ಪ್ಯಾಂಟ್ನಲ್ಲಿ 60 ಹಾವುಗಳು, ಹಲ್ಲಿಗಳು ಮತ್ತು ಸರೀಸೃಪಗಳೊಂದಿಗೆ ಸಿಕ್ಕಿಬಿದ್ದ ಯುಎಸ್ ಕಳ್ಳ
ಲಾಸ್ ಏಂಜಲೀಸ್, ಆ. 25: ಅಮೆರಿಕಾಕ್ಕೆ ಅಧಿಕ ಮೌಲ್ಯದ ಸರೀಸೃಪ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೋರ್ವ ಸಿಕ್ಕಿಬಿದ್ದಿದ್ದಾನೆ. ಈತ ಹಾವು ಮತ್ತು ಹಲ್ಲಿಗಳನ್ನು ತನ್ನ ಪ್ಯಾಂಟ್ನಲ್ಲಿ ಮರೆಮಾಡಿಟ್ಟುಕೊಂಡು ಯುನೈಟೆಡ್ ಸ್ಟೇಟ್ಸ್ಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಬಂಧಿತನನ್ನು ಜೋಸ್ ಮ್ಯಾನುಯೆಲ್ ಪೆರೆಜ್ ಎಂದು ಗುರುತಿಸಲಾಗಿದೆ. ಈತ $750,000 ಮೌಲ್ಯದ ಸರೀಸೃಪ ಕಳ್ಳಸಾಗಣೆ ಮಾಡುತ್ತಿದ್ದನು. ಪೆರೆಜ್ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತಮ್ಮ ಮನೆಯನ್ನು ಹೊಂದಿದ್ದಾರೆ. ಇವರು ಸರೀಸೃಪ ಸಾಗಣೆ ಆರು ವರ್ಷಗಳ ಯೋಜನೆಯನ್ನು ರೂಪಿಸಿದ್ದರು. ಈ ಯೋಜನೆ ಪ್ರಕಾರ ಮೆಕ್ಸಿಕೋ ಮತ್ತು ಹಾಂಗ್ ಕಾಂಗ್ನಿಂದ ಅಮೆರಿಕಾಗೆ 1,700 ಪ್ರಾಣಿಗಳನ್ನು ತರಲಾಯಿತು. ನ್ಯಾಯಾಂಗ ವಿಚಾರಣೆಯಲ್ಲಿ ಪೆರೆಜ್ ಅವರು ತಮ್ಮ ಕೆಲವು ಅಕ್ರಮ ಸರಕುಗಳನ್ನು ಸಾಗಿಸಲು ಹೇಸರಗತ್ತೆಗಳನ್ನು ಬಳಸಿದ್ದಾರೆ ಮತ್ತು ಇತರ ಸಮಯಗಳಲ್ಲಿ ಸ್ವತಃ ಗಡಿ ದಾಟಲು ಪ್ರಯತ್ನಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಇವರು ಯುಕಾಟಾನ್ ಬಾಕ್ಸ್ ಆಮೆಗಳು, ಮೆಕ್ಸಿಕನ್ ಬಾಕ್ಸ್ ಆಮೆಗಳು, ಮರಿ ಮೊಸಳೆಗಳು ಮತ್ತು ಮೆಕ್ಸಿಕನ್ ಮಣಿಗಳ ಹಲ್ಲಿಗಳನ್ನು ಸಾಗಿಸುತ್ತಿದ್ದರು. ಈಗಾಗಲೇ ಇಂತಹ ಪ್ರಾಣಿಗಳನ್ನು ದೇಶಾದ್ಯಂತ ಗ್ರಾಹಕರಿಗೆ $739,000 ಕ್ಕೆ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ.

