Get Updates
Get notified of breaking news, exclusive insights, and must-see stories!

ಪುಸ್ತಕಗಳ ಬಿಡುಗಡೆ ಮತ್ತು ಮಸ್ತ್ ಮಸ್ತ್ ಮಾರಾಟ

Two books released in Vasanta Sahityotsava
ಪುಸ್ತಕ ಬಿಡುಗಡೆ-1 : ಕನ್ನಡ ಕಾದಂಬರಿ ಲೋಕದಲ್ಲಿ - ಹೀಗೆ ಹಲವು':
ಕನ್ನಡ ಸಾಹಿತ್ಯ ರಂಗದ ನಾಲ್ಕನೇ ಸಮ್ಮೇಳನದ ಮುಖ್ಯ ಕಾರ್ಯಕ್ರಮಗಳಲ್ಲೊಂದು ಸಮ್ಮೇಳನ ಗ್ರಂಥದ ಲೋಕಾರ್ಪಣೆ. ಈ ಬಾರಿಯ ಪ್ರಕಟಣೆಯೂ ಹಿಂದಿನಂತೆಯೇ, ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತೊಂದು ಕೊಡುಗೆ. ಕಳೆದ ಕಾಲು ಶತಮಾನದಲ್ಲಿ ಕನ್ನಡ ಕಾದಂಬರಿ ಲೋಕ ಹಾದು ಬಂದ ಹಾದಿಯತ್ತ ಅಮೆರಿಕನ್ನಡಿಗರ ಒಳನೋಟಗಳನ್ನೊಳಗೊಂಡ ಇಪ್ಪತ್ನಾಲ್ಕು ಲೇಖನಗಳುಳ್ಳ ಕನ್ನಡ ಕಾದಂಬರಿ ಲೋಕದಲ್ಲಿ- ಹೀಗೆ ಹಲವು' ಗ್ರಂಥವು ಅಚ್ಚಾಗಿ ಸಜ್ಜಾಗಿ ಸಾಹಿತ್ಯಾಸಕ್ತರನ್ನು ಎದುರುಗೊಳಲು ಕಾದಿತ್ತು. ಮುಖ್ಯ ಅತಿಥಿಗಳಾದ ಡಾ. ವೀಣಾ ಶಾಂತೇಶ್ವರ ಅವರು ಪುಸ್ತಕಪೊಟ್ಟಣದ ಮುಸುಕು ಸರಿಸಿ ಅನಾವರಣಗೊಳಿಸಿದರು. ಗ್ರಂಥಕ್ಕೆ ತಮ್ಮ ಲೇಖನವಿತ್ತ ಬರಹಗಾರರಲ್ಲಿ ಆ ಹೊತ್ತು ಅಲ್ಲಿದ್ದವರಿಗೆ ವೀಣಾ ಅವರಿಂದಲೇ ಪ್ರತಿಗಳನ್ನು ಕೊಡಿಸಿ ಹೊಸ ರೀತಿಯಲ್ಲಿ ಬರಹಗಾರರನ್ನು ಅಭಿನಂದಿಸಲಾಯಿತು.

ಪುಸ್ತಕ ಬಿಡುಗಡೆ-2 : ಜಾಲತರಂಗಿಣಿ':
ಸಂಜೆಯ ಚಹಾ ವಿರಾಮದ ಬಳಿಕ ಮತ್ತೆ ಸೇರಿದ ಸಭೆಯಲ್ಲಿ ಮೊದಲ ಕಾರ್ಯಕ್ರಮ ಮೈ. ಶ್ರೀ. ನಟರಾಜರ ಅಂಕಣ ಬರಹಗಳ ಎರಡನೇ ಸಂಗ್ರಹ ಜಾಲ ತರಂಗಿಣಿ'ಯ ಬಿಡುಗಡೆ, ಮುಖ್ಯ ಅತಿಥಿಗಳಾದ ವೈದೇಹಿ ಅವರಿಂದ. ನಟರಾಜರು ಪುಸ್ತಕವನ್ನು ಅವರ ಷಡ್ಡಕರಿಗೆ ಅರ್ಪಿಸಿದ್ದು, ಇಲ್ಲಿ ಮೊದಲ ಪ್ರತಿಯನ್ನು ನಟರಾಜರ ನಾದಿನಿ ಉಷಾ ಶರ್ಮಾ ಅವರಿಗೆ ವೈದೇಹಿಯವರಿಂದ ಕೊಡಿಸಲಾಯಿತು. ವೈದೇಹಿಯವರು, ನಟರಾಜ್ ಅವರನ್ನು ನೋಡಿದರೆ ಬರೀತಾರೆ ಅಂತ ಅನ್ಸಲ್ಲ, ಇಷ್ಟು ಚೆನ್ನಾಗಿ ಬರೀತಾರೆ ಅಂತ ನಾನು ಅಂದುಕೊಂಡಿರಲಿಲ್ಲ' ಅನ್ನುತ್ತಾ, ಪುಸ್ತಕದ ಬಗ್ಗೆ ಕೆಲವು ಮಾತುಗಳನ್ನಾಡಿದರು. ನಟರಾಜರು ಕೊನೆಯಲ್ಲಿ ಮಾತಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

****
ಪ್ರತಿ ಸಮ್ಮೇಳನದಲ್ಲೂ ಕಸಾರಂ ಒಂದು ಪುಸ್ತಕ ಮಳಿಗೆಯನ್ನು ಏರ್ಪಡಿಸುತ್ತದೆ. ಅದರ ಮುಖ್ಯ ಉದ್ದೇಶ ನಮ್ಮ ಕಸಾರಂ ಪ್ರಕಟನೆಗಳನ್ನೂ, ಇಲ್ಲಿನ ಬರಹಗಾರರ ಪುಸ್ತಕಗಳನ್ನೂ ನಮ್ಮ ಜನರಿಗೆ ತಲುಪಿಸುವುದು. ನಮ್ಮಲ್ಲಿ ಬಹು ಮಂದಿ ಬರಹಗಾರರ ಪುಸ್ತಕಗಳು ಅಮೆರಿಕದಲ್ಲೇ ಇರುವ ಇತರ ಕನ್ನಡಿಗರಿಗೆ ದೊರಕದೇ ಇರುವ ಸಮಸ್ಯೆಯನ್ನರಿತು ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಮಳಿಗೆಯಲ್ಲಿ ಸಾಹಿತ್ಯ ರಂಗವು ಈವರೆಗೆ ಪ್ರಕಟಿಸಿದ ನಾಲ್ಕು ಪುಸ್ತಕಗಳು ಮತ್ತು ಸಮ್ಮೇಲನದ ಮುಖ್ಯ ಅತಿಥಿಗಳಾದ ವೀಣಾ ಶಾಂತೇಶ್ವರ ಮತ್ತು ವೈದೇಹಿ ಯವರ ಪ್ರಾತಿನಿಧಿಕ ಪ್ರಕಟಣೆಗಳಲ್ಲದೆ, ಈ ಸಮ್ಮೇಲನದಲ್ಲಿ ಲೊಕಾರ್ಪಣೆ ಮಾಡಿದ ಮೈ.ಶ್ರೀ.ನಟರಾಜ ಅವರ ಜಾಲತರಂಗಿಣಿ'' ಯನ್ನೊಳಗೊಂಡು, ಇತರ ಅಮೇರಿಕನ್ನಡಿಗ ಬರಹಗಾರರ (ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸ ರಾವ್, ನಾಗ ಐತಾಳ, ಶ್ರೀವತ್ಸ ಜೋಶಿ, ಜ್ಯೊತಿ ಮಹಾದೆವ್) ಇತ್ತೀಚಿನ ಕೃತಿಗಳೂ ಇದ್ದವು. ಭಾನುವಾರದ ಹೆಮ್ಮೆ ಬರಿಸುವವರು ನಮ್ಮ ಬರಹಗಾರರು'' ಕಾರ್ಯಕ್ರಮದಲ್ಲಿ ಈ ಕೆಲವು ಪುಸ್ತಕಗಳನ್ನು ವಿಮರ್ಶಿಶಲಾಗಿದೆ. ಇದಲ್ಲದೆ, ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರ ಕನ್ನಡ ಸಾಹಿತ್ಯ ಚರಿತ್ರೆ'' ಧ್ವನಿಸುರುಳಿಗಳನ್ನೂ ಕೂಡ ಇಡಲಾಗಿದ್ದಿತು. ಮುಖ್ಯ ಅತಿಥಿಗಳ ಪುಸ್ತಕಗಳ ಸಾಕಷ್ಟು ಪ್ರತಿಗಳು ಇಲ್ಲದ್ದರಿಂದ, ಹಲವರ ಬೇಡಿಕೆಗಳನ್ನು ಪೂರೈಸಲಾಗದೆ ಅವರನ್ನು ನಿರಾಶೆಗೊಳಿಸಬೇಕಾಯಿತು. ಒಟ್ಟಿನಲ್ಲಿ ಸುಮಾರು 25 ವಿವಿಧ ಪುಸ್ತಕಗಳ 120ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಹಲವು ಪುಸ್ತಕಗಳನ್ನು ವಿಶೇಷ ರಿಯಾಯತಿ ಬೆಲೆಗೆ ಮಾರಿದ್ದರಿಂದ, ಮಾರಾಟದ ಒಟ್ಟು ಮೊತ್ತ ಮಾತ್ರ 870 ಡಾಲರುಗಳಿಗೆ ಸೀಮಿತವಾಯಿತು.

ಈ ಮಳಿಗೆಯ ವಹಿವಾಟನ್ನು ಚಿಕಾಗೋದಿಂದ ಬಂದಿದ್ದ ಶಂಕರ ಹೆಗಡೆ ಮತ್ತು ಲೀಲಾ ರಾವ್ ಅವರು ಅತ್ಯಂತ ಉತ್ಸಾಹದಿಂದ, ಶ್ರದ್ಧೆಯಿಂದ ನಡೆಸಿಕೊಟ್ಟರು. ಅವರಿಗೆ ಕಸಾರಂನ ಧನ್ಯವಾದಗಳು. ಕನ್ನಡ ಸಾಹಿತ್ಯ ರಂಗದ ಪುಸ್ತಕಗಳನ್ನು ಕೊಳ್ಳಬಯಸುವವರು ದಯವಿಟ್ಟು ಇಲ್ಲಿ ಸಂಪರ್ಕ ಮಾಡಿ: [email protected]

ಪುಸ್ತಕಗಳ ವಿವರ:

1. ಕನ್ನಡ ಕಾದಂಬರಿ ಲೋಕದಲ್ಲಿ...ಹೀಗೆ ಹಲವು... (2009) ಬೆಲೆ: ಡಾ. 10*
2. ನಗೆಗನ್ನಡಂ ಗೆಲ್ಗೆ! (2007)ಬೆಲೆ: ಡಾ. 15*
3. ಆಚೀಚೆಯ ಕತೆಗಳು (2005)ಬೆಲೆ: ಡಾ. 10*
4. ಕುವೆಂಪು ಸಾಹಿತ್ಯ ಸಮೀಕ್ಷೆ (2004) (ಪ್ರತಿಗಳು ಮುಗಿದಿವೆ)

*ಅಂಚೆ ವೆಚ್ಚ ಪ್ರತ್ಯೇಕ.
ವಿ.ಸೂ. : ಪುಸ್ತಕಗಳೊಂದಿಗೆ ಆಯಾ ವರ್ಷದ ಸಮ್ಮೇಳನದ ಪ್ರಧಾನ ಭಾಷಣದ ಪ್ರತಿಯನ್ನೂ ಕಳಿಸುತ್ತೇವೆ.

ಮುಂದೆ ಓದಿ : ರಸ ವೃಷ್ಟಿ, ಸರಸತಿಯ ಸರಸ ವೃಷ್ಟಿ! »

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+