ಉತ್ಸಾಹದ ಚಿಲುಮೆ ಸುಜನಾ ಉಮೇಶ್ ಇನ್ನಿಲ್ಲ

ವರ್ಜೀನಿಯಾದ ಆಶ್ ಬರ್ನ್ ನಿವಾಸಿಯಾಗಿದ್ದ ಸುಜನಾ ಓರ್ವ ಜನಾನುರಾಗಿ ಅನಿವಾಸಿ ಭಾರತೀಯ ಮಹಿಳೆಯಾಗಿದ್ದರು. ಅವಿರತ ಸಮಾಜಸೇವೆ, ನಿಸ್ಸಹಾಯಕರ ಬಗ್ಗೆ ಅವರಿಗಿದ್ದ ಸಕ್ರಿಯ ಕಳಕಳಿಯಿಂದಾಗಿ ಅನಿವಾಸಿ ಭಾರತೀಯ ಸಮುದಾಯಗಳಲ್ಲಿ ಅವರು ಜನಪ್ರಿಯರಾಗಿದ್ದರು. ಮೃತರು ಮೂಲತಃ ತೆಲಗು ಮಾತೃಭಾಷೆಯವರಾಗಿದ್ದರೂ ಕರ್ನಾಟಕದ ಮಣ್ಣಿನ ಮಗಳಾಗಿದ್ದರು.
ಮೃತರ ಅಂತಿಮ ದರ್ಶನವನ್ನು ವರ್ಜೀನಿಯಾದ ಚಾಂಟಿಲಿಯಲ್ಲಿ ಜುಲೈ 5ರಂದು ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮಂದಿ ಭಾರತೀಯರು ಚಾಂಟಿಲಿಗೆ ತೆರಳಿ ಸುಜನಾ ಆತ್ಮಕ್ಕೆ ಶಾಂತಿ ಕೋರಿದರು. ಸುಜನಾ ಅವರ ಅಂತ್ಯ ಸಂಸ್ಕಾರ ಭಾರತದಲ್ಲಿ ನಡೆಯಲಿದ್ದು ದೇಹವನ್ನು ಇಂದು (ಜುಲೈ 8 ಬುಧವಾರ) ಸ್ವದೇಶಕ್ಕೆ ತರಲಾಗುತ್ತಿದೆ.
ಒಂದು ಮಗುವಿನ ಸಂಸಾರ ಭಾರ, ಜತೆಗೆ ಜೀವನ ನಿರ್ವಹಣೆಗೆ ಉದ್ಯೋಗದಲ್ಲಿ ನಿರತರಾಗಿದ್ದರೂ ದಿನದ ಸ್ವಲ್ಪ ಸಮಯವನ್ನು ಇತರರು ಅಂದರೆ ಭಾರತೀಯರ ಅಭ್ಯುದಯಕ್ಕಾಗಿ ಮೀಸಲಿಡುತ್ತಿದ್ದ ಉತ್ಸಾಹ ಅವರನ್ನು ಇತರ ಅನೇಕರಿಗಿಂತ ಭಿನ್ನವಾಗಿಟ್ಟಿತ್ತು. ತಾನು ಭಾರತದಲ್ಲಿ ಜನಿಸಿದ್ದೇ ಪುಣ್ಯ ಎಂದು ಅವರು ಭಾವಿಸಿದ್ದರು. ಜತೆಗೆ, ತೊಂದರೆಗೆ ಸಿಲುಕಿದವರಿಗೆ, ಅವಕಾಶ ವಂಚಿತರಿಗೆ ನಮ್ಮ ಕೈಲಾದ ನೆರವು ಮತ್ತು ಪ್ರೋತ್ಸಾಹ ನೀಡಬೇಕೆಂದು ಜತೆಗಾರ ಭಾರತೀಯರನ್ನು ಸದಾ ಹುರಿದುಂಬಿಸುತ್ತಿದ್ದರು.
ಸಮಾಜಸೇವೆಯ ಪ್ರೀತಿ ಮತ್ತು ಶ್ರಮಗಳು ಪೋಲಾಗದಂತೆ ನೋಡಿಕೊಳ್ಳುವುದಕ್ಕೆ ಸುಜನಾ ಅವರು ಒಂದು ಸಂಸ್ಥೆಯನ್ನು ಹುಟ್ಟಿಹಾಕಿದ್ದರು. ಅದರ ಹೆಸರು ಎನ್ಆರ್ಐ ವಿಎ ಕುಟುಂಬ. [NRIVA Family www.NRIVA.org] ಈ ಸಂಸ್ಥೆಯ ವತಿಯಿಂದ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಮುಖ್ಯವಾದವುಗಳೆಂದರೆ ; ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳುವುದು, ಶಾಶ್ವತ ಶಿಕ್ಷಣ ನಿಧಿ ಸ್ಥಾಪನೆ, ನಾನಾ ಬಗೆಯ ವಿದ್ಯಾರ್ಥಿವೇತನ ಸ್ಥಾಪನೆ ಮತ್ತು ಭಾರತದಲ್ಲಿ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು.
ಈ ಕೆಲಸಗಳಿಗೆ ಮೂಲಭೂತವಾಗಿ ಅಗತ್ಯವಾದ ದೇಶಪ್ರೇಮ, ಕಷ್ಟಪಟ್ಟು ಕೆಲಸ ಮಾಡುವುದು ಹಾಗೂ ಒಂದು ಹಿಡಿ ಪ್ರೀತಿ ಅವರಲ್ಲಿ ಸದಾ ಚಿಮ್ಮುತ್ತಿರುತ್ತಿತ್ತು. ಶಿರಡಿ ಸಾಯಿಬಾಬಾ ಭಕ್ತರಾಗಿದ್ದರು ಸುಜನಾ. ಅಲ್ಲದೆ ಅಮೆರಿಕಾದಲ್ಲಿ ತಾಯಂದಿರ ದಿನ ಅಂದರೆ ಮದರ್ಸ್ ಡೇ ಆಚರಣೆ ಹಾಗೂ ಉತ್ತರ ಅಮೆರಿಕದಾದ್ಯಂತ ವಾಸವಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಪ್ರೇರಕ ಶಕ್ತಿಯಾಗಿದ್ದರು.
ಸುಜನಾ ಉಮೇಶ್ ಆಕಾಶಕ್ಕೆ ಕೈಚಾಚಿದ್ದರು. ಕೆಲವು ನಕ್ಷತ್ರಗಳು ಅವರದಾದವು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications