ಉಡುಪಿ: ಬೆಂಕಿ ಮೇಲೆಯೇ ಹೊರಳಾಡುತ್ತದೆ ಕರಾವಳಿಯ ಈ ದೈವ!
ಉಡುಪಿ, ಮಾರ್ಚ್ 5: ಭೂತಾರಾಧನೆಗೆ ಕರಾವಳಿಯಲ್ಲಿ ಹೆಚ್ಚಿನ ಮಹತ್ವವಿದ್ದು, ಸುಮಾರು 400ಕ್ಕೂ ಮಿಕ್ಕಿದ ವಿವಿಧ ಪ್ರಕಾರದ ದೈವಗಳ ಆರಾಧನೆಯನ್ನು ಇಲ್ಲಿನ ಜನ ಆಚರಿಸಿಕೊಂಡು ಬರುತ್ತಿದ್ದಾರೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ಭಾಗದಲ್ಲಿ ಭೂತಾರಾಧನೆಯನ್ನು ಆಚರಿಸಲಾಗುತ್ತಿದ್ದು, ಒಂದು ದೈವದ ಆಚರಣೆ, ಇನ್ನೊಂದು ದೈವದ ಆಚರಣೆಗಿಂತ ವಿಭಿನ್ನವಾಗಿದ್ದು, ಜನರ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವೂ ಇದಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಕೇರಳವನ್ನು ಕೇಂದ್ರವಾಗಿಸಿಕೊಂಡು ಆಚರಣೆಯಲ್ಲಿರುವ ಭೂತಾರಾಧನೆ ವಿಶೇಷ ಮಹತ್ವವಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಆಚರಣೆಯಲ್ಲಿರುವ ದೈವಾರಾಧನೆಗೂ, ಕೇರಳ ರಾಜ್ಯದ ಹಲವು ಭಾಗಗಳಲ್ಲಿ ಆಚರಣೆಯಲ್ಲಿರುವ ದೈವಾರಾಧನೆಗೂ ವ್ಯತ್ಯಾಸವಿದ್ದರೂ, ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆಯೂ ಇದೆ. ದೇವರಿಗಿಂತ ಮುಖ್ಯ ಸ್ಥಾನವನ್ನು ಈ ಭಾಗದಲ್ಲಿ ದೈವಗಳಿಗೆ ನೀಡಲಾಗುತ್ತಿದ್ದು, ದೇವರ ಗಣಗಳ ರೂಪದಲ್ಲಿ ಈ ದೈವಗಳನ್ನು ಆರಾಧಿಸಲಾಗುತ್ತಿದೆ.

ವಿಶೇಷವಾಗಿರುವ ದೈವಗಳಲ್ಲಿ ಮೂಕಾಂಬಿ ಗುಳಿಗ ದೈವ
ಕರಾವಳಿ ಭಾಗದಲ್ಲಿ ಸುಮಾರು 400ಕ್ಕೂ ಮಿಕ್ಕಿದ ವಿವಿಧ ಪ್ರಕಾರದ ದೈವಗಳನ್ನು ಆರಾಧಿಸಲಾಗುತ್ತಿದ್ದು, ವರ್ಷಕ್ಕೆ ಒಂದು ದಿನ ಈ ದೈವಗಳಿಗೆ ಕೋಲವನ್ನೂ (ಉತ್ಸವ) ನೆರವೇರಿಸಲಾಗುತ್ತದೆ. ಹೀಗೆ ಆರಾಧಿಸುವ ಅತ್ಯಂತ ವಿಶೇಷವಾಗಿರುವ ದೈವಗಳಲ್ಲಿ ಮೂಕಾಂಬಿ ಗುಳಿಗ ದೈವವೂ ಒಂದಾಗಿದೆ. ಕೇರಳದ ಕೆಲವು ಭಾಗದಲ್ಲಿ ಹಾಗೂ ಕರಾವಳಿಯ ಕೆಲವು ಭಾಗದಲ್ಲಿ ಮಾತ್ರ ಈ ಮೂಕಾಂಬಿ ಗುಳಿಗ ದೈವಕ್ಕೆ ಕೋಲವನ್ನು (ಉತ್ಸವ) ನಡೆಸಲಾಗುತ್ತದೆ.
ಕೊಲ್ಲೂರಿನಲ್ಲಿ ದೇವಿಯು ಅವತಾರವೆತ್ತಿ, ಮೂಕಾಸುರನೆಂಬ ರಾಕ್ಷಸನ ವಧೆ ಮಾಡುವ ಸಂದರ್ಭದಲ್ಲಿ, ಮೂಕಾಸುರನ ವಧೆ ಮಾಡಿದ ಮಾರಣಕಟ್ಟೆಯಲ್ಲಿ ಶಿವ ಧೂತನಾದ ಗುಳಿಗ ಅದೇ ಸ್ಥಳದಲ್ಲಿ ನೆಲೆಸಿದ್ದನು. ಶಿವನ ಹಾಗೂ ದೇವಿಯ ಪ್ರೀತಿ ಪಾತ್ರನಾದ ಗುಳಿಗನಿಗೆ ದೇವಿಯ ಅನುಗ್ರಹದಿಂದ ಬ್ರಹ್ಮಲಿಂಗೇಶ್ವರನಾಗಿ ಆರಾಧನೆಗೆ ಪಾತ್ರವಾದ ಮೂಕಾಸುರನ ಬಲಭಾಗದಲ್ಲಿ ಗುಳಿಗನಿಗೂ ಆರಾಧನೆ ಮಾಡುವಂತೆ ದೇವಿ ಆಜ್ಞೆಯನ್ನೂ ನೀಡಿದ್ದಳಂತೆ.

ಮೂಕಾಂಬಿಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನ
ಈ ನಡುವೆ ಕೊಲ್ಲೂರಿನ ತಂತ್ರಿಯೋರ್ವರು ಕೇರಳಕ್ಕೆ ಶಾಂತಿಪೂಜೆ ನೆರವೇರಿಸಲು ತನ್ನ ಪತ್ನಿಯೊಂದಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಗುಳಿಗ ದೈವವೂ ತಂತ್ರಿಯವರ ರಕ್ಷಣೆಗಾಗಿ ಕೇರಳಕ್ಕೆ ಹೊರಟಿದೆ. ಕೇರಳ ಬರುವ ಮಾರ್ಗ ಮಧ್ಯೆ ತಂತ್ರಿಯವರ ಪತ್ನಿ ಮೂಕಾಂಬಿಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನಿಸುತ್ತಾನೆ.
ಇದರಿಂದ ನೊಂದ ಮೂಕಾಂಬಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ ಸಂದರ್ಭದಲ್ಲಿ ಆಕೆಯ ಆತ್ಮ ಗುಳಿಗ ದೈವದೊಂದಿಗೆ ಸೇರಿಕೊಳ್ಳುತ್ತದೆ. ಗುಳಿಗನೊಂದಿಗೆ ಸೇರಿಕೊಂಡ ಮೂಕಾಂಬಿಕೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಇಡೀ ಕುಟುಂಬವನ್ನೇ ನಾಶ ಮಾಡಿದ್ದರು. ಆ ಬಳಿಕ ಮೂಕಾಂಬಿಕಾ ಗುಳಿಗನಾಗಿ ಆರಾಧಿಸಲ್ಪಡುವ ಮೂಲಕ ಕರಾವಳಿಯ ಅತ್ಯಂತ ಪ್ರಭಾವಿ ದೈವವಾಗಿ ಹೆಸರು ಪಡೆದುಕೊಂಡಿದೆ.

ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಡುವುದು
ಈ ಘಟನೆಯ ಚಿತ್ರಣವನ್ನೇ ಮೂಕಾಂಬಿಕಾ ಗುಳಿಗ ದೈವದ ಉತ್ಸವದಂದು ದೈವಗಳು ತೋರಿಸಿಕೊಡುತ್ತವೆ. ಅಡಕೆ ಮರಗಳನ್ನು ಕಡಿದು, ಮರದ ನೂರಾರು ತೊಲೆಗಳನ್ನು ಸೇರಿಸಿ, ಅವುಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಆ ಬೆಂಕಿಯಲ್ಲಿ ದೈವದ ಪಾತ್ರಧಾರಿ ಬೀಳುವ, ಮಲಗುವ, ಕುಳಿತುಕೊಳ್ಳುವ ಹೀಗೆ ಹಲವು ರೀತಿಯಲ್ಲಿ ಬೆಂಕಿಯ ಕೆನ್ನಾಲಿಯಲ್ಲಿ ಹೊರಳಾಡುವುದು ಈ ದೈವದ ಕೋಲದ ವಿಶೇಷತೆಯಾಗಿದೆ. ಅನಾಚಾರಿಗಳನ್ನು ಕೊಂದ ಬಳಿಕ ಬೆಂಕಿಯಲ್ಲಿ ಸ್ನಾನ ಮಾಡಿ ಪರಿಶುದ್ಧವಾಗುವುದು ದೈವಗಳ ಈ ಬೆಂಕಿಯಾಟದ ಉದ್ಧೇಶವೂ ಆಗಿದೆ ಎನ್ನುವುದು ದೈವಾರಾಧನೆಯ ಪಾರ್ದನಗಳಿಂಗೆ ತಿಳಿದು ಬರುತ್ತದೆ.
Recommended Video

ಗುಳಿಗ ದೈವಕ್ಕೆ ಮಾತ್ರ ಜೀವಂತ ಕೋಳಿ ನೀಡುವುದು
ಕರಾವಳಿಯ ದೈವರಾಧನೆಯಲ್ಲಿ ಗುಳಿಗ ದೈವ ವಿಶೇಷವಾಗಿದೆ. ಉಗ್ರರೂಪದಲ್ಲೇ ಇರುವ ಗುಳಿಗ ದೃಷ್ಟಿಯಿಟ್ಟರೆ ಸರ್ವನಾಶ ಖಂಡಿತ ಅನ್ನೋದು ಕರಾವಳಿಗರ ನಂಬಿಕೆಯಾಗಿದೆ. ಹತ್ತಕ್ಕೂ ಅಧಿಕ ಅವತಾರದಲ್ಲಿ ಗುಳಿಗನನ್ನು ಆರಾಧಿಸಲಾಗುತ್ತಿದೆ. ಗುಳಿಗ, ರಾಹು ಗುಳಿಗ, ಸಂಕೊಲೆ ಗುಳಿಗ, ಸನ್ಯಾಸಿ ಗುಳಿಗ ಸೇರಿದಂತೆ ಹಲವು ವಿಧದಲ್ಲಿ ಆಚರಿಸಲಾಗುತ್ತದೆ. ಬೇರೆ ದೈವಗಳಿಗೆ ಅಡುಗೆ ಮಾಡಿ ಅಗೇಲು ಸೇವೆ ನೀಡುವುದಾದರೆ ಗುಳಿಗ ದೈವಕ್ಕೆ ಮಾತ್ರ ಜೀವಂತ ಕೋಳಿ ನೀಡುವುದು ಕೂಡಾ ಗುಳಿಗ ದೈವಾರಾಧನೆಯ ಸಂಪ್ರದಾಯವಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications