ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪರಿಚಯ
ಉಡುಪಿ, ಜುಲೈ 22 : ಉಡುಪಿ ಜಿಲ್ಲಾಧಿಕಾರಿಯಾಗಿ ಟಿ.ವೆಂಕಟೇಶ್ರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ಆರ್.ವಿಶಾಲ್ ಅವರು ಕೆಲವು ದಿನಗಳ ಹಿಂದೆ ವರ್ಗಾವಣೆಗೊಂಡಿದ್ದರು, ಬಳಿಕ ಸ್ಥಾನ ತೆರವಾಗಿತ್ತು.
ಕರ್ನಾಟಕ
ಸರ್ಕಾರ
ಗುರುವಾರ
24
ಐಎಎಸ್
ಅಧಿಕಾರಿಗಳನ್ನು
ವರ್ಗಾವಣೆ
ಮಾಡಿದ್ದು,
ಮೇಲ್ಮನವಿ
ನ್ಯಾಯ
ಮಂಡಳಿ
ಸದಸ್ಯ
ಟಿ.ವೆಂಕಟೇಶ್
(55)
ಅವರನ್ನು
ಉಡುಪಿ
ಜಿಲ್ಲಾಧಿಕಾರಿಯಾಗಿ
ನೇಮಕ
ಮಾಡಿದೆ.[24
ಐಎಎಸ್
ಅಧಿಕಾರಿಗಳ
ವರ್ಗಾವಣೆ,
ಪಟ್ಟಿ
ಇಲ್ಲಿದೆ]
1983ರಲ್ಲಿ ಸರ್ಕಾರಿ ಸೇವೆಯನ್ನು ಆರಂಭಿಸಿದ ವೆಂಕಟೇಶ್ ಅವರು, ಮೂರು ದಶಕಗಳ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. 2014ರಲ್ಲಿ ಇವರಿಗೆ ಐಎಎಸ್ಗೆ ಬಡ್ತಿ ದೊರಕಿತ್ತು. ಪ್ರಸ್ತುತ ಉಡುಪಿಯ ಪ್ರಭಾರ ಡಿಸಿಯಾಗಿ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.[ಉಡುಪಿ ಜಿಲ್ಲಾಧಿಕಾರಿ ವರ್ಗಾವಣೆ]
ಟಿ.ವೆಂಕಟೇಶ್ ಅವರು ಚಿತ್ರದುರ್ಗ, ಕೊಳ್ಳೇಗಾಲ, ಸಕಲೇಶಪುರ, ಬೆಂಗಳೂರು ದಕ್ಷಿಣ ಉಪ ವಿಭಾಗಗಳಲ್ಲಿ ಎಸಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಾಲೇಜಿಯೇಟ್ ಎಜ್ಯುಕೇಶನ್ನ ಸಿಎಒ ಆಗಿ, ಕೆಎಸ್ಎಸ್ಐಡಿಸಿಯ ಜಿಎಂ ಆಗಿ, ಆರ್ಡಿಪಿಆರ್ನ ಜಂಟಿ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.[ಉಡುಪಿ ಜಿಲ್ಲಾಧಿಕಾರಿ ವರ್ಗಾವಣೆ : ಪರ, ವಿರೋಧ ಪ್ರತಿಭಟನೆ]
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಜಿ.ಜಗದೀಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.