ಪಾವಗಡದ ಗುಜ್ಜುನಡು ಪಂಚಾಯಿತಿಯ ಜನತಾ ಕಾಲೋನಿ ಜನರ ಗೋಳಿನ ಕೂಗು!
ತುಮಕೂರು, ಜು1: ಸ್ವಾಮಿ ನಮಗೆ ಚರಂಡಿಗಳಿಲ್ಲ, ವಿಪರೀತ ಸೊಳ್ಳೆಗಳ ಕಾಟ, ವಿದ್ಯುತ್ ಕಂಬಗಳಿಲ್ಲ ಹೀಗೆ ಸಾಲು ಸಾಲು ಕುಂದು ಕೊರತೆಗಳನ್ನು ನೊಂದ ಜನರು ಅಲವತ್ತುಕೊಂಡ ದೃಶ್ಯ ಕಂಡು ಬಂದಿದ್ದು ಪಾವಗಡ ತಾಲ್ಲೂಕಿನ ಗುಜ್ಜುನಡು ಪಂಚಾಯಿತಿ ವ್ಯಾಪ್ತಿಯ ಟಿಎನ್ ಬೆಟ್ಟದ ಜನತಾ ಕಾಲೋನಿಯ ಜನರು.
ಹೌದು, ಸುಮಾರು 180 ಮನೆಗಳಿರುವ ಇಲ್ಲಿ ಅರ್ಧದಷ್ಟು ಕಾಲೋನಿಯ ಭಾಗದಲ್ಲಿ ಚರಂಡಿಗಳಿಲ್ಲದೆ ಮನೆಯ ಬಚ್ಚಲು ಗುಂಡಿ ನೀರು ಸೀದ ಮನೆಗಳ ಮುಂದಿನ ರಸ್ತೆಗಳಿಗೆ ಬಂದು ಕೊಳಚೆಯಾಗಿ ಮಾರ್ಪಡುತ್ತಿದೆ. ಪರಿಣಾಮ ಇಲ್ಲಿನ ಜನರು ಪ್ರತಿದಿನವೂ ದುರ್ವಾಸನೆ, ವಿಪರೀತ ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ. ಇನ್ನು ರಾತ್ರಿ ವೇಳೆಯಲ್ಲಂತೂ ಸೊಳ್ಳೆಗಳ ಸಂಗೀತಕ್ಕೆ ಮನೆ ಬಿಟ್ಟು ಹೊರ ಬರಲು ಸಾಧ್ಯವಾಗದೆ ಇರುವ ದೃಶ್ಯ ಸಾಮಾನ್ಯವಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಲೋನಿ ಜನರ ಆಗ್ರಹ
ಈ ಜನರು ಹೇಳಿ ಕೇಳಿ ಶ್ರೀಮಂತರಲ್ಲ, ದಿನ ಬೆಳಗಾದರೆ ಕೂಲಿ ನಾಲಿ ಮಾಡಲು ಓಡೋ ಜನರು ಒಂದಿಲ್ಲ ಒಂದು ರೀತಿಯ ಮೂಲಭೂತ ಸಮಸ್ಯೆಗಳಿಂದ ಇಲ್ಲಿ ಬಳಲುತ್ತಿದ್ದಾರೆ. ಅದಕ್ಕೆ ಮತ್ತೊಂದು ನಿದರ್ಶನವೆಂದರೆ ಸುಮಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸೊ ವಿದ್ಯುತ್ ಕಂಬಗಳೆ ಇಲ್ಲದೆ ಸುಮಾರು 200 ಮೀಟರ್ ದೂರದಿಂದ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದಾರೆ. ಮನೆಗಳ ಮುಂಭಾಗದಲ್ಲಿ ಹಾದು ಹೋದ ವಿದ್ಯುತ್ ವೈರ್ ಗಳು ಪೂರ್ಣ ಪ್ರಮಾಣದಲ್ಲಿ ನೆಲಕ್ಕೆ ಜಗ್ಗಿ ನಿಂತಿವೆ, ಯಾವಾಗ ವಿದ್ಯುತ್ ವೈರ್ ಕಟ್ ಆಗಿ ಕೆಳಗೆ ಬೀಳುತ್ತದೆಯೋ ಎಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ. ಜೊತೆಗೆ ಹಲವು ಬಾರಿ ವೈರ್ ಕಟ್ ಆಗಿ ಬಿದ್ದಿವೆ ಎಂದು ಮಹಿಳೆಯರು ಗೋಳಿಡ್ತಾರೆ.

ಕಣ್ಮುಚ್ಚಿ ಕುಳಿತಿರುವ ಗುಜ್ಜುನಡು ಪಂಚಾಯಿತಿ ಅಧಿಕಾರಿಗಳು
ಚರಂಡಿ ಮಾಡಿಸಬೇಕು ಇಲ್ಲ ನೀರನ್ನು ಇಂಗಿಸಲು ಬಚ್ಚಲು ಗುಂಡಿ ತೆಗೆಸಿ ಅನುಕೂಲ ಮಾಡಬೇಕಾದ ಗುಜ್ಜುನಡು ಪಂಚಾಯಿತಿ ಅಧಿಕಾರಿಗಳು ಇದ್ದಾರೆಯೋ ಇಲ್ಲ ಕಣ್ಮುಚ್ಚಿ ಕುಳಿತಿದ್ದಾರೆನೋ ಅನ್ನಿಸುತ್ತಿದೆ. ಗುಡಿಸಲು ಮುಕ್ತ ಗ್ರಾಮ ಮಾಡುವ ಸರ್ಕಾರದ ನಿಲುವಿನ ನಡುವೆ ಈ ಕಾಲೋನಿಯ ಕೆಲವರಿಗೆ ನಿವೇಶನಗಳಲ್ಲಿದೆ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ.

ಜನರ ನಡುವೆ ವೈಮನಸ್ಸಿನ ವಾತಾವರಣ
ಏನೇ ಇರಲಿ ಟಿ.ಎನ್ ಬೆಟ್ಟದ ಜನತಾ ಕಾಲೋನಿ ಜನರಿಗೆ ಸಮರ್ಪಕವಾಗಿ ನೀರು ಬರ್ತಿಲ್ಲ ಮತ್ತು ರಸ್ತೆಗೆ ಕೊಳಚೆ ನೀರು ಬರ್ತಿವೆ, ವಿದ್ಯುತ್ ಕಂಬಗಳಿಲ್ಲ ಎಂದು ಇಲ್ಲಿನ ಜನರ ನಡುವೆ ವೈಮನಸ್ಸಿನ ವಾತಾವರಣ ಶುರುವಾಗಿದೆ, ಬಚ್ಚಲು ನೀರಿನ ಸಮಸ್ಯೆ ಜನರ ನಡುವಿನ ಜಗಳ ಇನ್ನಷ್ಟು ತಾರಕಕ್ಕೇರುವ ಮುನ್ನ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಗುಜ್ಜುನಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚೆತ್ತು ಇಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಅನಿವಾರ್ಯತೆಯಿದೆ.
Recommended Video
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications