ಸಿಂಗನ್ನಡಿಗರ ಪ್ರತಿಭಾಕನ್ನಡಿ 'ಸಿಂಚನ' ಮಾಸ ಪತ್ರಿಕೆ

ಸಿಂಗನ್ನಡಿಗರಿಗೆ ಒಂದಿಲ್ಲೊಂದು ನವೀನ ಕಾರ್ಯಕ್ರಮಗಳನ್ನು, ಕಲೆ ಹಾಗು ಸಾಹಿತ್ಯ ಪ್ರತಿಭೆ ಪ್ರದರ್ಶಿಸಲು ವೇದಿಕೆ ಮತ್ತು ಅವಕಾಶವನ್ನು ಕೊಡುತ್ತಲೇ ಬಂದಿದೆ ಕನ್ನಡ ಸಂಘ(ಸಿಂಗಪುರ). ಈ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದೇ "ಸಿಂಚನ" ಮಾಸ ಪತ್ರಿಕೆ. ಸಿಂಗನ್ನಡಿಗರೆಲ್ಲರನ್ನು ಸಮೀಪಕ್ಕೆ ತರುವ ಒಂದು ಶ್ಲಾಘನೀಯ ಪ್ರಯತ್ನ "ಸಿಂಚನ". ಆಗಸ್ಟ್ 2011ರಲ್ಲಿ ಪಾದಾರ್ಪಣೆ ಮಾಡಿದ "ಸಿಂಚನ"ವು ಅಲ್ಲಿಂದೀಚೆಗೆ ತಿಂಗಳಿಗೊಂದರಂತೆ ಸಂಪುಟ 1ರಲ್ಲಿ 5 ಸಂಚಿಕೆಗಳನ್ನು ಯಶಸ್ವಿಯಾಗಿ ಹೊರತಂದು ಇದೀಗ ಎರಡನೆ ಸಂಪುಟಕ್ಕೆ ಕಾಲಿಟ್ಟಿದೆ.
ಅನೇಕ ಉಪಯುಕ್ತ ಕಿರು ಲೇಖನಗಳು, ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಸಚಿತ್ರ ವರದಿ (ಮುನ್ನೊಟ-ಹಿನ್ನೋಟ), ಪದ-ಪಂದ್ಯ, ಚಿಂತನ ಚಾವಡಿ ಮತ್ತು ಸ್ಥಿರ ಶೀರ್ಷಿಕೆಗಳನ್ನು ಒಳಗೊಂಡು ಸಿಂಗನ್ನಡಿಗರಿಗೆ ಸಿರಿಗನ್ನಡದ ಶ್ರೀಗಂಧದ ಕಂಪನ್ನು ಅಮೋಘವಾಗಿ ಸೂಸುತ್ತಾ ಬರುತ್ತಿದೆ. ಸ್ಥಳೀಯ ಲೇಖಕರಿಗೆ, ಮಕ್ಕಳನ್ನು ಸೇರಿ, ತಮ್ಮ ಬರಹದ ಚಾತುರ್ಯವನ್ನು ಅನಾವರಣಗೊಳಿಸಲು ಈ ಮಾಸಪತ್ರಿಕೆ ಒಂದು ಉತ್ತಮ ವೇದಿಕೆಯೆಂದರೆ ಅತಿಶಯವೇನಲ್ಲ. "ಸಿಂಚನ"ಕ್ಕೆ ಸಿಂಗನ್ನಡಿಗರಿಂದ ಬಹಳ ಉತ್ತೇಜಕಕರ ಪ್ರತಿಕ್ರಿಯೆ, ಆದರ, ಆಧಾರ ಮತ್ತು ಪ್ರೋತ್ಸಾಹ ಮೊದಲ ಸಂಚಿಕೆಯಿಂದಲೇ ದೊರಕಿರುವುದು ಕನ್ನಡ ಸಂಘ (ಸಿಂಗಪುರ)ದ ಸೌಭಾಗ್ಯ.
"ಸಿಂಚನ"ದ ಈ ಸಾಫಲ್ಯಕ್ಕೆ ಕಾರಣ ಅದರ ಸಶಕ್ತವಾದ ಸಂಪಾದಕ ಸಮಿತಿ. ಸುರೇಶ ಭಟ್ಟ, ಗಿರೀಶ್ ಜಮದಗ್ನಿ ಮತ್ತು ವಸಂತ್ ಕುಲಕರ್ಣಿಯವರ ಸಕ್ರಿಯ ಪ್ರಯತ್ನ; ಸಂಘದ ಕಾರ್ಯಕಾರೀ ಸಮಿತಿಯ ಸಲಹೆ-ಸಹಕಾರ ಹಾಗೂ, ಸ್ಥಳೀಯ ನುರಿತ ಉದಯೋನ್ಮುಖ ಲೇಖಕರ ಲೇಖನ ಹಾಗೂ ಓದುಗರ ಪ್ರೋತ್ಸಾಹದಿಂದ ಪ್ರತಿ ತಿಂಗಳು ಸರಳ-ಸುಂದರ ವಿನ್ಯಾಸ ಮತ್ತು ನವನವೀನ ವಿಚಾರಗಳೊಂದಿಗೆ ಸಿಂಗನ್ನಡಿಗರಿಗೆ ಕನ್ನಡದ ಕಂಪನ್ನು ಸಿಂಪಡಿಸುತ್ತಾ, ಮುಂದಿನ ಸಂಚಿಕೆಗೆ ಕುತೂಹಲದಿಂದ ಎದುರುನೋಡಿಸುತ್ತಾ ಹೊಸ ದಿಗಂತದತ್ತ ಸಾಗುತ್ತಿದೆ ಕನ್ನಡ ಸಂಘ (ಸಿಂಗಪುರ)ದ ಈ ವರ್ಣರಂಜಿತ "ಸಿಂಚನ".
"ಸಿಂಚನ"ವನ್ನು ಓದಲು ಈ ಅಂತರ್ಜಾಲದ-ತಾಣದಲ್ಲಿ ವಿಹರಿಸಿ: ಈ ಮಾಸಪತ್ರಿಕೆಯನ್ನು ಓದಿದ ಮೇಲೆ ನಿಮ್ಮ ಅನಿಸಿಕೆಗಳನ್ನುಗೆ ಬರೆದು ತಿಳಿಸಿ. ಪ್ರತಿ-ತಿಂಗಳು "ಸಿಂಚನ"ದ ಇ-ಪ್ರತಿ ಹಾಗೂ ಕನ್ನಡ ಸಂಘದ ಇನ್ನಿತರ ಇ-ಅಂಚೆ ನಿಮ್ಮ ಇ-ಮೈಲ್ಗೆ ತಲುಪಲು ಸಂಘದ ಅಂತರ್ಜಾಲ-ತಾಣದಲ್ಲಿ ನಿಮ್ಮ ಇ-ಮೈಲ್ ವಿಳಾಸವನ್ನು ನೋಂದಾಯಿಸಿ.
-ರಾಮನಾಥ್ ಹೆಚ್. ಎಸ್.
ಸಹ ಕಾರ್ಯದರ್ಶಿ
ಕನ್ನಡ ಸಂಘ (ಸಿಂಗಪುರ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications