ಸಿಂಗನ್ನಡಿಗರ ಪ್ರತಿಭಾಕನ್ನಡಿ 'ಸಿಂಚನ' ಮಾಸ ಪತ್ರಿಕೆ

ಸಿಂಗನ್ನಡಿಗರಿಗೆ ಒಂದಿಲ್ಲೊಂದು ನವೀನ ಕಾರ್ಯಕ್ರಮಗಳನ್ನು, ಕಲೆ ಹಾಗು ಸಾಹಿತ್ಯ ಪ್ರತಿಭೆ ಪ್ರದರ್ಶಿಸಲು ವೇದಿಕೆ ಮತ್ತು ಅವಕಾಶವನ್ನು ಕೊಡುತ್ತಲೇ ಬಂದಿದೆ ಕನ್ನಡ ಸಂಘ(ಸಿಂಗಪುರ). ಈ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದೇ "ಸಿಂಚನ" ಮಾಸ ಪತ್ರಿಕೆ. ಸಿಂಗನ್ನಡಿಗರೆಲ್ಲರನ್ನು ಸಮೀಪಕ್ಕೆ ತರುವ ಒಂದು ಶ್ಲಾಘನೀಯ ಪ್ರಯತ್ನ "ಸಿಂಚನ". ಆಗಸ್ಟ್ 2011ರಲ್ಲಿ ಪಾದಾರ್ಪಣೆ ಮಾಡಿದ "ಸಿಂಚನ"ವು ಅಲ್ಲಿಂದೀಚೆಗೆ ತಿಂಗಳಿಗೊಂದರಂತೆ ಸಂಪುಟ 1ರಲ್ಲಿ 5 ಸಂಚಿಕೆಗಳನ್ನು ಯಶಸ್ವಿಯಾಗಿ ಹೊರತಂದು ಇದೀಗ ಎರಡನೆ ಸಂಪುಟಕ್ಕೆ ಕಾಲಿಟ್ಟಿದೆ.
ಅನೇಕ ಉಪಯುಕ್ತ ಕಿರು ಲೇಖನಗಳು, ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಸಚಿತ್ರ ವರದಿ (ಮುನ್ನೊಟ-ಹಿನ್ನೋಟ), ಪದ-ಪಂದ್ಯ, ಚಿಂತನ ಚಾವಡಿ ಮತ್ತು ಸ್ಥಿರ ಶೀರ್ಷಿಕೆಗಳನ್ನು ಒಳಗೊಂಡು ಸಿಂಗನ್ನಡಿಗರಿಗೆ ಸಿರಿಗನ್ನಡದ ಶ್ರೀಗಂಧದ ಕಂಪನ್ನು ಅಮೋಘವಾಗಿ ಸೂಸುತ್ತಾ ಬರುತ್ತಿದೆ. ಸ್ಥಳೀಯ ಲೇಖಕರಿಗೆ, ಮಕ್ಕಳನ್ನು ಸೇರಿ, ತಮ್ಮ ಬರಹದ ಚಾತುರ್ಯವನ್ನು ಅನಾವರಣಗೊಳಿಸಲು ಈ ಮಾಸಪತ್ರಿಕೆ ಒಂದು ಉತ್ತಮ ವೇದಿಕೆಯೆಂದರೆ ಅತಿಶಯವೇನಲ್ಲ. "ಸಿಂಚನ"ಕ್ಕೆ ಸಿಂಗನ್ನಡಿಗರಿಂದ ಬಹಳ ಉತ್ತೇಜಕಕರ ಪ್ರತಿಕ್ರಿಯೆ, ಆದರ, ಆಧಾರ ಮತ್ತು ಪ್ರೋತ್ಸಾಹ ಮೊದಲ ಸಂಚಿಕೆಯಿಂದಲೇ ದೊರಕಿರುವುದು ಕನ್ನಡ ಸಂಘ (ಸಿಂಗಪುರ)ದ ಸೌಭಾಗ್ಯ.
"ಸಿಂಚನ"ದ ಈ ಸಾಫಲ್ಯಕ್ಕೆ ಕಾರಣ ಅದರ ಸಶಕ್ತವಾದ ಸಂಪಾದಕ ಸಮಿತಿ. ಸುರೇಶ ಭಟ್ಟ, ಗಿರೀಶ್ ಜಮದಗ್ನಿ ಮತ್ತು ವಸಂತ್ ಕುಲಕರ್ಣಿಯವರ ಸಕ್ರಿಯ ಪ್ರಯತ್ನ; ಸಂಘದ ಕಾರ್ಯಕಾರೀ ಸಮಿತಿಯ ಸಲಹೆ-ಸಹಕಾರ ಹಾಗೂ, ಸ್ಥಳೀಯ ನುರಿತ ಉದಯೋನ್ಮುಖ ಲೇಖಕರ ಲೇಖನ ಹಾಗೂ ಓದುಗರ ಪ್ರೋತ್ಸಾಹದಿಂದ ಪ್ರತಿ ತಿಂಗಳು ಸರಳ-ಸುಂದರ ವಿನ್ಯಾಸ ಮತ್ತು ನವನವೀನ ವಿಚಾರಗಳೊಂದಿಗೆ ಸಿಂಗನ್ನಡಿಗರಿಗೆ ಕನ್ನಡದ ಕಂಪನ್ನು ಸಿಂಪಡಿಸುತ್ತಾ, ಮುಂದಿನ ಸಂಚಿಕೆಗೆ ಕುತೂಹಲದಿಂದ ಎದುರುನೋಡಿಸುತ್ತಾ ಹೊಸ ದಿಗಂತದತ್ತ ಸಾಗುತ್ತಿದೆ ಕನ್ನಡ ಸಂಘ (ಸಿಂಗಪುರ)ದ ಈ ವರ್ಣರಂಜಿತ "ಸಿಂಚನ".
"ಸಿಂಚನ"ವನ್ನು ಓದಲು ಈ ಅಂತರ್ಜಾಲದ-ತಾಣದಲ್ಲಿ ವಿಹರಿಸಿ: ಈ ಮಾಸಪತ್ರಿಕೆಯನ್ನು ಓದಿದ ಮೇಲೆ ನಿಮ್ಮ ಅನಿಸಿಕೆಗಳನ್ನುಗೆ ಬರೆದು ತಿಳಿಸಿ. ಪ್ರತಿ-ತಿಂಗಳು "ಸಿಂಚನ"ದ ಇ-ಪ್ರತಿ ಹಾಗೂ ಕನ್ನಡ ಸಂಘದ ಇನ್ನಿತರ ಇ-ಅಂಚೆ ನಿಮ್ಮ ಇ-ಮೈಲ್ಗೆ ತಲುಪಲು ಸಂಘದ ಅಂತರ್ಜಾಲ-ತಾಣದಲ್ಲಿ ನಿಮ್ಮ ಇ-ಮೈಲ್ ವಿಳಾಸವನ್ನು ನೋಂದಾಯಿಸಿ.
-ರಾಮನಾಥ್ ಹೆಚ್. ಎಸ್.
ಸಹ ಕಾರ್ಯದರ್ಶಿ
ಕನ್ನಡ ಸಂಘ (ಸಿಂಗಪುರ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications