Get Updates
Get notified of breaking news, exclusive insights, and must-see stories!

ಪ್ರೇಕ್ಷಕರ ಮಂತ್ರಮುಗ್ಧರಾಗಿಸಿದ ಕೆಸಿಎ-‘ಗೋವಿನ ಕಥೆ’

*ಶಂಖಂ ಜಗನ್ನಾಥ್‌, ಇರ್ವೈನ್‌, ಕ್ಯಾಲಿಫೋರ್ನಿಯಾ

Govina Haduಕರ್ನಾಟಕ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಹೈಲೈಟ್‌- ‘ಗೋವಿನ ಕಥೆ’ ನೃತ್ಯ ರೂಪಕ. ನವಂಬರ್‌ 9ರಂದು‘ಡೈಮಂಡ್‌ ಬಾರ್‌ ಕನ್ನಡ ಕಲಿ’ ಶಾಲೆಯ ಮಕ್ಕಳು ಈ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು.

ನನ್ನ ಮನಸ್ಸಿನಲ್ಲಿ ಚಿತ್ರವಾಗಿ ಮಾಸಿ ಹೋಗಿದ್ದ ಹಲವಾರು ಭಾವನೆಗಳು ಗೋವಿನ ಕಥೆ ನೃತ್ಯ ನಾಟಕವನ್ನು ನೋಡಿದಮೇಲೆ ಮರಕಳಿಸಿದವು. ಸಣ್ಣ ವಯಸ್ಸಿನಲ್ಲಿ (ಸುಮಾರು 30 ವರ್ಷದ ಹಿಂದೆ) ಬೆಂಗಳೂರಿನ ಬಾಲಭವನದಲ್ಲಿ ಇದೇ ನಾಟಕವನ್ನು ನೋಡಿದ್ದೆ, ಆ ನೆನಪು ಮತ್ತೆ ಕಣ್ಮುಂದೆ ಬಂತು.

ನಾಟಕದ ಕಥಾವಸ್ತು ಬಹಳ ಹಿಂದಿನದಾದರೂ ನೃತ್ಯ ರೂಪಕ ತನ್ನ ವೈಶಿಷ್ಟತೆಯಿಂದ ರಂಜಿಸಿತು. ಪಾತ್ರಧಾರಿಗಳ ಮುಖಗಳು ‘ಎಲೆಯ ಮರೆಯ ಕಾಯಂತೆ’ ಮುಖವಾಡದ ಹಿಂದೆ ಅಡಗಿದ್ದವು. ಕೇವಲ ಮೂರುವಾರದಲ್ಲೇ ಎಲ್ಲಾ ಮಕ್ಕಳೂ ತಮ್ಮತಮ್ಮ ಪಾತ್ರಗಳನ್ನು ಅಭ್ಯಾಸಮಾಡಿ, ಈ ನಾಟಕದಲ್ಲಿ ತಮ್ಮ ಅರಳು ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸುಮಾರು 200ಕ್ಕೂ ಹೆಚ್ಚು ಪ್ರೇಕ್ಷಕರ ಮನ ತಣಿಸಿದರು.

ವಲ್ಲೀಶ ಶಾಸ್ತ್ರಿಯವರ ನಿರ್ವಹಣೆ ಮತ್ತು ನಿರ್ದೇಶನ, ಶೋಭಾ ಸಂಜಯರವರ ನೃತ್ಯ ಸಂಕಲನ, ಸುಮಾ ಭಟ್‌ ಮತ್ತು ಸಂಗಡಿಗರ ವೇಷ ವಿನ್ಯಾಸ, ಪ್ರವೀಣ್‌ ಡಿ ರಾವ್‌ CDಯ ಹಿನ್ನೆಲೆ ಗಾಯನ, ಹಾಗೂ ಕತ್ತಲೆ-ಬೆಳಕಿನ ಸಂಕಲನ, ಇವೆಲ್ಲವೂ ಮೇಳಯಿಸಿ ಪ್ರೇಕ್ಷಕರನ್ನೂ ವಿಸ್ಮಯದಲ್ಲಿ ಮುಳುಗಿಸಿದವು.

ಪಾತ್ರಧಾರಿಗಳ ತಾಳಕ್ಕೆ ತಕ್ಕ ನಟನೆ, ಹಾವ ಭಾವಗಳಿಂದ ಕೂಡಿದ ನೃತ್ಯ, ಈ ನಾಟಕವನ್ನು ನೋಡಿದ ಪ್ರೇಕ್ಷಕರನ್ನು ಮಾಯಾಲೋಕಕ್ಕೆ ಕೊಂಡೊಯ್ದಿತ್ತು. ಸೂತ್ರಧಾರರ ನಾಟಕದ ನಿರೂಪಣೆ ಬಹಳ ರಸವತ್ತಾಗಿತ್ತು. ಎಲ್ಲಾ ಹಸುಗಳೂ, ಕರುಗಳೂ ಮತ್ತು ಇತರ ಪಾತ್ರಧಾರಿಗಳೂ ನಾಟ್ಯದ ಛಂದಸ್ಸಿನಿಂದ ಕೂಡಿದ ನಟನೆಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು.

ನಾಟಕದ ಕೆಲವೊಂದು ದೃಶ್ಯದಲ್ಲಿ ಹಸು/ಕರುಗಳ ಆಗಮನ, ನಿರ್ಗಮನಗಳು ಸೂತ್ರಧಾರರ ತೆರೆಯ ಮೂಲಕ ಸುಸೂತ್ರವಾಗಿ ನಡೆಯಿತು (Entering and exiting of artists from the stage through narrator’s virtual backdrop). ಗೊಲ್ಲನ (ಚೈತ್ರ ಬೆಟಗೇರಿ ) ಗೋವುಗಳ ಕರೆ, ಅರ್ಬುದನ (ಅಂಜಲಿ ಹರಿ) ಆರ್ಭಟ ಮತ್ತು ಅಬ್ಬರದ ಕುಣಿತ, ಪುಣ್ಯಕೋಟಿ (ಶೀಲಾ ಭಟ್‌) ಹಾಗೂ ಕರುವಿನ (ಅರ್ಪಿತಾ ಬಣಜಿ) ಅಗಲಿಕೆ/ಆಲಿಂಗನ ಕಣ್ಣಿಗೆ ಒಂದು ಹಬ್ಬವಾಗಿತ್ತು. ಅರ್ಬುದ ಮತ್ತು ಪುಣ್ಯಕೋಟಿಯ ಸತ್ಯ ಮತ್ತು ವಾಚ್ಯಗಳ ‘ವಾಗ್ವಾದ’ ಪ್ರೇಕ್ಷಕ ಬಳಗದಲ್ಲಿದ್ದ ಎಲ್ಲಾ ಮಕ್ಕಳ ಮನವನ್ನೂ ಸೂರೆಗೊಂಡಿತ್ತು. ಪುಣ್ಯಕೋಟಿಯ ಕರುವಿನಿಂದ ಅಗಲಿಕೆ ಕೆಲವೊಂದು ಪ್ರೇಕ್ಷಕರ ಕಣ್ಣಿನಲ್ಲಿ ಹನಿ ತಂದಿತು.

ನಾಟಕದ ಮಧ್ಯೆ ನಿಶ್ಯಬ್ದವಾದ ಪ್ರೇಕ್ಷಕರನ್ನು ನೋಡಿದಾಗ ಅನ್ನಿಸಿದ್ದು: ಈ ನಾಟಕ ನನ್ನ ಮೂರು ವರ್ಷದ ಮಗ ಸುಹಾಸನಿಂದ ಹಿಡಿದು 75 ವಯಸ್ಸಿನ ತಾತ, ಅಜ್ಜಿಗಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದೆ ಎಂದು.

ಅಮೇರಿಕಾದಲ್ಲಿ ಹುಟ್ಟಿದ ಕನ್ನಡದ ಮಕ್ಕಳೆಲ್ಲರೂ ಈ ನಾಟಕವನ್ನು ನೋಡಲೇಬೇಕು. ಸತ್ಯವೇ ನಮ್ಮ ತಾಯಿ ತಂದೆ ಎಂದ ಪುಣ್ಯಕೋಟಿ ಕಥೆಗಿಂತ ಮಕ್ಕಳಿಗೆ ದೊಡ್ಡ ನೀತಿಪಾಠ ಬೇರೆ ಯಾವುದಿದ್ದೀತು ?

ಮುಖಪುಟ / ಸಾಹಿತ್ಯ ಸೊಗಡು


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+