38247ಅಮೆರಿಕನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg38247ಅಮೆರಿಕಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg38247ಅಮೆರಿಕಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38247ಅಮೆರಿಕಡಯಟ್ ಕೋಕ್ ಪ್ಲಸ್,ಪೋಷಕಾಂಶ ಮೈನಸ್ /news/2008/12/25/diet-coke-plus-is-vitamins-minus-fda.htmlವಾಷಿಂಗ್ಟನ್, ಡಿ.25: 'ಡಯಟ್ ಕೋಕ್ ಪ್ಲಸ್' ತಂಪು ಪಾನೀಯದಲ್ಲಿ ಹೆಚ್ಚುವರಿ ಪೋಷಕಾಂಶಗಳಿವೆ ಎಂದು ಪ್ರಚಾರ ಮಾಡಿದ್ದ ಕೋಕಾಕೋಲಾ ಕಂಪನಿಗೆ ಅಮೆರಿಕದ ಕೇಂದ್ರ ಆರೋಗ್ಯ ನಿಯಂತ್ರಣ ಇಲಾಖೆ ತಪರಾಕಿ ಕೊಟ್ಟಿದೆ. ಡಯಟ್ ಕೋಕ್ ಪ್ಲಸ್ ನಲ್ಲಿ ಖನಿಜಾಂಶಗಳು, ಪೋಷಕಾಂಶಗಳು ಇವೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದಕ್ಕೆ ಇಲಾಖೆ ಎಚ್ಚರಿಕೆಯನ್ನೂ ಕೊಟ್ಟಿದೆ. ಯಾವುದೇ ಆಹಾರ ಉತ್ಪನ್ನದಲ್ಲಿ ಅದರ ಮೂಲ ಪೋಷಕಾಂಶಕ್ಕಿಂತ 33697http://kannada.oneindia.com/img/2008/12/25-diet-coke-plus1e.jpg38247ಅಮೆರಿಕಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!/column/majavani/2009/0105-mecale-sons-caught-in-hindutva-lab.htmlಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ 33881http://kannada.oneindia.com/img/2009/01/05-hindutva2.jpg110462ದಟ್ಸ್ ಕನ್ನಡಆಕಾಶದಾಗೆ ಯಾರೋ ಮಾಯಗಾರನೆ/column/sham/2007/050107about_us.htmlನೀವೀಗ ಓದಲು ಅಣಿಯಾಗುತ್ತಿರುವುದು ನಮ್ಮ ವೆಬ್‌ಸೈಟ್‌ ಬಗೆಗಿನ About Us. ಅರ್ಥಾತ್‌ ನಮ್ಮ ಬಗ್ಗೆ ಎರಡು ಮಾತು, ನಿಮ್ಮಲ್ಲೊಂದು ನಿವೇದನೆ, ಚಾರಣಿಗರಲ್ಲಿ ವಿನಮ್ರ ಅರಿಕೆ. ಇವೆಲ್ಲವು ನಾವು-ನೀವು ಜತೆಯಾಗಿ ನಡೆಯಲು ನೆರವಾಗುವ ಮಾಹಿತಿ ಸಲಕರಣೆಗಳು!ಪ್ರಿಯ ಬಂಧು,ಸಸ್ನೇಹ ನಮಸ್ಕಾರ.ಕಳೆದ ಹತ್ತು ವರ್ಷಗಳಿಂದ ಅಂತರ್‌ಜಾಲ ತಾಣದಲ್ಲಿ ಅನವರತ ಕಾರ್ಯಮಗ್ನವಾಗಿರುವ ನಮ್ಮ ಆನ್‌ಲೈನ್‌ ಪತ್ರಿಕಾ ಬಳಗದ (www.oneindia.com) ವತಿಯಿಂದ ನಿಮಗೆಲ್ಲ ಮತ್ತೊಮ್ಮೆ 11212http://kannada.oneindia.com/img/2009/11/03-sham7.jpg110462ದಟ್ಸ್ ಕನ್ನಡಟ್ವಿಟ್ಟರ್.ಕಾಂನಲ್ಲಿ ದಟ್ಸ್ ಕನ್ನಡ/column/sham/2008/1230-follow-thatskannada-on-twitter.htmlಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್.ಕಾಂ(www.twitter.com)ನಲ್ಲಿ ಲಭ್ಯವಾಗಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ನಲ್ಲಿ ಕುಳಿತಲ್ಲಿಂದಲೇ ವೆಬ್ ಜಗತ್ತಿನಲ್ಲಿ ಏನೇನಾಗುತ್ತಿದೆ ಎಂದು ಅಷ್ಟೇ ವೇಗವಾಗಿ ತಿಳಿಯಬಹುದು.ಸಂತಸದ ಸಂಗತಿಯೆಂದರೆ, ನಿಮ್ಮ 33786http://kannada.oneindia.com/img/2008/12/30-twitter1e.gif110462ದಟ್ಸ್ ಕನ್ನಡಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ/news/2009/04/30/karnataka-sslc-results2009-on-may1.htmlಬೆಂಗಳೂರು, ಏ.30: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಿದೆ. ಶುಕ್ರವಾರ ಮಧ್ಯಾಹ್ನದ ನಂತರ ಇಲಾಖೆಯ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮೇ 2ರಂದು ಸಂಬಂಧಿಸಿದ ಎಲ್ಲ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರತಿವರ್ಷದಂತೆ ದಟ್ಸ್ ಕನ್ನಡ.ಕಾಂ ಈ ಬಾರಿ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ತನ್ನ ವೆಬ್ 36309http://kannada.oneindia.com/img/2009/04/30-kseeb2.jpg110462ದಟ್ಸ್ ಕನ್ನಡಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ/news/2009/05/01/karnataka-sslc-results2009-know-it-online.htmlಬೆಂಗಳೂರು, ಮೇ.1: ಮಾರ್ಚ್, ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿವೆ. ಎಸ್ಸೆಸ್ಸಿಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಎಂದಿನಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ನಡೆದ ಕೇವಲ ಮೂರು ವಾರಗಳಲ್ಲಿಯೇ ಫಲಿತಾಂಶ ನೀಡಿರುವುದು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಇತಿಹಾಸದಲ್ಲಿ ಹೊಸ ದಾಖಲೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ | Karnataka SSLCresults now availableಉಡುಪಿ 36336http://kannada.oneindia.com/img/2009/05/01-kseeb2.jpg110462ದಟ್ಸ್ ಕನ್ನಡಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲಾವಾರು ವಿವರ/news/2009/05/01/karnataka-sslc-results2009-district-wise-table.htmlಬೆಂಗಳೂರು, ಮೇ.1: 2009ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಾರ್ಚ್ 30 ರಿಂದ ಏ.6 ರವರೆಗೆ ರಾಜ್ಯಾದ್ಯಂತ ಒಟ್ಟು 2762 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟು 8,58,391 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ 219 ಕೇಂದ್ರಗಲ್ಲಿ ನಡೆಸಲಾಯಿತು. ಸುಮಾರು 43,000 ಮೌಲ್ಯಮಾಕರು ಈ ಕಾರ್ಯವನ್ನು ಏ.19ರಂದು ಪೂರ್ಣಗೊಳಿಸಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ| Karnataka 36344http://kannada.oneindia.com/img/2009/05/01-sslc-exams.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ನ್ಯೂಜೆರ್ಸಿಯ ಬೃಂದಾವನದಲ್ಲಿ ವಸಂತೋತ್ಸವ | Brindanvan Vasantotsav | New Jersey Kannada Koota | NRI Kannadiga | Krupa Ramesh | ನ್ಯೂಜೆರ್ಸಿಯ ಬೃಂದಾವನದಲ್ಲಿ ವಸಂತೋತ್ಸವ - Kannada Oneindia

ನ್ಯೂಜೆರ್ಸಿಯ ಬೃಂದಾವನದಲ್ಲಿ ವಸಂತೋತ್ಸವ

Pranesh, Richard and Dayanand
"ವಸಂತ ತಂತು ಸಂತಸ, ಬೃಂದಾವನಕೆ ಬೃಹದಾನಂದ"
"ವಿರೋಧಿ ನಾಮ ಸಂವತ್ಸರ, ಹೊಮ್ಮಿದೆ ಎಲ್ಲರಲ್ಲಿ ಸಡಗರ"
"ಒಂದೊಂದೇ ಚಿಕ್ಕ ಚಿಕ್ಕ ವಾಕ್ಯ, ಅಡಗಿರಬೆಕು ವಿಚಾರಗಳನೇಕ ಐಕ್ಯ" (ಪ್ರೇರಣೆ : ಗಂಗಾವತಿ ಪ್ರಾಣೇಶ)

ಎನ್ ಸ್ವಾಮಿ, ಏನಂತೀರಾ, ಎಂಥಾ ಸುಂದರ ಸಂಜೆ ಗೊತ್ತೋ,
"ಕುಳಿತಾಗ ಮೂರು ಗಂಡ, ಏಳುವಾಗ ಹತ್ತು ಗಂಡ" ಏನು ಮಜಾ...ಎಷ್ಟು ನಗೆ, "ಬಿಸಿ ಬಿಸಿ ಉಬಟು ತಿಂದು, ಕಾಫಿ ಕುಡಿದು
ಕೂತೇವಾ ನೋಡಿ, ರಾತ್ರಿ ಊಟದ ಸಮಯದ ಪರಿವೇನೇ ಇರಲಿಲ್ಲ.... (ಪ್ರೇರಣೆ : ರಿಚರ್ಡ್ ಲೂಯಿಸ್)

"ಹೌದಪ್ಪಾ, ಅದ್ ಹೆಂಗೆ ಇತ್ತು ಅಂತೀರಾ...ಅಯ್ಯೋ, ಅಯ್ಯೋ, ಅಯ್ಯೋ, ಅದೇನ್ ಮಾತಾಡ್ತಾರೆ ಎಲ್ರೂ ಅಂತೀನಿ, ಅದೆಷ್ಟು ಟ್ಯಾಲೆಂಟು ಇದೆ ಇವರಿಗೆ, ಅಲ್ಲಾ ಹೆಂಗೆ ಅಂತೀನಿ....(ಮುಖ್ಯ ಮಂತ್ರಿ ಚಂದ್ರು ಅವರ ಧ್ವನಿ, ಶೈಲಿಯಲ್ಲಿ ಓದಿಕೊಳ್ಳಿ)...(ಪ್ರೇರಣೆ : ಮಿಮಿಕ್ರಿ ದಯಾನಂದ್)

* ಕೃಪಾ ರಮೇಶ್

ಏನಿದೆಲ್ಲ ಅಂತ ನೀವು ಅಂದ್ಕೊತಾ ಇದ್ರೆ, ಸರಿ ಹೇಳ್ತೀನಿ ಕೇಳಿ, ನೀವು ಏನ್ ಮಿಸ್ ಮಾಡಿಕೊಂಡಿದ್ದೀರಾ ಅಂತ...ಶನಿವಾರ, ಮೇ ತಿಂಗಳ ಹದಿನಾರರಂದು, ನಮ್ಮ ನ್ಯೂಜೆರ್ಸಿ ಕನ್ನಡ ಕೂಟ ಬೃಂದಾವನದ ವಸಂತೋತ್ಸವ ಕಾರ್ಯಕ್ರಮ ಈಸ್ಟ್ ವಿಂಡ್ಸರ್ ನ ಕ್ರೆಪ್ಸ್ ಮಿಡಲ್ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಆರಂಭದ ಪ್ರಾರ್ಥನೆಯ ನಂತರ, ಪುಟ್ಟ ಪುಟ್ಟ ಮಕ್ಕಳಿಂದ ಬೃಂದಾವನದ ಸಂಕೇತ ಗೀತೆ, ಭಾರತದ ಹಾಗು ಅಮೆರಿಕದ ರಾಷ್ಟ್ರಗೀತೆಗಳನ್ನು ಕರ್ಣಾನಂದಕರವಾಗಿ, ಸ್ಪಷ್ಟವಾಗಿ ಹಾಡಲ್ಪಟ್ಟವು. ಸೀಮಾ ಮೂರ್ತಿಯವರ ಸ್ವಾಗತ ಭಾಷಣದ ನಂತರ ಸಿಂಹಾದ್ರಿ ಸಂತೆಬೆನ್ನೂರ್ ರವರ ಸ್ವವಿರಚಿತ, ಅಮ್ಮನ ಪ್ರೀತಿ, ವಾತ್ಸಲ್ಯ ತುಂಬಿದ ಕವನ ಹಾಗು ಅವರ ಹಾಡುಗಾರಿಕೆ ಅತ್ಯಂತ ಸಮಂಜಸ ಹಾಗೂ ಸುಮಧುರವಾಗಿತ್ತು....

ಬೆಂಗಳೂರಿನ "ಲಯ ತರಂಗ" ತಂಡದವರಿಂದ ನಡೆದ ತಾಳವಾದ್ಯ ಕಛೇರಿ ಹಾಗು ಪ್ರತಿಭಾ ಪ್ರದರ್ಶನದ ಬಗ್ಗೆ ವರ್ಣಿಸಲು ನನ್ನ ಶಬ್ದ ಭಂಡಾರದಲ್ಲಿ ಪದಗಳಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಕರ್ಣಾಟಕದಿಂದ ಆಗಮಿಸಿದ್ದ "ಲಯತರಂಗದ" ಐದು ಮಂದಿ ತಂಡವಾದ ಅರುಣ್ ಕುಮಾರ್, ರಾಜಕಮಲ್, ಗಿರಿಧರ್ ಉಡುಪ, ಸೊಲೊಮನ್ ಹಾಗೂ ಪ್ರಮಥ್ ಕಿರಣ್ ರವರ ಕೊಳಲು, ಘಟಂ, ಮೃದಂಗ, ತಬಲ, ಕೀಬೋರ್ಡ್, ಡ್ರಮ್ಸ್, ಮೋರ್ಚಿಂಗ್ ಮತ್ತಿತರ ವಾದ್ಯಗಳಲ್ಲಿ ಅಪಾರ ನಿಪುಣತೆ ಹೊಂದಿದವರು. ಅವರುಗಳು ಒಬ್ಬರಿಗೊಬ್ಬರು ಸರಿಯಾಗಿ ಹೊಂದಾಣಿಸಿಕೊಂಡು, ಒಳ್ಳೇ ಪೈಪೋಟಿಯೊಂದಿಗೆ ತಮ್ಮ ಕೈಚಳಕ, ಬಾಯ್ಚಳಕ ಮೂಲಕ ಸಂಗೀತದ ರಸದೌತಣವನ್ನೆ ಬಡಿಸಿ ನೆರೆದಿದ್ದ ಪ್ರೇಕ್ಶಕರನ್ನು ಮಂತ್ರಮುಗ್ಧರಾಗಿಸಿದರು. ಅವರೊಂದಿಗೆ, ಇಲ್ಲಿಯವಳೇ ಆದ ಕುಮಾರಿ ಮಧುಮಿತ ಪರ್ಮಾರ್ ಎಂಬ 14 ವರ್ಷದ ಬಾಲೆ ಲಯತರಂಗ ತಂಡದೊಂದಿಗೆ ತನ್ನ ಸಾಕ್ಸೊಫೋನ್ ನುಡಿಸುವಿಕೆಯಿಂದ ನಮ್ಮೆಲ್ಲರ ಮನ ಸೆಳೆದಳು...ಇವರೆಲ್ಲರೂ ಸ್ವದೇಶ, ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಮನರಂಜಿಸಿದ್ದಾರೆ.

ಬೃಂದಾವನದ ಹೆಣ್ಣು ಮಕ್ಕಳಿಂದ ಎರಡು ನೃತ್ಯ ಪ್ರದರ್ಶನ ಬಹಳ ಸೊಗಸಾಗಿತ್ತು. ತದನಂತರದಲ್ಲಿ, ನಮ್ಮ ಬೃಂದಾವನ ಯಾವಾಗಲೂ "ದಾನ ಧರ್ಮ" ಕಾರ್ಯಕ್ರಮಗಳನ್ನು ಹೊಮ್ಮಿಕೊಂಡಿರುವಂತೆ, ಈ ಬಾರಿ 'ಅಕ್ಷಯ ಪಾತ್ರೆ' ಎನ್ನುವ ಸಂಸ್ಥೆಯ ಮಕ್ಕಳಿಗೆ ಉಚಿತ ಊಟ ವ್ಯವಸ್ಥೆ ಮಾಡುವ ಪ್ರೊಗ್ರಾಮ್ ಬಗ್ಗೆ, ವಿಡಿಯೋ ಸಹಿತ ವಿವರಣೆ ಕೊಟ್ಟರು ರಘು ಮೂರ್ತಿಯವರು. ಈ ಒಂದು ಒಳ್ಳೆಯ ಕಾರ್ಯಕ್ಕೆ ರಾಫೆಲ್ ಚೀಟಿ ಮಾರಾಟದ ಮೂಲಕ ಹಣ ಸಂಗ್ರಹಿಸಲಾಗಿತ್ತು. ಅದರಲ್ಲಿ ವಿಜೇತರಾದವರಿಗೆ ಐ-ಪಾಡ್, ಡಿಜಿಟಲ್ ಫೋಟೋ ಫ್ರೇಮ್, ಮುಂತಾದ ಬಹುಮಾನಗಳನ್ನು ವಿತರಿಸಿದುದಲ್ಲದೆ ಸುಮಾರು1100 ಡಾಲರನ್ನು "ಅಕ್ಷಯ ಪಾತ್ರೆ" ಸಂಸ್ಥೆಗೆ ನೀಡಲಾಯಿತು.

ಈ ಸಂಜೆಯ ವಿಶೇಷ ಕಾರ್ಯಕ್ರಮ "ಅಕ್ಕ" ಸಂಸ್ಥೆಯವರು ಎಲ್ಲ ಕನ್ನಡ ಕೂಟಗಳಿಗೆ ಉಗಾದಿಯ ಉಡುಗೊರೆಯಾಗಿ ನೀಡಿದ "ನಗೋಕೆ ಇಲ್ಲ ರಿಸಿಶೆನ್ನು" ಪ್ರಾರಂಭವಾಯಿತು. ಬೆಂಗಳೂರಿನಿಂದ ಆಗಮಿಸಿದ್ದ ಕಲಾವಿದರಿಂದ ಹಾಸ್ಯಸಂಜೆ ರಿಚರ್ಡ್ ಲೂಯಿಸ್, ಗಂಗಾವತಿ ಪ್ರಾಣೇಶ್ ಹಾಗೂ ಮಿಮಿಕ್ರಿ ದಯಾನಂದ್ ಅವರುಗಳು ನಡೆಸಿಕೊಟ್ಟ ಕಾರ್ಯಕ್ರಮ ಇದಾಗಿತ್ತು. ಅಶೋಕ ಕಟ್ಟಿಮನಿಯವರು ಕಲಾವಿದರನ್ನು ಪರಿಚಯ ಮಾಡಿಸಿಕೊಟ್ಟರು. ಮೊದಲಿಗೆ ರಿಚರ್ಡ್ ಲೂಯಿಸ್ ಹಾಗು ಪ್ರಾಣೇಶ್ ರವರು ತಮ್ಮ ಅಮೊಘ ವಾಕ್ಚಾತುರ್ಯ, ನವಿರಾದ ಹಾಸ್ಯದ ಹೊನಲಿಂದ ನೆರೆದಿದ್ದ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಇದೇ ವಿಧದಲ್ಲಿ ಜೀವನದಲ್ಲಿ ಎಲ್ಲಾ ಆಗುಹೋಗುಗಳನ್ನೂ ಒಂದು ಸಲೀಸಾದ ಹಾಸ್ಯದೃಷ್ಟಿಯಿಂದ ಅನುಭವಿಸುವ ಪ್ರವೃತ್ತಿ ಬೆಳೆಸಿಕೊಂಡರೆ, ನಮ್ಮ ಜೀವನಯಾತ್ರೆ ಎಷ್ಟು ಸುಗಮ, ಸುಂದರವಾಗಿರಬಹುದು, ಅಲ್ವಾ? ನಂತರ ಬಂದ ದಯಾನಂದರವರು ಚಿತ್ರರಂಗದ ಅನೇಕ ನಟರ ಅಭಿನಯ, ನಾಟ್ಯ ಶೈಲಿಯ ಅನುಕರಣೆಯಿಂದ ನಮ್ಮನ್ನು ರಂಜಿಸಿದರು...'ಅಣ್ಣಾವ್ರು', ಬಾಲಕೃಷ್ಣ, ಶಂಕರನಾಗ್, ಹೀಗೆ ಹಲವಾರು ನಟರನ್ನು ನಮ್ಮ ಮುಂದೆ ತಂದರು. ಸಮಯದ ಪರಿವೆಯೇ ನಮಗಾರಿಗೂ ಇರಲಿಲ್ಲ.

Pranesh, Richard and Dayanand
ಬೃಂದಾವನದ ಅಧ್ಯಕ್ಷೆ ಉಷ ಪ್ರಸನ್ನ ಕುಮಾರ್ ರವರಿಂದ ಎರಡು ಮಾತು ಹಾಗು ಮೆರ್ಲಿನ್ ಮೆಂಡೊಂಕ ರವರಿಂದ ವಂದನಾರ್ಪಣೆಯೊಂದಿಗೆ ವಿಜೃಂಭಣೆಯಿಂದ ನಡೆದ "ವಸಂತೋತ್ಸವ" ಸಮಾರಂಭಕ್ಕೆ ತೆರೆ ಬಿದ್ದಿತು. ಈ ಉನ್ನತ ಮಟ್ಟದ ಕಾರ್ಯಕ್ರಮಗಳಾದ ಮೇಲೆ, ಕಾಯುತಿತ್ತು 'ಹಬ್ಬದೂಟ' ಹೊಯ್ಸಳ ದವರಿಂದ - ರುಚಿಕಟ್ಟಾದ ಮೊಳಕೆ ಕಟ್ಟಿದ ಹೆಸರು ಕಾಳಿನ ಸಾಲಡ್, ಚಪಾತಿ ಪಲ್ಯ, ಬೆಂಡೆಕಾಯಿ ಗೊಜ್ಜು, ಅವರೇಕಾಳು ಬಾತು, ಮೊಸರು ರಾಯಿತ, ಗರಿ ಗರಿ ಪಕೊಡ, ಹಪ್ಪಳ, ಮೈಸೂರ್ ಪಾಕ್, ಮೊಸರನ್ನ ಉಪ್ಪಿನಕಾಯಿಗಳೊಂದಿಗೆ ಸುಪುಷ್ಟ ಭೋಜನದ ವ್ಯವಸ್ಥೆ. ನಮಗೆಲ್ಲಾ ಊಟದ ತಟ್ಟೆಗಳ ಅಣಿ ಮಾಡಿಕೊಟ್ಟದ್ದು ಬೃಂದಾವನದ ಯುವ ಸ್ವಯಂಸೇವಕರ ತಂಡ ಅಚ್ಚುಕಟ್ಟಾಗಿ ನಗೆಮೊಗದಿಂದ ಊಟ ಬಡಿಸಿದ ಮಕ್ಕಳ ನಡುವಳಿಕೆ ಶ್ಲಾಘನೀಯ.

ಸಂಜೆಯ ಬಿಸಿ ಬಿಸಿ ಉಪ್ಪಿಟ್ಟಿನ ವ್ಯವಸ್ಥೆ ಮಾಡಿದ್ದ ಕಾರೈಕುಡಿ ಚೆಟ್ಟಿನಾಡ್ ಹೋಟೆಲ್ ನವರಿಗೂ, ರಾಫೆಲ್ ಟಿಕೆಟ್ ಗೆ ಬಹುಮಾನದ ವ್ಯವಸ್ಥೆ ಮಾಡಿದ್ದ ವೆಸ್ಟೆರ್ನ್ ಯುನಿಯನ್ನವರಿಗೂ, ಲಯತರಂಗ ಹಾಗು ಹಾಸ್ಯ ಸಂಜೆ ಕಾರ್ಯಕ್ರಮಗಳನ್ನು ಸ್ಪಾನ್ಸರ್ ಮಾಡಿದ ಗಾರ್ಡಿಯನ್ ಇನ್ಷುರೆನ್ಸೆನವರಿಗೂ, ಲಾಭರಹಿತ ಸಂಸ್ಥೆಯಾದ ನಮ್ಮ ಬೃಂದಾವನಕ್ಕೆ ವಿನಾಯಿತಿ ದರದಲ್ಲಿ ಒಳ್ಳೆಯ ಆಡಿಟೊರಿಯಮ್ ಹಾಗು ಕೆಫೆಟೀರಿಯಗಳನ್ನು ನೀಡಿದ್ದ ಈಸ್ಟ್ ವಿಂಡ್ಸರಿನ ಸ್ಕೂಲ್ ಬೋರ್ಡಿನವರಿಗೂ ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು.

ಬೆಂಗಳೂರಿನಿಂದ ಆಗಮಿಸಿದ್ದ ಕಲಾವಿದರಿಗೂ, ಮತ್ತು ಬೃಂದಾವನಕ್ಕೆ ಅವರೆಲ್ಲರೂ ಬರಲು ಸಹಕಾರ ಮಾಡಿದ ಅಕ್ಕ ತಂಡದವರಿಗೂ ನಮ್ಮೆಲ್ಲರ ವಂದನೆಗಳು. ಇಷ್ಟು ಒಳ್ಳೇ ರೀತಿಯ ಕಾರ್ಯಕ್ರಮಗಳನ್ನು ಆಯೊಜಿಸುತ್ತಾ, ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಬೃಂದಾವನದ "ಸ್ಫೂರ್ತಿ" ತಂಡಕ್ಕೆ ಹೃದಯಾಳದಿಂದ ಜಯಕಾರ ಸಲ್ಲಲೇ ಬೇಕು.

ಇದೇ ರೀತಿ ' ಈ ಸುಮಧುರ ಸ್ನೇಹ ಸಮ್ಮಿಲನ, ನಮ್ಮೀ ಬೃಂದಾವನ' ಇನ್ನೂ ಹೀಗೇ ಏಳಿಗೆ ಹೊಂದುತ್ತಾ ಮತ್ತಷ್ಟು ಎತ್ತರಕ್ಕೆ ಬೆಳಯಲಿ ಎಂದು ಪ್ರೀತಿಯಿಂದ ಆಶಿಸುತ್ತ ನಾನು ವಿರಮಿಸುತ್ತೇನೆ...ಮತ್ತೆ ನೋಡೋಣ...

ಈ ಸುಮಧುರ ಸಂಜೆಯ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+