ಕೆಕೆಎನ್ಸಿ ಕನ್ನಡೋತ್ಸವದಲ್ಲಿ ಸುಧಾ ಹಾಸ್ಯ, ಛಾಯಾ ಸಂಗೀತ

ಕೆಕೆಎನ್ಸಿ ಆಯೋಜಿಸಿರುವ 'ಕನ್ನಡೋತ್ಸವ' ಸಾಂಸ್ಕೃತಿಕ ಸಂಜೆಯಲ್ಲಿ ಅಮೆರಿಕನ್ನಡಿಗರನ್ನು ಹಾಸ್ಯ ರಸದಿಂದ ಕಚಗುಳಿಯಿಡಲು 'ಮಾತಿನ ಮಲ್ಲಿ' ಸುಧಾ ಬರಗೂರು ಅವರು ಬೆಂಗಳೂರಿನಿಂದ ಆಗಮಿಸಿದ್ದರೆ, ಸಂಗೀತದ ಹೊನಲಲ್ಲಿ ತೇಲಾಡಿಸಲು 'ಕರ್ನಾಟಕದ ಕೋಗಿಲೆ' ಎಂದು ಖ್ಯಾತಿ ಪಡೆದಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಅವರು ಅಣಿಯಾಗಿದ್ದಾರೆ.
ಇವೆರಡು ಕಾರ್ಯಕ್ರಮಗಳ ಜೊತೆಗೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲು ತಯಾರಾಗಿವೆ. ಒಟ್ಟಿನಲ್ಲಿ ಕನ್ನಡೋತ್ಸವ ಕ್ಯಾಲಿಫೋರ್ನಿಯಾ ಮತ್ತು ಸುತ್ತಲಿನ ಕನ್ನಡಿಗರಿಗೆ ಹಾಸ್ಯ ಸಂಗೀತದ ರಸದೌತಣ ಬಡಿಸಲಿದೆ. ವೀಣಾ ಗೌಡ ಮತ್ತು ಸುದತ್ತ ಗೌತಮ್ ಅವರು ಕಾರ್ಯಕ್ರಮಗಳ ನಿರೂಪಣೆ ಮಾಡಲಿದ್ದಾರೆ.
ಕಾರ್ಯಕ್ರಮಗಳ ವಿವರ
* ನಾಡಗೀತೆಗಳು - ಸಂಧ್ಯಾ ಗಾಯತ್ರಿ ಅವರ ನಿರ್ದೇಶನದಲ್ಲಿ ಪುಟಾಣಿಗಳಿಂದ ವೃಂದಗಾನ.
* ಬೆಳದಿಂಗಳು ಹೊಳೆದಾಗ - ಶೇಷಪ್ರಸಾದ ಚಿಕ್ಕತ್ತೂರ್ ಮತ್ತು ಶಾಂತಲಾ ಬಂಡಿ ಅವರಿಂದ ಸಂಗೀತ ಮತ್ತು ಸಾಹಿತ್ಯ ರಂಜನೆ.
* ಹನಿ ಹನಿ ಇಬ್ಬನಿ - ಉಷಾ ಹೆಬ್ಬಾರ್ ಅವರ ನಿರ್ದೇಶನದಲ್ಲಿ ಮಕ್ಕಳಿಂದ ನರ್ತನ.
* ಕರುನಾಡ ಅಂದ - ನೈನಾ ಶಾಸ್ತ್ರೀ ಮತ್ತು ತಂಡದಿಂದ ನೃತ್ಯ ಕಾರ್ಯಕ್ರಮ.
* ನೃತ್ಯ ಸಂಭ್ರಮ - ಸ್ಮರಣ ಗ್ರೂಪ್ನಿಂದ ನರ್ತನ.
* ಮೀನಾಕ್ಷಿ ಮದುವೆ ಪ್ರಸಂಗ - ರುದ್ರಪ್ರಸಾದ್ ಎಸ್. ನಿರ್ದೇಶನದಲ್ಲಿ ಹಾಸ್ಯ ನಾಟಕ.
* ಸುಗಮ ಸಂಗೀತ - ಬಿ.ಆರ್. ಛಾಯಾ ಅವರಿಂದ ಸಂಗೀತ ರಂಜನೆ.
* ಹಾಸ್ಯ ಸಂಜೆ - ಸುಧಾ ಬರಗೂರು ಅವರಿಂದ ಹಾಸ್ಯ ಸೌರಭ.
* ತಿರುಗೇಟು - ವಲ್ಲೀಶ ಶಾಸ್ತ್ರೀ ಮತ್ತು ತಂಡದಿಂದ ನಾಟಕ.
ಕಾರ್ಯಕ್ರಮ ನಡೆಯುವ ಸ್ಥಳ : Spangenberg Theater, 780 Arastradero Road, Palo Alto, CA 94306
ಸಮಯ : ಮಧ್ಯಾಹ್ನ 3.30
ಟಿಕೆಟ್ : ಸದಸ್ಯರಿಗೆ 7 ಡಾಲರ್. ಸದಸ್ಯರಲ್ಲದವರಿಗೆ 15 ಡಾಲರ್. 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪ್ರವೇಶ ಉಚಿತ. ಟಿಕೆಟ್ ಪಡೆಯುವಾಗ ನೂಕುನುಗ್ಗಲು ಉಂಟಾಗದಂತೆ ಆನ್ಲೈನ್ ಮುಖಾಂತರ ಟಿಕೆಟ್ ಕೊಳ್ಳಬಹುದು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications