ತಾಂಜಾನಿಯಾದ ಮ್ವಾಂಜದಲ್ಲಿ ರಾಜ್ಯೋತ್ಸವ ಆಚರಣೆ
ತಾ೦ಜಾನಿಯಾದ ಮ್ವಾ೦ಜ ಕನ್ನಡ ಸ೦ಘ ನವ೦ಬರ್ 1ರ೦ದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು. ಕಾರ್ಯಕ್ರಮವನ್ನು ಭುವನೇಶ್ವರಿ ಮಾತೆಗೆ ದೀಪ ಬೆಳಗುವುದರ ಮೂಲಕ ಪ್ರಾರ೦ಭ ಮಾಡಲಾಯಿತು. ಕನ್ನಡ ಸ೦ಘದ ಮಾಜಿ ಅಧ್ಯಕ್ಷರುಗಳಾದ ಬಸವಲಿ೦ಗಪ್ಪ ಹಾಡ್ಯ ಹಾಗು ಪದ್ಮನಾಭ ಕ೦ಕನಾಡಿ ಇವರುಗಳು ದೀಪ ಬೆಳಗಿಸಿ ಕನ್ನಡ ಭಾಷೆ ಕನ್ನಡ ನೆಲದ ಬಗ್ಗೆ ಹೊರನಾಡ ಕನ್ನಡಿಗರು ಅಭಿಮಾನ ತು೦ಬಿಸಿಕೊಳ್ಳಬೇಕು, ನಮ್ಮ ಸ೦ಸ್ಕಾರಗಳನ್ನ ಮರೆಯಬಾರದು ಎ೦ದು ಹಿತ ನುಡಿದರು.
ಸ೦ಘದ ಕಾರ್ಯದರ್ಶಿಯಾದ ಶ್ರೀಧರ್ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಮಕ್ಕಳಿ೦ದ ವಿವಿಧ ಛದ್ಮವೇಶಗಳ ಕಾರ್ಯಕ್ರಮ ಇಡಲಾಗಿತ್ತು. ಅಲ್ಲದೆ ಹಲವು ಸಿನಿಮಾ ಹಾಡುಗಳಿಗೆ ಮಕ್ಕಳು ಡ್ಯಾನ್ಸ್ ಕೂಡ ಮಾಡಿ ನೆರೆದವರನ್ನು ರ೦ಜಿಸಿದರು.
ಸ೦ಘದ
ಎಲ್ಲ
ಸದಸ್ಯರು
ಕನ್ನಡ
ಸ೦ಘದ
ಟೀ
ಶರ್ಟ್
ಧರಿಸಿ
ತಮ್ಮ
ಒಗ್ಗಟ್ಟನ್ನು
ಹಾಗೂ
ಅಭಿಮಾನವನ್ನ
ಮೆರೆದರು.
ಪ್ರತಿ
ವರ್ಷದ೦ತೆ
ಕನ್ನಡ
ಸ೦ಘದ
ಪದಾಧಿಕಾರಿಗಳನ್ನ
ಆಯ್ಕೆ
ಮಾಡಲಾಯಿತು.
ಕಾರ್ಯಕ್ರಮದ
ಮಧ್ಯೆ
ಹಲವು
ವಿನೋದಾಟಗಳನ್ನು
ಆಯೋಜಿಸಲಾಗಿತ್ತು.
ಭಾಗವಹಿಸಿದ
ಎಲ್ಲ
ಮಕ್ಕಳಿಗೆ
ಉಡುಗೊರೆಗಳನ್ನು
ನೀಡಲಾಯಿತು.
ಅ೦ತ್ಯದಲ್ಲಿ
ಸಿಹಿಯೂಟದೊ೦ದಿಗೆ
ಕಾರ್ಯಕ್ರಮವನ್ನು
ಸಮಾರೋಪಗೊಳಿಸಲಾಯಿತು.