ಕಂಪ್ಲಿ ಗಣೇಶ್ ಸಿಗ್ತಾರೆ ಬಿಡ್ರಿ ,ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ: ಜಯಮಾಲಾ
ಉಡುಪಿ ಜನವರಿ 26 : ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಣೇಶ್ ನಾಪತ್ತೆ ಪ್ರಕರಣದ ಕುರಿತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗೊಳಂದಿಗೆ ಮಾತನಾಡಿದ ಅವರು ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ, ಅಧಿಕಾರಿಗಳು ಕೆಲ್ಸ ಮಾಡ್ತಿದಾರೆ. ನಾನು ಆ ದಿನ ರೆಸಾರ್ಟ್ ನಲ್ಲಿ ಇರ್ಲಿಲ್ಲ. ಮತ್ತೇನು ನನ್ನ ಕೇಳ್ಬೇಡಿ ಎಂದು ಅವರು ನುಣುಚಿ ಕೊಂಡರು.
ನಿಮಗೆ ಆತುರ ಅಷ್ಟೇ. ಶಾಸಕ ಗಣೇಶ್ ಸಿಕ್ತಾರೆ ಬಿಡ್ರಿ . ಇಂದು ಗಣರಾಜ್ಯೋತ್ಸವ, ಖುಷಿಯಾಗಿದೀನಿ ಬಿಡ್ರಿ ಎಂದು ಹೇಳಿದರು . ಯಡಿಯೂರಪ್ಪ ಕಾಟಾಚಾರದ ಬರ ಪ್ರವಾಸದ ಪ್ರಶ್ನೆಗೆ ಮೌನಕ್ಕೆ ಶರಣಾದ ಜಯಮಾಲಾ ಅವರ ಬಗ್ಗೆ ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ ಎಂದು ಹೇಳಿದರು .

ಸಚಿವ ಕೃಷ್ಣ ಬೈರೇಗೌಡ ಅವರ ಬರ ಪ್ರವಾಸ ಸಮರ್ಥಿಸಿಕೊಂಡ ಸಚಿವೆ ಜಯಮಾಲಾಬರ ಪ್ರವಾಸಕ್ಕೆ ಹೋದಾಗ ಅರಣ್ಯದ ಸೌಂದರ್ಯ ನೋಡ್ಕೋಂಡು ಬಂದಿರ್ತಾರೆ. ಬರ ಪರಿಹಾರ ಕೆಲಸ ಮಾಡೋಕೆ ವಿಪಕ್ಷ ಏನೂ ಹೇಳ್ಬೇಕಾಗಿಲ್ಲ. ಎಲ್ಲಾ ನಮ್ಮ ಸರ್ಕಾರವೇ ಮಾಡುತ್ತೆ, ನಮಗೆ ಜವಾಬ್ದಾರಿ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬರ ಪ್ರವಾಸ ಮಾಡದೆ ಮಗನ ಸಿನಿಮಾದಲ್ಲಿ ಸಿಎಂ ಬ್ಯುಸಿ ಆರೋಪಕ್ಕೆ ಉತ್ತರಿಸಿದ ಜಯಮಾಲ , ನಾನು ಕಲಾವಿದೆ, ನನ್ನ ಮಾತು ಕೇಳಿ. ಎಲ್ಲಕ್ಕೂ ಒಂದು ಸಮಯ ಇದೆ. ಊಟ, ನಿದ್ರೆ, ಕೆಲಸಕ್ಕೆ ಟೈಂ ಟೇಬಲ್ ಇದೆ.
ಅವರ ಮಗ ಮಾಡಿದ ಒಂದು ಸಿನಿಮಾ ನೋಡೋಕೂ ಟೈಂ ಲೆಕ್ಕಾಚಾರ ಹಾಕ್ಬೇಡಿ. ಹಾಗಾದ್ರೆ ಮಕ್ಕಳ ಬೆಳವಣಿಗೆ ಬೇಡ್ವಾ? ಆ ಮಗು ಸಿನಿಮಾ ಮಾಡಿಲ್ವಾ ? ಅವರಪ್ಪ ಅದನ್ನು ನೋಡೊದು ಬೇಡ್ವಾ? ಎಂದು ಅವರು ಪ್ರಶ್ನಿಸಿದರು.
ಬರ ಅಂತೇಳಿ ಊಟ ಮಾಡದೆ ಇರ್ತೀರಾ? ಸಿಎಂ ಬರ ಪ್ರವಾಸ ಮಾಡಿರ್ತಾರೆ, ನೀವು ಸುಮ್ನಿರಿ. ಬಜೆಟ್ ತಯಾರಿಸೋದ್ರಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ. ನಾನು ನನ್ನ ಮಗಳ ಸಿನಿಮಾ ಬೇಕಾದಷ್ಟು ಸಲ ನೋಡಿದೀನಿ ಎಂದು ಅವರು ಸಮರ್ಥಿಸಿ ಕೊಂಡರು .
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications