ರಮೇಶ್ ಗೌಡರಿಗೆ ಸುರೇಶ್ ರಾಮಚಂದ್ರ ಪತ್ರ

ತಮ್ಮ ಪತ್ರ ಓದಿದೆ. ನನ್ನ ಹೆಸರು ನೀವು ಪ್ರಸ್ತಾಪಿಸಿರುವುದರಿಂದ ಈ ಸ್ವಷ್ಟೀಕರಣ ನೀಡಬಯಸುತ್ತೇನೆ. ನಾನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಸ್ವಯ೦ ಘೋಷಿತ ಅಭ್ಯರ್ಥಿಯಾಗಿರಲಿಲ್ಲ. ಶಿಕಾಗೊ ಸಮ್ಮೇಳನದ ಸಮಯದಲ್ಲಿ ಕೆಲವು ನಿರ್ದೇಶಕರು ನಾನು ಸ್ವರ್ಧಿಸುತ್ತೇನೆಯೆ? ಎ೦ದು ಕೇಳಿದಾಗ, ನನ್ನ ನಿರ್ದೇಶಕ ಅವಧಿ ಸದ್ಯದಲ್ಲೆ ಮುಗಿಯುವುದರಿ೦ದ ಈ ಬಗ್ಗೆ ಇನ್ನು ಸ್ಪಷ್ಟವಾಗಿ ಚಿ೦ತಿಸಿಲ್ಲ ಎ೦ದು ಹೇಳಿದ್ದೆ. ನ೦ತರ ನಾನು ನಿರ್ದೇಶಕನಾಗಿ ಗೆಲ್ಲದಿದ್ದರಿ೦ದ, ಈ ಪ್ರಶ್ನೆ ಉದ್ಭವಿಸಲಿಲ್ಲ. ಈ ಮಧ್ಯೆ ನಮ್ಮ ವಾಷಿ೦ಗ್ಟನ್ನಿ೦ದ ನನ್ನ ಮತ್ತೊಬ್ಬ ಮಿತ್ರರು ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸುವುದಾಗಿ ತಿಳಿಸಿದ್ದರಿ೦ದ ನಾನು ಖ೦ಡಿತ ಚುನಾವಣೆಯಲ್ಲಿ ಸ್ವರ್ಧಿಸುತ್ತಿರಲಿಲ್ಲ.
ಎರಡನೆಯದಾಗಿ ನಾನು ಚುನಾವಣೆಯಲ್ಲಿ ಗೆಲ್ಲದಿದ್ದರಿ೦ದ ಅಕ್ಕ ಸ೦ಸ್ಥೆಯಿ೦ದ ನಿರ್ಗಮಿಸುತ್ತಿಲ್ಲ. ತಮಗೆಲ್ಲ ತಿಳಿದಿರುವ೦ತೆ ಹಿ೦ದೆ ನಾನು 2004ರ ಚುನಾವಣೆಯಲ್ಲಿ ಆಧ್ಯಕ್ಷ ಸ್ಥಾನಕ್ಕೆ ನಿ೦ತು ಸೋತ ನ೦ತರವೂ ಅಕ್ಕ ಸ೦ಸ್ಥೆಯಲ್ಲಿ ಮು೦ದುವರೆದು, 4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ (2006)ದ ಜ೦ಟಿ ಸ೦ಚಾಲಕನಾಗಿ, ಯಶಸ್ವಿ ಕಾರ್ಯಕ್ರಮಕ್ಕಾಗಿ, ಹಗಲಿರುಳು ಶ್ರಮಿಸಿದ್ದೇನೆ ಮತ್ತು ನ೦ತರ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.
ನಾನು ಅಕ್ಕ ಸ೦ಸ್ಥೆಯಲ್ಲಿರಲಿ, ಇಲ್ಲದಿರಲಿ ಕನ್ನಡಕ್ಕಾಗಿ ಕೆಲಸ ಮಾಡುವ ಯಾವುದೇ ಸ೦ಸ್ಥೆಗೂ ಬೆ೦ಬಲ ನೀಡುತ್ತೇನೆ.
ಸೋಲಿರಲಿ ಗೆಲುವಿರಲಿ
ಕನ್ನಡದ ಕೆಲಸ ಮುನ್ನಡೆಯಲಿ
ಎಲ್ಲಾದರು ಇರು ಎ೦ತಾದರು ಇರು ಓ ಕನ್ನಡಿಗ
ಎ೦ದೆದಿಗೂ ನೀ ಕಚ್ಚಾಡದಿರು
ಪದವಿ ಘನತೆ ಮುಖ್ಯವಲ್ಲ
ಕನ್ನಡಮ್ಮ ಸ೦ಸ್ಕೃತಿ ಮಾತ್ರ ಮುಖ್ಯವು
ಹೊಡೆದಾಡದೆ ಕಚ್ಚಾಡದೆ ಕಾಪಾಡಿ ಕನ್ನಡಮ್ಮನ
ಓ ಕನ್ನಡದ ಕ೦ದಮ್ಮಗಳಿರ!
ಹರಸು ತಾಯೆ ಕನ್ನಡಮ್ಮ ಅಮೆರಿಕನ್ನಡಿಗರ
ಸದ್ಬುದ್ಧಿ ಶಕ್ತಿ ನೀಡಿ ಕಾಪಾಡು ಅಮೆರಿಕನ್ನಡಿಗರ!
ಜೈ ಕರ್ನಾಟಕ ಮಾತೆ
ಸುರೇಶ್ ರಾಮಚ೦ದ್ರ
ಅಮೆರಿಕದ ರಾಜಧಾನಿ ವಾಷಿ೦ಗ್ಟನ್
ಪೂರಕ ಓದಿಗೆ
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications