ನನ್ನ ತೂಕ ಇಳಿಸೋ ಡೊಳ್ಳು ಹೊಟ್ಟೆಯ ಗಣಪ

ಜ್ಯೋತಿ ಶೇಖರ್, ಉತ್ತರ ಕ್ಯಾಲಿಫೋರ್ನಿಯ
ಹಲವಾರು ಮಹಿಳೆಯರಂತೆ, ತಾರುಣ್ಯಕ್ಕೆ ಕಾಲಿಟ್ಟಾಗಿನಿಂದ ನನ್ನ ತೂಕದ ಜೊತೆ ನನಗೊಂಥರ love-hate relationship ಇದೆ. ಹೀಗಾಗಿ, ಮೈ ತೂಕ ಸರಿದೂಗಿಸಲು ನಾನು ಪಾಲಿಸದ dietಗಳಿಲ್ಲ, try ಮಾಡದ exerciseಯೇ ಇಲ್ಲ ಅಂತಲೇ ಹೇಳಬಹುದು. Atkins, South beach ಇತ್ಯಾದಿ ಡಯಟ್ಟುಗಳು ನೀರು ಕುಡಿದಂತೆ ಗೊತ್ತು. ಇನ್ನು, ಯೋಗ, pilates, bollywood aerobics ಇವುಗಳನ್ನೂ ಮಾಡಿ ಕತ್ತು ಉಳುಕಿಸಿಕೊಂಡಿದ್ದಾಗಿದೆ. ಹೀಗಿರುವಾಗ, ಹೊಸದಾಗಿ ನಮ್ಮ ಮನೆಯ ಹತ್ತಿರ ಒಂದು fitness center ಶುರುವಾಗಿದೆ, ಅದರ ಉದ್ಘಾಟನೆ ಮಾಡೋಣ ಬರ್ತೀಯಾ? ಎಂದು ಗೆಳತಿ ಮಾಲಾ ಕೇಳ್ದಾಗ ಇಲ್ಲ ಅಂತೀನ್ಯೇ? ಸರಿ, ಒಳ್ಳೆಯ ಮುಹೂರ್ತ ನೋಡಿ, ಇಬ್ಬರೂ ಅಲ್ಲಿಗೆ ಕಾಲಿಟ್ಟೆವು.
ಮೇಲಿಂದ ಕೆಳಗೆ ಕನ್ನಡಿಗಳುಳ್ಳ ಝಗ ಝಗಿಸುವ ದೊಡ್ಡ ಹಾಲಿನಲ್ಲಿ ವ್ಯಾಯಾಮ ಉಪಕರಣಗಳನ್ನು ನೀಟಾಗಿ ಜೋಡಿಸಿದ್ದರು. ಸಲ್ಮಾನ್ ಖಾನನ್ನು ನಾಚಿಸುವಂತಹ ಮೈಕಟ್ಟಿದ್ದ ಅಲ್ಲಿನ personal trainer ನಮಗೆ ಒಂದು ಗಂಟೆಯ ಬಿಟ್ಟಿ ಉಪದೇಶ ಕೊಟ್ಟ. ಅವನು ಹೇಳಿಕೊಟ್ಟ ಎಲ್ಲ exercisesಊ ನಮಗೆ ಗೊತ್ತಿದ್ದರೂ, ಬಿಟ್ಟಿ ಎಂದ ಮೇಲೆ ಭಾರತೀಯರಾದ ನಾವು ಅದನ್ನು ಉಪಯೋಗಿಸದೆ ಬಿಡಲು ಸಾಧ್ಯವೇ ? ಸರಿ, ನಾನೂ ಮಾಲಾ ಒಂದೊಂದೇ ಉಪಕರಣಗಳನ್ನು ಬಳಸುತ್ತಾ ಬಂದೆವು.
ಅಲ್ಲೇ ಇದ್ದ ದುಂಡನೆಯ ದೊಡ್ಡ ಚೆಂಡಿನ ಮೇಲೆ ಕೂತು ಕಾಲಿನ ಸ್ನಾಯುಗಳನ್ನು ಬಿಗಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಫಳಕ್ಕೆಂದು ಪೂರಾ gymnasium ಬೆಳಕಿನಿಂದ ಕೋರೈಸತೊಡಗಿತು. ಹಾಂ! ಇದೇನು ಎಂದು ಕಣ್ಣು ಕಿರಿದುಗೊಳಿಸಿ ನೋಡಿದರೆ, ಊಹೆಗೂ ನಿಲುಕದ ವಿಷಯ. ನನ್ನ ಪ್ರೀತಿಯ ಪರಮಾತ್ಮ ಗಣೇಶ treadmill ಮೇಲೆ ಬೆವರು ಸುರಿಸುತ್ತಿದ್ದಾನೆ! ಅಯ್ಯೋ ಕಲಿಗಾಲವೇ, ನನ್ನ ಗಣೇಶನಿಗೂ ನನಗೆ ಬಂದ ಗತಿಯೇ ಬಂದಿತೇ ಎಂದು ಹತ್ತಿರ ಹೋಗಿ ವಿಚಾರಿಸಿದೆ.
"ಅಪ್ಪಾ, ತಂದೆ ಗಣೇಶ, ಶರಣು, ಶರಣು! ನಿನ್ನನ್ನು ಇಲ್ಲಿ ನೋಡುತ್ತಿರುವುದು ಪರಮಾಶ್ಚರ್ಯವೇ ಸರಿ. ನಮ್ಮಂತಹ ಪಾಮರರ ಜೊತೆಯಲ್ಲಿ ನೀನೂ ಸಹ ಇಲ್ಲಿ ಬೊಜ್ಜು ಇಳಿಸಲು ಬಂದಿರುವ ಗುಟ್ಟು ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ. ಇದೇನು ಲೀಲೆ, ಸ್ವಲ್ಪ ಬಿಡಿಸಿ ಹೇಳಪ್ಪ?" ಎಂದೆ.
ಬೆವರು ಒರೆಸಿಕೊಳ್ಳುತ್ತ, treadmillನ cooldown button ಒತ್ತಿ ಗಣಪತಿ ನುಡಿದ, "ಲೀಲೆ ಗೀಲೆ ಎಂತಾದ್ದೂ ಇಲ್ಲಮ್ಮ. ಇದೆಲ್ಲಾ ನಿನ್ನಂತಹ ಭಕ್ತಾದಿಗಳ ಅತಿಯಾದ ಭಕ್ತಿಯ ಕೃಪೆ, ಅಷ್ಟೇ".
ಇದನ್ನು ಕೇಳಿ ನಾನು ಹೌಹಾರಿದೆ. ನನ್ನ ಮೈಯಲ್ಲಿ ಕೊಬ್ಬನ್ನು ಇಳಿಸು ಗಣೇಶ ಅಂತ ಬೇಡಿದ್ದೇನೋ ನಿಜ. ಆದರೆ, ಇದು ಗಣೇಶನನ್ನು gymಗೇ ಕರೆತಂತೆ?
ನನ್ನ ಗೊಂದಲ ನೋಡಿ ಗಣೇಶನೇ ಹೇಳಿದ, "ಅರ್ಥವಾಗಲಿಲ್ವೇ? ನೋಡಮ್ಮ, ನೀನು ಯಾವತ್ತಾದರೂ ಯಾವುದೂ ಬೇಡಿಕೆಯಿಲ್ಲದೆ ನನಗೆ ನಮಿಸಿದ್ದೀಯ, ಹೇಳು? ಏನೋ ಒಂದು ಕೇಳುತ್ತಲೇ ಇರ್ತೀಯಾ ಅಲ್ವ? ಅಮೇರಿಕೆಗೆ ಬಂದಾಗ green card ಬೇಕೆಂದೆ. ಅದು ಕೊಡಿಸಿದರೆ, ಒಳ್ಳೆ ಕೆಲಸ, ಮನೆ, ಮಕ್ಕಳು ಎಲ್ಲಾ ಬೇಕೆಂದೆ. ಹೂಂ, ಅದೂ ಆಗಲಿ ಎಂದು ತಥಾಸ್ತು ಎಂದೆ. ಸರಿ, ಈಗಲಾದರೂ ನಿನಗೆ ನೆಮ್ಮದಿ ಇದೆಯೋ? ಇಲ್ಲ, ಇಷ್ಟೆಲ್ಲಾ ದೊರಕಿದ ಮೇಲೆ ಈಗ ಭಾರತಕ್ಕೆ ಹಿಂತಿರುಗುವ ಹವಣಿಕೆ ಶುರುವಾಗಿದೆ. ಅದಕ್ಕೆ ಈಗಾಗಲೇ ನನ್ನ ಹತ್ತಿರ application ಹಾಕಿದ್ದೀಯಲ್ವ?" ಎಂದ.
ಇದು ಕೇಳಿ ನನಗೆ ಒಂಥರ ಅವಮಾನನೇ ಆಯ್ತೂನ್ನಿ. ಯಾಕೆಂದರೆ, ದೇವರ ಮುಂದೆ ನಿಂತಾಗ ಚೌಕಾಸಿಯೇನು ಅಂತ, ಮನಸ್ಸಿಗೆ ಬಂದ ಸಾವಿರ ಬೇಡಿಕೆಗಳನ್ನೂ ಹೊರಚೆಲ್ಲಿರುತ್ತೀವಿ. ಒಂದಲ್ಲದಿದ್ದರೆ ಇನ್ನೊಂದನ್ನು ದಯಪಾಲಿಸಬಹುದು ಎಂಬ ದೂರಾಲೋಚನೆಯಿಂದ. ಹಾಗಂತ, ಆ ದೇವರು ನಿಜಕ್ಕೂ ಪ್ರತ್ಯಕ್ಷವಾಗಿ ನಮ್ಮನ್ನು ದಬಾಯಿಸಿದರೆ ಹೇಗೆ ? ಆದರೂ ಸಾವರಿಸಿಕೊಂಡು ಸವಾಲೆಸೆದೆ, "ಅಲ್ಲಪ್ಪ, ಗಣೇಶ, ಭಾರತಕ್ಕೆ ಹಿಂತಿರುಗಿ ನನ್ನ ತಾಯ್ನಾಡಿಗೆ ಸೇವೆ ಸಲ್ಲಿಸಿದರೆ ಏನು ತಪ್ಪು?"
ಗಜಮುಖ ನನ್ನೆಡೆಗೆ ಅಯ್ಯೋ ಪೆದ್ದಿ! ಎನ್ನುವ ಅನುಕಂಪದ ದೃಷ್ಟಿ ಬೀರಿ ನುಡಿದ, "ತಾಯಿ, ನೀನು ಹಿಂತಿರುಗೋದು ತಪ್ಪಲ್ಲ. ಆದರೆ, ನನಗೆ ಗೊತ್ತು, ನೀನು ಅಲ್ಲಿ ಹೋದ ಮೇಲೂ ತೃಪ್ತಿಯಾಗಿ ಕೂತಿರಲ್ಲ. ಎರಡು ದಿವಸವಾದ ಕೂಡಲೇ, ಅಲ್ಲಿನ pollution, corruption, ಅದೂ, ಇದೂ, ಅಂತ ಎಲ್ಲವನ್ನೂ ಅಮೆರಿಕೆಗೆ ಹೋಲಿಸಿ ಬದಲಿಸಲು ಶುರು ಮಾಡುತ್ತೀಯ. ಸರಿ, ಮಕ್ಕಳಿಗೆ ಸ್ಕೂಲಲ್ಲಿ ಸೀಟ್ ಕೊಡಿಸಪ್ಪ, ಒಳ್ಳೇಯ ಮನೆ, ಸೈಟು cheap rateನಲ್ಲಿ ಸುಸೂತ್ರವಾಗಿ ಕೊಡಿಸಪ್ಪ ಎಂಬ ಮೊರೆಗಳು ದಿನಕ್ಕೊಂದರಂತೆ ಶುರು. ನೀವು NRIಗಳು ಒಂದು ಕಡೆ ಸುಮ್ನೆ ಇರೊಲ್ಲ. ಅಮೇರಿಕೆಯಲ್ಲಿ ಭಾರತ ಸ್ಥಾಪಿಸಲು ನೋಡುತ್ತೀರ, ಭಾರತವನ್ನು ಅಮೇರಿಕೆಯಾಗಿ ಪರಿವರ್ತಿಸಲು ಹವಣಿಸುತ್ತೀರ. ಹೀಗಾಗಿ, ನಿಮ್ಮ ಬೇಡಿಕೆಗಳ ಪಟ್ಟಿ ನನ್ನ ಗೆಳೆಯ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಅವುಗಳನ್ನು ಪೂರೈಸಲು ಹೆಣಗಾಡುತ್ತಾ ನನ್ನ stress level ಏರುತ್ತಲೇ ಹೋಗುತ್ತದೆ. ಈ ಹಾಳು stressನಿಂದಲೇ ನಿನ್ನ ಮೈ ತೂಕ ಹೆಚ್ಚುತ್ತಿರುವುದು, ತೂಕ ಇಳಿಸದಿದ್ದರೆ ಖಾಯಿಲೆಗಳು ಖಂಡಿತ ಎಂದು ನನ್ನ ವೈದ್ಯರು ಮೊನ್ನೆ ತಾನೇ ಎಚ್ಚರಿಸಿದ್ದಾರೆ. ಆದ್ದರಿಂದಲೇ ನಾನು ಇಷ್ಟೆಲ್ಲಾ ಕಷ್ಟ ಪಡುತ್ತಿರುವುದು". ಗಣೇಶನ ಮಾತುಗಳು ಯಾಕೋ ಕೋಪದ ಗುಡುಗಿನಂತೆ ನನಗೆ ಕೇಳಿಸಿತು.
"ಇರಲಿ ಬಿಡು, ಗಣೇಶ," ನಾನು ಸಂತೈಸುವಂತೆ ಹೇಳಿದೆ, "ನೀನು ಹೇಗಿದ್ದರೂ ನಮಗೆ ಚೆನ್ನ. In fact, ನಮಗೆಲ್ಲ ನಿನ್ನ ಡುಮ್ಮಗಿರುವ figureಏ ಮನಸ್ಸಿನಲ್ಲಿ ಬೇರೂರಿದೆ. ಪ್ರಪಂಚದ ಸಮಸ್ತ ಭಾರ ಹೊತ್ತಿರುವ ನೀನು ದಪ್ಪಕ್ಕಿಲ್ಲದೆ ಬಡಕಲಾಗಿರಲು ಸಾಧ್ಯವೇ?"
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications