ನಳಮಹಾರಾಜ ವಿಕಾಸ್ ಖನ್ನಾರಿಂದ ಮಣಿಪಾಲದಲ್ಲಿ 'ಕಿಚನ್ ಮ್ಯೂಸಿಯಂ'
ಮಂಗಳೂರು, ಜೂನ್ 6: ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಅಮ್ಮ ಅಡುಗೆ ಮಾಡುತ್ತಾರೆ. ಆದರೆ ಅದು ಒಂದು ಕಲೆ; ಎಲ್ಲರಿಗೂ ಒಲಿಯುವುದಿಲ್ಲ. ಇಂಥಹ ಅಡುಗೆ ಕಲೆಯಲ್ಲಿ ಎತ್ತಿದ ಕೈ ಅಂದರೆ ಅದು ಮಹಾಭಾರತದಲ್ಲಿ ನಳ ಮಹಾರಾಜ. ಆತ ಒಳ್ಳೆಯ ಅಡುಗೆಗಾರನಾಗಿದ್ದರಿಂದ ಆತನ ಅಡುಗೆಗಳಿಗೆ "ನಳಪಾಕ" ಎಂಬ ಹೆಸರು ಬಂತು. ಯಾಕೀ ವಿಷ್ಯ ಅಂದರೆ ಭಾರತದಲ್ಲೂ ವಿಶ್ವ ಪ್ರಸಿದ್ದ 'ನಳಪಾಕ' ತಯಾರಿಸುವವರೊಬ್ಬರಿದ್ದಾರೆ. ಅವರೇ ವಿಕಾಸ್ ಖನ್ನಾ; ಇವರ ಅಡುಗೆಯ ಸವಿರುಚಿ ನೋಡದ ಗಣ್ಯರಿಲ್ಲ.
ಮಣಿಪಾಲದಲ್ಲಿ ಕಿಚನ್ ಮ್ಯೂಸಿಯಮ್
ಇದೇ ವಿಕಾಸ್ ಖನ್ನಾ ಭಾರತದಲ್ಲಿ ಕಿಚನ್ ಮ್ಯೂಸಿಯಮ್ ತೆರೆಯುವ ಆಸೆ ಹೊಂದಿದ್ದಾರೆ. ಅದಕ್ಕಾಗಿ ತನಗೆ ಬದುಕು ನೀಡಿದ ಮಣಿಪಾಲವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಣಿಪಾಲದಲ್ಲಿ ಈ ಕಿಚನ್ ಮ್ಯೂಸಿಯಂ ತಲೆ ಎತ್ತಲಿದೆ.
ಈಗಾಗಲೆ ಇದರ ಕೆಲಸಗಳು ಪ್ರಾರಂಭವಾಗಿವೆ. 2018 ಎಪ್ರಿಲ್ ಹೊತ್ತಿಗೆ ಇದನ್ನು ಉದ್ಘಾಟಿಸುವ ಇರಾದೆಯನ್ನು ಖನ್ನಾ ಹೊಂದಿದ್ದಾರೆ. ಇದರಲ್ಲಿ ಅಡುಗೆ ಸಂಬಂಧಪಟ್ಟ ಪುಸ್ತಕ, ಸಿ.ಡಿ, ಕಾರ್ಯಾಗಾರ ನಡೆಸುವ ಉದ್ದೇಶ ಅವರದ್ದು.

ಚಿಕ್ಕಂದಿನಿಂದಲೇ ಅಡುಗೆಯತ್ತ ಒಲವು
ವಿಕಾಸ್ ಖನ್ನಾ ಮೂಲತಃ ಪಂಜಾಬ್ನ ಅಮೃತಸರದವರು. ಮಧ್ಯಮ ವರ್ಗದಲ್ಲಿ ಹುಟ್ಟಿದ ಅವರು ಸಣ್ಣ ವಯಸ್ಸಿನಲ್ಲಿ ಕಾಲಿನ ಅಂಗವೈಕಲ್ಯ ಇದ್ದ ಕಾರಣ ಎಲ್ಲಾ ಮಕ್ಕಳಂತೆ ನಡೆದಾಡಲು
ಸಾಧ್ಯವಾಗದೇ ಮನೆಯಲ್ಲಿದ್ದರು. ಈ ವೇಳೆ ಮನೆಯಲ್ಲಿ ಅಜ್ಜಿ ಹಾಗೂ ಅಮ್ಮನಿಗೆ ಅಡಿಗೆ ಮಾಡಲು ಸಣ್ಣಪುಟ್ಟ ಸಹಾಯ ಮಾಡುತ್ತಾ ಅಡುಗೆಯತ್ತ ಒಲವು ಬೆಳೆಸಿಕೊಂಡರು.
ಆಗ ಹುಡುಗರಾರೂ ಅಡುಗೆ ಮಾಡುವ ಪದ್ದತಿ ಇರಲಿಲ್ಲ. ಈ ವೇಳೆ ಅಕ್ಕಪಕ್ಕದ ಮನೆಯವರು ಖನ್ನಾ ಅವರನ್ನು ಛೇಡಿಸುತ್ತಿದ್ದರಂತೆ. ಹುಡುಗಿ ಮಾಡುವ ಕೆಲಸವನ್ನು ಹುಡುಗ ಮಾಡುತ್ತಾನೆ ಅಂತ. ಈ ವೇಳೆ ಅವನ ತಾಯಿ ಖನ್ನಾ ಅವರಿಗೆ ಧೈರ್ಯ ತುಂಬುತ್ತಿದ್ದರಂತೆ.

ಖನ್ನಾರನ್ನೇ ನಂಬಿ ಮನೆಯವರಿಂದ ಕ್ಯಾಟರಿಂಗ್
ಅವರೇ ಹೇಳುವಂತೆ ಖನ್ನಾ ಅವರ ಅಡುಗೆ ಒಲವು ನೋಡಿದ ಮನೆಯವರು ಸಣ್ಣ ಮಟ್ಟದ ಕ್ಯಾಟರಿಂಗ್ ಸೇವೆ ಆರಂಭಿಸಲು ಚಿಂತಿಸಿದರು. ಈ ವೇಳೆ ಹಣಕ್ಕಾಗಿ ಸ್ವೆಟ್ಟರ್ಗಳನ್ನು ಹೊಲಿದು ಹಣ
ಹೊಂದಿಸಿ ಕ್ಯಾಟರಿಂಗ್ ಸೇವೆ ಆರಂಭಿಸಿದರು.
ಮೊದಲ ಬಾರಿಗೆ 100ಜನರಿಗಾಗುವಷ್ಟು ಕ್ಯಾಟರಿಂಗ್ ಸೇವೆ ನೀಡಿದರು. ಅಲ್ಲಿಂದ ಖನ್ನಾ ಅಡುಗೆ ಪಯಣ ಆರಂಭವಾಯಿತು.
ಖನ್ನಾ ತಮ್ಮ ಹಿಂದಿನ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ, "ತಾನು ಮತ್ತು ತಾಯಿ ಬೆಳಗಿನ ಜಾವ 5 ಗಂಟೆಯವರೆಗೆ ಪಾತ್ರೆಗಳನ್ನು ತೊಳೆಯುವುದು, ಅಡುಗೆ ಮಾಡುವುದು ಮಾಡುತ್ತಿದ್ದೆ," ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಮೇರಿಕನ್ನರಿಗೂ ಕೈ ರುಚಿ ತೋರಿಸಿದ ಖನ್ನಾ
ಖನ್ನಾ ಅಡುಗೆ ಆಸಕ್ತಿ ನೋಡಿದ ಮಾವ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸಿಗೆ ಸೇರಿಸಿದರು. ಅಲ್ಲಿ ಇಂಗ್ಲೀಷ್ ಭಾಷೆ ಬರದ ಕಾರಣ
ಸಂದರ್ಶನದಲ್ಲಿ ಅನುತ್ತೀರ್ಣರಾದರು. ಭಾಷೆ ಬರದಿದ್ದರೂ ಇವರ ಅಡುಗೆ ಸವಿಯ ಬಗ್ಗೆ ತಿಳಿದ ಪ್ರಾಂಶುಪಾಲರು ಅವರನ್ನು ಮತ್ತೆ ಸೇರಿಸಿಕೊಂಡರಂತೆ.
1994ರಲ್ಲಿ ಮಣಿಪಾಲದಲ್ಲಿ ಶಿಕ್ಷಣ ಮುಗಿಸಿ ಪುನಃ ತವರಿನತ್ತ ತೆರಳಿ ಅಲ್ಲಿ ತನ್ನ ಅಡಿಗೆ ಕಾಯಕದಲ್ಲಿ ತೊಡಗಿಕೊಂಡರು ಖನ್ನಾ. ತದನಂತರ 2000 ಇಸವಿಯ ಹೊತ್ತಿಗೆ ಅಡುಗೆಯ ಕೆಲಸಕ್ಕೆಂದೇ ಅಮೇರಿಕಾಕ್ಕೆ ಕಾಲಿಟ್ಟರು. ಅಲ್ಲಿ ಸಣ್ಣ ಹೋಟೆಲುಗಳಲ್ಲಿ ಕೆಲಸ ಮಾಡಿ ನ್ಯೂಯಾರ್ಕ್ನಲ್ಲಿ "ಇಂಡಿಯನ್ ರೆಸ್ಟೋರೆಂಟ್" ತೆರೆದರು.

ಅಡುಗೆ ರುಚಿ ಸವಿಯದವರಿಲ್ಲ
ಖನ್ನಾ ಅವರ ಅಡುಗೆ ರುಚಿಯನ್ನು ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಬ್ರಿಟನ್ ರಾಣಿ ಎಲಿಜಬೆತ್ 2, ಬಿಲ್ ಕ್ಲಿಂಟನ್, ಆ್ಯಪಲ್ ಕಂಪೆನಿಯ ಸಂಸ್ಥಾಪಕ
ಸ್ಟೀವ್ ಜಾಬ್ಸ್, ನಟರಾದ ಅಮಿತಾಭ್ ಬಚ್ಚನ್, ಶಾರೂಕ್ ಖಾನ್ ಖಾನ್ ಅಷ್ಟೇ ಯಾಕೆ ಧಾರ್ಮಿಕ ಗುರುಗಳಾದ ದಲೈಲಾಮ ಹಾಗೂ ಪೋಪ್ ಫ್ರಾನ್ಸಿಸ್ ಕೂಡಾ ಇವರ ಅಡುಗೆ ರುಚಿಗೆ ಸವಿದಿದ್ದಾರೆ.

ಹಾಟೆಸ್ಟ್ ಚೆಫ್
'ಸ್ಟಾರ್ ಪ್ಲಸ್'ನಲ್ಲಿ ಪ್ರಸಾರವಾದ ಮಾಸ್ಟರ್ ಚೆಫ್ ಸೀಸನ್ 2, 3, 4, 5ರ ಜಡ್ಜ್ ಆಗಿ ಖನ್ನಾ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಅನೇಕ ಷೋಗಳನ್ನು ನಿರ್ವಹಿಸಿದ್ದಾರೆ. ಜತೆಗೆ ವಿಶ್ವದ ಪ್ರತಿಷ್ಠಿತ 'ಹಾಟೆಸ್ಟ್ ಚೆಫ್ ಆಫ್ ಅಮೇರಿಕಾ' ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications