ವಿಜಯಪುರ : ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು

Recommended Video

      ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು | Oneindia Kannada

      ವಿಜಯಪುರ, ನವೆಂಬರ್ 30 : ರಕ್ತ ಸಿಕ್ತ ಚರಿತ್ರೆ ಹೊತ್ತ ಭೀಮಾತೀರ ಇತ್ತೀಚಿನ ದಿನಗಳಲ್ಲಿ ಪೊಲೀಸರ ದೆಸೆಯಿಂದಾಗಿ ಸ್ವಲ್ಪ ಶಾಂತವಾಗಿತ್ತು. ಆದರೆ ಈಗ ಮತ್ತೆ ಅಲ್ಲಿ ಗುಂಡಿನ ಸದ್ದು ಕೇಳಿದೆ.

      ಜಿಲ್ಲೆಯ ಇಂಡಿಯಲ್ಲಿ ರೌಡಿ ಶೀಟರ್ ಒಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ, ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

      ಇತ್ತೀಚೆಗೆ ಪೊಲೀಸರ ಗುಂಡಿನಿಂದ ಬಲಿಯಾದ ರೌಡಿ ಧರ್ಮರಾಜ್ ಚಡಚಣನ ಬಲಗೈ ಭಂಟ ಸೈಪನ್ ಐರಸಂಗ ಎಂಬುವನು ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ.

      Airfire in Vijayapura district indi by a rowdy sheeter

      ಇಂಡಿ ಗ್ರಾಮದಲ್ಲಿ ಜಾತ್ರೆ ಇದ್ದ ಕಾರಣ ಜಾತ್ರೆ ನೋಡಲು ಸೈಪನ್ ಗ್ರಾಮಕ್ಕೆ ಆಗಮಿಸಿದ್ದ. ಕುಡಿದ ಅಮಲಿನಲ್ಲಿದ್ದ ಸೈಪನ್ ಬೇಕೆಂದೆ ಕೆಲವರೊಂದಿಗೆ ಜಗಳ ತೆಗೆದಿದ್ದ, ಸಿದ್ದ ಪರಚಂಡಿ ಎಂಬುವರು ಜಗಳ ಬಿಡಿಸಲು ಮುಂದಾದಾಗ ಅಲ್ಲಿದ್ದವರನ್ನು ಹೆದರಿಸಲು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ. ಈ ಬಗ್ಗೆ ಸಿದ್ದು ಪರಚಂಡಿ ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

      ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ಸೈಪನ್ ಪರಾರಿ ಆಗಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿದ್ದನ್ನು ಪೊಲೀಸರು ಖಚಿತ ಪಡಿಸಿದ್ದಾರೆ.

      ಇಂಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಸೈಪನ್ ಐರಸಂಗ, ಪೊಲೀಸರ ಎನ್‌ಕೌಂಟರ್ ಗೆ ಬಲಿಯಾದ ಧರ್ಮರಾಜ್ ಚಡಚಣ ಜತೆಗೆ ಓಡಾಡಿಕೊಂಡಿದ್ದ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+