ಅಮೆರಿಕಾದಲ್ಲಿ ವ್ಯಕ್ತಿಯ ಬಂಧನ
ತನ್ನ ತೊಡೆಸಂದು ಮತ್ತು ಅವನ ಬಟ್ಟೆಯ ಇತರ ಭಾಗಗಳಲ್ಲಿ 60 ಜೀವಿಗಳೊಂದಿಗೆ ಮೆಕ್ಸಿಕೋದಿಂದ ಸಾಗಿಸಲು ಪ್ರಯತ್ನಿಸಿದಾಗ ಮಾರ್ಚ್ನಲ್ಲಿ ಸಿಕ್ಕಿಬಿದ್ದಿದ್ದನು. ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ ಬಳಿಕ ಅವನು ಹಲ್ಲಿಗಳನ್ನು ತನ್ನ ಜೇಬಿನಲ್ಲಿ ಸಾಗಿಸುತ್ತಿರುವುದು ಕಂಡು ಬಂದಿದೆ. ಅವನ ಬೆನ್ನು ಮೇಲೆ 60 ಸರೀಸೃಪಗಳು ಇರುವುದು ಕಂಡುಬಂದಿದೆ.

ಬಣ್ಣವನ್ನು ಬದಲಾಯಿಸುವ ಹಾವುಗಳು
ಅವುಗಳಲ್ಲಿ ಅರ್ಬೊರಿಯಲ್ ಅಲಿಗೇಟರ್ ಹಲ್ಲಿಗಳು ಮತ್ತು ಇಸ್ತಮಿಯನ್ ಡ್ವಾರ್ಫ್ ಬೋವಾಸ್, ಬಣ್ಣವನ್ನು ಬದಲಾಯಿಸುವ ಒಂದು ರೀತಿಯ ಹಾವುಗಳು ಕಂಡು ಬಂದಿವೆ. ಅವರು ಅದರಿಂದ ಕಡಿತಕ್ಕೂ ಒಳಗಾಗಿರುವುದು, ಆ ಜೀವಿಗಳು ಗಾಯಗೊಂಡು ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಅದರಲ್ಲಿ ಮೂರು ಸರೀಸೃಪಗಳು ಸತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಕಳ್ಳಸಾಗಾಣಿಕೆಗಳನ್ನು ಒಪ್ಪಿಕೊಂಡಿರುವ ಪೆರೆಜ್, ಪ್ರತಿಯೊಂದಕ್ಕೂ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಮತ್ತು ವನ್ಯಜೀವಿ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ಡಿಸೆಂಬರ್ 1 ರಂದು ವಿಧಿಸಲಾಗುವುದು.

ಪ್ಯಾಂಟ್ನಲ್ಲಿ ಹಾವು
ಕಾಡು ಪ್ರಾಣಿಗಳ ಸಾಗಾಣಿಕೆ ಇಡೀ ಜಗತ್ತಿಗೆ ತಲೆನೋವಾಗಿ ಉಳಿದಿದೆ. ಕಳ್ಳಸಾಗಾಣಿಕೆದಾರರಿಂದ ಅಳಿವಿನ ಅಂಚಿಗೆ ತಲುಪಿರುವ ಇಂತಹ ಹತ್ತಾರು ಜಾತಿಯ ಕಾಡು ಪ್ರಾಣಿಗಳು ಪ್ರತಿಯೊಂದು ದೇಶದಲ್ಲಿಯೂ ಕಂಡುಬರುತ್ತವೆ. ಅನೇಕ ಬಾರಿ ಕಳ್ಳಸಾಗಾಣಿಕೆದಾರರು ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವ ವ್ಯವಹಾರದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಅಮೆರಿಕದಲ್ಲಿ ಇಂತಹ ಅಚ್ಚರಿಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ಮಾರ್ಚ್ ತಿಂಗಳಲ್ಲಿ ಮಾಧ್ಯಮ ವರದಿಗಳ ಪ್ರಕಾರ, ಭದ್ರತಾ ಸಿಬ್ಬಂದಿ ಸ್ಯಾನ್ ಇಸಿಡ್ರೊ ಗಡಿಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಅನುಮಾನಾಸ್ಪದ ಚಾಲಕನನ್ನು ನೋಡಿದರು. ಅವರ ಆಸನ ವ್ಯವಸ್ಥೆಯು ವಿಚಿತ್ರವಾಗಿತ್ತು. ಇದಾದ ಮೇಲೆ ಭದ್ರತಾ ಸಿಬ್ಬಂದಿ ಆತನನ್ನು ಕೆಳಗಿಳಿದು ಬರುವಂತೆ ಹೇಳಿದರೂ ಚಾಲಕ ತಡಬಡಾಯಿಸಿದ್ದಾನೆ. ಇದರಿಂದ ಅಲ್ಲಿದ್ದ ಸೈನಿಕರ ಅನುಮಾನ ದ್ವಿಗುಣಗೊಂಡಿತ್ತು.
52 ಸರೀಸೃಪಗಳಿದ್ದ ಬ್ಯಾಗನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದ ಚಾಲಕ ತನಿಖೆಗೆ ನಿರಾಕರಿಸಿದ್ದನು. ಬಳಿಕ ಅನುಮಾನ ಬಂದು ಗಡಿಯಲ್ಲಿ ಪರಿಶೀಲಿಸಲಾಗಿದೆ. ಪರಿಶೀಲಿಸಿದಾಗ 43 ಜೀವಂತ ಕೊಂಬಿನ ಹಲ್ಲಿಗಳು ಮತ್ತು 9 ಹಾವುಗಳು ಇದ್ದವು. ಬಂಧಿತ ವ್ಯಕ್ತಿಯನ್ನು ಕುಖ್ಯಾತ ಕಳ್ಳಸಾಗಾಣಿಕೆದಾರ ಎಂದು ಗುರುತಿಸಲಾಗಿದೆ. ಈತ 30 ವರ್ಷ ವಯಸ್ಸಿನ ಯುಎಸ್ ಪ್ರಜೆಯಾಗಿದ್ದನು.

ಮೆಕ್ಸಿಕೊ ಪ್ರಾಣಿಗಳು ತುಂಬಾ ಅಪಾಯಕಾರಿ
ಯುಎಸ್ ಕಸ್ಟಮ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಎಸ್ ಸಿಬಿಪಿ) ಪ್ರಕಾರ, ಆರೋಪಿಯು ಕ್ಯಾಲಿಫೋರ್ನಿಯಾದ ನಿವಾಸಿಯಾಗಿದ್ದಾನೆ. ಆದರೆ ಅವನು ಮೆಕ್ಸಿಕೊ ಗಡಿಯ ಮೂಲಕ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದನು. ವಿಶೇಷವೆಂದರೆ ಎಲ್ಲಾ 52 ಪ್ರಾಣಿಗಳು ಜೀವಂತವಾಗಿದ್ದವು. ಅದರಲ್ಲಿ ಕೆಲವನ್ನು ಪ್ಯಾಕೆಟ್ನಲ್ಲಿ ಲಾಕ್ ಮಾಡಿ ಒಳಉಡುಪಿನಲ್ಲಿ ಬಚ್ಚಿಟ್ಟಿದ್ದರು.
ಯುಎಸ್ ಸಿಬಿಪಿ ಅಧಿಕಾರಿಯೊಬ್ಬರು ಇಲ್ಲಿನ ಅನೇಕ ಪ್ರಾಣಿಗಳು ತುಂಬಾ ಅಪಾಯಕಾರಿಯಾಗಿವೆ. ಅವು ಪ್ಯಾಕೆಟ್ನಲ್ಲಿ ಹೊರಬಂದು ಕಚ್ಚಿದ್ದರೆ ಕಳ್ಳಸಾಗಣೆದಾರರಿಗೆ ಸಮಸ್ಯೆಯಾಗುತ್ತಿತ್ತು. ಈ ಘಟನೆಯ ಒಂದು ದಿನ ಮುಂಚೆಯೇ 1700 ಅಪರೂಪದ ಪ್ರಾಣಿಗಳೊಂದಿಗೆ ವ್ಯಕ್ತಿಯೋರ್ವ ಸಿಕ್ಕಿಬಿದ್ದಿದ್ದಾನೆ. ಅವನಿಗೆ ಬುದ್ಧಿ ಹೇಳಿ ಕಳುಹಿಸಲಾಗಿತ್ತು. ಆದರೆ ಅವನು ಮರು ದಿನ ಮತ್ತೆ ಅದೇ ಕೆಲಸವನ್ನು ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications