ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಕನ್ನಡಿಗ ಜನಾನುರಾಗಿ ಶಂಕರ್ ಸಂಗಮೇಶ್ವರ ಇನ್ನಿಲ್ಲ

By Staff
|
Google Oneindia Kannada News

Shankar Sangameshwar
ಸಿಡ್ನಿಯ ಭಾರತೀಯರ ಪೈಕಿ, ಅದರಲ್ಲೂ ಕನ್ನಡಿಗರಿಗೆ ಅತ್ಯಂತ ಜನಪ್ರಿಯರಾಗಿದ್ದ ಮತ್ತು ಜನಾನುರಾಗಿಯಾಗಿದ್ದ ಡಾ|| ಶಂಕರ್ ಸಂಗಮೇಶ್ವರ ಅವರು ಇದೇ ಜುಲೈ 15ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 71 ವರ್ಷವಯಸ್ಸಾಗಿತ್ತು.

ಮೂಲತಃ ಭೂಗರ್ಭಶಾಸ್ತ್ರ ಪರಿಣಿತರಾದ ಶಂಕರ್ ಇಲ್ಲಿನ University of technologyಯಲ್ಲಿ ಅಧ್ಯಾಪಕರಾಗಿದ್ದು 1993ರಲ್ಲಿ ನಿವೃತ್ತರಾಗಿದ್ದರು. ಕಲೆ, ಸಂಗೀತ ಕ್ರೀಡೆ ಮುಂತಾಗಿ ನಾನಾ ಕ್ಷೇತ್ರಗಳಲ್ಲಿ ಆಸಕ್ತಿಹೊಂದಿದ್ದ ಇವರು ಮಿಕ್ಕವರಿಗೆ ಸಹಾಯ ಮಾಡುವಲ್ಲಿ ಎತ್ತಿದಕೈ ಆಗಿದ್ದರು.

ಸಿಡ್ನಿಯಲ್ಲಿರುವ ವೆಂಕಟೇಶ್ವರ ದೇವಾಲದ ನಿರ್ಮಾಣದಲ್ಲಿ ಆಸಕ್ತಿತೋರಿದ ಮೊದಲಿಗರಲ್ಲಿ ಇವರೊಬ್ಬರು. "ಎಲ್ಲರೊಳು ಒಂದಾಗಿದ್ದ" ಅವರಿಗೆ ಅಂತಿಮ ನಮನ ಸಲ್ಲಿಸಲು ನೂರಾರು ಜನ ಸೇರಿದ್ದುದು ಅವರ ಪ್ರೀತಿಪಾತ್ರತೆಗೆ ಸಾಕ್ಷಿ. ಶಂಕರ್ ಅವರು ಪತ್ನಿ ಕಾಮಿನಿ, ಪುತ್ರ ಅರ್ಜುನ್ ಅವರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.

ಸಿಡ್ನಿ ಶ್ರೀನಿವಾಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X