ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಡ್ನಿ ಕನ್ನಡಿಗ ಜನಾನುರಾಗಿ ಶಂಕರ್ ಸಂಗಮೇಶ್ವರ ಇನ್ನಿಲ್ಲ
ಮೂಲತಃ ಭೂಗರ್ಭಶಾಸ್ತ್ರ ಪರಿಣಿತರಾದ ಶಂಕರ್ ಇಲ್ಲಿನ University of technologyಯಲ್ಲಿ ಅಧ್ಯಾಪಕರಾಗಿದ್ದು 1993ರಲ್ಲಿ ನಿವೃತ್ತರಾಗಿದ್ದರು. ಕಲೆ, ಸಂಗೀತ ಕ್ರೀಡೆ ಮುಂತಾಗಿ ನಾನಾ ಕ್ಷೇತ್ರಗಳಲ್ಲಿ ಆಸಕ್ತಿಹೊಂದಿದ್ದ ಇವರು ಮಿಕ್ಕವರಿಗೆ ಸಹಾಯ ಮಾಡುವಲ್ಲಿ ಎತ್ತಿದಕೈ ಆಗಿದ್ದರು.
ಸಿಡ್ನಿಯಲ್ಲಿರುವ ವೆಂಕಟೇಶ್ವರ ದೇವಾಲದ ನಿರ್ಮಾಣದಲ್ಲಿ ಆಸಕ್ತಿತೋರಿದ ಮೊದಲಿಗರಲ್ಲಿ ಇವರೊಬ್ಬರು. "ಎಲ್ಲರೊಳು ಒಂದಾಗಿದ್ದ" ಅವರಿಗೆ ಅಂತಿಮ ನಮನ ಸಲ್ಲಿಸಲು ನೂರಾರು ಜನ ಸೇರಿದ್ದುದು ಅವರ ಪ್ರೀತಿಪಾತ್ರತೆಗೆ ಸಾಕ್ಷಿ. ಶಂಕರ್ ಅವರು ಪತ್ನಿ ಕಾಮಿನಿ, ಪುತ್ರ ಅರ್ಜುನ್ ಅವರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.
ಸಿಡ್ನಿ ಶ್ರೀನಿವಾಸ್
Comments
Story first published: Monday, July 20, 2009, 12:17 [IST]