ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ (ಭಾಗ 2)

ಜಯತೀರ್ಥ : ಹೌದು, ಸತ್ಯವಾದ ಮಾತು. ಪಂಡಿತ್ ಅರ್ಜುನ್ಸಾ ನಾಕೋಡ್ ಅವರು ನನ್ನ ಸಂಗೀತಕ್ಕೆ ಭದ್ರ ಬುನಾದಿ ಹಾಕಿದವರು ಎಂಬುದು ಸತ್ಯವಾದ ಮಾತು. ಸ್ವಲ್ಪ ಸ್ವಲ್ಪ ಕಲಿತಿದ್ದ ನಾನು ಅವರನ್ನು ಕಲಿಸಲು ಕೇಳಿದಾಗ, ಮೊದಮೊದಲು ಅವರು ಒಪ್ಪಲಿಲ್ಲ. ಅವರಿಗೆ ಧ್ವನಿಯ ತೊಂದರೆ ಇದ್ದುದರಿಂದ ಅವರು ಹೆಚ್ಚಿಗೆ ಶ್ರಮ ಮಾಡಿಕೊಳ್ಳುತ್ತಿರಲಿಲ್ಲ. ನಂತರ ನನ್ನ ಹಾಡು ಕೇಳಿದ ಮೇಲೆ ಅವರಿಗೆ ನನ್ನಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳ ಬಗ್ಗೆ ನಂಬಿಕೆ ಹುಟ್ಟಿತು ಎನಿಸುತ್ತದೆ. ಅವರು ಒಪ್ಪಿದರು. ನಂತರ ನಿರಂತರವಾಗಿ ಹತ್ತು ವರ್ಷಗಳವರೆಗೆ ಅವರ ಹತ್ತಿರ ನನ್ನ ಅಭ್ಯಾಸ ಮುಂದುವರೆಯಿತು. ಯಾವುದೇ ಬಗೆಯ ಅಪೇಕ್ಷೆಗಳಿಲ್ಲದೇ ನನಗೆ ಅವರು ವಿದ್ಯೆಯನ್ನು ಧಾರೆಯೆರೆದರು. ಅವರಿಂದ ನಾನು ಕಲಿತದ್ದು ಇವತ್ತಿನ ನನ್ನ ಸಂಗೀತದ ಮೂಲ ತಳಹದಿ ಎನ್ನಬಹುದು.
ನಂತರ ವಯಸ್ಸಾದಂತೆ ಅವರ ಧ್ವನಿಯ ತೊಂದರೆ ಇನ್ನೂ ಹೆಚ್ಚಾಗತೊಡಗಿತು. ಅದರಿಂದ ನನ್ನ ಅಭ್ಯಾಸಕ್ಕೆ ವ್ಯತ್ಯಯ ಬರತೊಡಗಿತು. ಅದರಿಂದ ನಾನು ಗುರುಗಳ ಸಲಹೆಯಂತೆ ಮುಂದಿನದನ್ನು ಅಭ್ಯಸಿಸಲು, ಭಾರತರತ್ನ ಭೀಮಸೇನ್ ಜೋಶಿಯವರ ಶಿಷ್ಯ ಪಂಡಿತ್ ಶ್ರೀಪತಿ ಪಾಡೇಗಾರ್ ಅವರನ್ನು ಸಂಪರ್ಕಿಸಿ, ಗುರುಗಳ ಧ್ವನಿಯ ಪರಿಸ್ಥಿತಿಯನ್ನು ವಿವರಿಸಿ, ಅವರನ್ನು ನನಗೆ ಮುಂದಿನ ಮಾರ್ಗದರ್ಶನ ಮಾಡಲು ಕೇಳಿಕೊಂಡೆ. ಅವರು ಒಪ್ಪಿಕೊಂಡರು ಮತ್ತು ಮುಂದೆ ಹದಿನೈದು ವರ್ಷಗಳವರೆಗೆ ಕಿರಾಣಾ ಘರಾಣಾದ ಪದ್ಧತಿಯ ಸೂಕ್ಷ್ಮಗಳನ್ನು ಮತ್ತು ರಾಗ ವಿಸ್ತಾರದ ಶೈಲಿಯನ್ನು ವಿವರವಾಗಿ ಹೇಳಿಕೊಟ್ಟರು. ಬೇರೆ ಕಲಾವಿದರುಗಳನ್ನು ಕೇಳಿ ಅವರಲ್ಲಿಯ ಒಳ್ಳೆಯ ಅಂಶಗಳನ್ನು ಹೇಗೆ ನಮ್ಮ ಹಾಡುಗಾರಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಒಟ್ಟಿನಲ್ಲಿ ಒಬ್ಬ ಒಳ್ಳೆಯ ಸಂಗೀತಗಾರನಾಗಬೇಕು ಎಂಬುದನ್ನು ಬಹಳ ಮುತುವರ್ಜಿಯಿಂದ ಕಲಿಸಿದರು.
ಪ್ರಶ್ನೆ : ಕಿರಾಣಾ ಘರಾಣ ಸಂಗೀತಲೋಕದಲ್ಲಿ ಬಹಳ ಪ್ರಖ್ಯಾತವಾಗಿದೆ. ಅದರ ವೈಶಿಷ್ಟ್ಯವೇನು ಎಂಬುದನ್ನು ತಿಳಿಸುತ್ತೀರಾ?
ಜಯತೀರ್ಥ : ಎಲ್ಲ ಘರಾಣೆಗಳದ್ದೂ ಅವುಗಳದೇ ಆದ ಸುಂದರ ವೈಶಿಷ್ಟ್ಯಗಳಿವೆ. ಹಾಗೆಯೇ ಕಿರಾಣಾ ಘರಾಣಾದ್ದೂ ಸಹ. ಸ್ವರಪ್ರಧಾನ ಗಾಯಕಿ ನಮ್ಮದು, ಹಾಡುಗಾರಿಕೆಯಲ್ಲಿ ಭಾವನೆಗಳನ್ನು ಎತ್ತಿ ತೋರಿಸುವ ಪದ್ಧತಿಯನ್ನು ಹಾಕಿ ಕೊಟ್ಟವರು ಘರಾಣಾದ ಮೂಲ ಪ್ರವರ್ತಕ ಉಸ್ತಾದ್ ಅಬ್ದುಲ್ ಕರೀಮ್ ಖಾನರು. ಅವರು ಮೈಸೂರು ಆಸ್ಥಾನದಲ್ಲಿ ಕಚೇರಿ ಕೊಡಲು ಹೋಗುತ್ತಿದ್ದಾಗ ಅಲ್ಲಿನ ಕರ್ನಾಟಕ ಸಂಗೀತದ ಪಂಡಿತರಿಂದ ಪ್ರಭಾವಿತರಾದರು. ಕರ್ನಾಟಕ ಸಂಗೀತದ ಭಕ್ತಿಭಾವಗಳನ್ನು ತಮ್ಮ ಹಿಂದುಸ್ತಾನಿ ಪದ್ಧತಿಯಲ್ಲಿ ಅಳವಡಿಸಿದರು. ನಮ್ಮ ಹಾಡುಗಾರಿಕೆಯಲ್ಲಿ ಒಂದೊಂದೇ ಸ್ವರಗಳನ್ನೆತ್ತಿಕೊಂಡು ಅವುಗಳ ಬಗ್ಗೆ ವಿಸ್ತಾರಮಾಡಿ, ಯೋಚಿಸಿ ಭಾವವನ್ನು ಸ್ಪಷ್ಟಗೊಳಿಸಿ ಹಾಡುವ ಕಲೆ ಕಿರಾಣಾ ಘರಾಣಾದ ಮೂಲ ಶೈಲಿ. ನಮ್ಮ ಗಾಯನ ಮೀಂಡ್ಯುಕ್ತ ಗಾಯನ. ಸ್ವರಗಳಲ್ಲಿ ಜೀವ ತುಂಬುವದು ನಮ್ಮ ಮುಖ್ಯ ಉದ್ದೇಶ. ಅದರಿಂದಲೇ ನಮ್ಮದು ಸ್ವರ ಪ್ರಧಾನ ಗಾಯಕಿ ಎನಿಸಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications