ಒಂದಕ್ಕಿಂತ ಒಂದು ಕ್ರಿಯೇಟಿವ್ ಐಡಿಯಾ

ಯುಗಾದಿಯಂದು ಬೇವುಬೆಲ್ಲ ಮಾಡಲಿಕ್ಕೆ ಬೇವಿನಸೊಪ್ಪು ಸಿಗೋದಿಲ್ಲಾಂತ ಬೆಲ್ಲದ ಜತೆ ಮೆಂತ್ಯದ ಕಾಳುಗಳನ್ನು ಕುಟ್ಟಿ ಹದವಾದ ಸಿಹಿ-ಕಹಿ ಮಿಶ್ರಣ ಮಾಡ್ತಾರಂತೆ ಷಿಕಾಗೊದಲ್ಲಿರುವ ಅನುಪಮಾ ಮಂಗಳವೇಢೆ. ಅವರ ಲಾಜಿಕ್ ಏನೆಂದರೆ ಬೇವಾದರೇನು ಮೆಂತ್ಯವಾದರೇನು ರುಚಿಯಲ್ಲೆರಡೂ ಕಹಿಯಲ್ಲವೇನು? ಎಂದು. ಕ್ಯಾಲಿಫೋರ್ನಿಯಾದ ಮಧುಕಾಂತ್ ಬರೆಯುತ್ತಾರೆ, ನಮ್ಮಮ್ಮ ಇಲ್ಲಿಗೆ ಬಂದಿದ್ದಾಗ ಯುಗಾದಿಯಂದು ಬೆಲ್ಲದ ಜತೆ ಹಾಗಲಕಾಯಿ ರುಬ್ಬಿ ಮಿಶ್ರಣ ತಯಾರಿಸಿದ್ದರು. ಥೇಟ್ ಬೇವುಬೆಲ್ಲ ಥರನೇ ಇತ್ತು. ಬಹುಶಃ ಬೇವಿನಕಾಯಿಗೆ ಹಾಗಲಕಾಯಿ ಸಾಕ್ಷಿ ಅನ್ನೋ ಗಾದೆ ಹುಟ್ಟಿದ್ದೇ ಹಾಗೆ ಇರಬಹುದು. ಇರಲಿ, ಬೇವಿಗೆ ಸಬ್ಸ್ಟಿಟ್ಯೂಟ್ ಆಗಿ ಮೆಂತ್ಯ ಅಥವಾ ಹಾಗಲಕಾಯಿ ಬಳಸಬಹುದಂತ ಯಾರಿಗೇ ಆದ್ರೂ ಸುಲಭದಲ್ಲೇ ಹೊಳೆಯಬಹುದು. ಅಥವಾ ನ್ಯೂಜೆರ್ಸಿಯ ವಸಂತಾ ಶಶಿ ಅವರಂತೆ ಕರಿಬೇವಿನ ಎಲೆನಾದ್ರೂ ಉಪಯೋಗಿಸಬಹುದು. ಆದರೆ ಸ್ವಿಡ್ಜರ್ಲೆಂಡ್ನಲ್ಲಿರುವ ಅಶ್ವಿನಿ ಆಶ್ರಿತ್ ಅವರ ಬೇವುಬೆಲ್ಲ ರೆಸಿಪಿ ಕೇಳಿದ್ರೆ ನೀವು ದಿಗಿಲುಗೊಳ್ಳುವುದು ಖಂಡಿತ. ಸ್ಕಿನ್ ಟ್ರೀಟ್ಮೆಂಟ್ಗಂತ ಭಾರತದಿಂದ ತಂದಿದ್ದ ಆಯುರ್ವೇದಿಕ್ ನೀಮ್ ಟ್ಯಾಬ್ಲೆಟ್ಗಳನ್ನು ಬೆಲ್ಲದೊಟ್ಟಿಗೆ ಕುಟ್ಟಿ ಪುಡಿಮಾಡಿ ಇಲ್ಲಿ ನಾವು ಯುಗಾದಿಗೆ ಬೇವುಬೆಲ್ಲ ತಯಾರಿಸಿದ್ದೇವೆ ಅಂತಾರೆ ಅವರು! ಕುವೆಂಪು ಏನಾದ್ರೂ ಇದನ್ನೆಲ್ಲ ಕೇಳಿಸಿಕೊಂಡಿದ್ದಿದ್ರೆ ಎಲ್ಲಾದರೂ ಇರು ಎಂತಾದರೂ ಇರು ಹೇಗಾದ್ರೂ ಸರಿ ಬೇವುಬೆಲ್ಲ ಮಾಡಿ ತಿನ್ನುತ್ತಿರು ಅಂತಿದ್ರೋ ಏನೋ!
ಮೇರಿಲ್ಯಾಂಡ್ನ ಶೈಲಜಾ ಗುಂಡೂರಾವ್ಗೆ ಬೇವಿನಸೊಪ್ಪಿನ ಅಲಭ್ಯತೆಯ ಸಮಸ್ಯೆ ಇಲ್ಲ. ಅವರ ಸ್ನೇಹಿತೆಯೊಬ್ಬರು ಫ್ಲೋರಿಡಾದಲ್ಲಿದ್ದಾರಂತೆ, ಅವರು ಬೇವು ಮಾವು ತುಳಸಿ ಇತ್ಯಾದಿಗಳನ್ನು ತಮ್ಮ ಮನೆಹಿತ್ತಲಲ್ಲೇ ಬೆಳೆಸಿದ್ದು ಯುಗಾದಿಗೆ ಮೊದಲೇ ಖಾಸಾಗೆಳತಿಯರಿಗೆಲ್ಲ ಕೊರಿಯರ್ನಲ್ಲಿ ಬಟವಾಡೆ ಮಾಡ್ತಾರಂತೆ. ಮಿಕ್ಕಂತೆ ಶೈಲಜಾ ಅವರ ಸಬ್ಸ್ಟಿಟ್ಯೂಟ್ ಲಿಸ್ಟ್ ಚೆನ್ನಾಗಿದೆ. ಎಳ್ಳುಬೆಲ್ಲದ ಬದಲು ಎಳ್ಳಿನ ಚಿಕ್ಕಿ, ಸಕ್ಕರೆಅಚ್ಚಿನ ಬದಲು ಚಾಕಲೇಟ್, ಕಬ್ಬಿನ ಬದಲು ಬಾಳೆಹಣ್ಣು, ಬಾಗಿನದಲ್ಲಿ ಅರಸಿನಕುಂಕುಮ ಪ್ಯಾಕೆಟ್ ಬದಲು ಬಿಂದಿಸ್ಟಿಕ್ಕರ್ಸ್, ಕನ್ನಡಿ-ಬಾಚಣಿಗೆ ಬದಲು ನೈಲ್ಪಾಲಿಶ್! ನಾರ್ತ್ ಕೆರೊಲಿನಾದಲ್ಲಿರುವ ಸವಿತಾ ರವಿಶಂಕರ್ ಬರೀತಾರೆ, ತೋರಣಕ್ಕೆ ಮಾವಿನೆಲೆ ಬದಲಿಗೆ ಮಾಗ್ನೊಲಿಯಾ ಲೀವ್ಸ್, ಕಲಶಕ್ಕೆ ವೀಳ್ಯದೆಲೆ ಬದಲಿಗೆ ಮನಿಪ್ಲಾಂಟ್ ಲೀವ್ಸ್, ಪ್ಲಾಸ್ಟಿಕ್ನ ಬಾಳೆದಿಂಡು, ಪ್ಲಾಸ್ಟಿಕ್ ಮಲ್ಲಿಗೆಮಾಲೆಗೆ ಜಾಸ್ಮಿನ್ ಸೆಂಟ್ ಸಿಂಪಡಣೆ, ಸೀರೆ-ಖಣದ ಬದಲು ಬಟ್ಟೆಯ ಶಾಪಿಂಗ್ಬ್ಯಾಗ್... ಅಷ್ಟೇಅಲ್ಲ ಪುರೋಹಿತರ ಬದಲಿಗೆ ಲ್ಯಾಪ್ಟಾಪ್. ಪುರೋಹಿತರಾದರೆ ಅವಸರ ಮಾಡ್ತಾರೆ, ಅದಕ್ಕಿಂತ ಲ್ಯಾಪ್ಟಾಪ್ ಅಥವಾ ಸಿ.ಡಿ ಪ್ಲೇಯರ್ ಆದರೆ ಬೇಕೆಂದಾಗ ನಿಲ್ಲಿಸಿ, ನೈವೇದ್ಯ ಎಲ್ಲ ಅಣಿ ಮಾಡಿ ಆಮೇಲೆ ಮತ್ತೆ ಮುಂದುವರಿಸಬಹುದು. ಇವೆಲ್ಲ ನಮಗೀಗ ಎಷ್ಟು ರೂಢಿಯಾಗಿದೆಯೆಂದರೆ ಶಾಸ್ತ್ರದಲ್ಲಿರೋದೇ ಹೀಗೆ ಎಂದುಕೊಳ್ಳಬೇಕು!
ಫ್ಲೋರಿಡಾದಲ್ಲಿರುವ ರೇಖಾ ಹೆಗಡೆ ಚೌತಿ-ನವರಾತ್ರಿಗಳಲ್ಲಿ ಕರ್ಜಿಕಾಯಿ ಮಾಡಲು ಅಕ್ಕಿಯ ಅರಳು ಸಿಗದಿದ್ದಾಗ ಜೋಳ ತಂದು ಪಾಪ್ಕಾರ್ನ್ ಮಾಡಿ ಅದರ ಹುಡಿಯಿಂದ ಸಿಹಿತಿಂಡಿ ಮಾಡ್ತಾರಂತೆ. ರಂಗೋಲಿಹುಡಿ ಸಿಗದಿದ್ದರೆ ಫ್ಲೋರಿಡಾದ ಬೀಚುಗಳಲ್ಲಿ ಧಾರಾಳವಾಗಿ ಸಿಗುವ ನುಣುಪಾದ ಬಿಳಿ ಮರಳನ್ನು ತಂದು ರಂಗೋಲಿ ಹಾಕ್ತಾರಂತೆ! ಮೇರಿಲ್ಯಾಂಡ್ನ ಮಧುಶಾಲಿನಿ ಭಾಸ್ಕರ್ ಗೌರಿಹಬ್ಬದ ಬಾಗಿನಕ್ಕೆ ಬಿದಿರಿನ ಮೊರ ಸಿಗುವುದಿಲ್ಲಾಂತ ನಾಲ್ಕೈದು ತಿಂಗಳ ಮೊದಲು ಈಸ್ಟರ್ ಹಬ್ಬದ ವೇಳೆ ಇಲ್ಲಿನ ಅಂಗಡಿಗಳಲ್ಲಿ ಸಿಗುವ ಬಣ್ಣಬಣ್ಣದ ಬೆತ್ತದಬುಟ್ಟಿಗಳನ್ನು ತಂದಿಟ್ಟು ಅದರಲ್ಲಿ ಬಾಗಿನ ಕೊಡ್ತಾರಂತೆ. ಸಂಕ್ರಾಂತಿಗೆ ಎಳ್ಳಿನ ಜತೆಗೆ ಕುಸುರಿಕಾಳು ಇರಬೇಕೆಂದು ಬೇಕಿಂಗ್ನಲ್ಲಿ ಬಳಸುವ ಸಣ್ಣಸಣ್ಣ ಬಿಳಿಬಣ್ಣದ Hershey's kisses ಚಾಕಲೇಟ್ ಬಳಸ್ತಾರಂತೆ. ದೀಪಾವಳಿಯಂದು ನೀರುತುಂಬುವ ಹಬ್ಬದ ಸಂಭ್ರಮ ಹೆಚ್ಚಿಸಲಿಕ್ಕೆಂದು ಬೇಸ್ಮೆಂಟ್ನಲ್ಲಿರುವ ವಾಟರ್ಬಾಯ್ಲರ್ಗೇ ಅರಸಿನ-ಕುಂಕುಮ ಹಚ್ಚಿ ಪೂಜೆ ಮಾಡ್ತಾರಂತೆ!
ಮುಂದೆ ಓದಿ : ತೆಂಗಿನಕಾಯಿಗೆ ಸಬ್ಸ್ಟಿಟ್ಯೂಟ್ ಜುಟ್ಟು! »
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications