Get Updates
Get notified of breaking news, exclusive insights, and must-see stories!

ಶಾರ್ಜಾದಲ್ಲಿ 'ಗಾನಗಂಗೆ' ಗೂಂಗೂಬಾಯಿಗೆ ಶ್ರದ್ಧಾಂಜಲಿ

Tribute to Gangubai Hanagal by Dhwani Pratishthana, Sharjah
ಶಾರ್ಜಾ : ಧ್ವನಿ ಪ್ರತಿಷ್ಠಾನದವತಿಯಿಂದ ಗಾನಗಂಗೆ ಗಂಗೂಬಾಯಿ ಹಾನಗಲ್ ಅವರಿಗೆ ಶಾರ್ಜಾದಲ್ಲಿ ಸಂಗೀತ ಪ್ರೇಮಿಗಳು, ಕನ್ನಡ ಲೇಖಕರು ಹಾಗೂ ಕಲಾವಿದರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು. ಇಲ್ಲಿನ ಅರಬ್ ಉಡುಪಿ ಹೋಟೆಲಿನ ಸಭಾಗೃಹದಲ್ಲಿ ನೆರವೇರಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ವಿದೂಷಿ ಸುಮಾ ನಾರಾಯಣ ಅವರು ವಹಿಸಿದ್ದರು. ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್, ಉದ್ಯಮಿ ಅಶೋಕ್ ಶೆಟ್ಟಿ ವೇದಿಕೆಯಲ್ಲಿ ಉಪಸಿತ್ಥರಿದ್ದರು.

ಪ್ರಕಾಶ್ ರಾವ್ ಪಯ್ಯಾರ್ ಅವರು ದಿವಗತ ಗಂಗೂಬಾಯಿ ಹಾನಗಲ್ ಅವರ ಕಿರು ಪರಿಚಯ ಹಾಗೂ ಪಡೆದ ಪ್ರಶಸ್ತಿಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಆಶೋಕ್ ಶೆಟ್ಟಿಯವರು ತಾವು ಗಂಗೂಬಾಯಿ ಹಾನಗಲ್ ಅವರ ಸಂಗೀತ ಕಛೇರಿಯಲ್ಲಿ ಭಾಗವಹಿಸಿ ಅಸ್ವಾದಿಸಿದ ಅನುಭವನ್ನು ಹಂಚಿಕೊಂಡು, ಅದೊಂದು ಪೂರ್ವಜನ್ಮದ ಪುಣ್ಯವೆಂದು ಬಣ್ಣಿಸಿದರು. ಅಧ್ಯಕ್ಷತೆಯನ್ನು ವಹಿಸಿದ ದುಬೈನ ಪ್ರಖ್ಯಾತ ಕನ್ನಡ ಸಂಗೀತಗಾರ್ತಿ ಸುಮಾ ನಾರಾಯಣ ಅವರು, ಸಾಮಾನ್ಯರಿಂದ ಅಸಾಮಾನ್ಯರ ಪಟ್ಟಕ್ಕೆ ಏರಿದ ಸಂಗೀತ ಸಾಮ್ರಾಜ್ಞಿಯ ಜೀವನದ ಸಿಹಿ ಕಹಿ ಅನುಭವಗಳನ್ನು ತಿಳಿಸಿ ಹಾಡೊಂದನ್ನು ಹಾಡಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಸಭಿಕರ ಪರವಾಗಿ ಶಾರ್ಜಾ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಗಣೇಶ್ ರೈ ಯು.ಎ.ಇ. ಮಣ್ಣಿನಲ್ಲಿರುವ ಸಕಲ ಕನ್ನಡಿಗರ ಪರವಾಗಿ ಹಿಂದೂಸ್ಥಾನಿ ಗಾಯನದ ವಿಶ್ವವಿಖ್ಯಾತ ಮಾತೆಗೆ ನಮನ ಸಲ್ಲಿಸಿದರು. ಸಭೆಯಲ್ಲಿ ಈ.ಟಿ.ಎ. ಗ್ರೂಪ್ ಅಫ್ ಕಂಪನಿಸ್ ನ ನಿರ್ದೇಶಕ ಬಿ.ಎಸ್.ಎಲ್.ನಾರಾಯಣ, ಕನ್ನಡ ಲೇಖಕ ಹಾಗೂ ವರದಿಗಾರರಾದ ಗೋಪಿನಾಥ್ ರಾವ್, ಅರ್ಶದ್ ಹುಸೇನ್ ಕೊಪ್ಪ, ಶೋಧನ್ ಪ್ರಸಾದ್, ಸುಜಯ್ ಬೆಂದೂರ್, ಸಂಗೀತಗಾರ್ತಿ ನಿವೇದಿತ ಅರವಿಂದ್, ಜಯಶ್ರೀ ಮಧು ಮುಂತಾದ ಗಣ್ಯರು ಉಪಸಿತ್ಥರಿದ್ದರು.

ಕಾರ್ಯಕ್ರಮವನ್ನು ಮಧುಸೂದನ್ ಅವರು ನಿರ್ವಹಿಸಿ, ಸಂಪತ್ ಶೆಟ್ಟಿ ಅವರು ವಂದಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+