ಕಾಳ್ಗಿಚ್ಚಿಗೆ ದೇಣಿಗೆ ಸಂಗ್ರಹ: ಹೆಚ್ಚು ಹಣ ಕೊಟ್ಟವರಿಗೆ ಯುವತಿಯಿಂದ ಬೆತ್ತಲೆ ಚಿತ್ರದ 'ಗಿಫ್ಟ್'
ವಾಷಿಂಗ್ಟನ್, ಜನವರಿ 6: ಆಸ್ಟ್ರೇಲಿಯಾದಲ್ಲಿ ನಾಲ್ಕೈದು ತಿಂಗಳಿನಿಂದ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚು ಅಪಾರ ಸಂಪತ್ತು, ಜನ, ಪ್ರಾಣಿ ಪಕ್ಷಗಳ ಜೀವನಷ್ಟಕ್ಕೆ ಕಾರಣವಾಗಿದೆ. ಸತತ ಪ್ರಯತ್ನದ ನಡುವೆಯೂ ಬೆಂಕಿಯ ಜ್ವಾಲೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಬೇಸಿಗೆ ಹಾಗೂ ಗಾಳಿ ತೀವ್ರವಾಗುವ ಸೂಚನೆ ಇರುವುದರಿಂದ ಇನ್ನೂ ಭೀಕರ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಎದುರಾಗಿದೆ. ಈ ಬೆಂಕಿಯಿಂದ ಆಗುತ್ತಿರುವ ಹಾನಿಗೆ ಪರಿಹಾರದ ನೆರವು ನೀಡುವ ಸಲುವಾಗಿ ಯುವತಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ನಗ್ನ ಚಿತ್ರ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಅಮೆರಿಕ ಮೂಲದ ಕೇಯ್ಲನ್ ವಾರ್ಡ್ ಎಂಬ 20 ವರ್ಷದ ಯುವತಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆ ದೇಣಿಗೆ ಸಂಗ್ರಹಿಸಲು ನಗ್ನ ಚಿತ್ರಗಳನ್ನು ಕಳಿಸಿದ್ದಾರೆ. ಕೇವಲ ಎರಡು ದಿನಗಳ ಒಳಗೇ ಅವರು $700,000 ಕ್ಕೂ ಅಧಿಕ (ಐದು ಕೋಟಿ ರೂ.) ಮೊತ್ತದ ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿನ ತಮ್ಮ 'ದಿ ನೇಕೆಡ್ ಫಿಲಾಂಥ್ರೊಪಿಸ್ಟ್' ಖಾತೆಯಲ್ಲಿ ಕೇಯ್ಲನ್ ವಾರ್ಡ್ ಜ. 4ರಂದು, ದೇಣಿಗೆದಾರರಿಗೆ ಕನಿಷ್ಠ $10 ದೇಣಿಗೆ ನೀಡುವ ಪ್ರತಿಯೊಬ್ಬರಿಗೂ ತಮ್ಮ ನಗ್ನ ಚಿತ್ರಗಳನ್ನು ಕಳುಹಿಸುವುದಾಗಿ ಪ್ರಕಟಿಸಿದ್ದರು.

ಕನಿಷ್ಠ $10 ದೇಣಿಗೆ ನೀಡಿ, ನಗ್ನ ಚಿತ್ರ ಪಡೆಯಿರಿ!
'ಆಸ್ಟ್ರೇಲಿಯಾವನ್ನು ಕಾಡುತ್ತಿರುವ ಕಾಳ್ಗಿಚ್ಚಿಗಾಗಿ ದೇಣಿಗೆ ಸಂಗ್ರಹಿಸುತ್ತಿರುವ ಈ ಯಾರಿಗಾದರೂ ಕನಿಷ್ಠ $10 ದೇಣಿಗೆ ನೀಡಿದ ಪ್ರತಿ ವ್ಯಕ್ತಿಗೂ ನಾನು ನನ್ನ ನಗ್ನ ಚಿತ್ರಗಳನ್ನು ಕಳಿಸುತ್ತೇನೆ. ನೀವು ದೇಣಿಗೆ ನೀಡುವ ಪ್ರತಿ $10ಗೆ ಒಂದು ನಗ್ನ ಚಿತ್ರವನ್ನು ನಿಮಗೆ ನೇರ ಸಂದೇಶದ (ಡೈರೆಕ್ಟ್ ಮೆಸೇಜ್) ಮೂಲಕ ಕಳಿಸುತ್ತೇನೆ. ನೀವು ದೇಣಿಗೆ ನೀಡಿದ್ದಕ್ಕೆ ಖಾತರಿಯನ್ನು ನನಗೆ ನೀಡುವುದು ಅಗತ್ಯ' ಎಂದು ಕೇಯ್ಲನ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೋಟಿಗಟ್ಟಲೆ ಹಣ ಸಂಗ್ರಹ
ಕೇಯ್ಲನ್ ಮಾಡಿರುವ ಮನವಿ ಮತ್ತು ಆಮಿಷಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೇ ದಿನಗಳಲ್ಲಿ 700 ಸಾವಿರ ಡಾಲರ್ ಹಣ ಸಂಗ್ರಹವಾಗಿದೆ. ಅದನ್ನು ಅವರು ಸೋಮವಾರದ ಟ್ವೀಟ್ನಲ್ಲಿ ಬಹಿರಂಗಪಡಿಸಿದ್ದಾರೆ. 'ನನ್ನ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗಾಗಿ ಅಂದಾಜು $700k ಸಂಗ್ರಹವಾಗಿದೆ. ಇದು ನಿಜಕ್ಕೂ ಸತ್ಯವೇ?' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಾಗ್ರಾಂ ಖಾತೆ ನಿಷ್ಕ್ರಿಯ
ಆದರೆ ಕೇಯ್ಲನ್ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳನ್ನು ಅವರ ಖಾತೆಯನ್ನು ಕಂಪೆನಿ ನಿಷ್ಕ್ರಿಯಗೊಳಿಸಿದೆ. ಅದರ ನಂತರ ಅವರು ಇನ್ನೊಂದು ಇನ್ಸ್ಟಾಗ್ರಾಂ ಪ್ರೊಫೈಲ್ ಸಿದ್ಧಪಡಿಸಿದರೂ, ಅದನ್ನೂ ಕೂಡ ಕಂಪೆನಿ ನಿಷ್ಕ್ರಿಯಗೊಳಿಸಿದೆ.
'ನನ್ನ ಇನ್ಸ್ಟಾಗ್ರಾಂ ನಿಷ್ಕ್ರಿಯಗೊಂಡಿದೆ. ನನ್ನ ಕುಟುಂಬ ನನ್ನನ್ನು ದೂರಮಾಡಿದೆ. ನನ್ನ ಆ ಟ್ವೀಟ್ ಕಾರಣಕ್ಕೆ ನಾನು ಇಷ್ಟಪಡುವ ಹುಡುಗ ನನ್ನೊಂದಿಗೆ ಮಾತನಾಡುತ್ತಿಲ್ಲ. ಆದರೆ ಹಾಳಾಗಿ ಹೋಗಲಿ, ಕೋಲಾ ಪ್ರಾಣಿಗಳನ್ನು ಕಾಪಾಡಿ' ಎಂದು ಟ್ವೀಟ್ ಮಾಡಿದ್ದಾರೆ.

ಹಣ ಸಂಪಾದನೆ ಆರೋಪಕ್ಕೆ ಸ್ಪಷ್ಟನೆ
ಕಾಯ್ಲೆನ್ ಅವರು ದೇಣಿಗೆ ಸಂಗ್ರಹದ ನೆಪದಲ್ಲಿ ತಾವೂ ಹಣ ಸಂಪಾದಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಗಳಿಗೆ ಅವರು ಟ್ವಿಟ್ಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 'ನಾನು ಸ್ವಲ್ಪ ಹಣ ಕಬಳಿಸಿದ್ದೇನೆ ಎಂದು ಆರೋಪಿಸುವ ಎಲ್ಲರಿಗಾಗಿ, ನಾನು ಆ ರೀತಿ ಮಾಡಲು ಸಾಧ್ಯವೇ ಇಲ್ಲ ಮತ್ತು ನಾನು ಮಾಡುವುದೂ ಇಲ್ಲ. ದೇಣಿಗೆ ನೀಡಿದ ಪ್ರತಿಯೊಬ್ಬರೂ ತಮ್ಮ ಆಯ್ಕೆಯ ದೇಣಿಗೆದಾರ ಸಂಸ್ಥೆ ಅಥವಾ ದತ್ತಿಗೆ ಹಣ ಕಳುಹಿಸಿದ್ದಾರೆ ಮತ್ತು ನನಗೆ ಅದನ್ನು ದೃಢಪಡಿಸುವ ದಾಖಲೆ ಮಾತ್ರ ಕಳಿಸಿದ್ದಾರೆ' ಎಂದು ವಿವರಿಸಿದ್ದಾರೆ. ಕಾಯ್ಲೆನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗಿದೆ.

ಮಳೆ ಬಂದರೂ ಬೆಂಕಿ ನಿಂತಿಲ್ಲ
ಆಸ್ಟ್ರೇಲಿಯಾದ ಕಾಳ್ಗಿಚ್ಚಿನಿಂದ ಸುಮಾರು 480 ಮಿಲಿಯನ್ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಬೆಂಕಿಯ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 20ಕ್ಕೆ ತಲುಪಿದೆ. ಸಿಡ್ನಿಯಿಂದ ಮೆಲ್ಬರ್ನ್ವರೆಗಿನ ಪೂರ್ವ ಕರಾವಳಿಯಲ್ಲಿ ಹಾಗೂ ನ್ಯೂ ಸೌತ್ ವೇಲ್ಸ್ನ ವಿವಿಧೆಡೆ ಭಾನುವಾರ ಕೊಂಚ ಮಳೆ ಸುರಿದಿರುವುದು ಸಮಾಧಾನ ತಂದಿದೆ. ಇದರಿಂದ ಉಷ್ಣತೆ ತುಸು ತಗ್ಗಿದೆ. ಆದರೆ ಗುರುವಾರದ ವೇಳೆಗೆ ತಾಪಮಾನ ಮತ್ತಷ್ಟು ಹೆಚ್ಚಲಿದ್ದು ಅಪಾಯ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ವಿಕ್ಟೋರಿಯಾ ಹಾಗೂ ನ್ಯೂ ಸೌತ್ವೇಲ್ಸ್ನಲ್ಲಿ ಭಾರಿ ಜ್ವಾಲೆಗಳು ಏಳಲಿದ್ದು, ಗಾಳಿಯ ಕಾರಣದಿಂದ ಇದು ಅನಾಹುತ ಸೃಷ್ಟಿಸಲಿದೆ ಎಂದು ಎಚ್ಚರಿಸಲಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications