‘ಆಚೀಚೆಯ ಕತೆಗಳು’ ಬರಗೂರರಿಂದ ಈಚೆಗೆ...
- ದಟ್ಸ್ಕನ್ನಡ ಡೆಸ್ಕ್
ಕನ್ನಡ ಸಾಹಿತ್ಯ ರಂಗ ಪುಸ್ತಕ ಮಾಲೆಯ ಎರಡನೇ ಕೊಡುಗೆ -ಆಚೀಚೆಯ ಕತೆಗಳು. ಈ ಕೃತಿಯನ್ನು ಉದ್ಘಾಟನಾ ಅಧಿವೇಶನದಲ್ಲಿ ಸಮ್ಮೇಳನದ ಮುಖ್ಯ ಅತಿಥಿ ಬರಗೂರು ರಾಮಚಂದ್ರಪ್ಪ ಅವರು ಬಿಡುಗಡೆ ಮಾಡುವರು.
ಕೃತಿಯ ಪ್ರಧಾನ ಸಂಪಾದಕ ಮತ್ತು ಕಥೆಗಾರ ಗುರುಪ್ರಸಾದ್ ಕಾಗಿನೆಲೆ, ಪುಸ್ತಕವನ್ನು ಪರಿಚಯಿಸುವರು.
ಎನ್ಆರ್ಐ ಕನ್ನಡ ಕಥೆಗಾರರ ಪ್ರಾತಿನಿಧಿಕ ಸಂಕಲನವಾಗಿರುವ ಈ ಕೃತಿಯ ಸಂಪಾದಕ ಮಂಡಳಿಯಲ್ಲಿ ಆಹಿತಾನಲ, ಎಚ್.ಕೆ.ಚಂದ್ರಶೇಖರ್, ಎಚ್.ವೈ.ರಾಜಗೋಪಾಲ್, ಮೈ.ಶ್ರೀ.ನಟರಾಜ, ನಳಿನಿ ಮೈಯ, ಶಶಿಕಲಾ ಚಂದ್ರಶೇಖರ್ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಸಾಹಿತ್ಯ ರಂಗ, ನ್ಯೂಜೆರ್ಸಿ, ಯುಎಸ್ಎ ಮತ್ತು ಬೆಂಗಳೂರಿನ ಅಭಿನವ ಪ್ರಕಾಶನ ಜಂಟಿಯಾಗಿ ಈ ಕೃತಿಯನ್ನು ಹೊರತಂದಿವೆ. ‘ಕಥೆ ಎನ್ನುವುದು ಅನುಭವಿಸುವ ಮನುಷ್ಯನ ಮನಸ್ಸಿಗೆ ತೀರ ಸಹಜವಾದ ಚಟುವಟಿಕೆಯಾಗಿದೆ. ನಮ್ಮ ಪ್ರತಿಯಾಬ್ಬರಲ್ಲೂ ಒಂದು ಕಥೆ ಇದೆ’ ಎನ್ನುವ ಭಾವ ಪುಸ್ತಕದ ಬೆನ್ನುಡಿಯಲ್ಲಿದೆ. ಕಥೆಗಾರ ಯಶವಂತ ಚಿತ್ತಾಲರ ಬೆನ್ನುಡಿ ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
150ರೂ. ಮುಖಬೆಲೆಯ ಈ ಕೃತಿ, ಕಡಲಾಚೆಯ ಮತ್ತು ಈಚೆಯ ಕಥೆಗಾರರ ಮನಸ್ಥಿತಿಯನ್ನು ಬಿಂಬಿಸುವಂತಿದೆ.
ಕಳೆದ ವರ್ಷ ಮೈತಳೆದ ಕನ್ನಡ ಸಾಹಿತ್ಯ ರಂಗ, ಉತ್ತರ ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿನ ಸಕ್ರಿಯ ಕನ್ನಡ ವೇದಿಕೆ. ಸಂಘಟನೆ, ಪುಸ್ತಕ ಪ್ರಕಟನೆಯ ಮೂಲಕ ಕನ್ನಡ ಜಾಗೃತಿಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ವರ್ಷ ಮೇ.29ರಂದು ಫಿಲಡೆಲ್ಫಿಯ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ, ಸಾಹಿತ್ಯ ರಂಗ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಪುಸ್ತಕವನ್ನು ಹೊರತಂದಿತ್ತು.
ಕಥೆಗಾರರಾದ ಅಹಿತಾಲನ, ಜಯರಾಮ ಉಡುಪ, ಗುರುಪ್ರಸಾದ್ ಕಾಗಿನೆಲೆ, ರವಿ ಗೋಪಾಲರಾವ್, ಶಶಿಕಲ ಚಂದ್ರಶೇಖರ್, ಗೋಪಿನಾಥ ತಾತಾಚಾರ್, ಮೈ.ಶ್ರೀ.ನಟರಾಜ, ಶರತ್ ನೊಮಬೂರು, ಪ್ರಕಾಶ್ರಾವ್ ಪಯ್ಯಾರ್, ಸದಾಶಿವ ಫಡ್ನೀಸ್, ಇರ್ಶಾದ್ ಮೂಡಬಿದ್ರಿ, ನಳಿನಿ ಮೈಯ, ವೈ.ಆರ್.ಮೋಹನ್, ಸಂಧ್ಯಾ ರವೀಂದ್ರನಾಥ್, ವಿಮಲಾ ರಾಜಗೋಪಾಲ್, ಗೋಪಿನಾಥ ರಾವ್, ವಲ್ಲೀಶ ಶಾಸ್ತ್ರೀ, ಪ್ರವೀಣ ಶಿವಶಂಕರ್, ಗುಂಡು ಶಂಕರ್, ಶೈಲಾಜ ಶಂಕರ್, ತ್ರಿವೇಣಿ ಶ್ರೀನಿವಾಸ ರಾವ್, ನಂಡುಂಡ ಸ್ವಾಮಿ, ವಿಶ್ವನಾಥ ಹುಲಿಕಲ್ ಅವರ ಕಥೆಗಳು ಸಂಕಲನದಲ್ಲಿವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications