Get Updates
Get notified of breaking news, exclusive insights, and must-see stories!

ಉಡುಪಿ: ಬೆಂಕಿ ಮೇಲೆಯೇ ಹೊರಳಾಡುತ್ತದೆ ಕರಾವಳಿಯ ಈ ದೈವ!

ಉಡುಪಿ, ಮಾರ್ಚ್ 5: ಭೂತಾರಾಧನೆಗೆ ಕರಾವಳಿಯಲ್ಲಿ ಹೆಚ್ಚಿನ ಮಹತ್ವವಿದ್ದು, ಸುಮಾರು 400ಕ್ಕೂ ಮಿಕ್ಕಿದ ವಿವಿಧ ಪ್ರಕಾರದ ದೈವಗಳ ಆರಾಧನೆಯನ್ನು ಇಲ್ಲಿನ ಜನ ಆಚರಿಸಿಕೊಂಡು ಬರುತ್ತಿದ್ದಾರೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ಭಾಗದಲ್ಲಿ ಭೂತಾರಾಧನೆಯನ್ನು ಆಚರಿಸಲಾಗುತ್ತಿದ್ದು, ಒಂದು ದೈವದ ಆಚರಣೆ, ಇನ್ನೊಂದು ದೈವದ ಆಚರಣೆಗಿಂತ ವಿಭಿನ್ನವಾಗಿದ್ದು, ಜನರ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವೂ ಇದಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಕೇರಳವನ್ನು ಕೇಂದ್ರವಾಗಿಸಿಕೊಂಡು ಆಚರಣೆಯಲ್ಲಿರುವ ಭೂತಾರಾಧನೆ ವಿಶೇಷ ಮಹತ್ವವಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಆಚರಣೆಯಲ್ಲಿರುವ ದೈವಾರಾಧನೆಗೂ, ಕೇರಳ ರಾಜ್ಯದ ಹಲವು ಭಾಗಗಳಲ್ಲಿ ಆಚರಣೆಯಲ್ಲಿರುವ ದೈವಾರಾಧನೆಗೂ ವ್ಯತ್ಯಾಸವಿದ್ದರೂ, ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆಯೂ ಇದೆ. ದೇವರಿಗಿಂತ ಮುಖ್ಯ ಸ್ಥಾನವನ್ನು ಈ ಭಾಗದಲ್ಲಿ ದೈವಗಳಿಗೆ ನೀಡಲಾಗುತ್ತಿದ್ದು, ದೇವರ ಗಣಗಳ ರೂಪದಲ್ಲಿ ಈ ದೈವಗಳನ್ನು ಆರಾಧಿಸಲಾಗುತ್ತಿದೆ.

 ವಿಶೇಷವಾಗಿರುವ ದೈವಗಳಲ್ಲಿ ಮೂಕಾಂಬಿ ಗುಳಿಗ ದೈವ

ವಿಶೇಷವಾಗಿರುವ ದೈವಗಳಲ್ಲಿ ಮೂಕಾಂಬಿ ಗುಳಿಗ ದೈವ

ಕರಾವಳಿ ಭಾಗದಲ್ಲಿ ಸುಮಾರು 400ಕ್ಕೂ ಮಿಕ್ಕಿದ ವಿವಿಧ ಪ್ರಕಾರದ ದೈವಗಳನ್ನು ಆರಾಧಿಸಲಾಗುತ್ತಿದ್ದು, ವರ್ಷಕ್ಕೆ ಒಂದು ದಿನ ಈ ದೈವಗಳಿಗೆ ಕೋಲವನ್ನೂ (ಉತ್ಸವ) ನೆರವೇರಿಸಲಾಗುತ್ತದೆ. ಹೀಗೆ ಆರಾಧಿಸುವ ಅತ್ಯಂತ ವಿಶೇಷವಾಗಿರುವ ದೈವಗಳಲ್ಲಿ ಮೂಕಾಂಬಿ ಗುಳಿಗ ದೈವವೂ ಒಂದಾಗಿದೆ. ಕೇರಳದ ಕೆಲವು ಭಾಗದಲ್ಲಿ ಹಾಗೂ ಕರಾವಳಿಯ ಕೆಲವು ಭಾಗದಲ್ಲಿ ಮಾತ್ರ ಈ ಮೂಕಾಂಬಿ ಗುಳಿಗ ದೈವಕ್ಕೆ ಕೋಲವನ್ನು (ಉತ್ಸವ) ನಡೆಸಲಾಗುತ್ತದೆ.

ಕೊಲ್ಲೂರಿನಲ್ಲಿ ದೇವಿಯು ಅವತಾರವೆತ್ತಿ, ಮೂಕಾಸುರನೆಂಬ ರಾಕ್ಷಸನ ವಧೆ ಮಾಡುವ ಸಂದರ್ಭದಲ್ಲಿ, ಮೂಕಾಸುರನ ವಧೆ ಮಾಡಿದ ಮಾರಣಕಟ್ಟೆಯಲ್ಲಿ ಶಿವ ಧೂತನಾದ ಗುಳಿಗ ಅದೇ ಸ್ಥಳದಲ್ಲಿ ನೆಲೆಸಿದ್ದನು. ಶಿವನ ಹಾಗೂ ದೇವಿಯ ಪ್ರೀತಿ ಪಾತ್ರನಾದ ಗುಳಿಗನಿಗೆ ದೇವಿಯ ಅನುಗ್ರಹದಿಂದ ಬ್ರಹ್ಮಲಿಂಗೇಶ್ವರನಾಗಿ ಆರಾಧನೆಗೆ ಪಾತ್ರವಾದ ಮೂಕಾಸುರನ ಬಲಭಾಗದಲ್ಲಿ ಗುಳಿಗನಿಗೂ ಆರಾಧನೆ ಮಾಡುವಂತೆ ದೇವಿ ಆಜ್ಞೆಯನ್ನೂ ನೀಡಿದ್ದಳಂತೆ.

 ಮೂಕಾಂಬಿಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನ

ಮೂಕಾಂಬಿಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನ

ಈ ನಡುವೆ ಕೊಲ್ಲೂರಿನ ತಂತ್ರಿಯೋರ್ವರು ಕೇರಳಕ್ಕೆ ಶಾಂತಿಪೂಜೆ ನೆರವೇರಿಸಲು ತನ್ನ ಪತ್ನಿಯೊಂದಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಗುಳಿಗ ದೈವವೂ ತಂತ್ರಿಯವರ ರಕ್ಷಣೆಗಾಗಿ ಕೇರಳಕ್ಕೆ ಹೊರಟಿದೆ. ಕೇರಳ ಬರುವ ಮಾರ್ಗ ಮಧ್ಯೆ ತಂತ್ರಿಯವರ ಪತ್ನಿ ಮೂಕಾಂಬಿಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನಿಸುತ್ತಾನೆ.

ಇದರಿಂದ ನೊಂದ ಮೂಕಾಂಬಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ ಸಂದರ್ಭದಲ್ಲಿ ಆಕೆಯ ಆತ್ಮ ಗುಳಿಗ ದೈವದೊಂದಿಗೆ ಸೇರಿಕೊಳ್ಳುತ್ತದೆ. ಗುಳಿಗನೊಂದಿಗೆ ಸೇರಿಕೊಂಡ ಮೂಕಾಂಬಿಕೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಇಡೀ ಕುಟುಂಬವನ್ನೇ ನಾಶ ಮಾಡಿದ್ದರು. ಆ ಬಳಿಕ ಮೂಕಾಂಬಿಕಾ ಗುಳಿಗನಾಗಿ ಆರಾಧಿಸಲ್ಪಡುವ ಮೂಲಕ ಕರಾವಳಿಯ ಅತ್ಯಂತ ಪ್ರಭಾವಿ ದೈವವಾಗಿ ಹೆಸರು ಪಡೆದುಕೊಂಡಿದೆ.

 ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಡುವುದು

ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಡುವುದು

ಈ ಘಟನೆಯ ಚಿತ್ರಣವನ್ನೇ ಮೂಕಾಂಬಿಕಾ ಗುಳಿಗ ದೈವದ ಉತ್ಸವದಂದು ದೈವಗಳು ತೋರಿಸಿಕೊಡುತ್ತವೆ. ಅಡಕೆ ಮರಗಳನ್ನು ಕಡಿದು, ಮರದ ನೂರಾರು ತೊಲೆಗಳನ್ನು ಸೇರಿಸಿ, ಅವುಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಆ ಬೆಂಕಿಯಲ್ಲಿ ದೈವದ ಪಾತ್ರಧಾರಿ ಬೀಳುವ, ಮಲಗುವ, ಕುಳಿತುಕೊಳ್ಳುವ ಹೀಗೆ ಹಲವು ರೀತಿಯಲ್ಲಿ ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಡುವುದು ಈ ದೈವದ ಕೋಲದ ವಿಶೇಷತೆಯಾಗಿದೆ. ಅನಾಚಾರಿಗಳನ್ನು ಕೊಂದ ಬಳಿಕ ಬೆಂಕಿಯಲ್ಲಿ ಸ್ನಾನ ಮಾಡಿ ಪರಿಶುದ್ಧವಾಗುವುದು ದೈವಗಳ ಈ ಬೆಂಕಿಯಾಟದ ಉದ್ಧೇಶವೂ ಆಗಿದೆ ಎನ್ನುವುದು ದೈವಾರಾಧನೆಯ ಪಾರ್ದನಗಳಿಂಗೆ ತಿಳಿದು ಬರುತ್ತದೆ.

Recommended Video

    ಜೈಪುರ ಸಾಹಿತ್ಯ ಹಬ್ಬಕ್ಕೆ ರಂಗು ರಂಗಿನ‌ ಭರ್ಜರಿ ಸಿದ್ಧತೆ | Oneindia Kannada
     ಗುಳಿಗ ದೈವಕ್ಕೆ ಮಾತ್ರ ಜೀವಂತ ಕೋಳಿ ನೀಡುವುದು

    ಗುಳಿಗ ದೈವಕ್ಕೆ ಮಾತ್ರ ಜೀವಂತ ಕೋಳಿ ನೀಡುವುದು

    ಕರಾವಳಿಯ ದೈವರಾಧನೆಯಲ್ಲಿ ಗುಳಿಗ ದೈವ ವಿಶೇಷವಾಗಿದೆ. ಉಗ್ರರೂಪದಲ್ಲೇ ಇರುವ ಗುಳಿಗ ದೃಷ್ಟಿಯಿಟ್ಟರೆ ಸರ್ವನಾಶ ಖಂಡಿತ ಅನ್ನೋದು ಕರಾವಳಿಗರ ನಂಬಿಕೆಯಾಗಿದೆ. ಹತ್ತಕ್ಕೂ ಅಧಿಕ ಅವತಾರದಲ್ಲಿ ಗುಳಿಗನನ್ನು ಆರಾಧಿಸಲಾಗುತ್ತಿದೆ. ಗುಳಿಗ, ರಾಹು ಗುಳಿಗ, ಸಂಕೊಲೆ ಗುಳಿಗ, ಸನ್ಯಾಸಿ ಗುಳಿಗ ಸೇರಿದಂತೆ ಹಲವು ವಿಧದಲ್ಲಿ ಆಚರಿಸಲಾಗುತ್ತದೆ. ಬೇರೆ ದೈವಗಳಿಗೆ ಅಡುಗೆ ಮಾಡಿ‌ ಅಗೇಲು ಸೇವೆ ನೀಡುವುದಾದರೆ ಗುಳಿಗ ದೈವಕ್ಕೆ ಮಾತ್ರ ಜೀವಂತ ಕೋಳಿ ನೀಡುವುದು ಕೂಡಾ ಗುಳಿಗ ದೈವಾರಾಧನೆಯ ಸಂಪ್ರದಾಯವಾಗಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+