Get Updates
Get notified of breaking news, exclusive insights, and must-see stories!

ಕುವೆಂಪು ಸ್ಮರಣಗ್ರಂಥಕ್ಕೆಲೇಖನ ಆಹ್ವಾನ

ನಮಸ್ಕಾರ.
ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಕನ್ನಡ ವಸಂತ ಸಾಹಿತ್ಯೋತ್ಸವದಲ್ಲಿ ಕುವೆಂಪುರವರ ಜನ್ಮಶತಾಬ್ದಿಯ ಅಂಗವಾಗಿ ಕೆಲವು ವಿಶಿಷ್ಟ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆಂದು ನಿಮಗೆ ಈಗ್ಗೆ ಕೆಲವು ದಿನದ ಹಿಂದೆ ತಿಳಿಸಿದ್ದೆವಷ್ಟೆ. ಆ ಕಾರ್ಯಕ್ರಮಗಳ ಒಂದು ಮುಖ್ಯ ಭಾಗವಾಗಿ ಅವರ ಬಗ್ಗೆ ಒಂದು ಸ್ಮರಣಗ್ರಂಥವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕಾಗಿ ಈ ಕೆಳಕಂಡ ಸಂಪಾದಕ ಮಂಡಲಿಯನ್ನು ರಚಿಸಿದ್ದೇವೆ:

ನಾಗ ಐತಾಳ (ಪ್ರಧಾನ ಸಂಪಾದಕ), ನಳಿನಿ ಮೈಯ, ಎಚ್‌. ಕೆ. ಚಂದ್ರಶೇಖರ್‌, ಎಂ.ಎಸ್‌. ನಟರಾಜ್‌, ಮತ್ತು ಎಚ್‌. ವೈ. ರಾಜಗೋಪಾಲ್‌ (ಸಹಾಯ ಸಂಪಾದಕರು).

ಈ ಗ್ರಂಥದ ಬಿಡುಗಡೆಯನ್ನು ವಸಂತೋತ್ಸವ ಸಮಾರಂಭದಲ್ಲಿ ನೆರೆವೇರಿಸುತ್ತೇವೆ. ಈ ಯೋಜನೆ ಸಾರ್ಥಕವಾಗಲು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಹಾಯ, ಸಹಕಾರ ಅತ್ಯವಶ್ಯಕ. ಅದಕ್ಕಾಗಿ ಅಮೆರಿಕದಾದ್ಯಂತ ನೆಲಸಿರುವ ಕನ್ನಡ ಲೇಖಕ ಲೇಖಕಿಯರನ್ನು ಈ ಗ್ರಂಥಕ್ಕೆ ತಮ್ಮ ಲೇಖನಗಳನ್ನು ಕಳಿಸಬೇಕೆಂದು ಈ ಮನವಿ ಸಲ್ಲಿಸುತ್ತಿದ್ದೇವೆ.

ಗ್ರಂಥಕ್ಕೆ ಲೇಖನ ಬರೆಯುವವರು ಈ ಕೆಳಗಿನ ಶೀರ್ಷಿಕೆಗಳಿಗೆ ಸಂಬಂಧ ಪಟ್ಟ ಹಾಗೆ ತಮ್ಮ ಲೇಖನಗಳನ್ನು ಬರೆಯಬೇಕೆಂದು ಕೋರುತ್ತೇವೆ:

ಅ) ಕುವೆಂಪು ಕವನಗಳು (ಭಾವಗೀತೆಗಳು, ಕಥನ ಕವನಗಳು)
ಆ) ಕುವೆಂಪು ಕಾದಂಬರಿಗಳು (ಕಾನೂರು ಹೆಗ್ಗಡತಿ, ಮಲೆಯಲ್ಲಿ ಮದುಮಗಳು)
ಇ) ಕುವೆಂಪು ನಾಟಕಗಳು (ಬೆರಳ್ಗೆ ಕೊರಳ್‌, ಮಹಾರಾತ್ರಿ, ಬಿರುಗಾಳಿ, ರಕ್ತಾಕ್ಷಿ, ಸ್ಮಶಾನ ಕುರುಕ್ಷೇತ್ರ, ಜಲಗಾರ ಇತ್ಯಾದಿ.
ಈ) ಮಕ್ಕಳ ಸಾಹಿತ್ಯಕ್ಕೆ ಕುವೆಂಪು ಕೊಡುಗೆ
ಉ) ನಿಸರ್ಗ ಮತ್ತು ಕುವೆಂಪು
ಊ) ಕುವೆಂಪು ಮೇಲೆ ಪಾಶ್ಚಾತ್ಯ ಸಾಹಿತಿಗಳ ಪ್ರಭಾವ
ಎ) ಕುವೆಂಪು ಬರಹದಲ್ಲಿ ವಿಶ್ವೈಕ್ಯವಾದ (universality)
ಏ) ಕುವೆಂಪು ಪರಂಪರೆ
ಐ) ಕುವೆಂಪು ಭಾಷೆ ಮತ್ತು ಶೈಲಿ
ಒ) ಕುವೆಂಪು ಸಣ್ಣಕತೆಗಳು, ಬಿಡಿ ಬರಹಗಳು
ಓ) ಕುವೆಂಪು ಜೀವನ ದರ್ಶನ (ಅಧ್ಯಾತ್ಮ ಅವರ ಮೇಲೆ ಮಾಡಿದ ಪ್ರಭಾವ)
ಔ) ಕುವೆಂಪು ಮಹಾಕಾವ್ಯ, 'ಶ್ರೀ ರಾಮಾಯಣ ದರ್ಶನಂ'

ಮೇಲೆ ಕಾಣಿಸಿದ ಶೀರ್ಷಿಕೆಗಳಲ್ಲದೆ, ಕುವೆಂಪುರವರಿಗೆ ಸಂಬಂಧ ಪಟ್ಟಂತೆ, ಸೂಕ್ತವಾಗಿ ಕಂಡು ಬರುವ ಬೇರೆ ವಿಷಯಗಳ ಮೇಲೂ ಲೇಖನ ಬರೆಯಬಹುದು.

ಲೇಖಕರಿಗೆ ಕೆಲವು ಸೂಚನೆಗಳು:

ಲೇಖನಗಳು ಹೆಚ್ಚೆಂದರೆ, 10 - 15 ಪುಟಗಳಿಗೆ ಮೀರದಿರಲಿ.
ಲೇಖನಗಳು ಜನವರಿ 15, 2004ರ ಒಳಗೆ ನಮಗೆ ತಲುಪಬೇಕು.
ಲೇಖನಗಳನ್ನು ಸ್ವೀಕರಿಸುವ, ಸ್ವೀಕೃತ ಲೇಖನಗಳನ್ನು ಅಲ್ಲಲ್ಲಿ ಸೂಕ್ತವಾಗಿ ಮಾರ್ಪಡಿಸುವ ಬಗ್ಗೆ ಅಂತಿಮ ನಿರ್ಧಾರ ಸಂಪಾದಕ ಮಂಡಲಿಯದು. ಅಸ್ವೀಕೃತ ಲೇಖನಗಳ ಬಗ್ಗೆ ಲೇಖಕರಿಗೆ ಸೂಚನೆ ಕೊಡಲಾಗುವುದು.
ಲೇಖನದಲ್ಲಿ ಲೇಖಕರ ಸಂಪೂರ್ಣ ಹೆಸರು ಮತ್ತು ವಿಳಾಸ ಕಾಣಿಸಬೇಕು.
ಲೇಖನದ ಜೊತೆ, ಲೇಖಕರ ಕಿರು ಪರಿಚಯ ಕೊಡುವ ಚಿಕ್ಕ ಟಿಪ್ಪಣಿ ಇರಬೇಕು.
ಲೇಖನಗಳು ಮತ್ತು ಅವಕ್ಕೆ ಸಂಬಂಧಿಸಿದ ವಿವರಗಳು, ಬರಹ 5.0 ನಲ್ಲಿರಬೇಕು.
ಲೇಖನಗಳನ್ನು ವಿವರಗಳೊಂದಿಗೆ ಪ್ರಧಾನ ಸಂಪಾದಕ ನಾಗ ಐತಾಳರಿಗೆ [email protected] ವಿಳಾಸಕ್ಕೆ ಜನವರಿ 15, 2004ರ ಒಳಗೆ ತಲಪುವಂತೆ ಕಳಿಸಬೇಕು.

ಈ ಗ್ರಂಥ ಕುವೆಂಪು ಸ್ಮರಣೆಗೆ ನಾವು ತೋರುವ ಗೌರವ. ಆದ್ದರಿಂದ, ಲೇಖನಗಳ ಯೋಗ್ಯತೆಯ ಬಗ್ಗೆ ಸಂಪಾದಕ ಮಂಡಲಿ ತುಂಬ ಮುತುವರ್ಜಿ ವಹಿಸುತ್ತದೆ. ಇನ್ನೊಂದು ವಿಚಾರ: ಇದು ಸ್ಮರಣಗ್ರಂಥವಾದರೂ, ಕೇವಲ ಭಕ್ತಿಯ, ಹೊಗಳಿಕೆಯ ಗ್ರಂಥವಲ್ಲ. ಅಂಥ ಗ್ರಂಥ ಕುವೆಂಪುರವರಿಗೆ ಮೆಚ್ಚಿಕೆಯಾಗುತ್ತಿರಲಿಲ್ಲವೆಂದು ನಮ್ಮ ಅನಿಸಿಕೆ. ಆದ್ದರಿಂದ, ಲೇಖನಗಳು ವಿಚಾರಾತ್ಮಕವಾಗಿರಲಿ, ವಿಮರ್ಶಾತ್ಮಕವಾಗಿರಲಿ. ಹೊಗಳಿಕೆಯಾಗಲೀ, ಟೀಕೆಯಾಗಲೀ ವಿವೇಚನಾತ್ಮಕವಾಗಿರಲಿ, ನಿಷ್ಪಕ್ಷಪಾತವಾಗಿರಲಿ.

ಮೇಲಿನ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಯಸುವವರು, ದಯವಿಟ್ಟು ಈ ಗ್ರಂಥದ ಪ್ರಧಾನ ಸಂಪಾದಕ ನಾಗ ಐತಾಳರನ್ನು [email protected] ವಿಳಾಸದಲ್ಲಿ ಸಂಪರ್ಕಿಸಿ.

ಈ ಗ್ರಂಥ ಇಲ್ಲಿ ನೆಲಸಿರುವ ಕನ್ನಡಿಗರ ಸಾಹಿತ್ಯಾಭಿಮಾನಕ್ಕೆ, ವಿಚಾರಶೀಲತೆಗೆ, ಅಭಿರುಚಿಗೆ ಕನ್ನಡಿಯಾಗುವುದೆಂದು ಆಶಿಸುತ್ತೇವೆ.

ನಿಮ್ಮ ವಿಶ್ವಾಸಿ,
ಎಚ್‌.ವೈ. ರಾಜಗೋಪಾಲ್‌
[email protected]
(ಕಾರ್ಯನಿರ್ವಾಹಕ ಸಮಿತಿಯ ಪರವಾಗಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+