ಉತ್ಸಾಹದ ಚಿಲುಮೆ ಸುಜನಾ ಉಮೇಶ್ ಇನ್ನಿಲ್ಲ

ವರ್ಜೀನಿಯಾದ ಆಶ್ ಬರ್ನ್ ನಿವಾಸಿಯಾಗಿದ್ದ ಸುಜನಾ ಓರ್ವ ಜನಾನುರಾಗಿ ಅನಿವಾಸಿ ಭಾರತೀಯ ಮಹಿಳೆಯಾಗಿದ್ದರು. ಅವಿರತ ಸಮಾಜಸೇವೆ, ನಿಸ್ಸಹಾಯಕರ ಬಗ್ಗೆ ಅವರಿಗಿದ್ದ ಸಕ್ರಿಯ ಕಳಕಳಿಯಿಂದಾಗಿ ಅನಿವಾಸಿ ಭಾರತೀಯ ಸಮುದಾಯಗಳಲ್ಲಿ ಅವರು ಜನಪ್ರಿಯರಾಗಿದ್ದರು. ಮೃತರು ಮೂಲತಃ ತೆಲಗು ಮಾತೃಭಾಷೆಯವರಾಗಿದ್ದರೂ ಕರ್ನಾಟಕದ ಮಣ್ಣಿನ ಮಗಳಾಗಿದ್ದರು.
ಮೃತರ ಅಂತಿಮ ದರ್ಶನವನ್ನು ವರ್ಜೀನಿಯಾದ ಚಾಂಟಿಲಿಯಲ್ಲಿ ಜುಲೈ 5ರಂದು ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮಂದಿ ಭಾರತೀಯರು ಚಾಂಟಿಲಿಗೆ ತೆರಳಿ ಸುಜನಾ ಆತ್ಮಕ್ಕೆ ಶಾಂತಿ ಕೋರಿದರು. ಸುಜನಾ ಅವರ ಅಂತ್ಯ ಸಂಸ್ಕಾರ ಭಾರತದಲ್ಲಿ ನಡೆಯಲಿದ್ದು ದೇಹವನ್ನು ಇಂದು (ಜುಲೈ 8 ಬುಧವಾರ) ಸ್ವದೇಶಕ್ಕೆ ತರಲಾಗುತ್ತಿದೆ.
ಒಂದು ಮಗುವಿನ ಸಂಸಾರ ಭಾರ, ಜತೆಗೆ ಜೀವನ ನಿರ್ವಹಣೆಗೆ ಉದ್ಯೋಗದಲ್ಲಿ ನಿರತರಾಗಿದ್ದರೂ ದಿನದ ಸ್ವಲ್ಪ ಸಮಯವನ್ನು ಇತರರು ಅಂದರೆ ಭಾರತೀಯರ ಅಭ್ಯುದಯಕ್ಕಾಗಿ ಮೀಸಲಿಡುತ್ತಿದ್ದ ಉತ್ಸಾಹ ಅವರನ್ನು ಇತರ ಅನೇಕರಿಗಿಂತ ಭಿನ್ನವಾಗಿಟ್ಟಿತ್ತು. ತಾನು ಭಾರತದಲ್ಲಿ ಜನಿಸಿದ್ದೇ ಪುಣ್ಯ ಎಂದು ಅವರು ಭಾವಿಸಿದ್ದರು. ಜತೆಗೆ, ತೊಂದರೆಗೆ ಸಿಲುಕಿದವರಿಗೆ, ಅವಕಾಶ ವಂಚಿತರಿಗೆ ನಮ್ಮ ಕೈಲಾದ ನೆರವು ಮತ್ತು ಪ್ರೋತ್ಸಾಹ ನೀಡಬೇಕೆಂದು ಜತೆಗಾರ ಭಾರತೀಯರನ್ನು ಸದಾ ಹುರಿದುಂಬಿಸುತ್ತಿದ್ದರು.
ಸಮಾಜಸೇವೆಯ ಪ್ರೀತಿ ಮತ್ತು ಶ್ರಮಗಳು ಪೋಲಾಗದಂತೆ ನೋಡಿಕೊಳ್ಳುವುದಕ್ಕೆ ಸುಜನಾ ಅವರು ಒಂದು ಸಂಸ್ಥೆಯನ್ನು ಹುಟ್ಟಿಹಾಕಿದ್ದರು. ಅದರ ಹೆಸರು ಎನ್ಆರ್ಐ ವಿಎ ಕುಟುಂಬ. [NRIVA Family www.NRIVA.org] ಈ ಸಂಸ್ಥೆಯ ವತಿಯಿಂದ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಮುಖ್ಯವಾದವುಗಳೆಂದರೆ ; ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳುವುದು, ಶಾಶ್ವತ ಶಿಕ್ಷಣ ನಿಧಿ ಸ್ಥಾಪನೆ, ನಾನಾ ಬಗೆಯ ವಿದ್ಯಾರ್ಥಿವೇತನ ಸ್ಥಾಪನೆ ಮತ್ತು ಭಾರತದಲ್ಲಿ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು.
ಈ ಕೆಲಸಗಳಿಗೆ ಮೂಲಭೂತವಾಗಿ ಅಗತ್ಯವಾದ ದೇಶಪ್ರೇಮ, ಕಷ್ಟಪಟ್ಟು ಕೆಲಸ ಮಾಡುವುದು ಹಾಗೂ ಒಂದು ಹಿಡಿ ಪ್ರೀತಿ ಅವರಲ್ಲಿ ಸದಾ ಚಿಮ್ಮುತ್ತಿರುತ್ತಿತ್ತು. ಶಿರಡಿ ಸಾಯಿಬಾಬಾ ಭಕ್ತರಾಗಿದ್ದರು ಸುಜನಾ. ಅಲ್ಲದೆ ಅಮೆರಿಕಾದಲ್ಲಿ ತಾಯಂದಿರ ದಿನ ಅಂದರೆ ಮದರ್ಸ್ ಡೇ ಆಚರಣೆ ಹಾಗೂ ಉತ್ತರ ಅಮೆರಿಕದಾದ್ಯಂತ ವಾಸವಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಪ್ರೇರಕ ಶಕ್ತಿಯಾಗಿದ್ದರು.
ಸುಜನಾ ಉಮೇಶ್ ಆಕಾಶಕ್ಕೆ ಕೈಚಾಚಿದ್ದರು. ಕೆಲವು ನಕ್ಷತ್ರಗಳು ಅವರದಾದವು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications