ಪಠ್ಯಪುಸ್ತಕ ವಿವಾದ: ಕೇಸರೀಕರಣ ಹಾಗೂ ಪ್ರಾದೇಶಿಕ ಕಡೆಗಣನೆ ಆರೋಪಗಳಿಗೆ ಸ್ಪಷ್ಟನೆ ನೀಡಿದ NCERT

ಪಠ್ಯಪುಸ್ತಕಗಳ ಕೇಸರೀಕರಣ ಮತ್ತು ಪ್ರಾದೇಶಿಕ ಕಡೆಗಣನೆ ಆರೋಪಗಳಿಗೆ ಗುರಿಯಾಗಿದ್ದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಇದೀಗ ತನ್ನ ಅಧಿಕೃತ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದೆ. ಪಠ್ಯಪುಸ್ತಕಕ್ಕೆ ಇಡಲಾದ ಹೆಸರು ಮತ್ತು ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಕಡೆಗಣಿಸಿರುವ ಆರೋಪದ ವಿಚಾರ ಸೇರಿ ಎಲ್ಲದಕ್ಕೂ ಮಂಡಳಿಯು ವಿವರವಾದ ಉತ್ತರ ಕೊಟ್ಟಿದೆ.

ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಿಂದ ಬರುವ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುವುದಾಗಿಯೂ ಎನ್‌ಸಿಇಆರ್‌ಟಿ ತಿಳಿಸಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ.

NCERT

ನದಿಗಳ ಹೆಸರಿನಲ್ಲಿ ಭಾಷಾ ಪಠ್ಯಪುಸ್ತಕಗಳು

ಮುಖ್ಯವಾಗಿ ಭಾಷಾ ಪಠ್ಯಪುಸ್ತಕಗಳ ಹೆಸರಿನ ಬಗ್ಗೆ ಎದ್ದಿದ್ದ ವಿವಾದಕ್ಕೆ ಎನ್‌ಸಿಇಆರ್‌ಟಿ ಸ್ಪಷ್ಟ ಉತ್ತರ ನೀಡಿದೆ. ತನ್ನ ಭಾಷಾ ಪಠ್ಯಪುಸ್ತಕಗಳಿಗೆ ಭಾರತದ ಪ್ರಮುಖ ನದಿಗಳ ಹೆಸರನ್ನು ಇಟ್ಟಿರುವುದಾಗಿ ಅದು ಹೇಳಿದೆ. ಹಿಂದಿ ಪಠ್ಯಪುಸ್ತಕಕ್ಕೆ "ಗಂಗಾ", ಇಂಗ್ಲಿಷ್ ಪಠ್ಯಪುಸ್ತಕಕ್ಕೆ "ಕಾವೇರಿ" ಮತ್ತು ಉರ್ದು ಪಠ್ಯಪುಸ್ತಕಕ್ಕೆ "ಜಮುನಾ" ಎಂದು ಹೆಸರಿಸಲಾಗಿದೆ. ಅದೇ ರೀತಿಯಾಗಿ, ಕೃಷ್ಣಾ ನದಿಯು ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಒಂದಾಗಿರುವುದರಿಂದ, ಕನ್ನಡ ಪಠ್ಯಪುಸ್ತಕಕ್ಕೆ "ಕೃಷ್ಣಾ" ಎಂದು ಹೆಸರಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ವಿವರಿಸಿದೆ. ಈ ಮೂಲಕ ಯಾವುದೇ ಭಾಷೆ ಅಥವಾ ಪ್ರಾದೇಶಿಕತೆಯನ್ನು ಕಡೆಗಣಿಸಿಲ್ಲ ಎಂಬುದನ್ನು ಮಂಡಳಿ ಖಚಿತಪಡಿಸಿದೆ.

NCERT 6ನೇ ತರಗತಿ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಪುರಾಣ ಹೇರಿಕೆ, ಆಹಾರ ತಾರತಮ್ಯದ ಆರೋಪ!
NCERT 6ನೇ ತರಗತಿ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಪುರಾಣ ಹೇರಿಕೆ, ಆಹಾರ ತಾರತಮ್ಯದ ಆರೋಪ!

ಆಹಾರ ಪದ್ಧತಿಯ ವಿವಾದಕ್ಕೆ ತೆರೆ

6ನೇ ತರಗತಿಯ ಕನ್ನಡ ಪುಸ್ತಕದಲ್ಲಿನ ಸಮತೋಲಿತ ಆಹಾರದ ಕುರಿತಾದ ಪಾಠವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆಯೂ ಎನ್‌ಸಿಇಆರ್‌ಟಿ ವಿವರಣೆ ನೀಡಿದ್ದು, ಪಠ್ಯಪುಸ್ತಕದ 6ನೇ ಅಧ್ಯಾಯದಲ್ಲಿ ಸಮತೋಲಿತ ಆಹಾರದ ಬಗ್ಗೆ ವಿವರಿಸಲಾಗಿದೆ ಎಂದು ಹೇಳಿದೆ. ಅಲ್ಲದೆ, ಪುಟ ಸಂಖ್ಯೆ 63 ರಲ್ಲಿ 'ಸಮತೋಲಿತ ಆಹಾರ' ಎಂಬ ಪ್ರತ್ಯೇಕ ಶೀರ್ಷಿಕೆಯಡಿಯಲ್ಲಿ ಈ ವಿಷಯವನ್ನು ಒಳಗೊಳ್ಳಲಾಗಿದೆ.

ಪುಟ 63 ರಲ್ಲಿ ನೀಡಲಾದ ವಿವರಣಾತ್ಮಕ ಚಿತ್ರದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ರೀತಿಯ ಆಹಾರ ಪದಾರ್ಥಗಳನ್ನು ಸೇರಿಸಲಾಗಿದೆ. ಪಠ್ಯಪುಸ್ತಕದಲ್ಲಿ ಎಲ್ಲಿಯೂ ಸಸ್ಯಾಹಾರವನ್ನು ವಿವರಿಸಿಲ್ಲ ಅಥವಾ ಸಮರ್ಥಿಸಿಲ್ಲ, ಹಾಗೆಯೇ ಮಾಂಸಾಹಾರಿ ಆಹಾರವನ್ನು ವಿರೋಧಿಸಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆಹಾರ ಪದಾರ್ಥಗಳ ಬಗ್ಗೆ ಅರಿವು ಮೂಡಿಸುವುದು ಮಾತ್ರ ಈ ಅಧ್ಯಾಯದ ಉದ್ದೇಶವಾಗಿದೆ ಎಂಬುದನ್ನು ಹೇಳಿದೆ.

CBSE Re-evaluation: 24 ಹೆಚ್ಚುವರಿ ಅಂಕಗಳೊಂದಿಗೆ 500/500 ಪಡೆದು ದೇಶಕ್ಕೇ ಟಾಪರ್ ಆದ ಅವ್ನಿ ಕೇಜ್ರಿವಾಲ್
CBSE Re-evaluation: 24 ಹೆಚ್ಚುವರಿ ಅಂಕಗಳೊಂದಿಗೆ 500/500 ಪಡೆದು ದೇಶಕ್ಕೇ ಟಾಪರ್ ಆದ ಅವ್ನಿ ಕೇಜ್ರಿವಾಲ್

ಶಿಕ್ಷಣ ತಜ್ಞರ ಸಲಹೆಗಳಿಗೆ ಸ್ವಾಗತ

ಇತ್ತೀಚಿನ ದಿನಗಳಲ್ಲಿ ಪಠ್ಯ ಪುಸ್ತಕಗಳ ಕೇಸರೀಕರಣ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದವು. ಈ ಎಲ್ಲಾ ಆರೋಪಗಳ ನಡುವೆ, ಶಿಕ್ಷಣದಲ್ಲಿ ಯಾವುದೇ ರೀತಿಯ ಅಜೆಂಡಾ ಇಲ್ಲ ಎಂದು ಎನ್‌ಸಿಇಆರ್‌ಟಿ ಪರೋಕ್ಷವಾಗಿ ತಿಳಿಸಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಪಠ್ಯ ಕ್ರಮದ ಸುಧಾರಣೆಗಾಗಿ ಶಿಕ್ಷಣ ತಜ್ಞರು, ಪೋಷಕರು ಹಾಗೂ ಸಾರ್ವಜನಿಕರು ನೀಡುವ ಯಾವುದೇ ರಚನಾತ್ಮಕ ಟೀಕೆ ಮತ್ತು ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ, ಈ ಬಹುದೊಡ್ಡ ವಿವಾದಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಬಹುತೇಕ ಗೊಂದಲಗಳಿಗೂ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಬಿಡುಗಡೆ ಮಾಡಿರುವ ಈ ಪ್ರಕಟಣೆಯು ತೆರೆ ಎಳೆದಿದೆ. ಪಠ್ಯಪುಸ್ತಕಗಳ ರಚನೆಯಲ್ಲಿ ಕೇವಲ ಶೈಕ್ಷಣಿಕ ಹಿತಾಸಕ್ತಿಗಳನ್ನು ಮಾತ್ರ ಅಳವಡಿಸಿಕೊಳ್ಳಲಾಗಿದೆ ಎಂದು ಮಂಡಳಿ ದೃಢಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+