ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹೆಲಿಕಾಪ್ಟರ್ ಫಿಶ್!
ಉಡುಪಿ, ಅಕ್ಟೋಬರ್ 5: ಕಡಲು ಜಲಜೀವರಾಶಿಗಳ ಆಗರವಾಗಿದ್ದು, ಸಮುದ್ರದಲ್ಲಿ ಸಾವಿರಾರು ವಿಧದ ಮತ್ಸ್ಯ ಸಂಪತ್ತು ಇದೆ. ಜಗತ್ತಿನ ಭಾಗಶಃ ಪ್ರದೇಶವನ್ನು ಆವರಿಸಿಕೊಂಡಿರುವ ಜಲರಾಶಿಯಲ್ಲಿ ಅದ್ಭುತ ಎನಿಸುವಂತಹ ಮತ್ಸ್ಯಗಳಿವೆ. ಅರಬ್ಬೀ ಸಮುದ್ರದಲ್ಲಿ ಮತ್ಸ್ಯ ಬೇಟೆಗೆಂದು ಇಳಿದ ಉಡುಪಿಯ ಮೀನುಗಾರರ ಬಲೆಗೆ ಬಲು ಅಪರೂಪದ ಮೀನೊಂದು ಪತ್ತೆಯಾಗಿದೆ.
ಮಲ್ಪೆಯ ಸರ್ವಋತು ಬಂದರಿನಿಂದ ಅರಬ್ಬೀ ಸಮುದ್ರದತ್ತ ಹೊರಟ ಲುಕ್ಮಾನ್ ಎಂಬುವವರ ಬೋಟ್ ದಡದಿಂದ ಸುಮಾರು 20 ನಾಟಿಕಲ್ ಮೈಲಿ ದೂರದಲ್ಲಿ ಮತ್ಸ್ಯ ಬೇಟೆಗಿಳಿದಾಗ, ಅಪರೂಪದ ಬೌ ಮೌತ್ ಗಿಟಾರ್ ಶಾರ್ಕ್ ಎಂಬ ಮೀನು ಬಲೆಗೆ ಬಿದ್ದಿದೆ. ಸ್ಥಳೀಯವಾಗಿ ನೆಮ್ಮೀನ್ ಅಥವಾ ಹೆಲಿಕಾಪ್ಟರ್ ಫಿಶ್ ಅಂತಾ ಕರೆಯಲ್ಪಡುವ ಮೀನು ಆಕಾರದಲ್ಲಿ ಹೆಲಿಕಾಪ್ಟರ್ ಅನ್ನು ಹೋಲುವುದರಿಂದ ಹೆಲಿಕಾಪ್ಟರ್ ಫಿಶ್ ಅಂತಾನೂ ಕರೆಯುತ್ತಾರೆ.
ಬರೋಬ್ಬರಿ 84 ಕೆಜಿ ತೂಕವಿದ್ದ ಈ ಮೀನು ಉದ್ದ ಬಾಲ ಹಾಗೂ ಬೆನ್ನಿನ ಅಕ್ಕಪಕ್ಕ ಅಗಲವಾದ ರೆಕ್ಕೆಗಳನ್ನು ಒಳಗೊಂಡಿದೆ. ಈ ಮೀನು ಕಾಣಸಿಗುವುದು ಬಹಳ ಅಪರೂಪವಾಗಿದೆ. ಅಳಿವಿನಂಚಿನಲ್ಲಿರುವ ಮತ್ಸ್ಯ ಪ್ರಭೇದಕ್ಕೆ ಈ ಮೀನನ್ನು ಸೇರ್ಪಡೆಗೊಳಿಸಲಾಗಿದೆ.

ಸಮುದ್ರದಲ್ಲಿ ಸುಮಾರು 90 ಮೀಟರ್ ಆಳದಲ್ಲಿ ಈ ಮೀನುಗಳು ವಾಸವಿರುತ್ತದೆ. ಸಾಮಾನ್ಯವಾಗಿ ಹವಳ ಬಂಡೆಗಳ ನಡುವೆ ವಾಸಿಸುವ ಹೆಲಿಕಾಪ್ಟರ್ ಫಿಶ್ಗಳ ಆಹಾರ ಸಣ್ಣ ಮೀನುಗಳು. ಬಂಡೆಗಳ ನಡುವೆ ಹೊಂಚು ಹಾಕಿ ಬೇಟೆಯಾಡುವ ಹೆಲಿಕಾಪ್ಟರ್ ಫಿಶ್ ಬಹಳ ಕ್ಷಿಪ್ರಗತಿಯಲ್ಲಿ ಸಣ್ಣ ಮೀನುಗಳ ಮೇಲೆ ದಾಳಿ ಮಾಡುತ್ತದೆ.
ಲುಕ್ಮಾನ್ ಅವರ ಮೀನುಗಾರರ ತಂಡಕ್ಕೆ ಅರಬ್ಬೀ ಸಮುದ್ರದ 20 ನಾಟಿಕಲ್ ಮೈಲಿ ದೂರದಲ್ಲಿ ಬೌ ಮೌತ್ ಶಾರ್ಕ್ ಬಲೆಗೆ ಬಿದ್ದಿದೆ. ಅಂಜಲ್ ಮತ್ತು ಬಂಗುಡೆಯ ಮೀನಿನ ಜೊತೆಗೆ ಬೌ ಮೌತ್ ಫಿಶ್ ಕೂಡಾ ಬಲೆಗೆ ಬಿದ್ದಿದೆ. ಆದರೆ ಮೀನುಗಾರರು ಮಾತ್ರ ಬೌ ಮೌತ್ ಫಿಶ್ ಬಲೆಗೆ ಬಿದ್ದಿರುವುದರಿಂದ ಖುಷಿಗೊಂಡಿಲ್ಲ.

ಈ ಬೌ ಮೌತ್ ಶಾರ್ಕ್ನ ಮಾಂಸ ಕರ್ನಾಟಕದ ಮೀನು ಪ್ರೀಯರಿಗೆ ಇಷ್ಟ ಇಲ್ಲ. ಯಾಕೆಂದರೆ ಬೌಮೌತ್ ಶಾರ್ಕ್ನ ಮಾಂಸ ಮೀನು ಪ್ರಿಯರಿಗೆ ಹಿಡಿಸುವುದಿಲ್ಲ. ಪಕ್ಕದ ಕೇರಳ ರಾಜ್ಯದ ಮತ್ಸ್ಯ ಪ್ರಿಯರು ಬೌ ಮೌತ್ ಶಾರ್ಕ್ ಮಾಂಸವನ್ನು ಇಷ್ಟ ಪಡುತ್ತಾರೆ.
ಹೀಗಾಗಿ ಮಲ್ಪೆಯಿಂದ ಬೌಮೌತ್ ಶಾರ್ಕ್ ಮೀನನ್ನು ಮಾರಾಟ ಮಾಡಲು ಮೀನುಗಾರರ ತಂಡ ಕೇರಳಕ್ಕೆ ತೆಗೆದುಕೊಂಡು ಹೋಗಿದೆ. ಕೇರಳದ ಮೀನು ಪ್ರಿಯರು ಈ ಬೌಮೌತ್ ಶಾರ್ಕ್ ಮೀನಿನ ಮಾಂಸವನ್ನು ಕೆಜಿಗೆ 50 ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಹೀಗಾಗಿ ಕಡಲಿನಿಂದ ದಡಕ್ಕೆ ತಂದ ಖರ್ಚಿಗಾದರೂ ಸಾಕಾಗಲಿ ಎಂದು ಮೀನುಗಾರರು ಈ ಮೀನನ್ನು ಕೇರಳದಲ್ಲಿ ಮಾರಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೋಟ್ ಮಾಲೀಕ ಲುಕ್ಮಾನ್, "ಕಳೆದ ಹಲವಾರು ವರ್ಷಗಳಿಂದ ಮೀನುಗಾರಿಕೆ ಮಾಡುತ್ತಿದ್ದೇವೆ. ಆದರೆ ಈವರೆಗೆ ಈ ಮೀನು ಸಿಕ್ಕಿರಲಿಲ್ಲ. ಈ ಬಾರಿ ಅಂಜಲ್ ಮತ್ತು ಬಂಗುಡೆಯೊಂದಿಗೆ ಈ ಮೀನು ಸಿಕ್ಕಿದೆ. ಅಪರೂಪದ ಮೀನು ಸಿಕ್ಕಿರುವುದು ಖುಷಿ ಇದೆ. ಆದರೆ ಈ ಮೀನಿಗೆ ನಮ್ಮ ಗ್ರಾಹಕರಲ್ಲಿ ಬೇಡಿಕೆ ಕಡಿಮೆ ಇದೆ. ಈ ಭಾಗದಲ್ಲಿ ಯಾರೂ ಮೀನು ತಿನ್ನುವುದಿಲ್ಲ. ಹೀಗಾಗಿ ಕೇರಳದಲ್ಲಿ ಮಾರಲು ನಿರ್ಧಾರ ಮಾಡಿದ್ದೇವೆ," ಅಂತಾ ಲುಕ್ಮಾನ್ ಹೇಳಿದ್ದಾರೆ.
Recommended Video
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications