಗಾರ್ತಿಯರು ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದರೆ, ರಾಜೇಶ್ ಕೃಷ್ಣನ್ ಅವರೆದಿರುವ ಹಾಡುವ ಆಸೆ ಇಟ್ಟುಕೊಂಡಿದ್ದರೆ ಕೂಡಲೆ ತ್ವರೆ ಮಾಡಬೇಕು. 'ಸಪ್ತಸ್ವರ' ಸಂಗೀತ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ಹಾಡುಗಾರರಿಗೆ ಸಿಗಲಿದೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೆ. [ಬಹಿರಂಗಗೊಂಡ ರಾಜೇಶ್ ಕೃಷ್ಣನ್ ಕೆಲವು ಸತ್ಯಗಳು]

ನಿಮ್ಮ ಧ್ವನಿ ಸುರಳಿಯನ್ನು (ಆಡಿಯೋ) ಅಥವಾ ಆಡಿಯೋ ಜೊತೆ ವಿಡಿಯೋ ನಮಗೆ ಕಳಿಸಿ. ಆಡಿಯೋ ಅಥವಾ ವಿಡಿಯೋ 1 ನಿಮಿಷ ಇರತಕ್ಕದ್ದು. ಕನ್ನಡ ಚಿತ್ರ ಹಿನ್ನೆಲೆ ಗಾಯಕರಾದ "ಶಷಾಂಕ್ ಶೇಷಗಿರಿ" ಅವರ ತೀರ್ಪಿನ ಪ್ರಕಾರ ಕೊನೆಯ ಕೆಲವು ಸ್ಪರ್ಧಿಗಳು ರಾಜೇಶ್ ಕೃಷ್ಣನ್ ಅವರೆದುರು ಹಾಡುವರು. ಇವರಲ್ಲಿ ವಿಜೇತರನ್ನು ಸ್ವತಃ ರಾಜೇಶ್ ಕೃಷ್ಣನ್ ಆಯ್ಕೆ ಮಾಡಲಿದ್ದಾರೆ.
ಎಲ್ಲ ವಯಸ್ಸಿನ ಹಾಡುಗಾರರಿಗೆ ಅವಕಾಶ ಸಿಗಲಿದೆ. 8-12(ಸಬ್-ಜ್ಯೂನಿಯರ್), 13-15(ಜ್ಯೂನಿಯರ್) ಮತ್ತು 15 ವಯಸ್ಸಿಗಿಂತ ಮೇಲ್ಪಟ್ಟ ಹಾಡುಗಾರರು ಭಾಹವಹಿಸಬಹುದು. ಇದರೊಂದಿಗೆ 'ಸಪ್ತಸ್ವರ'ದ ಸಂಜೆ ರುಚಿಯಾದ ಊಟ ಹಾಗು ರಾಜೇಶ್ ಕೃಷ್ಣನ್ ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಳ್ಳುವ ಸುಯೋಗ.
ಇನ್ನೇಕೆ ತಡ, ಪ್ರವೇಶ ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 23, 2016. ಈ ಕಾರ್ಯಕ್ರಮಕ್ಕೆ ಕೆಕೆಎನ್ ಸಿ ಸದಸ್ಯರಿಗೆ ಪ್ರವೇಶ ಉಚಿತವಾಗಿರುತ್ತದೆ. ಇದರ ಜೊತೆಗೆ ತೊಗಲು ಬೊಂಬೆಯಾಟ, ಜಾನಪದ ನೃತ್ಯ, ಕೊರವಂಜಿ ನೃತ್ಯ, ಪಂಚತಂತ್ರ ನಾಟಕ, ದಂಡ ಪಿಂಡಗಳು ನಾಟಕ, ಭಾವ ಧಾರೆ ಮುಂತಾದ ಕಾರ್ಯಕ್ರಮಗಳೂ ಆಯೋಜಿತವಾಗಿವೆ. ನೋಂದಣಿಗಾಗಿ ಇಲ್ಲಿ ಕ್ಲಿಕ್ಕಿಸಿ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications