ರಾಷ್ಟ್ರ ಧ್ವಜದ ಕಂಬಕ್ಕೆ ಚಪ್ಪಲಿ ಕಟ್ಟಿದ ಕಿಡಿಗೇಡಿಗಳು
ವಿಜಯಪುರ, ನವೆಂಬರ್ 21 : ರಾಷ್ಟ್ರ ಧ್ವಜದ ಕಂಬಕ್ಕೆ ಅವಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಎಂಭತ್ನಾಳ ಗ್ರಾಮದಲ್ಲಿ ನಡೆದಿದೆ.
ಎಂಭತ್ನಾಳ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಧ್ವಜದ ಕಂಬಕ್ಕೆ ಚಪ್ಪಲಿ ಹಾಕಿ ಕಟ್ಟುವ ಮೂಲಕ ಕಿಡಿಗೇಡಿಗಳು ದೇಶಕ್ಕೆ ಅವಮಾನ ಮಾಡಿದಂತಾಗಿದೆ. ಕೈಚೀಲದಲ್ಲಿ ಚಪ್ಪಲಿಯನ್ನು ತೂಗುಹಾಕಿದ್ದಷ್ಟೇ ಅಲ್ಲದೆ ಅದರೊಂದಿಗೆ ಒಂದು ಪತ್ರವನ್ನು ಕೂಡ ಇರಿಸಿದ್ದಾರೆ. ಆ ಪತ್ರದಲ್ಲಿ ಗ್ರಾಮದ ಪ್ರಮುಖರ ಹೆಸರನ್ನು ನಮೂದಿಸಲಾಗಿದೆ. ಈಗ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













Click it and Unblock the Notifications