ಕರ್ನಾಟಕದ ಇತರ ನಗರಗಳಲ್ಲಿ ಎಂಟಿಆರ್ ತೆರೆಯುವುದೆ?
(ಸಂದರ್ಶನ ಮುಂದುವರಿದಿದೆ...)
ಪ್ರಶ್ನೆ : ನೀವು ಈ ಮೊದಲೇ ಹೇಳಿದಂತೆ ಕರ್ನಾಟಕದ ಇತರ ನಗರಗಳಲ್ಲಿ ಎಂಟಿಆರ್ ತೆರೆಯುವ ಯೋಚನೆ, ಯೋಜನೆ ಇದೆಯೇ?
ಹೇಮಮಾಲಿನಿ : ಈ ಯೋಚನೆ ಯಾವಾಗಲೂ ಇತ್ತು, ಇದೆ. ಆದರೆ ನಾವೇ ನಡೆಸುವುದೇ ಇಲ್ಲವೇ ಫ್ರಾಂಚೈಸ್ ಕೊಡುವುದೇ ಎಂಬ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಪ್ರಶ್ನೆ : 1924ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ "ಬ್ರಾಹ್ಮಣರ ಕಾಫಿ ಕ್ಲಬ್", ನಂತರ "ಮಾವಳ್ಳಿ ಟಿಫಿನ್ ರೂಮ್ಸ್; 2013ರಲ್ಲಿ ಹೊರದೇಶದಲ್ಲಿ ಎಂಟಿಆರ್, ಇನ್ನು 11 ವರ್ಷಗಳಲ್ಲಿ ನೂರು ವರ್ಷಗಳು ತುಂಬಲಿವೆ. ಮುಂದೇನು?
ಹೇಮಮಾಲಿನಿ : ಎಲ್ಲ ಕಡೆ ಎಂಟಿಆರನ್ನು ಕೊಂಡೊಯ್ಯಬೇಕೆಂಬ ಆಕಾಂಕ್ಷೆಯಿದೆ. ಇನ್ನು ಹತ್ತು ವರ್ಷದಲ್ಲಿ ಏನಾಗುತ್ತದೋ ಹೇಳುವುದು ಕಷ್ಟ. ನಮ್ಮ ತಂದೆಯವರು ಯಾವಾಗಲೂ ಒಂದೇ ಎಂಟಿಆರ್ ಸಾಕು ಎನ್ನುತ್ತಿದ್ದರು. ಆದರೆ ಈಗ ಬೆಂಗಳೂರು ಊಹಿಸಲಸಾಧ್ಯವಾದಷ್ಟು ಬೆಳೆದಿದೆ, ಸಂಚಾರ ಮೊದಲಿನಂತೆ ಸುಲಭವಲ್ಲ. ಎಲ್ಲ ಗ್ರಾಹಕರೂ ನಮ್ಮನ್ನು ಹುಡುಕಿಕೊಂಡು ಬರಲು ಸಾಧ್ಯವಿಲ್ಲ. ನಾವು ಹೆಚ್ಚು ಹೆಚ್ಚು ಜಾಗಗಳಲ್ಲಿ ರೆಸ್ಟೋರಂಟ್ ತೆಗೆಯಬೇಕು.

ಇನ್ನು ಹತ್ತು ವರ್ಷಗಳಲ್ಲಿ ನಾವು ಎಷ್ಟು ಕಡೆ, ಎಷ್ಟು ದೇಶಗಳಲ್ಲಿ, ಎಷ್ಟು ಹೋಟೆಲ್ಗಳನ್ನು ತೆಗೆಯುತ್ತೇವೆಂಬುದು ಮುಖ್ಯವಲ್ಲ, ತೆಗೆದ ಕಡೆಯಲ್ಲಿ ಎಂಟಿಆರ್ನ ಅಡುಗೆಯ ಮೂಲರುಚಿಗೆ ಎಷ್ಟು ಹತ್ತಿರ ತಂದಿದ್ದೇವೆ ಎಂಬುವುದು ಮುಖ್ಯ. ಹೊರದೇಶದಲ್ಲಿದ್ದಾಗ ಅಡುಗೆಗೆ ಬಳಸುವ ಪದಾರ್ಥಗಳಲ್ಲಿ, ಅದರ ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದನ್ನು ದೂರದಿಂದ ಸರಿಪಡಿಸುವುದು ಕಷ್ಟದ ಕೆಲಸ.
ಪ್ರಶ್ನೆ : ನಿಮಗೆ ಸಿಂಗಪುರ ಕನ್ನಡ ಸಂಘದ ಮತ್ತು ಅದರ ಚಟುವಟಿಕೆಗಳ ಬಗ್ಗೆ ತಿಳಿದಿದೆಯೇ?
ಹೇಮಮಾಲಿನಿ : ಇಲ್ಲಿ ಕನ್ನಡ ಸಂಘವಿರುವುದು ಗೊತ್ತು, ಆದರೆ ಅದರ ಗಾತ್ರ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ.
ಸುರೇಶ : 1960ರ ಸುಮಾರಿಗೆ ಕೆಲವು ಕನ್ನಡಿಗರು ಸಿಂಗಪುರಕ್ಕೆ ಬಂದರು. ನಂತರ ಎಂಬತ್ತರ ದಶಕದಲ್ಲಿ ಹಲವಾರು ಕನ್ನಡಿಗರು ಪ್ರಾಧ್ಯಾಪಕರಾಗಿ ಬಂದರು. ನಂತರದ ದಿನಗಳಲ್ಲಿ ಐಟಿ ಇಂಡಸ್ಟ್ರಿಯಿಂದಾಗಿ ಇನ್ನೂ ಹೆಚ್ಚು ಜನ ಬಂದರು. ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಘವು ವರ್ಷಕ್ಕೆ 8ರಿಂದ 10 ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಿಂಗಪುರದಲ್ಲಿ 3000ಕ್ಕೂ ಹೆಚ್ಚು ಕನ್ನಡಿಗರಿದ್ದು, ಆಯೋಜಿಸಿದ ಕಾರ್ಯಕ್ರಮಕ್ಕನುಗುಣವಾಗಿ 300ರಿಂದ 600 ಜನ ಮತ್ತು ಮೆಗಾ ಕಾರ್ಯಕ್ರಮಗಳಿಗೆ ಸುಮಾರು ಒಂದು ಸಾವಿರ ಜನ ಬರುತ್ತಾರೆ. 2010ರಲ್ಲಿ ಆಯೋಜಿಸಲಾದ 7ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಕೊನೆಯ ಭಾಗವಾದ "ತಾರಾಸಂಜೆ"ಗೆ ಸುಮಾರು ಒಂದು ಸಾವಿರ ಮಂದಿ ಕನ್ನಡಿಗರು ಬಂದಿದ್ದರು. ಬಹುತೇಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಅಂತ್ಯದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮುಂದೊಂದು ದಿನ ಸಂಘದ ಕಾರ್ಯಕ್ರಮಗಳಲ್ಲಿ ಎಂಟಿಆರ್ನ ಊಟ ಸಿಗುವಂತಾಗಲಿ. ಕಾರ್ಯಕ್ರಮದ ವಿವರಗಳನ್ನು ನಿಮ್ಮ ಸ್ಥಳೀಯ ಮಾಲೀಕರಿಗೆ ತಿಳಿಸುತ್ತೇನೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications