ಮನ್ಮಥನ ಸ್ವಾಗತಿಸಲು ಕೆಕೆಎನ್ಸಿಯಲ್ಲಿ ಭರದ ಸಿದ್ಧತೆ
ಜಯನಾಮ ಸಂವತ್ಸರ ಮುಗಿದು ಮನ್ಮಥನ ಲೀಲೆ ಆರಂಭವಾಗಲು, ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿಬರಲು ಇನ್ನು ಕೆಲವೇ ದಿನಗಳು ಬಾಕಿಯಿವೆ. ಚೈತ್ರ ಮಾಸವನ್ನು ಭರ್ಜರಿಯಾಗಿ ಸ್ವಾಗತಿಸಲು ಅಮೆರಿಕದ ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ (ಕೆಕೆಎನ್ಸಿ) ಸಿದ್ಧತೆ ನಡೆಸಿದೆ. ಹಾಗೆಯೆ ಚೈತ್ರದ ಚಿಗುರಿನಂಥ ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕೂಡ ತಯಾರಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಕೆಎನ್ಸಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ಕೆಳಗಿನಂತಿವೆ.

ಸಂಗೀತ ನಾಟಕ ನಿರ್ದೇಶಕರಿಗೆ ಅವಕಾಶ:
ನಿಮಗೆ ಯುಗಾದಿ ಕಾರ್ಯಕರ್ಮದಲ್ಲಿ ಒಂದು ಸಂಗೀತ ನಾಟಕ ನಿರ್ದೇಶನ ಮಾಡಲು ಆಸಕ್ತಿ ಇದೆಯಾ? ಹಾಗಿದ್ದಲ್ಲಿ, ನಿಮ್ಮ ವಿವರಗಳನ್ನು ಇಲ್ಲಿ ತಿಳಿಸಿರಿ. ಯುಗಾದಿ ಕಾರ್ಯಕ್ರಮದಲ್ಲಿ ವರ್ಣಮಯ "ಸಂಗೀತ ನಾಟಕ"ವನ್ನು ಮಾಡಿಸಲು ನಮ್ಮ ಕಮಿಟಿಗೆ ಆಸೆಯಿದೆ. ಇದನ್ನು ಕಾರ್ಯರೂಪಕ್ಕೆ ತರಲು ನಿರ್ದೇಶಕರೊಬ್ಬರು ಬೇಕು. ನಿಮಗೆ ಇಷ್ಟವಿದೆಯೇ? ನಿಮಗೆ ಇದನ್ನು ಮಾಡಿಸಲು ಅನೇಕ ರೀತಿಯಲ್ಲಿ ನಮ್ಮ ಕಮಿಟಿ ಸಹಾಯ ಮಾಡಲಿದೆ. ನಿಮ್ಮ ಬಗ್ಗೆ ನಾವು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.
ಪ್ರಕಾರ : ಸಂಗೀತ ನಾಟಕ
ಕಾಲಾವಕಾಶ : 15 ನಿಮಿಷ
ಕಲಾವಿದರ ಮಿತಿ : 15ರಿಂದ 20
ಪ್ರವೇಶಕ್ಕೆ ಕಡೆಯ ದಿನಾಂಕ : 13ನೇ ಮಾರ್ಚ್, ಶುಕ್ರವಾರ
ಆದರ್ಶ ದಂಪತಿಗಳಿಗೆ ವಿಶೇಷ ಆಹ್ವಾನ:
ಬ್ರಹ್ಮಚಾರಿಗಳ ಜೀವನ ಸಾಕು ಎಂದು ಅದನ್ನು ದೂರಕ್ಕೆ ತಳ್ಳಿ ದಾಂಪತ್ಯ ಜೀವನವನ್ನು ಸ್ವೀಕರಿಸಿರುವ ಎಲ್ಲಾ ದಂಪತಿಗಳಿಗೂ ಇದೊಂದು ವಿಶೇಷ ಆಹ್ವಾನ. ನಿಮಗೆ ಬಹಳ ಆತ್ಮವಿಶ್ವಾಸ, ನಿಮ್ಮ ಜೀವನ ಸಂಗಾತಿಯನ್ನು ಚೆನ್ನಾಗಿ ಅರಿತಿದ್ದೇನೆ ಎಂದು. ನಿಜವೇ? ಇಷ್ಟು ಕಡಿಮೆ ಸಮಯದಲ್ಲಿ ಸಂಗಾತಿಯ ಬಗ್ಗೆ ಎಲ್ಲಾ ತಿಳಿದುಕೊಂಡಿರಾ? ಇನ್ನೇನು ಮತ್ತೆ, ಬನ್ನಿ ಇಬ್ಬರು. ನಾವು ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಮೊದಲ ಬಹುಮಾನ ದೋಚಿಕೊಂಡು ಹೋಗಿ. ನೋಡಿ, ಇಲ್ಲಿದೆ ಅಂತಹ ಅವಕಾಶ. ನೀವು ಈಗ ಮಾಡಬೇಕಿರುವುದು ಇಷ್ಟೇ. ನಿಮ್ಮ ಬಗ್ಗೆ ನಾವು ತಿಳಿಯಲು ಈ ವೆಬ್ ಲಿಂಕ್ ಅನ್ನು ಕ್ಲಿಕ್ ಮಾಡಿ.
ಪ್ರವೇಶ ಕಳಿಸಲು ಕೊನೆಯ ದಿನಾಂಕ 27ನೇ ಮಾರ್ಚ್. ಹೇವರ್ಡ್ ನಲ್ಲಿರುವ ಚಾಬೋಟ್ ಕಾಲೇಜ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ನಲ್ಲಿ ಏಪ್ರಿಲ್ 19ರಂದು, ಭಾನುವಾರ ಆದರ್ಶ ದಂಪತಿ ಕಾರ್ಯಕ್ರಮ ಜರುಗಲಿದೆ.
ಬಹುಭಾಷಾ ನಾಟಕೋತ್ಸವದ ಸಂಭ್ರಮ
ಇವುಗಳೆಲ್ಲದರ ಜೊತೆಗೆ ಮೇ 30 ಮತ್ತು 31ರಂದು ಬಹುಭಾಷಾ ನಾಟಕೋತ್ಸವ ನಡೆಯಲಿದ್ದು, ಕನ್ನಡದ ಖ್ಯಾತ ನಿರ್ದೇಶಕರಾದ ಟಿಎಸ್ ನಾಗಾಭರಣ ಮತ್ತು ರಂಗಕರ್ಮಿ 'ಪದ್ಮಶ್ರೀ' ಬಿ ಜಯಶ್ರೀ ಅವರು ಮುಖ್ಯ ಅತಿಥಿಗಳಾಗಿ ಈ ನಾಟಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಬೀದಿ ನಾಟಕ, ಮಕ್ಕಳ ನಾಟಕ ಮತ್ತು ಏಕಪಾತ್ರಾಭಿನಯಗಳು ರಂಗೋತ್ಸಾಹಿಗಳನ್ನು ರಂಜಿಸಲಿವೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications