ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ

ಇತ್ತೀಚೆಗೆ ಸಿಂಗಪುರದ ಪ್ರಸಿದ್ಧ ಎಸ್ಪ್ಲನೇಡ್ ಸಭಾಂಗಣದಲ್ಲಿ, Engage Groupನವರು "Vocal Traditions of India" ಕಾರ್ಯಕ್ರಮದ ಸರಣಿಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ ನೀಡಿದ ಜಯತೀರ್ಥರನ್ನು ಕಾರ್ಯಕ್ರಮದ ನಂತರ ಸಂದರ್ಶನ ಮಾಡುವ ಅವಕಾಶ ಒದಗಿ ಬಂದಿತ್ತು.
ಪ್ರಶ್ನೆ : ನಮಸ್ಕಾರ ಜಯತೀರ್ಥ ಅವರೇ, ನಮಗೆ ನಿಮ್ಮ ಸಂಗೀತ ಜೀವನ ಯಾವಾಗ ಮತ್ತು ಹೇಗೆ ಆರಂಭವಾಯಿತು ಎಂದು ತಿಳಿಯುವ ಕುತೂಹಲ. ಅದರ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?
ಜಯತೀರ್ಥ : ಬಹಳ ಸಣ್ಣವನಿದ್ದಾಗಿನಿಂದ ನಾನು ನಮ್ಮ ತಾಯಿ ಹಾಡುತ್ತಿದ್ದ ದಾಸರ ಪದಗಳನ್ನು ಕೇಳುತ್ತಿದ್ದೆ. ಅದರಿಂದ ನನಗೆ ಹಾಡುವದರ ಬಗ್ಗೆ ಆಸಕ್ತಿ ಬೆಳೆಯಿತು. ಅಲ್ಲದೇ ರೇಡಿಯೋದಲ್ಲಿ ಆಗಾಗ್ಗೆ ಕೇಳುತ್ತಿದ್ದ ಭೀಮಸೇನ್ ಜೋಶಿಯವರ ದಾಸರ ಪದಗಳನ್ನು ಕೇಳುತ್ತಾ, ನನಗೆ ನಾನೂ ಕೂಡ ಹಾಗೆಯೇ ಹಾಡಲು ಕಲಿಯಬೇಕು ಎಂದು ಅನ್ನಿಸತೊಡಗಿತು. ನಮ್ಮ ತಾಯಿ ನನ್ನನ್ನು ಹುಬ್ಬಳ್ಳಿಯಲ್ಲಿ ಎಲ್ಲಿಯೇ ಶಾಸ್ತ್ರೀಯ ಕಾರ್ಯಕ್ರಮ ನಡೆದರೂ ಕರೆದುಕೊಂಡು ಹೋಗುತ್ತಿದ್ದರು. ಆಗ ನನಗೆ ಏನೇನೂ ತಿಳಿಯುತ್ತಿರಲಿಲ್ಲ. ಆದರೂ ನನ್ನ ಕಿವಿಗೆ ಬೀಳಲಿ, ನನಗೆ ಅದರಲ್ಲಿ ಆಸಕ್ತಿ ಹುಟ್ಟಲಿ ಎಂಬ ಉದ್ದೇಶದಿಂದ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಕುಂದಗೋಳದ ಸವಾಯಿ ಗಂಧರ್ವ ಸಂಗೀತ ಮಹೋತ್ಸವಕ್ಕೆ ನನ್ನನ್ನು ಯಾವಾಗಲೂ ಕರೆದೊಯ್ಯುತ್ತಿದ್ದರು. ಅಲ್ಲಿ ಅಹೋರಾತ್ರಿ ನಡೆಯುತ್ತಿದ್ದ ಎಲ್ಲ ದಿಗ್ಗಜರ ಕಚೇರಿಗಳನ್ನು ಸಮಯದ ಅರಿವಿಲ್ಲದೇ ಕುಳಿತು ಕೇಳುತ್ತಿದ್ದೆ. ಹೀಗೆಯೇ ನನಗೆ ಸಂಗೀತದ ಗೀಳು ಹುಟ್ಟಿಕೊಂಡಿತು. ಹಾಗಾಗಿ ನನ್ನ ತಾಯಿಯೇ ನನಗೆ ಸಂಗೀತದ ಮೊದಲ ಗುರು ಎನ್ನಬೇಕು.
ಪ್ರಶ್ನೆ : ನಿಮ್ಮಲ್ಲಿಯ ಪ್ರ್ರತಿಭೆಯನ್ನು ಮೊದಲು ಗುರುತಿಸಿ ನಿಮ್ಮನ್ನು ಹಾಡು ಕಲಿಯಲು ಪ್ರೇರೇಪಿಸಿದವರು ಯಾರು?
ಜಯತೀರ್ಥ : ಭೀಮಸೇನ್ ಜೊಶಿಯವರ ದಾಸರ ಪದಗಳನ್ನು ಕೇಳಿ ನಾನು ಅವುಗಳ ಅನುಕರಣೆ ಮಾಡುತ್ತಾ ಇದ್ದೆ. ಅಲ್ಲಲ್ಲಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದೆ. ಕೇಳಿದ ಅನೇಕರು "ಹುಡುಗ ಚೆನ್ನಾಗಿ ಹಾಡುತ್ತಾನೆ, ಅವನನ್ನು ಹೆಚ್ಚಿಗೆ ಕಲಿಯಲು ಕಳಿಸಿ" ಎಂದು ನನ್ನ ತಾಯಿಯವರಿಗೆ ಹೇಳುತ್ತಿದ್ದರು. ಅದರಿಂದ ಪ್ರೋತ್ಸಾಹಿತರಾದ ನನ್ನ ತಾಯಿ ನನ್ನನ್ನು ನಮ್ಮ ಮನೆ ಹತ್ತಿರ ಇರುವ ಬ್ಯಾಂಕರ್ ಮಾಸ್ತರ್ ಎಂಬ ಸಂಗೀತದ ಗುರುಗಳ ಹತ್ತಿರ ಕಲಿಯಲು ಕಳಿಸಿದರು. ಅವರ ಹತ್ತಿರ ನಾನು ಒಂದು ವರ್ಷ ಸಂಗೀತದ ಮೊದಲ ಪಾಠಗಳನ್ನು ಕಲಿತೆ. ನಂತರ ನಾನು ಪಂಡಿತ್ ಸುರೇಂದ್ರಸಾ ನಾಕೋಡ್ ಅವರ ಹತ್ತಿರ ಮೂಲ ರಾಗಗಳಾದ ದುರ್ಗಾ, ಭೈರವಿ, ಭೂಪಾಲಿ ಮುಂತಾದವುಗಳನ್ನು ಮತ್ತು "ಛೋಟಾ ಖಯಾಲ್"ಗಳನ್ನು ಕಲಿತೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications