ಭಾರತಕ್ಕೆ ರಷ್ಯಾದಿಂದ ಅಂತರ ಕಾಪಾಡಿಕೊಳ್ಳಲು ಅಮೆರಿಕ ಸಲಹೆ
ವಾಷಿಂಗ್ಟನ್, ಮಾರ್ಚ್ 4: ಭಾರತಕ್ಕೆ ರಷ್ಯಾದಿಂದ ಅಂತರ ಕಾಪಾಡಿಕೊಳ್ಳುವಂತೆ ಅಮೆರಿಕ ಸಲಹೆ ನೀಡಿದೆ.
ಭಾರತವು ಈಗಲೂ ನಿಜವಾಗಿಯೂ ನಮ್ಮ ಭದ್ರತಾ ಪಾಲುದಾರ ರಾಷ್ಟ್ರವಾಗಿದೆ. ನಾವು ಆ ಪಾಲುದಾರಿಕೆಯನ್ನು ಗೌರವಿಸುತ್ತೇವೆ. ರಷ್ಯಾ ಎದುರಿಸುತ್ತಿರುವ ತೀವ್ರ ಟೀಕೆಗಳಿಂದ ಮುಂದೆ ಏನಾಗುತ್ತದೆ ಎಂದು ನಾವು ಭಾವಿಸಬಹುದು. ಭಾರತವು ರಷ್ಯಾದಿಂದ ಮತ್ತಷ್ಟು ದೂರವಿರಲು ಇದು ಉತ್ತಮ ಸಮಯವಾಗಿದೆ ಎಂದು ಅಮೆರಿಕದ ದಕ್ಷಿಣ ಏಷ್ಯಾದ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಯ ಮೂರು ಸ್ಕೆಚ್ ಮಿಸ್!
ವಿಶ್ವಸಂಸ್ಥೆಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ವಿಚಾರವಾಗಿ ಭಾರತ ತಟಸ್ಥ ನಿಲುವು ತೆಗೆದುಕೊಂಡಿದ್ದು, ಈ ನಿಲುವು ರಷ್ಯಾ ಪರವಾಗಿತ್ತು. ಭದ್ರತಾ ಮಂಡಳಿಯಲ್ಲಿ ಮತ್ತು ಸಾಮಾನ್ಯ ಸಭೆಯಲ್ಲಿ ಮತದಾನದಿಂದ ಭಾರತ ದೂರ ಉಳಿದಿತ್ತು. ಇದು ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿತ್ತು.
ಉಕ್ರೇನ್
-
ರಷ್ಯಾ
ಯುದ್ಧದ
ಬಿಕ್ಕಟ್ಟಿನ
ಮಧ್ಯೆ
ಕ್ವಾಡ್
ನಾಯಕರ
ವರ್ಚುಯಲ್
ಶೃಂಗಸಭೆ
ಗುರುವಾರ
ನಡೆದಿದ್ದು,
ಸಭೆಯಲ್ಲಿ
ಪ್ರಧಾನಿ
ನರೇಂದ್ರ
ಮೋದಿ,
ಅಮೆರಿಕ
ಅಧ್ಯಕ್ಷ
ಜೋ
ಬೈಡನ್,
ಜಪಾನ್
ಪ್ರಧಾನಿ
ಫ್ಯೂಮಿಯೊ
ಕಿಶಿಡಾ
ಮತ್ತು
ಆಸ್ಟ್ರೇಲಿಯಾ
ಪ್ರಧಾನಿ
ಸ್ಕಾಟ್
ಮಾರಿಸನ್
ಭಾಗವಹಿಸಿದ್ದರು.
ಉಕ್ರೇನ್
ಯುದ್ಧ
ವಿಚಾರದಲ್ಲಿ
ಭಾರತ,
ರಷ್ಯಾ
ಪರ
ನಿಲುವುಗಳನ್ನು
ತೆಗೆದುಕೊಳ್ಳುತ್ತಿದೆ.
ಈ
ಹಿನ್ನೆಲೆಯಲ್ಲಿ
ಅಸಮಾಧಾನ
ವ್ಯಕ್ತಪಡಿಸಿರುವ
ಅಮೆರಿಕ
ರಷ್ಯಾದಿಂದ
ಅಂತರ
ಕಾಪಾಡಿಕೊಳ್ಳುವಂತೆ
ಭಾರತಕ್ಕೆ
ಸಲಹೆ
ನೀಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಈ ಸಂದರ್ಭದಲ್ಲಿ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಕ್ವಾಡ್, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳ ನಾಯಕರು ಗುರುವಾರದಂದು ವರ್ಚುಯಲ್ ಸಭೆ ನಡೆಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ಕಾರ್ಯಾಚರಣೆ ಕುರಿತು ಇದೇ ವೇಳೆ ಚರ್ಚಿಸಿದ್ದಾರೆ.
ಕ್ವಾಡ್ ಲೀಡರ್ಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯನ್ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಭಾಗವಹಿಸಿದ್ದರು. ಈ ಸಭೆಯಲ್ಲಿ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ.
Recommended Video
ಉಕ್ರೇನ್ ಮೇಲಿನ ರಷ್ಯಾದ ದಾಳಿಯಿಂದ ಉಂಟಾಗಿರುವ ಪರಿಸ್ಥಿತಿ, ಭವಿಷ್ಯ ಮತ್ತು ಮಾನವೀಯತೆ ನೆರವಿನ ಬಗ್ಗೆಯೂ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಎರಡೂ ದೇಶಗಳು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು.