ಜೈಲಿನಲ್ಲಿದ್ದೇ 24 ಪದವಿ ಗಳಿಸಿದ ಎನ್ಆರ್ಐ ವೈದ್ಯ

ಅಶ್ಲೀಲ ಸಾಹಿತ್ಯವನ್ನು ಭಾರತಕ್ಕೆ ಕಳಿಸಿದ್ದಕ್ಕಾಗಿ ಹತ್ತು ವರ್ಷ ಜೈಲುಶಿಕ್ಷೆಗೆ ಗುರಿಯಾದ ಅಮೆರಿಕದ ವೈದ್ಯ ಡಾ. ಭಾನು ಪಟೇಲ್ ಸಾಬರಮತಿ ಬಂದೀಖಾನೆಯಲ್ಲಿ ರಾಗಿ ಹಿಟ್ಟು ಬೀಸುತ್ತ ಕೂರಲಿಲ್ಲ. ಕಲಿತ ವಿದ್ಯೆ ಯಾವತ್ತೂ ನಷ್ಟವಾಗುವುದಿಲ್ಲ ಎಂಬುದನ್ನು ಅರಿತಿದ್ದ ಪಟೇಲ್ ಜೈಲಿನಲ್ಲಿಯೇ ಕುಳಿತು ಪುಸ್ತಕಗಳನ್ನೆಲ್ಲ ಅರೆದು ಕುಡಿದು 24 ಡಿಗ್ರಿಗಳನ್ನು ತನ್ನದಾಗಿಸಿಕೊಂಡ.
1998ರಲ್ಲಿ ಅಮೆರಿಕನ್ ಮೆಡಿಕಲ್ ಕೌನ್ಸಿಲ್ ಪರೀಕ್ಷೆ ಬರೆದು ಪಾಸಾಗಿ ವೈದ್ಯವೃತ್ತಿ ಕೈಗೊಂಡಿದ್ದ ಪಟೇಲನಿಗೆ ದುಡ್ಡನ್ನು ವೇಗವಾಗಿ ಗಳಿಸಬೇಕೆಂಬ ಹುಚ್ಚು ಹಿಡಿದು ಅಶ್ಲೀಲ ಸಾಹಿತ್ಯ ಬರೆದು ಭಾರತಕ್ಕೆ ರವಾನಿಸಲು ಪ್ರಾರಂಭಿಸಿದ. ಈ ಅಪರಾಧಕ್ಕಾಗಿ 2003ರಲ್ಲಿ ಅಹ್ಮದಾಬಾದ್ ಪೊಲೀಸರಿಂದ ಬಂಧಿತನಾದ.
ಕೈಯಲ್ಲಿ ಪಾಟಿ ಹಿಡಿದು ಫೋಟೋ ತೆಗೆಸಿಕೊಂಡ ನಂತರ, ಬಿಳಿ ಅಂಗಿ ಚಡ್ಡಿ ಧರಿಸಿದವ IGNOU ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾನಿಯಕ್ಕೆ ಅರ್ಜಿ ಗುಜರಾಯಿಸಲು ಪ್ರಾರಂಭಿಸಿದ. ಕಾಲಕ್ರಮೇಣ, ಎಂಬಿಎ, ಎಮ್.ಕಾಂನಲ್ಲಿ ಸ್ನಾತಕೋತ್ತರ ಪದವಿ, ಹಣಕಾಸು ನಿರ್ವಹಣೆ, ಕಂಪ್ಯೂಟಿಂಗ್, ಮಾನವ ಹಕ್ಕು, ಗಾಂಧಿ ಆದರ್ಶಗಳು, ಯೋಗ, ಆಯಾತ/ನಿರ್ಯಾತ, ಜನರಲ್ ಎಲೆಕ್ಟ್ರಾನಿಕ್ಸ್, ಉದ್ಯಮ, ಫುಡ್ ಮತ್ತು ನ್ಯೂಟ್ರಿಷನ್ ವಿಭಾಗಗಳಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ ಪಟೇಲ್.
ತನ್ನ ಈ ಶ್ರೇಯಕ್ಕೆ ಸ್ಫೂರ್ತಿ ಸಾಬರಮತಿ ಜೈಲಿನ ಮಹಾತ್ಮಾ ಗಾಂಧಿ ಬಂದೀಖಾನೆಯೇ ಎಂದು ಭಾನು ಪಟೇಲ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಲ್ಲಯವರೆಗೆ ಅವರು ಎಂಟು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಉಳಿದ ಜೀವನವನ್ನು ಗಾಂಧೀಜಿ ಆದರ್ಶವನ್ನು ಪಾಲಿಸುತ್ತ ಬದುಕಬೇಕೆಂದು ಬಯಸಿದ್ದಾರೆ. [ಜೈಲು]
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications